Monday 2 December 2019

ವಚನ ನೃತ್ಯವೈಭವದ
ಸಿ. ಡಿ. ರಕ್ಷಿತಾ


ವಯಸ್ಸು 18. ನೀಡಿದ ಕಾರ‌್ಯಕ್ರಮ ಸಾವಿರಕ್ಕೂ ಅಧಿಕ. ಭರತನಾಟ್ಯ, ವಚನ ನೃತ್ಯ, ಕರ್ನಾಟಕ ಸಂಗೀತದಲ್ಲಿ ಅತ್ಯುನ್ನತ ಸಾಧನೆ, ನೃತ್ಯ- ಸಂಗೀತಕ್ಕೆೆ ಮೀಸಲಾದ ವಿಶಾರದ ಪೂರ್ಣ ಪರಿಕ್ಷೆಯಲ್ಲಿ ತೇರ್ಗಡೆ, ವಿದ್ವತ್ ಪರೀಕ್ಷೆಗೆ ಸಿದ್ಧತೆ......
ಇದು ನಗರದ ವಿದಾರ್ಥಿನಿ ಸಿ. ಡಿ. ರಕ್ಷಿತಾ ಅವರ ಪರಿಚಯ. ಇಷ್ಟೆೆಲ್ಲಾಾ ಸಾಧನೆಯ ಫಲವಾಗಿ ಇವಳು ಫ್ರೆೆಂಚ್ ಎಡಿಶನ್‌ನ ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಿಗೆ ಭಾಜನಳಾಗಿದ್ದಾಾಳೆ. ಜೊತೆಗೆ 18ರೊಳಗಿನ ಭರತನಾಟ್ಯ ಸಾಧಕಿ ಎಂಬ ಗೌರವಕ್ಕೆೆ ಪಾತ್ರಳಾಗಿದ್ದಾಾಳೆ. ವಿಶೇಷವಾಗಿ ವಚನ ನೃತ್ಯ ಎನ್ನುವ ಪರಿಕಲ್ಪನೆಗೆ ಹೊಸ ಹೊಳಪನ್ನು, ಅರ್ಥವನ್ನು ತುಂಬಿ, ಆಯಾಮವನ್ನು ಒದಗಿಸಿದವರು.
ರಕ್ಷಿತಾ ಡಾ. ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಪ್ರಥಮ ಬಿ ಎ ಓದುತ್ತಿಿದ್ದಾಾರೆ. ಬಾಲ್ಯದಿಂದಲೇ ತಾಯಿ ಜಾನಕಿ ಅವರ ಪ್ರೇರಣೆಯಿಂದ ಸಂಗೀತ, ಹಾಡುಗಾರಿಕೆಯತ್ತ ಆಕರ್ಷಣೆಗೊಳಗಾದವರು. ಇವರ ತಾಯಿ ಸಹ ಉತ್ತಮ ಹಾಡುಗಾರ್ತಿಯಾಗಿದ್ದು, ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಇದೇ ಹಾದಿಯಲ್ಲಿ ಮಗಳು ಕಾಲಿಟ್ಟಾಾಗ ತಂದೆ ದತ್ತಾಾತ್ರೇಯ ಅವರು ಬೆನ್ನುತಟ್ಟಿಿ ಹುರಿದುಂಬಿಸಿದರು. ಮಾತಾ-ಪಿತರ ಸಹಕಾರದಿಂದ ರಕ್ಷಿತಾ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿಿದ್ದಾಾರೆ.
