Monday 29 October 2018

ಸಾಮಾಜಿಕ ಕಳಕಳಿಯ
ಗಣೇಶ್ ಕೋಡೂರು

 ಶಿಕ್ಷಣದ ಮೂಲ ಉದ್ದೇಶ ಮಕ್ಕಳನ್ನು ಸುಶಿಕ್ಷಿತರನ್ನಾಾಗಿಸುವ ಜೊತೆಗೆ ಜೀವಮಾನವಿಡಿ ಕಲಿಕೆಯಲ್ಲಿರುವಂತೆ ಮಾಡುವುದು ಎನ್ನುವ ಮಾತಿದೆ. ಅಂದರೆ ಮನಸ್ಸು ಸದಾ ಜ್ಞಾಾನದಿಂದ ಭರ್ತಿಯಾಗಿರುವಂತೆ, ಚಿಂತನೆಗೆ ಅವಕಾಶ ಮಾಡಿಕೊಡುವಂತೆ ಮಾಡುವುದು. ಇದರಿಂದ ಸುಶಿಕ್ಷಿತ ವ್ಯಕ್ತಿಿ ಮತ್ತು ಉತ್ತಮ ಸಮಾಜ ನಿರ್ಮಾಣವೂ ಸಾಧ್ಯ
ಹೊಸನಗರ ತಾಲೂಕಿನ ಕೋಡೂರಿನಲ್ಲಿ ಆವಿ ಗ್ರಾಾಮೀಣ ಮತ್ತು ನಗರಾಭಿವೃದ್ಧಿಿ ಸಂಸ್ಥೆೆ (ಸರ್ಕಾರೇತರ) 2008ರಿಂದ ಕಾರ್ಯಾಚರಿಸುತ್ತಿಿದೆ. ಇದರ ಮೂಲ ಉದ್ದೇಶ ಗ್ರಾಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯೆೆ ಕಲಿಯಲು ವಿವಿಧ ರೀತಿಯ ನೆರವು ನೀಡುವುದರ ಜೊತೆಗೆ ಅವರನ್ನು ಉತ್ತಮ ಪ್ರಜೆಗಳನ್ನಾಾಗಿ ಬೆಳೆಯಲು ಮಾರ್ಗದರ್ಶನ ಮಾಡುವುದು. ಇಂತಹ ಮಹದುದ್ದೇಶದ ಆವಿ ಸಂಸ್ಥೆೆಯ ಸಂಸ್ಥಾಾಪಕ ಗಣೇಶ್ ಕೋಡೂರು.
ಗಣೇಶ್ ಅವರ ತಂದೆ ಡಾ. ಶಿವರಾಂ ಮತ್ತು ಸಹೋದರಿ ಪೂರ್ಣಿಮಾ ಇದರ ರೂವಾರಿಗಳು. ಡಾ. ಶಿವರಾಂ ಅವರು ಗ್ರಾಾಮಾಂತರ ಪ್ರದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಹಳ್ಳಿಿ ಶಾಲೆಯ ಮಕ್ಕಳ ಪರಿಸ್ಥಿಿತಿ ಅರಿತು ಅವರನ್ನು ಸಬಲೀಕರಣಗೊಳಿಸುವ ಮತ್ತು ಉತ್ತಮ ಶಿಕ್ಷಣ ದೊರೆಯಲು ನೆರವಾಗುವ  ಕೆಲಸವನ್ನು ಏಕೆ ಮಾಡಬಾರದೆಂದು ಯೋಚಿಸಿ ಈ ಸಂಸ್ಥೆೆ ಸ್ಥಾಾಪನೆಗೆ ಮಗನಿಗೆ ಪ್ರೇರೇಪಣೆ ನೀಡಿದರು.
 ಶಿವಮೊಗ್ಗ, ಉಡುಪಿ, ರಾಯಚೂರು ಮತ್ತು  ವಿಜಯಪುರ ಜಿಲ್ಲೆೆಯಲ್ಲಿ ಈ ಸಂಸ್ಥೆೆ ಕಾರ್ಯಾಚರಿಸುತ್ತಿಿದೆ. ಇದಕ್ಕೆೆ 9 ನಿರ್ದೇಶಕರಿದ್ದು, ಇವರೆಲ್ಲ ಸಾಹಿತ್ಯ, ಇಂಜಿನೀಯರಿಂಗ್, ಸಮಾಜ ಸೇವೆ, ಪತ್ರಿಿಕಾ ರಂಗ, ವೈದ್ಯ ವೃತ್ತಿಿಯಲ್ಲಿರುವುದರಿಂದ ದುಡಿದಿದ್ದರಲ್ಲಿ ಸ್ವಲ್ಪ ಹಣವನ್ನು ಉಳಿಸಿ ಸಂಸ್ಥೆೆಯನ್ನು ಕಟ್ಟಿಿ ಬೆಳೆಸುತ್ತಿಿದ್ದಾಾರೆ.
