Tuesday 28 August 2018

ವಾದ್ಯಗಳ ವೈದ್ಯ

ಅಂತೋಣಿ ರಾಜು




 ಸಂಗೀತ ಉಪಕರಣ, ಚರ್ಮವಾದ್ಯ ತಯಾರಿ ಮತ್ತು ದುರಸ್ತಿಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿರುವವರು ತೀರಾ ವಿರಳ. ಅದರಲ್ಲೂ ಶಿವಮೊಗ್ಗದಲ್ಲಿ ಈ     
ವೃತ್ತಿಿಯಲ್ಲಿರುವವರು ಒಬ್ಬರೇ. ಅವರೆಂದರೆ, ಸುಮಾರು ಐದು ದಶಕದಿಂದ ಜನಮನ ಗೆದ್ದಿರುವ ಟಿ.ಎಸ್. ಅಂತೋನಿ ಆಂಡ್ ಸನ್‌ಸ್‌‌ನ ಮಾಲಕ ಎ. ಜಿ.ಎಸ್ ರಾಜು ಅರ್ಥಾತ್ ಅಂತೋನಿ ರಾಜು.
ರಾಮಣ್ಣ ಶ್ರೇಷ್ಠಿಿ ಪಾರ್ಕ್ ವೃತ್ತದ ಎದುರೇ ಇರುವ ರಾಜು ಅವರ ಅಂಗಡಿ ಗೊತ್ತಿಿಲ್ಲದಿರುವವರು ಅಪರೂಪ.  ಮೂಲತಃ ತಂಜಾವೂರಿನವರಾದ ರಾಜು ಅವರ ತಂದೆ ಅಂತೋನಿ ಊರು ಬಿಟ್ಟು ಬೆಂಗಳೂರಿಗೆ ಬಂದು ವಾದ್ಯ ಪರಿಕರಗಳ ದುರಸ್ತಿಿ ಆರಂಭಿಸಿ ಸಾಕಷ್ಟು ಪಳಗಿದ್ದರು. ಪ್ರಖ್ಯಾಾತ ಸಂಗೀತಗಾರರೆಲ್ಲ ಅವರಿಗೆ ಪರಿಚಿತರಾಗಿದ್ದರು. ಈ ವೇಳೆ ಕೆಲವು ಹಿರಿಯ ಸಂಗೀತಗಾರರು ಮಲೆನಾಡು ಭಾಗದಲ್ಲಿ ವಾದ್ಯಗಳ ದುರಸ್ತಿಿ ಮಾಡುವವರು ಯಾರೂ ಇಲ್ಲದಿರುವುದನ್ನು ಗಮನಕ್ಕೆೆ ತಂದಾಗ 1973ರಲ್ಲಿ ಶಿವಮೊಗ್ಗಕ್ಕೆೆ ಬಂದು ನೆಲೆನಿಂತರು. ಅನಂತರ  ಹೆಚ್ಚೇನೂ ಕೆಲಸ ಇಲ್ಲದಿದ್ದರಿಂದ ಭದ್ರಾಾವತಿಯ ವಿಐಎಸ್‌ಎಲ್‌ನಲ್ಲಿ ಕಾರ್ಮಿಕರಾಗಿಯೂ ದುಡಿಯಲಾರಂಭಿಸಿದರು. 1985ರಲ್ಲಿ ಅಂತೋನಿ ನಿಧನರಾದ ಬಳಿಕ ರಾಜು ಅವರು ಪರಂಪರಾಗತವಾಗಿ ಬಂದ ವಾದ್ಯ ಪರಿಕರಗಳ ದುರಸ್ತಿಿ ಮತ್ತು ತಯಾರಿಕೆಯನ್ನು ಮುಂದುವರೆಸಿ ಶಿವಮೊಗ್ಗದಲ್ಲೇ ಖಾಯಂ ಆಗಿ ನೆಲೆನಿಂತಿದ್ದಾಾರೆ.
ಹೈಸ್ಕೂಲುವರೆಗೆ ಮಾತ್ರ ಓದಿರುವ ರಾಜು, ತಂದೆಯ ಜೊತೆ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಾದ್ಯಗಳ ತಯಾರಿಕೆ ಮತ್ತು ದುರಸ್ತಿಿ ಕಲಿತವರು. ಮೊದಲು ಇವರ ಅಂಗಡಿ ಗಾಂಧಿಬಜಾರ್ ವಾಸವಿ ದೇವಸ್ಥಾಾನದ ಎದುರಿನ ಮನೆಯೊಂದರಲ್ಲಿತ್ತು. ಸುಮಾರು 10 ವರ್ಷದಿಂದ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಸ್ಥಳಾಂತರಗೊಂಡಿದೆ.