ಆರಂಭದಲ್ಲಿ ವಿದುಷಿ ಪುಷ್ಪಾಾ ಕೃಷ್ಣಮೂರ್ತಿ ಅವರಲ್ಲಿ  ಕಲಿಕೆ ಆರಂಭಿಸಿದರು. ತದನಂತರ ಬೆಳಗಾವಿಯಲ್ಲಿ ಕೆಲಕಾಲ ಕಲಿತು ಮತ್ತೆೆ ಈಗ ಶಿವಮೊಗ್ಗದಲ್ಲಿಯೇ ಅಭ್ಯಾಾಸ ಮುಂದುವರೆಸಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿ ಕೊಡಮಾಡುವ ಭರತನಾಟ್ಯ ಶಿಷ್ಯವೇತನಕ್ಕೆೆ 2017-18ರ ಸಾಲಿನಲ್ಲಿ ಆಯ್ಕೆೆಯಾಗಿದ್ದಾಾರೆ.
ಮುಂಬೈಯ ಗಂಧರ್ವ ಸಂಗಿತ ಮಹಾವಿದ್ಯಾಾಲಯದವರು ನಡೆಸಿದ ವಿಶಾರದ ಪೂರ್ಣ ಪರೀಕ್ಷೆಯಲ್ಲಿ ಜಿಲ್ಲೆೆಗೆ ಪ್ರಥಮ ಸ್ಥಾಾನದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ವಿದ್ವತ್ ಪರೀಕ್ಷೆಗೆ ಈಗ ಸಿದ್ಧತೆ ನಡೆಸಿದ್ದಾಾರೆ. ಕರ್ನಾಟಕ ಸಂಗೀತದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ಕರ್ನಾಟಕ ಚಿತ್ರಕಲಾ ಮಹಾಮಂಡಳಿಯವರು ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಾರೆ. ತನ್ನ ವಚನ ನೃತ್ಯ ವೈಭವವನ್ನು ಅನೇಕ ಮಠಗಳ, ಧಾರ್ಮಿಿಕ ಕಾರ‌್ಯಕ್ರಮಗಳಲ್ಲಿ ಪ್ರದರ್ಶಿಸಿ ಮಠಾಧೀಶರ ಆಶೀರ್ವಾದಕ್ಕೆೆ ಪಾತ್ರಳಾಗಿದ್ದಾಾಳೆ. ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ವಾಾಗತಗೀತೆಗೆ ಅಭಿನಯಿಸಿದ್ದಾಾರೆ, ರಾಜ್ಯ ಸಮಾಜ ಕಲ್ಯಾಾಣ ಇಲಾಖೆಯ ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿಿ, ಯುವಜನೋತ್ಸವದಲ್ಲಿ ರಾಜ್ಯಕ್ಕೆೆ ದ್ವಿಿತೀಯ, ಅಸಾಧಾರಣ ಬಾಲ ಪ್ರತಿಭೆ ಪ್ರಶಸ್ತಿಿ, ಮಲೆನಾಡ ನಾಟ್ಯ ಮಯೂರಿ... ಹೀಗೆ ಪ್ರಶಸ್ತಿಿ ಮತ್ತು ಬಿರುದುಗಳ ಸರಮಾಲೆಯನ್ನೆೆ ಇವರು ಧರಿಸಿದ್ದಾಾರೆ. 
  ಪೇಸ್ ಕಾಲೇಜಿನವರು ಕೊಡಮಾಡುವ ಅಸಾಧಾರಣ ಯುವ ಪ್ರತಿಭೆ ಪ್ರಶಸ್ತಿಿ ಇವರಿಗೆ ಲಭಿಸಿದೆ. ಜಿಲ್ಲಾಾ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ನಾಡಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನವನ್ನು ರಾಜ್ಯದಾದ್ಯಂತ  ಮತ್ತು ಮಹಾರಾಷ್ಟ್ರದ ಅನೇಕಭಾಗಗಳಲ್ಲಿ ನೀಡಿದ್ದಾಾರೆ.
ಬಸವಭಾವಗೀತೆಗಳು ಮತ್ತು ಮನುಕುಲದ ಮಂದಾರ ಎಂಬ ಎರಡು ಸಿಡಿಗಳನ್ನು ಚಂದ್ರಶೇಖರ್ ಶಿವಾಚಾರ‌್ಯರು ಹೊರತಂದಿದ್ದು, ಇವೆರಡರಲ್ಲೂ ರಕ್ಷಿತಾ ಅವರ ವಚನ ನೃತ್ಯವಿದೆ.