ಹೊಸನಗರ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಿಗಳನ್ನು ಒದಗಿಸುತ್ತಿಿದ್ದಾಾರೆ. ನೋಟ್‌ಬುಕ್, ಪೆನ್ಸಿಿಲ್, ಕ್ರೀಡಾ ಪಟುಗಳಿಗೆ ಕ್ರೀಡಾ ಸಮವಸ್ತ್ರ, ಕ್ರೀಡಾ ಶೂ,  ಐಡಿ ಕಾರ್ಡ್, ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ವಿವಿಧ ವಿಷಯಗಳ ಬಗ್ಗೆೆ ನೀಡುತ್ತಿಿದ್ದಾಾರೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿಿದ್ದಾಾರೆ. ಶಿವಮೊಗ್ಗದಲ್ಲೂ ಇಂತಹ ಕೆಲಸ ಮಾಡಿದ್ದಾಾರೆ. ಸುಮಾರು 30ರಷ್ಟು ಶಾಲೆಯ ಮಕ್ಕಳಿಗೆ ಪ್ರತಿವರ್ಷ ನೆರವಾಗುತ್ತಿಿದ್ದಾಾರೆ. ಬಿಎಡ್ ಮಕ್ಕಳಿಗೂ ಸೂಕ್ತ ತರಬೇತಿಯನ್ನು ಏರ್ಪಡಿಸಿ ಮಾಹಿತಿ ಕೊಡಿಸಿದ್ದಾಾರೆ. ಮಕ್ಕಳಲ್ಲಿ ವಿವಿಧ ವಿಚಾರಗಳ ಬಗ್ಗೆೆ ಅರಿವು ಮೂಡಿಸುವುದು ಇದರ ಉದ್ದೇಶ. ಬೇಸಿಗೆ ಶಿಬಿರ ನಡೆಸಿ ಅಲ್ಲಿಯೂ ಮಾಹಿತಿ, ತರಬೇತಿ ನೀಡಿದ್ದಾಾರೆ.
 ಶಿವಮೊಗ್ಗದ ಆಲ್ಕೊೊಳದಲ್ಲಿರುವ ತಾಯಿಮನೆ ಸಂಸ್ಥೆೆಯ ವಾಚನಾಲಯಕ್ಕೆೆ ಸುಮಾರು 100 ಪುಸ್ತಕಗಳನ್ನು ಇತ್ತೀಚೆಗೆ ನೀಡಿದ್ದಾಾರೆ. ಮುಂದಿನ ದಿನಗಳಲ್ಲಿ ಹೊಸನಗರ ತಾಲೂಕಿನ ವಿದ್ಯಾಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾಾನ ಪಡೆಯುವ ಸಂಬಂಧ ಸುಮಾರು 5 ಸಾವಿರ ಪುಸ್ತಕವಿರುವ ವಾಚನಾಲಯವೊಂದನ್ನು ಸ್ಥಾಾಪಿಸುವ ಚಿಂತನೆ ಮಾಡಿದ್ದಾಾರೆ. ಇದಕ್ಕಾಾಗಿ ವಿವಿಧ ದಾನಿಗಳಿಂದ ಇದಕ್ಕೆೆ ಸಂಬಂಧಿಸಿದ ಪುಸ್ತಕಗಳನ್ನು ಪಡೆಯುವ ಯೋಚನೆಯಲ್ಲಿದ್ದಾಾರೆ. ವಾಚನಾಲಯದಲ್ಲೇ ಕುಳಿತು ಪುಸ್ತಕ ಓದಿ ಪರೀಕ್ಷೆಗೆ ಅನುವಾಗುವ ಉತ್ತಮ ಯೋಜನೆ ಇದಾಗಿದೆ. ಜೊತೆಗೆ ಹಲವು ಸರ್ಕಾರಿ ಪ್ರಾಾಥಮಿಕ ಶಾಲೆಗಳಿಗೆ ಕನ್ನಡ ಶಬ್ದಕೋಶವನ್ನು ಉಚಿತವಾಗಿ ಕೊಡುವ ನಿರ್ಧಾರವನ್ನೂ ಮಾಡಿದ್ದಾಾರೆ.
ನಾವು ಸಮಾಜಕ್ಕೆೆ ಏನನ್ನಾಾದರೂ ಕೊಡಬೇಕು. ಉತ್ತಮ ನಾಳೆಗಾಗಿ ಯೋಜನೆ ರೂಪಿಸಬೇಕು. ಇತರರಿಗಾಗಿ ಮಾಡಿದ ಕೆಲಸ ಸಾರ್ವಕಾಲಿಕವಾಗಿ ಉಳಿಯುತ್ತದೆ ಎನ್ನುತ್ತಾಾರೆ ಗಣೇಶ್. ಸರ್ಕಾರಿ ಶಾಲೆಗಳ ಬಗ್ಗೆೆ ಅಪಾರ ಕಾಳಜಿ ಇಟ್ಟು ಕೆಲಸ ಮಾಡುತ್ತಿಿರುವ ‘ಆವಿ’ ಯಾವುದೇ ಫಲಾಪೇಕ್ಷೆ ಹೊಂದಿಲ್ಲ. ಬಡಮಕ್ಕಳಿಗೆ ನೆರವಾಗುವುದು ಇದರ ಮೂಲ ಉದ್ದೇಶ. ಇಂತಹ ಸಂಸ್ಥೆೆಯನ್ನು ಬೆಂಬಲಿಸುವ ಮೂಲಕ ಇನ್ನಷ್ಟು ಹೊಸ ಯೋಜನೆಗಳಿಗೆ ಪ್ರೋತ್ಸಾಾಹವನ್ನು ಸಾರ್ವಜನಿಕರು ನೀಡಬೇಕಿದೆ.