ಹಿಂದೂಸ್ಥಾಾನಿ ವಾದ್ಯಗಳಿಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದೆಡೆಯಿಂದ ಬೇಡಿಕೆ ಇದೆ. ತಮಿಳುನಾಡು, ಬೆಂಗಳೂರು, ಮೈಸೂರು ಮೊದಲಾದೆಡೆ ಕರ್ನಾಟಕ ಸಂಗೀತ ಪರಿಕರಗಳಿಗೆ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತಿಿತರ ದೇಶಗಳು ನಿರ್ಮಿತ ಎಲೆಕ್ಟ್ರಾಾನಿಕ್ ವಾದ್ಯ ಪರಿಕರಗಳು ಮಾರುಕಟ್ಟೆೆಗೆ ಬಂದಿದ್ದರೂ ಪಾರಂಪರಿಕವಾದ ವಾದ್ಯಗಳಿಗೆ ಬೇಡಿಕೆ ತಗ್ಗಿಿಲ್ಲ. ನಾಲ್ಕೈದು ದಶಕಗಳಿಗಿಂತ ಹೆಚ್ಚು ಬೇಡಿಕೆ ಈಗ ಇದೆ. ಜೊತೆಗೆ ದುರಸ್ತಿಿಯೂ ಸುಲಭದ ಕೆಲಸವಲ್ಲ. ಹೊಸ ವಾದ್ಯ ಮಾಡಿಕೊಡುವಂತೆ ಅಕ್ಕಪಕ್ಕದ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿಿದೆ ಎನ್ನುತ್ತಾಾರೆ ರಾಜು.
ಇವರು ತಯಾರಿಸುವ ಮತ್ತು ದುರಸ್ತಿಿ ಮಾಡುವ ವಾದ್ಯಗಳೆಂದರೆ, ಗಿಟಾರ್, ಟಾಂಗೊ, ತಬಲಾ, ಹಾರ್ಮೋನಿಯಂ, ವಯೋಲಿನ್, ಮೃದಂಗ, ವೀಣೆ, ಜಾನಪದ ವಾದ್ಯಗಳಾದ ನಗಾರಿ, ಉಡ್ಕಿಿ, ಚೌಗಡ, ಡಮರುಗ, ಬುಡಬುಡಿಕೆ, ಚೌಡಿಕೆ ಮೊದಲಾದವು. ಇವುಗಳಿಗೆ ಬೇಕಾಗುವ ಸಾಮಗ್ರಿಿಗಳನ್ನು ಅಂದರೆ ಸ್ಟೀಲ್ ಮತ್ತಿಿತರ ಧಾತುಗಳಿಂದ ಮಾಡಿದ ಡಗ್ಗವನ್ನು ಕುಂಭಕೋಣಂನಿಂದ, ಚರ್ಮವನ್ನು ಮಹಾರಾಷ್ಟ್ರದ ಲಾತೂರ್‌ನಿಂದ ತರಿಸುತ್ತಾಾರೆ.
ಇಲ್ಲಿನ ವಾದ್ಯಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತಹವು. ಸಂಗೀತಗಾರರು ಇದನ್ನು ಉಳಿಸಿ ಬೆಳೆಸುವತ್ತ ಗಮನಹರಿಬೇಕು. ಎಲೆಕ್ಟ್ರಾಾನಿಕ್ ವಾದ್ಯ ಎಲ್ಲ ಧ್ವನಿಗಳನ್ನು ಸೃಷ್ಟಿಿಬಹುದು. ಆದರೆ ಭಾರತೀಯ ವಾದ್ಯಗಳನ್ನು ಬಾರಿಸಿದರೆ ಮತ್ತು ಅದರಿಂದ ಪ್ರೇಕ್ಷಕರಿಗೆ ಲಭಿಸುವ ಆನಂದ ಮತ್ತೊೊಂದರಿಂದ ಸಿಗುವುದಿಲ್ಲ ಎನ್ನುತ್ತಾಾರೆ ಅವರು. 
ಈ ವೃತ್ತಿಿಯಿಂದ ರಾಜು ಅವರು ಶ್ರೀಮಂತರಾಗದಿದ್ದರೂ ಜೀವನಕ್ಕೇನೂ ತೊಂದರೆ ಆಗಿಲ್ಲ. ಅಂಗಡಿ ಮತ್ತು ಮನೆಯ ಬಾಡಿಗೆ ಕಟ್ಟಿಿ ನೆಮ್ಮದಿಯಿಂದ ಜೀವಿಸುತ್ತಿಿದ್ದಾಾರೆ. ಸಂಗೀತಗಾರರು ಮತ್ತು ವಾದ್ಯಗಾರರಿಗೆ ರಾಜು ಚಿರಪರಿಚಿತ. ಆದ್ದರಿಂದ ಎಲ್ಲೆೆಡೆಯಿಂದ ದುರಸ್ತಿಿ, ಹೊಸ ವಾದ್ಯಕ್ಕೆೆ ಬೇಡಿಕೆ ಬರುತ್ತಿಿದೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ವೃತ್ತಿಿನಿರತರಾಗಿರುವ ರಾಜು, ಯಾವತ್ತೂ ಪ್ರಚಾರದ ಗೀಳಿಗೆ ಬಿದ್ದವರಲ್ಲ. ನಗರದ ಮತ್ತು ಭದ್ರಾಾವತಿಯ ಹಲವು ಸಂಘ-ಸಂಸ್ಥೆೆಗಳು, ಸಂಗೀತಗಾರರು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನಿಸಿದ್ದಾಾರೆ.
published on 25 aug 2018
................................... 