ಶಾಲಾ ಹಂತದಲ್ಲೇ ನಗರ, ಜಿಲ್ಲಾಾ ಮತ್ತು ರಾಜ್ಯಮಟ್ಟದ ವಿವಿಧ ಜಾನಪದ, ನೃತ್ಯ, ಹಾಡು, ಸ್ಪರ್ಧೆಗಳಲ್ಲಿ ಸತತ ಬಹುಮಾನವನ್ನು ಗಳಿಸುತ್ತ ಬಂದಿರುವ ರಕ್ಷಿತಾ ಇಂದಿಗೂ ಅದನ್ನು ಮುಂದುವರೆಸಿದ್ದಾಾರೆ. ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡುವ ಮೂಲಕ ರಾಜ್ಯದಲ್ಲೇ ಹೆಸರುಮಾಡಿದ್ದಾಾರೆ. ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ಮತ್ತು ಭರತನಾಟ್ಯದಲ್ಲಿ 18ರ ಒಳಗಿನ ಪ್ರತಿಭೆಯಾಗಿ ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ಕರ್ನಾಟಕದಲ್ಲೂ ಸಹ ತಮ್ಮ ಹೆಸರು ದಾಖಲಿಸಿದ್ದಾಾರೆ.
published on 30-11-19
  ...........................
ಕಲೆಯಲ್ಲೇ ಸಂತೃಪ್ತಿಿ ಕಂಡ 
ಶಿಲ್ಪಿಿ ಜ್ಞಾಾನೇಶ್ವರ್



ಕಲೆಯಲ್ಲಿಯೇ ಜೀವನ ಸಂತೃಪ್ತಿಿ ಕಂಡುಕೊಂಡವರಿದ್ದಾಾರೆ. ಅದನ್ನೇ ಉಸಿರಾಗಿಸಿಕೊಂಡವರಿದ್ದಾಾರೆ. ಅಷ್ಟೇ ಏಕೆ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಿದ್ದಾಾರೆ. ಶಿವಮೊಗ್ಗದ ಶಿಲ್ಪಿಿ ಜ್ಞಾಾನೇಶ್ವರ್ ಇಂತಹವರಲ್ಲೊೊಬ್ಬರು. ಈ ಬಾರಿಯ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತರಾದ ಇವರ ಕಲ್ಲಿನ ಕೆತ್ತನೆಗಳು, ವಿಗ್ರಹಗಳು ವಿದೇಶದಲ್ಲೂ ಪ್ರತಿಷ್ಠಾಾಪಿತವಾಗಿವೆ.
  ಶಿಲ್ಪಿಿ ಕಾಶೀನಾಥ್ ಅವರ ಸಹೋದರ ಜ್ಞಾಾನೇಶ್ವರ್. ಓದಿದ್ದು ಬಿಎಸ್‌ಸಿ ಆದರೂ ಆನಂತರ ಹುಬ್ಬಳ್ಳಿಿಯ ವಿಜಯ ಮಹಾಂತೇಶ್ ಲಲಿತಕಲಾ ಮಹಾವಿದ್ಯಾಾಲಯದಲ್ಲಿ ಚಿತ್ರಕಲೆ ಕೋರ್ಸನ್ನು ಪಡೆದರು. ಇವರ ಕುಟುಂಬವೇ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೋ ಏನೋ, ಆ ಕ್ಷೇತ್ರವೇ ಇವರನ್ನು ಸೆಳೆಯಿತು. ಇವರ ಮುತ್ತಾಾತ ತಿಪ್ಪಾಾಜಿ ಹೆಸರಾಂತ ಕಲಾವಿದರು. ಶಿವಮೊಗ್ಗದಲ್ಲಿ ಇವರ ಹೆಸರಿನಲ್ಲೇ ಆರ್ಟ್ ಗ್ಯಾಾಲರಿಯನ್ನು ಸಹೋದರ ಕಾಶೀನಾಥ್ ತೆರೆದಿದ್ದಾಾರೆ. ಸುಮಾರು 40 ವರ್ಷದಿಂದ ಜ್ಞಾಾನೇಶ್ವರ್ ಶಿಲ್ಪಿಿಯಾಗಿದ್ದು, ಸುಮಾರು 500 ಶಿಲ್ಪ ಅವರಿಂದ ಇಲ್ಲಿಯವರೆಗೆ ಕಡೆಯಲ್ಪಟ್ಟಿಿದೆ.