published on 27th oct 2018
,,,,,,,,,,,,,,,,,,,,,,,,,,,,,,   

Monday 22 October 2018

ಅಪೂರ್ವ ಕ್ರೀಡಾ ಸಾಧಕಿ 
ಸುಶ್ಮಿಿತಾ


ಭಾರತದಲ್ಲಿ ನಿಜವಾದ ಪ್ರತಿಭೆಗಳಿರುವುದು ಗ್ರಾಾಮಾಂತರ ಪ್ರದೇಶದಲ್ಲಿ. ಆದರೆ ಅವುಗಳನ್ನು ಹುಡುಕಿ, ಬೆಳಕಿಗೆ ತರುವ ಕೆಲಸ ಆಗಬೇಕಿದೆ. ಬಡತನದಲ್ಲಿರುವ ಅಥವಾ ಅವಕಾಶವಂಚಿತ ಇಂತಹ ಪ್ರತಿಭೆಗಳಿಗೆ ವೇದಿಕೆ ಸಿಕ್ಕಾಾಗ ಮಾತ್ರ ಅವರಲ್ಲಿರುವ ಪ್ರತಿಭೆ ಹೊರ ಜಗತ್ತಿಿಗೆ ತಿಳಿಯಲು ಸಾಧ್ಯವಾಗುತ್ತದೆ. ಶಿವಮೊಗ್ಗ ತಾಲೂಕಿನ ಇಟ್ಟಿಿಗೆಹಳ್ಳಿಿ ಗ್ರಾಾಮದ ವಿದ್ಯಾಾರ್ಥಿನಿಯೊಬ್ಬಳು ಪವರ್ ಲಿಫ್ಟಿಿಂಗ್‌ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿಿದ್ದಾಾಳೆ. ಆದರೆ ಪ್ರೋತ್ಸಾಾಹದ ಕೊರತೆಯಿಂದ ಇದನ್ನು ಇನ್ನಷ್ಟು ಎತ್ತರಕ್ಕೆೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿಿತಿಯಲ್ಲಿದ್ದಾಾಳೆ.
ಪವರ್ ಲಿಫ್ಟಿಿಂಗ್, ವೇಟ್ ಲಿಫ್ಟಿಿಂಗ್, ಕುಸ್ತಿಿ ಮತ್ತು ಕಬಡ್ಡಿಿಯಲ್ಲಿ ಇವರ ಸಾಧನೆ ಅಪೂರ್ವವಾದುದು. ದೈಹಿಕ ಬಲದಿಂದಲೇ ಆಡುವ ಇಂತಹ ಕ್ರೀಡೆಗಳಲ್ಲಿ ಯುವತಿಯರು ಪಾಲ್ಗೊೊಳ್ಳುವುದು ಸುಲಭದ ಮಾತಲ್ಲ. ಆದರೂ ಉತ್ತಮ ತರಬೇತಿಯಿಂದಲೇ ಈ ಎಲ್ಲ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಲು ತನಗೆ ಸಾಧ್ಯವಾದುದನ್ನು ಅವರು ನೆನೆಪಿಸುತ್ತಾಾರೆ. ಸದ್ಯ ವೈಯಕ್ತಿಿಕವಾಗಿ ಎಲ್ಲ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. ಇದಕ್ಕೆೆ ಅವರ ಕುಟುಂಬದವರ ಸಹಕಾರ ಅಪಾರವಾದುದು.
 ಕೃಷಿ ಕುಟುಂಬದಿಂದ ಬಂದಿರುವ ಸುಶ್ಮಿಿತಾ, ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನಲ್ಲಿ ಪದವಿ ಮುಗಿಸಿದ್ದಾಾರೆ. ಓದಿನ ಜೊತೆಗೆ ಕ್ರೀಡಾಕೂಟದಲ್ಲಿ ತುಂಬಾ ಆಸಕ್ತಿಿ ಹಾಗೂ ಹಲವಾರು ಪದಕಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಿದ್ದಾಾರೆ. ಕಾಲೇಜಿನಲ್ಲಿ ಸುಸಜ್ಜಿಿತ ಜಿಮ್ ಇರುವುದರಿಂದ ಇದರ ಮೂಲಕ ಪವರ್ ಲಿಫ್ಟಿಿಂಗ್‌ನಲ್ಲೂ ತನ್ನನ್ನು ತೊಡಗಿಸಿಕೊಂಡು, ಅದರಲ್ಲೂ ಅಪಾರ ಸಾಧನೆ ಮಾಡಿದ್ದಾಾರೆ.
ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಜರುಗಿದ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾಾನ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಕುವೆಂಪು ವಿ.ವಿ.ಗೆ ಕೀರ್ತಿ ತಂದಿದ್ದಾಾರೆ. ಬಳಿಕ ಇನ್ನಷ್ಟು ಶ್ರಮ ವಹಿಸಿ ಕಠಿಣ ತರಬೇತಿ ಪಡೆದು ನಂತರ ಕೇರಳದ ಅಲೆಪ್ಪಿಿಯಲ್ಲಿ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿಿತಿಯ ಸ್ಥಾಾನದೊಂದಿಗೆ ಗೆದ್ದ ನಂತರ ವೇಟ್ ಲಿಫ್ಟಿಿಂಗ್‌ನಲ್ಲೂ ಭಾಗವಹಿಸಲಾರಂಭಿದರು. ಅಂತರ್ ಕಾಲೇಜು ವೇಟ್ ಲಿಫ್ಟಿಿಂಗ್ ಸ್ಪರ್ಧೆ ಜರುಗಿದಾಗ ಅದರಲ್ಲಿ ತೃತೀಯ ಮತ್ತು ಪವರ್ ಲಿಫ್ಟಿಿಂಗ್‌ನಲ್ಲಿ ದ್ವಿಿತೀಯ ಸ್ಥಾಾನವನ್ನು ಮತ್ತೊೊಮ್ಮೆೆ ಧರಿಸುವ ಮೂಲಕ ಭರವಸೆಯ ಪಟುವಾಗಿ ಹೊರಹೊಮ್ಮಿಿದರು.
 ಹೊಳೆಹೊನ್ನೂರಿನಲ್ಲಿ ಜರುಗಿದ ಅಂತರ್ ಕಾಲೇಜು ಕುಸ್ತಿಿ ಸ್ಪರ್ಧೆಯಲ್ಲಿ ಮೊದಲ ಸ್ಥಾಾನ, 2017ರಲ್ಲಿ ಹರಿಯಾನಾದಲ್ಲಿ ಜರುಗಿದ ಅಖಿಲ ಭಾರತ  ವಿವಿಗಳ  ಕುಸ್ತಿಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾಾರೆ. 2018ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಸ್ಟೇಟ್ ಬೆಂಚ್ ಪ್ರೆೆಸ್ ಪವರ್‌ಲಿಫ್ಟಿಿಂಗ್‌ನಲ್ಲಿ  ಮೊದಲ ಸ್ಥಾಾನ ಗಳಿಸಿದ್ದಾಾರೆ. ಇದೇ ವರ್ಷದ ಆರಂಭದಲ್ಲಿ ಗುಜರಾತಿನಲ್ಲಿ ಜರುಗಿದ ರಾಷ್ಟ್ರೀಯ ಸ್ಟುಡೆಂಟ್ ಒಲಿಂಪಿಕ್‌ಸ್‌‌ನಲ್ಲಿ ಕರ್ನಾಟಕ ತಂಡದಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದಿದ್ದರು. ಆನಂತರ ಮಲೇಶಿಯಾದಲ್ಲಿ ಜರುಗಲಿರುವ ಅಂತರ ರಾಷ್ಟ್ರೀಯ ಕಬಡ್ಡಿಿಗೆ ಆಯ್ಕೆೆಯಾಗಿದ್ದಾಾರೆ.
ಮಂಗಳೂರಿನಲ್ಲಿ ಜರುಗಿದ ರಾಜ್ಯ ಪವರ್ ಲಿಫ್ಟಿಿಂಗ್‌ನಲ್ಲಿ ಎರಡನೆಯ, ಹುಬ್ಬಳ್ಳಿಿಯಲ್ಲಿ ಜರುಗಿದ ರಾಜ್ಯ ಪವರ್‌ಲಿಫ್ಟಿಿಂಗ್, ಬೆಂಚ್ ಪ್ರೆೆಸ್‌ನಲ್ಲಿ 2ನೆಯ ಮತ್ತು ಮೊದಲನೆಯ ಸ್ಥಾಾನ ಪಡೆದು ಉತ್ತರ ಪ್ರದೇಶದಲ್ಲಿ ಜರುಗಿದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಂಡು ಉತ್ತಮ ಪ್ರದರ್ಶನ ನೀಡಿದ್ದಾಾರೆ. ನವೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಬೆಂಚ್‌ಪ್ರೆೆಸ್‌ನಲ್ಲಿ ಭಾಗವಹಿಸಲು ಸಕಲ ಸಿದ್ಧತೆ ನಡೆಸಿದ್ದಾಾರೆ.
ಭದ್ರಾಾವತಿಯ ಪ್ರಸಾದ್ ಅವರಲ್ಲಿ ತರಬೇತಿ ಪಡೆಯುತ್ತಿಿರುವ ಸುಶ್ಮಿಿತಾಗೆ ಹಲವಾರು ಸನ್ಮಾಾನ, ಗೌರವಾದರಗಳು ದಕ್ಕಿಿವೆ.  ಇನ್ನಷ್ಟು ಸಾಧನೆಗೆ ಪ್ರಾಾಯೋಜಕರು ಬೇಕಾಗಿದ್ದಾಾರೆ. ನೂರಾರು ಪದಕ, ಪ್ರಶಸ್ತಿಿ ಧರಿಸಿದವಳಿಗೆ ಸಾರ್ವಜನಿಕರ ನೆರವು ಅವಶ್ಯವಿದೆ. ಪ್ರತಿಯೊಂದು ಚಾಂಪಿಯನ್‌ಶಿಪ್‌ಗೂ ಅಪಾರ ಹಣವನ್ನು ವ್ಯಯಿಸಿ ಹೋಗಿಬರಲು ಸಾಧ್ಯವಾಗದ ಕಾರಣ ದಾನಿಗಳ ನೆರವಿಗೆ ಮನವಿ ಮಾಡಿದ್ದಾಾರೆ.