Thursday 23 August 2018

ಶೌರ್ಯ ಪ್ರಶಸ್ತಿಿಗೆ
ನಿಶಾಂತ್


 ನಿನ್ನಿಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವೆಯೋ ಅದನ್ನು ಸಾಧಿಸು ಎಂದು ರೂಸ್‌ವೆಲ್‌ಟ್‌ ಹೇಳಿದ ಮಾತಿದೆ. ನಾವು ಸಾಧ್ಯವಿಲ್ಲ ಎಂದು ಅರಿತು ಸುಮ್ಮನಿದ್ದರೆ ಏನನ್ನೂ ಸಾಧನೆ ಮಾಡಲಾಗುವುದಿಲ್ಲ. ಆದರೆ ಕೆಲವೊಮ್ಮೆೆ ಸಂದರ್ಭ ನಮ್ಮನ್ನು ಅಂತಹ ಸಾಧನೆಗೆ ತಳ್ಳುತ್ತದೆ.
ನಿಶಾಂತ್ 9 ವರ್ಷದ ಬಾಲಕ. 2015ರಲ್ಲಿ ಈತ ಬಾವಿಗೆ ಬಿದ್ದಿದ್ದ ತನ್ನ ತಂಗಿಯನ್ನು ಕಾಪಾಡಿ ಕೇಂದ್ರ  ಗೃಹ ಸಚಿವಾಲಯ ಕೊಡಮಾಡುವ ಶೌರ್ಯ ಪ್ರಶಸ್ತಿಿಗೆ ಭಾಜನನಾಗಿದ್ದಾಾನೆ. ರಿಪ್ಪನ್‌ಪೇಟ್ ಸಮಿಪದ ಕಲ್ಲೂರು ಸಮೀಪದ ಯಾಲಕ್ಕಿಿಕೊಪ್ಪ ವಾಸಿ ಉಮಾಕಾಂತ್ ಮತ್ತು ಶುಭಾ ಅವರ ಪುತ್ರ ನಿಶಾಂತ್. ಈ ದಂಪತಿಗೆ ನಿಶಾಂತ್ ಹೊರತಾಗಿ ತಂಗಿ ಇದ್ದಾಾಳೆ. ಮೂರು ವರ್ಷದ ಹಿಂದೆ ಗಣೇಶ ಚವತಿಯ ಸಂದರ್ಭದಲ್ಲಿ  ಮನೆಯಲ್ಲಿ ಗಣಪತಿ ತಂದು ಪೂಜಿಸಿ ನೀರಿಗೆ ಬಿಟ್ಟಿಿದ್ದರು. ಇದನ್ನೇ ಅನುಕರಣೆ ಮಾಡುವ ಆಟವಾಡುತ್ತ ಅಣ್ಣ-ತಂಗಿ ಮನೆ ಸಮೀಪವಿರುವ ತೆರೆದ ಕೃಷಿ ಹೊಂಡಕ್ಕೆೆ ಗಣಪನನ್ನು ಬಿಡಲು ತೆರಳಿದ್ದ ವೇಳೆ ತಂಗಿ ಆಯತಪ್ಪಿಿ 8 ಅಡಿ ಆಳದ ಬಾವಿಗೆ ಬಿದ್ದಿದ್ದಳು. ಕೂಡಲೇ ನಿಶಾಂತ್ ತಾನು ಸಹ ಬಾವಿಗೆ ಅಡ್ಡವಾಗಿ ಹಾಕಲಾಗಿದ್ದ ಸಿಮೆಂಟ್ ಕಂಬವನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು ಇನ್ನೊೊಂದು ಕೈಯ್ಯಲ್ಲಿ ಮುಳುಗುತ್ತಿಿದ್ದ ತಂಗಿಯನ್ನು ಹಿಡಿದುಕೊಂಡು  ಜೀವ ರಕ್ಷಣೆಗಾಗಿ ಸುಮಾರು 10 ನಿಮಿಷಗಳ ಕಾಲ ಯತ್ನಿಿಸಿದ್ದ. ನಂತರ ಆತನ ಕೂಗು ಕೇಳಿ ಮನೆಯವರು ಓಡಿ ಬಂದು ಇಬ್ಬರನ್ನು ಕಾಪಾಡಿದ್ದರು.
ನಿಶಾಂತ್ ಇದರಿಂದ ಹೆದರಿ ವಾರಗಟ್ಟಲೆ ಯಾರೊಂದಿಗೂ ಮಾತನಾಡುತ್ತಿಿರಲಿಲ್ಲ. ಅಷ್ಟೇ ಏಕೆ ಪೊಲೀಸರು ಬಂದಿದ್ದಕ್ಕೆೆ ಓಡಿಹೋಗಿ ಅಡಗಿಕೊಂಡಿದ್ದ. ತನ್ನಿಿಂದ ಅಪರಾಧವಾಯಿತೆಂಬ ಭಾವನೆಯಲ್ಲಿದ್ದ ಆತನನ್ನು ಸರಿದಾರಿಗೆ ತರಲು ಮನೆಯವರು ಸುಮಾರು 15 ದಿನಗಳ ಕಾಲ ಪ್ರಯತ್ನಿಿಸಿದ್ದರು.