ಮುತ್ತಾಾತ ತಿಪ್ಪಾಾಜಿ, ತಾತ ಪರಶುರಾಮಪ್ಪ ಅವರ ಶಿಲ್ಪಕಲೆ ಇವರ ಮೇಲೆ ಗಾಢವಾದ ಪರಿಣಾಮ ಬೀರಿದ್ದರಿಂದ ಕಲಾವೃತ್ತಿಿಯೇ ಜೀವನವಾಯಿತು. ಅದರಲ್ಲೂ ಬಳ್ಳಿಿಗಾವಿಯ ಶಿಲ್ಪ ಇನ್ನಷ್ಟು ಇವರನ್ನು ಸೆಳೆಯಿತು. ಇವರ ಮಗ ಪ್ರವೀಣ್ ಮತ್ತು ಇಬ್ಬರು ಮೊಮ್ಮಕ್ಕಳೂ ಸಹ ಇದೇ ಕ್ಷೇತ್ರದಲ್ಲಿ ಮುಂದುವರೆದಿದ್ದಾಾರೆ. ಈ ಮೂಲಕ ಈ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಕೊಡುಗೆ ನೀಡುತ್ತಿಿದ್ದಾಾರೆ.
ಕಲೆಯನ್ನು ಕಷ್ಟದಿಂದ ಕಲಿಯಬೇಕು. ಒಮ್ಮೆೆ ಆಸಕ್ತಿಿ ಮೂಡಿದರೆ ಕಲಿಕೆ ಕಷ್ಟವಾಗದು. ಇದಕ್ಕೆೆ ಉತ್ತಮ ಭವಿಷ್ಯವಿದೆ. ಜೊತೆಗೆ ಅಷ್ಟೇ ಮಾರುಕಟ್ಟೆೆಯೂ ಇದೆ. ಅದರೆ ಹಣ ಗಳಿಸುವುದೊಂದೇ ಕಲೆಯ ಉದ್ದೇಶವಾಗಬಾರದು. ಶಿಲ್ಪಕಲೆಯ ಶಾಲೆಯನ್ನು ತೆರೆಯುವ ಆಲೋಚನೆ ಇದೆ. ಇದಕ್ಕೆೆ ಸ್ಥಳ ಬೇಕು, ಜೊತೆಗೆ ಎಲ್ಲರ ಸಹಕಾರ ಬೇಕು. ನಗರಾಭಿವೃದ್ಧಿಿ ಪ್ರಾಾಧಿಕಾರಕ್ಕೆೆ ಈ ಬಗ್ಗೆೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದೇನೆ. ಶಾಲೆ ಆರಂಭವಾದೊಡನೆ ಇಲ್ಲಿ ವಿದ್ಯಾಾರ್ಥಿಗಳಿಗೆ ಶಿಲ್ಪಕಲೆಯನ್ನು ಉಚಿತವಾಗಿ ಕಲಿಸುವ ವಿಚಾರ ಮಾಡಿದ್ದೇನೆ ಎನ್ನುತ್ತಾಾರೆ ಜ್ಞಾಾನೇಶ್ವರ್.   