20. oct.2018
.......................................         

ಬಹುಮುಖೀ ಸಂಗೀತಜ್ಞ
ಮಹೇಂದ್ರ ಗೋರೆ


ಜೀವನದಲ್ಲಿ ನಮ್ಮ ಕನಸಿನಂತೆ ನಾವು ಸಾಗಬೇಕು. ಈ ಸಂದರ್ಭದಲ್ಲಿ ಸಾಕಷ್ಟು ತೊಂದರೆ, ಸಂಕಷ್ಟ, ಸಂಶಯ, ತಪ್ಪುಗಳೆದುರಾಗುತ್ತವೆಯಾದರೂ, ಅವುಗಳನ್ನು ಕಠಿಣ ಶ್ರಮ ಮತ್ತು ಅವಿರತ ಯತ್ನ, ಆತ್ಮ ವಿಶ್ವಾಾಸದಿಂದ ಎದುರಿಸಿದಾಗ ಕನಸು ನನಸಾಗಿ ಯಶಸ್ಸು ನಮ್ಮದಾಗುತ್ತದೆ. ಈ ರೀತಿ ಸಾಧನೆ ಮಾಡಿದವರಲ್ಲಿ ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಷ್ಟ್ರೀಯ ತೀರ್ಪುಗಾರ ಮಹೇಂದ್ರಕುಮಾರ್ ಗೋರೆ ಒಬ್ಬರು.
 ಮಹೇಂದ್ರ ಗೋರೆ ಯಾವುದೇ ಸಂಗೀತದ ಹಿನ್ನೆೆಲೆಯ ಮೂಲಕ ಈ ಕ್ಷೇತ್ರಕ್ಕೆೆ ಕಾಲಿಟ್ಟವರಲ್ಲ. ಪ್ರಾಾಥಮಿಕ ಶಾಲೆಗೆ ಹೋಗುವಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಕನಸನ್ನು ಕಂಡಿದ್ದರು. ಇದರಿಂದಾಗಿ ಆಗಲೇ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊೊಳ್ಳುವ ಅವಕಾಶವನ್ನೂ ಪಡೆಯುತ್ತಿಿದ್ದರು. ಇದನ್ನೇ ಸತತ ಪೋಷಿಸಿಕೊಂಡು ಬಂದ ಅವರು, ಮುಂದೆ ಹಿಂದೂಸ್ಥಾಾನಿ ಸಂಗೀತವನ್ನು ಹುಮಾಯೂನ್ ಹರ್ಲಾಪುರ ಅವರಲ್ಲಿ ಕೆಲವು ಕಾಲ ಅಭ್ಯಸಿಸಿದರು. ಆನಂತರ ಬೆಂಗಳೂರಿನಲ್ಲಿ ಶಿವಾನಂದ ಪಾಟೀಲ್  ಮತ್ತು ಶಿವರಾಜ ಗವಾಯಿಗಳಲ್ಲಿ ಮುಂದುವರೆಸಿದರು. ವಿದ್ಯಾಾರ್ಥಿಯಾಗಿದ್ದಾಾಗಲೇ ಕರ್ನಾಟಕ ಸಂಗೀತವನ್ನೂ ಸಹ ಶಿವಮೊಗ್ಗದಲ್ಲಿ ಶೃಂಗೇರಿ ಎಚ್.ಎಸ್. ನಾಗರಾಜ ಅವರಲ್ಲಿ ಕಲಿತರು. ಮುಂದೆ ಬೆಂಗಳೂರಿಗೆ ಹೆಚ್ಚಿಿನ ಅಧ್ಯಯನಕ್ಕೆೆ ತೆರಳಿದಾಗ ಅಲ್ಲಿಯೂ ಈ ಎಲ್ಲ ಸಂಗೀತ ಪ್ರಕಾರಗಳನ್ನು ಅವಕಾಶ ಸಿಕ್ಕಿಿದಾಗಲೆಲ್ಲ  ಪಡೆದರು. ಐಟಿಐ ಮತ್ತು ಡಿಪ್ಲೋಮಾ ಓದಿದ ಬಳಿಕೆ ಉನ್ನತ ಕಂಪನಿಗಳಲ್ಲಿ ಕೆಲಸಕ್ಕೆೆ ಸೇರಿಕೊಂಡ ಮೇಲೆ ಸಂಗೀತದ ಆಸಕ್ತಿಿ ಇನ್ನಷ್ಟು ಹೆಚ್ಚಿಿತು. ಕೆಲಸಕ್ಕಿಿಂತ ಸಂಗೀತವೇ ಮೇಲೆಂದು ತಿಳಿದು ಕೆಲಸ ಬಿಟ್ಟು ವಾಪಸ್ ಶಿವಮೊಗ್ಗಕ್ಕೆೆ ಬಂದು ಸಾಯಿದೀಪ ಕಲಾವೃಂದ ಎಂಬ ಸಂಸ್ಥೆೆಯನ್ನು ಹುಟ್ಟುಹಾಕಿ ಆ ಮೂಲಕ ವಿದ್ಯಾಾರ್ಥಿಗಳಿಗೆ ಶಿಕ್ಷಣ ನೀಡತೊಡಗಿದರು.