ಈತನ ಶೌರ್ಯದ ಬಗ್ಗೆೆ ರಾಜ್ಯ ಸರ್ಕಾರಕ್ಕೆೆ  ವರದಿ ಕೊಡಲಾಗಿತ್ತು. ರಾಜ್ಯವು ಕೇಂದ್ರಕ್ಕೆೆ ಪತ್ರಕ್ಕೆೆ ಬರೆದು ಶೌರ್ಯ ಪ್ರಶಸ್ತಿಿಗೆ ಶಿಫಾರಸು ಮಾಡಿತ್ತು.  ಈ ಹಿನ್ನೆೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಒಂದು ಲಕ್ಷ ರೂ. ನಗದು ಬಹುಮಾನದೊಂದಿಗೆ  ಒಂದು ಪ್ರಶಸ್ತಿಿ ಪತ್ರ, ಸ್ಮರಣಿಕೆ ನೀಡಿದೆ. ಈ ಪ್ರಶಸ್ತಿಿಯನ್ನು ಕಳೆದ ವಾರ ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ನಿಶಾಂತ್ ಕುಟುಂಬದವರನ್ನು ಬರಮಾಡಿಕೊಂಡು ಪ್ರದಾನ ಮಾಡಿದ್ದಾಾರೆ. 
ಅಂದು ತನ್ನಿಿಂದ ತಂಗಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಆತ ಅರಿತು ಸುಮ್ಮನಿದ್ದರೆ ತಂಗಿ ಬದುಕುಳಿಯುತ್ತಿಿರಲಿಲ್ಲ. ಜೊತೆಗೆ ಈತನ ಶೌರ್ಯವೂ ಪ್ರಕಟವಾಗುತ್ತಿಿರಲಿಲ್ಲ. ಆದರೆ ಹಿಂದೆ-ಮುಂದೆ ಗಮನಿಸದೆ ನೀರಿಗಿಳಿದು ಒಡಹುಟ್ಟಿಿದವಳನ್ನು ಕಾಪಾಡಿ ಎಲ್ಲರ ಕಣ್ಮಣಿಯಾಗಿದ್ದಾಾನೆ.
ಈತ ಹೆದ್ದಾಾರಿಪುರದ ರಾಮಕೃಷ್ಣ ಶಾಲೆಯಲ್ಲಿ ಓದುತ್ತಿಿದ್ದಾಾನೆ. 2015ರಲ್ಲೇ ಈತನ ಸಾಹಸ ಗಮನಿಸಿ ಅನೇಕರು ಪ್ರೋತ್ಸಾಾಹಿಸಿದ್ದಾಾರೆ. ಮುಂಬೈನಿಂದಲೂ ಒಬ್ಬರು ಪತ್ರ ಬರೆದು ಸಾಹಸವನ್ನು ಕೊಂಡಾಡಿದ್ದರು. ಇದಾದ ಬಳಿಕ ಸನ್ಮಾಾನ, ಮಾಡಿ ಹಲವರು ಕೊಂಡಾಡಿದ್ದಾಾರೆ. ಜಿಲ್ಲಾಾ ಪೊಲೀಸ್ ವರಿಷ್ಠ ಅಭಿನವ್ ಖರೆ ಮೊನ್ನೆೆ ತಮ್ಮ ಕಚೇರಿಗೆ ಬಾಲಕನನ್ನು ಕರೆಯಿಸಿ ಗೌರವಿಸಿದ್ದಾಾರೆ. ಜೊತೆಗೆ ಬರುವ ಆಗಸ್‌ಟ್‌ 15ರಂದು ಸ್ವಾಾತಂತ್ರ್ಯೋೋತ್ಸವ ಸಂದರ್ಭದಲ್ಲಿ ಜಿಲ್ಲಾಾ ಮಟ್ಟದ ಕಾರ್ಯಕ್ರಮದಲ್ಲಿ ಗೌರವಿಸವಲಾಗುವುದು ಎಂದು ಆತನ ಕುಟುಂಬದವರಿಗೆ ತಿಳಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ನಿಶಾಂತ್, ಕಲಿಕೆಯಲ್ಲಿ ಸದಾ ಚುರುಕು, ಆದರೆ ಅಷ್ಟೇ ಕಿಲಾಡಿ ಎನ್ನುವ ಈತನ ಅಜ್ಜ ನಾಗೇಂದ್ರಪ್ಪ, ಈತನ ಶೌರ್ಯ ಈಗ ಉಳಿದ ಬಾಲಕರಿಗೆ ಮಾದರಿಯಾಗಿದೆ ಎನ್ನುತ್ತಾಾರೆ.
 ಇಂತಹ ಸಾಹಸಿಯನ್ನು ಸಂಘ-ಸಂಸ್ಥೆೆಗಳು ಮುಂದೆಬಂದು ಗೌರವಿಸಿ ಪುರಸ್ಕರಿಸಬೇಕಿದೆ. 
published on 18 aug.2018
................................  