ಶಿಲ್ಪಕಲೆ ಉಳಿದ ಕಲೆಯಂತೆ ಸುಲಭದಲ್ಲಿ ಕಲಿಯುವಂತಹುದಲ್ಲ. ಇದಕ್ಕೆೆ ಎಲ್ಲ ಕಲೆಗಿಂತ ಹೆಚ್ಚಿಿನ ತಾಳ್ಮೆೆ, ಸಂಯಮ ಬೇಕು. ಬಹಳ ನಿಧಾನದ ಕೆಲಸ ಇಲ್ಲಿ ನಡೆಯುತ್ತದೆ. ಇತ್ತೀಚೆಗೆ ಕಲ್ಲುಗಳೂ ಸಹ ಸುಲಭದಲ್ಲಿ ಸಿಗುತ್ತಿಿಲ್ಲ. ಕಲಾಕಾರರಿಗೆ ಸರಕಾರ ಸುಲಭದಲ್ಲಿ ಕಲ್ಲು ಸಿಗುವಂತೆ ಮಾಡಬೇಕಿದೆ. ಅಂದರೆ ಮಾತ್ರ ಕಲೆ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ.
ಈಗ ಪ್ಲಾಾಸ್ಟರ್ ಆಫ್ ಪ್ಯಾಾರಿಸ್, ಸಿಮೆಂಟ್ ಮತ್ತು ಮೆಟಲ್ ಶಿಲ್ಪ ಮಾರುಕಟ್ಟೆೆಗೆ ಕಾಲಿಟ್ಟಿಿದೆ. ಆದರೂ ಶಿಲ್ಪಕಲೆಗೆ ಇರುವ ಮಹತ್ವವೇನೂ ಕಡಿಮೆಯಾಗಿಲ್ಲ. ಹೆಚ್ಚು ದುಬಾರಿಯಾದರೂ ಇದರ ಅಂದವೇ ಬೇರೆ. ದೇವರು, ವಿವಿಧ ಮಹಾಪುರುಷರ, ದಾರ್ಶನಿಕರ ವಿಗ್ರಹವನ್ನು ಕಲ್ಲಿನಲ್ಲೇ ಕೆತ್ತುವ ಪರಿಪಾಠವಿದೆ. ಜೊತೆಗೆ ಇದು ನೋಡುಗರನ್ನೂ ಸೆಳೆಯುವವಂತಹುದು. ಇದರಿಂದಾಗಿಯೇ ತನ್ನದೇ ಆದ ಮಹತ್ವವನ್ನು ಶಿಲ್ಪಕಲೆ ಉಳಿಸಿಕೊಂಡಿದೆ. ಜೊತೆಗೆ ಜ್ಞಾಾನೇಶ್ವರ್ ಅವರಂತಹ ಕಲಾವಿದರೂ ಇದನ್ನು ಬೆಳೆಸಿದ್ದಾಾರೆ.
ಇವರ ಸಾಧನೆ ಗಮನಿಸಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ  ಪ್ರಶಸ್ತಿಿ ನೀಡಿ ಗೌರವಿಸಿದೆ. ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದೊರೆಯುವ ಮೂಲಕ ಇನ್ನಷ್ಟು ಪ್ರೋತ್ಸಾಾಹ ಇವರಿಗೆ ಸಿಕ್ಕಂತಾಗಿದೆ. ನಗರದ ಸಹೃದಯರೂ ಸಹ ಇವರಿಗೆ ಇನ್ನಷ್ಟು ಪ್ರೋತ್ಸಾಾಹ, ಅವಕಾಶ ಕೊಡುವಂತಾಗಬೇಕು. ವಿದೇಶದಲ್ಲಿ ಹೆಸರು ಮಾಡಿರುವ ಇಂತಹ ಕಲಾಕಾರರಿಗೆ ನಾಡಿನೆಲ್ಲೆೆಡೆ ಗೌರವ ದೊರೆಯಬೇಕಿದೆ.

published on 23-11-19
........................