ನಯ, ವಿನಯಕ್ಕೆೆ, ಅಷ್ಟೇ ಸೌಜನ್ಯಕ್ಕೆೆ ಹೆಸರಾದ ಗೋರೆ, ನಗರದ ಬಸವನಗುಡಿಯಲ್ಲಿರುವ ತಮ್ಮ ನಿವಾಸದಲ್ಲೇ 16 ವರ್ಷದಿಂದ ಈ ಸಂಸ್ಥೆೆಯನ್ನು ನಡೆಸುತ್ತಾಾ ನೂರಾರು ವಿದ್ಯಾಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತಿಿದ್ದಾಾರೆ. ಜೊತೆಗೆ ತಮ್ಮ ತಂಡದೊಂದಿಗೆ ರಾಜ್ಯ, ಹೊರರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾಾರೆ. ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ಸಂಸ್ಥಾಾನದಲ್ಲಿ ವಿದ್ವಾಾಂಸರಾಗಿ ಕಾರ್ಯನಿರ್ವಹಿಸುತ್ತಿಿದ್ದಾಾರೆ. ಇಲ್ಲಿ ಪ್ರತಿವರ್ಷ ಸಂಗೀತ ಕಛೇರಿ ನೀಡುತ್ತಿಿದ್ದಾಾರೆ. ಉತ್ತಮ ತೀರ್ಪುಗಾರಾಗಿಯೂ ಪರಿಗಣಿತರಾಗಿದ್ದಾಾರೆ. ವಿವಿಧ ಚಾನೆಲ್‌ನವರು ನಡೆಸುವ ಆಡಿಶನ್‌ಗಳಿಗೆ ಇವರು ನಿರ್ಣಾಯಕರಾಗಿ ಆಹ್ವಾಾನಿತರಾಗುತ್ತಾಾರೆ. ರಾಷ್ಟ್ರಮಟ್ಟದ ತೀರ್ಪುಗಾರರಾಗಿ  ತಮ್ಮನ್ನು ಗುರುತಿಸಿಕೊಂಡಿದ್ದಾಾರೆ.
 ವಿವಿಧ ಶಾಲಾ, ಕಾಲೇಜಿನವರು ಜಿಲ್ಲಾಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಂಗೀತ ಸ್ಪರ್ಧೆಗಳಿಗೆ ಇವರಿಂದ ತರಬೇತಿ ಪಡೆಯುವುದು ವಿಶೇಷವಾಗಿದೆ. ಇವರ ಸಂಗೀತ ಮತ್ತು ಗಾಯನ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ದಸರಾ ಪ್ರಶಸ್ತಿಿಯನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿದೆ. ಹಾಗೂ ವಿವೇಕಾನಂದ ಮತ್ತು ಪತಂಜಲಿ ಪ್ರಶಸ್ತಿಿಯೂ ಇವರಿಗೆ ದಕ್ಕಿಿದೆ. ಜಿಲ್ಲೆೆಯಲ್ಲಿ ನೂರಾರು ಗೌರವ, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಮೂರು ವರ್ಷಗಳಿಂದ ಜಿಲ್ಲಾಾ ಜಾನಪದ ಪರಿಷತ್‌ನ ಅಧ್ಯಕ್ಷರಾಗಿ, ಧರ್ಮವರ್ಧಿನಿ ಸಂಸ್ಥೆೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿಿದ್ದಾಾರೆ.
ಕನ್ನಡ ಮತ್ತು ಹಿಂದಿಯ ಹಳೆಯ ಚಿತ್ರಗೀತೆಗಳನ್ನೊೊಳಗೊಂಡ ಮಧುರ ಮಧುರವಿ ಮಂಜುಳಗಾನ ಕಾರ್ಯಕ್ರಮವನ್ನು ರಾಜ್ಯದ ಅನೇಕ ಸ್ಥಳಗಳಲ್ಲಿ ನಡೆಸಿದ ಕೀರ್ತಿ ಇವರದು. ರಾಜ್ಯದ ಹಲವೆಡೆ, ದಸರಾ, ಗಣೇಶೋತ್ಸವ, ರಾಜ್ಯೋೋತ್ಸವ ಮತ್ತು ಇನ್ನಿಿತರ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಜಾನಪದದಲ್ಲೂ ಹೆಸರು ಮಾಡಿರುವ ಗೋರೆ, ದಿಂಡಿ ಉತ್ಸವಗಳಲ್ಲಿ, ಮರಾಠಿ ಮತ್ತು ಹಿಂದಿ ಭಜನ್‌ಗಳನ್ನು ಹೃನ್ಮನ ತಣಿಸುವಂತೆ ಹಾಡಿ ಜನಮನ ಗೆದ್ದಿದ್ದಾಾರೆ.