Saturday 11 August 2018

ಮರೆಯಾಗಿ ಹೋದ 
ಜಯಶೀಲನ್


ಕಲೆ ಎನ್ನುವುದು ನಮ್ಮತನವನ್ನು ಕಳೆದುಕೊಳ್ಳುವ ಮತ್ತು ಕಂಡುಕೊಳ್ಳುವ ಒಂದು ಮಾರ್ಗ ಎಂದು ಆಂಗ್ಲ ವಿದ್ವಾಾಂಸನೊಬ್ಬ ಹೇಳಿದ್ದಾಾನೆ. ಅದರಲ್ಲೂ ಸಂಗೀತಕ್ಕೆೆ ತನ್ನಲ್ಲಿ ನಮ್ಮನ್ನು ಲೀನಮಾಡಿಕೊಳ್ಳುವ ಶಕ್ತಿಿ ಇದೆ. ಇದರಿಂದ ನಾವೇ ಕಳೆದುಹೋದ ಅನುಭವವಾಗುತ್ತದೆ.
 ಒಂದು ದಶಕದ ಹಿಂದಿನವರೆಗೆ ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಿ ಹೊಂದಿದ್ದವು. ಇದಕ್ಕೆೆ ಹಾಡುಗಾರನ ಕಂಠಸಿರಿ, ಅದಕ್ಕೆೆ ತಕ್ಕಂತೆ ಕೀ ಬೋರ್ಡ್ ಸಹಿತ ಇತರೇ ವಾದ್ಯ ಪರಿಕರ ನುಡಿಸುವವರ ಕೈಚಳಕ ಕಾರಣವಾಗಿತ್ತು. ಜಯಶೀಲನ್ ಇತ್ತೀಚೆಗೆ ನಮ್ಮನ್ನಗಲಿದ ನಗರದ ಅಪರೂಪದ ಕಲಾವಿದ. ಕೀ ಬೋರ್ಡ್ ಮತ್ತು ರಸಮಂಜರಿಯಲ್ಲಿ ಅವರ ಹೆಸರು ಪ್ರಸಿದ್ಧಿಿ ಮತ್ತು ಎತ್ತರದ ಸ್ಥಾಾನದಲ್ಲಿದೆ.
 ನಾಲ್ಕೈದು ದಶಕಗಳ ಹಿಂದೆಯೇ ಜಿಲ್ಲೆೆ ಮತ್ತು ರಾಜ್ಯಮಟ್ಟದಲ್ಲಿ ರಸಮಂಜರಿಯನ್ನು ಜನರು ಮರೆಯಲಾಗದ ಮತ್ತು ಹುಡುಕಿಕೊಂಡು ಹೋಗುವಂತೆ ಮಾಡಿದವರು ಅವರು. ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗ ಭಾಗದಲ್ಲಿ ಕೀ ಬೋರ್ಡ ವಾದ್ಯವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ಜನಪ್ರಿಿಯಗೊಳಿಸಿದ ಕೀರ್ತಿ ಜಯಶೀಲನ್‌ರದ್ದು. ಅದಕ್ಕಾಾಗಿಯೇ ಕೀ ಬೋರ್ಡ್ ಎಂದರೆ ನೆನೆಪಾಗುವುದು ಜಯಶೀಲನ್ ಹೆಸರು.
ಜಯಶೀಲನ್ ಹುಟ್ಟಿಿದ್ದು ಭದ್ರಾಾವತಿಯಲ್ಲಿ, ಓದಿದ್ದು ತೀರಾ ಕಡಿಮೆಯಾದರೂ ಸಂಗೀತ ಕ್ಷೇತ್ರ ಮಾತ್ರ ಅವರನ್ನು ಕೈಬೀಸಿ ಕರೆಯಿತು. ಬಾಲ್ಯದಿಂದಲೂ ರಸಮಂಜರಿಯತ್ತ ಆಕರ್ಷಣೆಗೆ ಒಳಗಾಗಿದ್ದ ಅವರು, ಅಲ್ಲಿನ ಗೀತಾ ಆರ್ಕೆಸ್ಟ್ರಾಾದಲ್ಲಿ ಕೀ ಬೋರ್ಡ್ ವಾದಕರಾಗಿ ಸೇರಿಕೊಂಡಿದ್ದರು. ಆನಂತರ ಆ ತಂಡ ನಡೆಸುವ ಜವಾಬ್ದಾಾರಿಯೇ ಇವರಿಗೆ ಬಂದಿತು. ಇದರಿಂದ ಹಿಂದಡಿ ಇಡದೆ ತಂಡವನ್ನು ಸಮರ್ಥವಾಗಿ ನಡೆಸಿ ಜನಪ್ರಿಿಯಗೊಳಿಸಿದರು. ಕೀ ಬೋರ್ಡನ್ನು ತಮ್ಮ ಆರ್ಕೆಸ್ಟ್ರಾಾ ಕಾರ್ಯಕ್ರಮಕ್ಕಾಾಗಿ ಬೆಂಗಳೂರಿನಿಂದ ಬಾಡಿಗೆಗೆ ತರಿಸಿಕೊಳ್ಳುತ್ತಿಿದ್ದ ಆ ದಿನದಲ್ಲೂ ಅದರ ಗುಂಗನ್ನು ಹಿಡಿಸಿದವರು ಇವರು.
ಅಲ್ಲಿಂದ ಇತ್ತೀಚಿನವರೆಗೂ ಜಯಶೀಲನ್ ಕಾರ್ಯಕ್ರಮ ಎಂದರೆ ಕಲಾಸಕ್ತರು ತಪ್ಪದೆ ಹಾಜರಿರುತ್ತಿಿದ್ದರು. ದಸರಾ, ಗಣಪತಿ ಹಬ್ಬ, ಕನ್ನಡ ರಾಜ್ಯೋೋತ್ಸವ ಇತ್ಯಾಾದಿ ದಿನಗಳಲ್ಲಿ ಅವರ ಕಾರ್ಯಕ್ರಮಕ್ಕೆೆ ಎಲ್ಲಿಲ್ಲದ ಬೇಡಿಕೆ. ಹಾಡುವುದರ ಜೊತೆಗೆ ನಿರೂಪಣೆಯನ್ನು ಅವರು ಮಾಡುತ್ತಿಿದ್ದರು. ಅವರ ಪತ್ನಿಿ ಪ್ರತಿಭಾ ಸಹ ಈ ತಂಡದಲ್ಲಿ ಗಾಯಕಿಯಾಗಿದ್ದರು. ಜಯಶೀಲನ್ ಕ್ಯಾಾಸೆಟ್‌ಗಳನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ದೂರದರ್ಶನದಲ್ಲಿ ಇವರ ರಸಮಂಜರಿ ಪ್ರಸಾರವಾಗಿದೆ. ಎಲ್ಲೆೆಡ ಜನಪ್ರಿಿಯತೆಯನ್ನು ಗಳಿಸಿದ್ದರಿಂದ ಇವರಿಗೆ  ಹಬ್ಬ-ಹರಿದಿನಗಳಲ್ಲಿ ಒತ್ತಡದ ಕಾರ್ಯಕ್ರಮವಿರುತ್ತಿಿತ್ತು. ಆರ್ಕೆಸ್ಟ್ರಾಾದಿಂದಲೇ ಜೀವನ ನಿರ್ವಹಣೆ ಮಾಡುತ್ತಿಿದ್ದ ಇವರು ತಮ್ಮ ಮಕ್ಕಳಲ್ಲೂ ಈ ಕಲೆ ಹರಿಯುವಂತೆ ಮಾಡಿದ್ದಾಾರೆ.
ಇವರ ಪುತ್ರ ದೀಪಕ್ ರಾಜ್ಯ, ರಾಷ್ಟ್ರ ಮಟ್ಟದ ಕೀ ಬೋರ್ಡ್ ವಾದಕ. ಹಲವು ಟಿವಿ ಶೋಗಳಿಗೆ ಇಂದಿಗೂ ಇವರೇ ಕೀ ಬೋರ್ಡ್ ಪ್ರಧಾನ ವಾದಕರು. ವಿದೇಶದಲ್ಲೂ ತಮ್ಮ ಕೀ ಬೋರ್ಡ್ ಕೈಚಳಕ ತೋರಿ ಬಂದಿದ್ದಾಾರೆ. ಮಗಳು ಅನಿತಾ ವಿವಾಹಿತೆಯಾದರೂ ಗೀತಾ ಆರ್ಕೆಸ್ಟ್ರಾಾ ಮುನ್ನಡೆಸುತ್ತಿಿದ್ದಾಾರೆ. ಇನ್ನೊೊಬ್ಬ ಪುತ್ರ ಮೋನಿಕ್ ಸಹ ಹಾಡುಗಾರ. ಹೀಗೆ ಸುಮಾರು 50 ವರ್ಷದಿಂದ ಇಡಿ ಕುಟುಂಬವೇ ಆರ್ಕೆಸ್ಟ್ರಾಾದಲ್ಲಿ ತೊಡಗಿಸಿಕೊಂಡಿದೆ. ಇಷ್ಟಾಾದರೂ ಯಾವುದೇ  ಹಮ್ಮು-ಬಿಮ್ಮು ಇಲ್ಲದೆ ಸಜ್ಜನಿಕೆ ಸಾಕಾರಮೂರ್ತಿಯಾಗಿದ್ದರು ಜಯಶೀಲನ್.
ತಮ್ಮ ತಂಡದಲ್ಲಿ ಕೆಲಸ ನಿರ್ವಹಿಸಿದ ಅನೇಕ ವಾದಕರು ಮತ್ತು ಹಾಡುಗಾರರಿಗೆ ಬದುಕು ಕಟ್ಟಿಿಕೊಳ್ಳುವಲ್ಲಿ ನೆರವಾಗಿದ್ದ ಜಯಶೀಲನ್, ಯಾವ ಪ್ರಚಾರಕ್ಕೂ, ಸನ್ಮಾಾನಕ್ಕೂ, ಹಣ ಸಂಪಾದನೆಗೂ ಆಸೆ ಪಡಲಿಲ್ಲ. ಸಂಘ-ಸಂಸ್ಥೆೆಗಳು ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನ, ಗೌರವ ನೀಡಿವೆ. ಯಾವತ್ತೂ ಇಂತಿಷ್ಟೇ ಹಣ ನೀಡಬೇಕೆಂದು ಕಾರ್ಯಕ್ರಮ  ಪ್ರಾಾಯೋಜಕರಿಗೆ ಹೇಳಿದವರಲ್ಲ. ಕನ್ನಡ, ತಮಿಳು, ದೇವರನಾಮ, ದೇಶಭಕ್ತಿಿಗೀತೆಗಳನ್ನು ಸುಮಧುರ ಕಂಠದಲ್ಲಿ ಹಾಡುವ ಮೂಲಕ ಜನಮನಗೆದ್ದಿದ್ದ ಈ ಅಪೂರ್ವ ಗಾಯಕ ಇನ್ನು ನೆನೆಪು ಮಾತ್ರ. 
published on 11th Aug.2018
.....................................