13. oct 2018
..................................... 

Saturday 6 October 2018

ರಕ್ತದಾನದ ಹೀರೋ
ಧರಣೇಂದ್ರ ದಿನಕರ್

ನೀವು ಒಂದು ವೇಳೆ ರಕ್ತದಾನಿಯಾಗಿದ್ದರೆ ಕೆಲವರಿಗೆ ಹೀರೋ ಆಗಿರುತ್ತೀರಿ,ಇನ್ನೂ ಕೆಲವರಿಗೆ ದೇವರ ಸಮಾನರಾಗುತ್ತೀರಿ, ಮತ್ತೂ ಕೆಲವರು ಸಾಯುವವರೆಗೆ ನಿಮ್ಮನ್ನು ಸ್ಮರಿಸುತ್ತಾಾರೆ.
ಶಿವಮೊಗ್ಗದಲ್ಲಿ ಇಂತಹ ರಕ್ತದಾನದ ಹೀರೋ ಒಬ್ಬರಿದ್ದಾಾರೆ. ಅವರೇ, ಸದಾ ಜನರ ಮಧ್ಯೆೆಯೇ ಇರುವ, ಯಾವ ಅಹಮಿಕೆಯೂ ಇಲ್ಲದ ಸರಳ, ಸಜ್ಜನ ಧರಣೇಂದ್ರ ದಿನಕರ್. 93 ಬಾರಿ ರಕ್ತದಾನ ನೀಡಿ, ಹಲವರ ಪಾಲಿಗೆ ಸದಾ ರಕ್ತಪೂರೈಸುವವರಾಗಿರುವ ಧರಣೇಂದ್ರ ಅವರದ್ದು ಎಬಿ ಪೊಸಿಟಿವ್ ರಕ್ತದ ಗುಂಪು, ಕೇವಲ ತಾವು ಮಾತ್ರ ರಕ್ತ ಕೊಡುವುದಲ್ಲದೆ, ತಮ್ಮಂತೆ ಹಗಲು- ರಾತ್ರಿಿ ಎನ್ನದೆ ರಕ್ತ ಕೊಡಲು ಸಿದ್ಧರಿರುವ ಸುಮಾರು 60 ಜನರ ತಂಡವನ್ನು ಅವರು ಬೆಳೆಸಿದ್ದಾಾರೆ.
1986ರಲ್ಲಿ ಪ್ರಪ್ರಥಮ ಬಾರಿ ತುರ್ತಾಗಿ ರೋಗಿಯೊಬ್ಬರಿಗೆ ರಕ್ತ ಬೇಕಿದ್ದರಿಂದ ದಾನ ಮಾಡಿದ ಬಳಿಕ, ಸತತವಾಗಿ ಪ್ರತಿ ಮೂರು ತಿಂಗಳಿಗೊಮ್ಮೆೆ ರಕ್ತ ಕೊಡುತ್ತಲೇ ಬಂದಿದ್ದಾಾರೆ. ಶಿವಮೊಗ್ಗ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆೆಗಳಿಂದಲೂ ರಕ್ತ ಬೇಕಾದವರು ಧರಣೇಂದ್ರ ಅವರಿಗೆ ಹಗಲು ರಾತ್ರಿಿ ಎನ್ನದೆ ಕರೆ ಮಾಡುತ್ತಾಾರೆ. ಯಾವುದೇ ವೇಳೆಯಲ್ಲಿ ಕರೆ ಮಾಡಿದರೂ ಅದನ್ನು ಅಷ್ಟೇ ವಿನಯದಿಂದ ಸ್ವೀಕರಿಸಿ ಅವರಿಗೆ ರಕ್ತ ಸಿಗುವಂತೆ ಮಾಡುತ್ತಿಿದ್ದಾಾರೆ. ಇವರೂ ಸಹ ಮಣಿಪಾಲ್, ಬೆಂಗಳೂರಿಗೆ ತರಳಿ ರಕ್ತದಾನ ಮಾಡಿದ್ದಾಾರೆ.