Tuesday 7 August 2018

ಸಂಗೀತ ನಿರ್ದೇಶಕನಾದ
  ಋತ್ವಿಿಕ್ ಮುರಳೀಧರ


ನಾವು ಅಂದುಕೊಂಡಿದ್ದಕ್ಕಿಿಂತ ಹೆಚ್ಚಿಿನ ಬುದ್ಧಿಿಮತ್ತೆೆ, ಧೈರ್ಯ ನನ್ನಲ್ಲಿದೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಮಾತ್ರ ಯಾವುದೇ ಕೆಲಸವನ್ನು ಸುಲಭವಾಗಿ ಸಾಧಿಬಹುದು. ಅಂದರೆ ನಮ್ಮಲ್ಲಿರುವ ಶಕ್ತಿಿ ಬಗ್ಗೆೆ ಆತ್ಮವಿಶ್ವಾಾಸ ಇರಬೇಕು.
ಸಂಕಷ್ಟಕರ ಗಣಪತಿ ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಿದೆ. ಇದರ ಟ್ರೇಲರ್ ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಿಯವಾಗಿದೆ. ಸುಮಾರು 2 ಲಕ್ಷ ಜನರು ಇದನ್ನು ಯೂಟ್ಯೂಬ್‌ನಲ್ಲೇ ವೀಕ್ಷಿಸಿದ್ದಾಾರೆ. ಈ ಸಿನಿಮಾಕ್ಕೆೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡಿ ಅದರ ಗೀತೆಗಳು ಹೆಸರಾಗುವಂತೆ ಮಾಡಿದವರು ಶಿವಮೊಗ್ಗದ ಸಂಗೀತಗಾರ ಮತ್ತು ಹಾಡುಗಾರ ಋತ್ವಿಿಕ್ ಮುರಳೀಧರ. ಈ ಚಿತ್ರದ ನಿರ್ದೇಶಕ ಅರ್ಜುನ್‌ಕುಮಾರ್ ಸಹ ಶಿವಮೊಗ್ಗದ ವಿನೋಬನಗರದವರು.
ಕುವೆಂಪು ರಸ್ತೆೆಯಲ್ಲಿರುವ ಶಂಕರ್ ಸೈಕಲೋತ್ಸವದ ಮಾಲಕರಾದ ಮುರಳೀಧರ ಅವರ ಪುತ್ರರಾಗಿರುವ ಋತ್ವಿಿಕ್, ಬಾಲ್ಯದಲ್ಲೇ ಸಂಗೀತಕ್ಕೆೆ ಮನಸೋತವರು. ಅವರ ತಾಯಿ ಆರತಿ ವಿಶೇಷವಾಗಿ ಮಗನ ಸಂಗೀತ  ಆಸೆಗೆ ನೀರೆರೆದವರು. ಶಾಸ್ತ್ರೀಯ ಸಂಗೀತದ ಮೂಲಕ ಈ ಕ್ಷೇತ್ರಕ್ಕೆೆ ಅಡಿಯಿಟ್ಟ ಋತ್ವಿಿಕ್, ಜಯಶ್ರೀ ನಾಗರಾಜ್ ಮತ್ತು ಗುರುಗುಹದ ಶೃಂಗೇರಿ ನಾಗರಾಜ್ ಅವರ ಶಿಷ್ಯರಾಗಿ  ಕರ್ನಾಟಕ ಸಂಗೀತವನ್ನು ಕಲಿತರು. ಆನಂತರ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವ ಮಟ್ಟಿಿಗೆ ಬೆಳೆದು ನಗರದಲ್ಲಿ ಹೆಸರಾಂತ ಗಾಯಕರಲ್ಲೊೊಬ್ಬರಾದರು. ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಹಾಗೂ ಎ.ಆರ್. ರೆಹಮಾನ್ ಇವರಿಗೆ ರೋಲ್ ಮಾಡೆಲ್. 
ಋತ್ವಿಿಕ್ ಹೆಸರು ಶಿವಮೊಗ್ಗದಲ್ಲಿ ಪರಿಚಿತ. ನಗರದ ಬಹಳಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ  ಅವರು ಪಾಲ್ಗೊೊಂಡು ತಮ್ಮ ಕಂಠಸಿರಿಯನ್ನು ಮೆರೆದಿದ್ದಾಾರೆ. ಆದರೆ ಇದೇ ಮೊದಲ ಬಾರಿ ಪಕ್ಕಾಾ ಕಮರ್ಷಿಯಲ್ ಸಿನಿಮಾಕ್ಕೆೆ ಸಂಗೀತ ನಿರ್ದೇಶನ ಮಾಡಿದ್ದಾಾರೆ. ನಗರದ ಎಜುರೈಟ್ ಕಾಲೇಜಿನಲ್ಲಿ ಬಿಬಿಎಂ ಮುಗಿಸಿದ ನಂತರ ಬೆಂಗಳೂರಿನಲ್ಲಿ ಎಂಬಿಎ ಓದಲು ಹೋದಾಗ  ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಋತ್ವಿಿಕ್ ಮಾಡಿದ ಪ್ರಯತ್ನ ಅಷ್ಟಿಿಷ್ಟಲ್ಲ. ಎಲೆಕ್ಟ್ರಾಾನಿಕ್‌ಸ್‌ ಮ್ಯೂಸಿಕ್‌ಸ್‌ ಕಲಿತು ನಿಧಾನವಾಗಿ ವೀಡಿಯೊ ಜಿಂಗಲ್‌ಸ್‌ ಮತ್ತು ಸಣ್ಣ ಜಾಹೀರಾತುಗಳಿಗೆ ಸಂಗೀತ ನೀಡಲಾರಂಭಿಸಿದರು. ಇಲ್ಲಿ ತಮ್ಮನ್ನು ಗುರುತಿಸಿಕೊಂಡ ಅವರು ಯುವಕರ ತಂಡ ಕಟ್ಟಿಿ ಪನ್ಮಂಡ್ರಿಿ ಕ್ರಾಾಸ್ ಎಂಬ ಕಿರುಚಿತ್ರ ನಿರ್ಮಿಸಿದರು. ಇದಕ್ಕೆೆ ಪ್ರಶಸ್ತಿಿ ಸಹ ಬಂದಿತು.
ಇಲ್ಲಿಂದ ಸ್ಯಾಾಂಡಲ್‌ವುಡ್‌ನಲ್ಲಿ ಅವಕಾಶದ ಬಾಗಿಲು ತೆರೆಯಿತು. ಸಂಕಷ್ಟಕರ ಗಣಪತಿ ಚಿತ್ರಕ್ಕೆೆ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹಾಗೂ ಹಿನ್ನೆೆಲೆ ಸಂಗೀತಗಾರರಾಗಿ ಕೆಲಸ ಮಾಡುವ ಮೂಲಕ ಹೊಸ ಇನ್ನಿಿಂಗ್‌ಸ್‌ ಆರಂಭಿಸಿದ್ದಾಾರೆ. ಇದಕ್ಕಾಾಗಿ ಸುಮಾರು 35 ವಿಭಿನ್ನ ಟ್ಯೂನ್‌ಗಳನ್ನು ಹಗಲಿರುಳು ಶ್ರಮಿಸಿ ರಚಿಸಿದರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹೆಸರಾಂತ ಗಾಯಕರು ಈ ಸಂಗೀತಕ್ಕೆೆ ಧ್ವನಿಯಾಗಿದ್ದಾಾರೆ.
ಈ ಹಿಂದೆ ದಿ ಗ್ರೇಟ್ ಸ್ಟೋೋರಿ ಆಫ್ ಸೋಡಾಬುಡ್ಡಿಿ ಎಂಬ ಸಿನಿಮಾಕ್ಕೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಋತ್ವಿಿಕ್, ವಿಭಿನ್ನ ಹಾಗೂ ವಿಶಿಷ್ಟ ಸಂಗೀತವನ್ನು ಜನರಿಗೆ ನೀಡಬೇಕೆನ್ನುವ ಗುರಿ ಹೊಂದಿದ್ದಾಾರೆ. ನಾವು ನೀಡುವ ಸಂಗೀತ ಜನರ ಮನಸ್ಸಿಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವುದು ಅವರ ನಿಲುವು. 
ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಋತ್ವಿಿಕ್ ಪ್ರತಿಭೆ ನಿಜಕ್ಕೂ ಅಗಾಧವದದ್ದು. ಈ ಚಿತ್ರದ ಹಾಡುಗಳನ್ನು  ಚಿತ್ರತಂಡದವರು ನಟ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ  ಕೇಳಿಸಿದಾಗ ಪುನೀತ್ ಸ್ವತಃ ತಾವೇ ಇದರ ಆಡಿಯೋ ಹಕ್ಕನ್ನು ತಮ್ಮ ಪಿಆರ್‌ಕೆ ಬ್ಯಾಾನರಿನಲ್ಲಿ ಖರೀದಿಸಿದ್ದಾಾರೆ. ಜೊತೆಗೆ ಋತ್ವಿಿಕ್ ಅವರ ಸಂಗೀತವನ್ನು ಮೆಚ್ಚಿಿ ಶಹಭಾಷ್ ಎಂದಿದ್ದಾಾರೆ. ಈ ಮೂಲಕ ತಾನೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕನಾಗಬಲ್ಲೆೆ ಎನ್ನುವುದನ್ನು ಅವರು ನಿರೂಪಿಸಿದ್ದಾಾರೆ.
  4 aug.2018
.......................................