ಜಿಲ್ಲೆೆಯಲ್ಲಿ ರಕ್ತದಾನವನ್ನು ಒಂದು ಆಂದೋಲನವನ್ನಾಾಗಿ ಮಾಡಿದವರು ಇವರು. ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆೆ ರಾಜ್ಯದಲ್ಲೇ ಎರಡನೆಯ ಸ್ಥಾಾನದಲ್ಲ್ಲ್‌ಿರುವಂತಾಗಿದೆ.  ರಕ್ತದಾನವನ್ನು ಅಷ್ಟು  ಜನಪ್ರಿಿಯಗೊಳಿಸಿದ ಕೀರ್ತಿ ಇವರದ್ದು. ರಕ್ತದಾನಿಗಳ ಸಂಖ್ಯೆೆ ಹೆಚ್ಚುತ್ತ ಹೋದಂತೆ ರಕ್ತ ಶೇಖರಿಸಿಡಲು ಬೇಕಾದ ವೈಜ್ಞಾಾನಿಕ ವ್ಯವಸ್ಥೆೆ ಮಾಡಲು 1997ರಲ್ಲಿ ರೋಟರಿ ಬ್ಲಡ್ ಬ್ಯಾಾಂಕ್ ಆರಂಭವಾಗುವಂತೆ ಮಾಡುವಲ್ಲಿಯೂ ಇವರ ಪಾತ್ರ ಗಣನೀಯವಾದುದು. ಇದಾದ ಬಳಿಕ ಸ್ವಯಂಪ್ರೇರಿತ ರಕ್ತದಾನಿಗಳ ಸಂಘದ ಸಂಸ್ಥಾಾಪಕರಲ್ಲೊೊಬ್ಬರಾಗಿ ಕೆಲಸ ಮಾಡಿ, ಇಂದು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯನಿರತರಾಗಿದ್ದಾಾರೆ. ನಗರದ ಪ್ರತಿ ಕಾಲೇಜಿಗೆ ತೆರಳಿ ವಿದ್ಯಾಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸಿ, ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಿಿದ್ದಾಾರೆ. ಹೆಚ್ಚು ಕಡಿಮೆ ತಮ್ಮ ಮೂಲವೃತ್ತಿಿಯನ್ನೂ ಬದಿಗೊತ್ತಿಿ ಈಗ ಪೂರ್ಣ ಪ್ರಮಾಣದಲ್ಲಿ ರಕ್ತದಾನದ ಕಾಯಕದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
ಶಿವಮೊಗ್ಗದಲ್ಲಿ ರೆಡ್ ಕ್ರಾಾಸ್‌ನವರು ಬ್ಲಡ್ ಬ್ಯಾಾಂಕ್ ಸ್ಥಾಾಪಿಸುವಲ್ಲೂ ಇವರ ಪಾತ್ರ ದೊಡ್ಡದು. ರೆಡ್ ಕ್ರಾಾಸ್‌ನಲ್ಲೂ  ಸಕ್ರಿಿಯರಾಗಿ ಕೆಲಸ ಮಾಡುತ್ತಿಿರುವ ಧರಣೇಂದ್ರ ರಾಜ್ಯ ಪ್ರಶಸ್ತಿಿಗೆ ಎರಡು ಬಾರಿ ಪಾತ್ರರಾಗಿದ್ದಾಾರೆ. 2010 ಮತ್ತು 2012ರಲ್ಲಿ ಈ ಪ್ರಶಸ್ತಿಿ ಅವರಿಗೆ ದಕ್ಕಿಿದೆ. ಜೊತೆಗೆ ದಾನ ರತ್ನಾಾಕರ  ಎಂಬ ಬಿರುದಿಗೂ ಪಾತ್ರರಾಗಿದ್ದಾಾರೆ. ಇದರ ಹೊರತಾಗಿ ಇವರಿಗೆ ಅಪಾರ ಸನ್ಮಾಾನ, ಗೌರವಗಳು ಸಂದಿವೆ. ಶಿವಮೊಗ್ಗ ದಸರಾದಲ್ಲೂ ಸನ್ಮಾಾನಿಸಿ ಗೌರವಿಸಲಾಗಿದೆ.
ಹಲವರ ಜೀವ ಉಳಿಸಿದ ಸಾರ್ಥಕತೆಯನ್ನು ಅವರು ಕಂಡಿದ್ದಾಾರೆ. ಇಂದಿಗೂ ಆ ರಕ್ತ ಪಡೆದ ಕುಟುಂಬದವರು ತಮ್ಮನ್ನು ದೇವರಂತೆ ಕಾಣುತ್ತಾಾರೆ ಎಂದು ಹೃದಯತುಂಬಿ ನುಡಿಯುತ್ತಾಾರೆ. ಅತಿ ತುರ್ತು ಸಂದರ್ಭದಲ್ಲಿ ಬಾಲಕಿಯೊಬ್ಬಳಿಗೆ ರಕ್ತ ನೀಡಿ, ಇದರಿಂದಾಗಿ  ಹಲವು ವರ್ಷ ಆಕೆ ಬಾಳಿ ಆನಂತರ ಸತ್ತಾಾಗ ಆಕೆಯ ಪಾಲಕರು ಬಾಲಕಿಯ ಚಿತೆಗೆ ಧರಣೇಂದ್ರ ಅವರಿಂದಲೇ ಅಗ್ನಿಿಸ್ಪರ್ಶ ಮಾಡಿಸಿದ್ದರು. ಇಂತಹ ಅಪೂರ್ವ ಗೌರವಾದರಗಳಿಗೆ ಭಾಜನರಾಗಿರುವ ಧರಣೇಂದ್ರ ಶಿವಮೊಗ್ಗದ ಪಾಲಿಕೆ ಒಬ್ಬ ರಕ್ತದಾನದ ಹೀರೋ ಆಗಿದ್ದಾಾರೆ. 
 ತಾಯಿಯ ಕಣ್ಣೀರು ಮಗುವಿನ ಜೀವವನ್ನು ಉಳಿಸಲಾರದು. ಆದರೆ ನಾವು ನೀಡಿದ ರಕ್ತ ಆ ಜೀವವನ್ನು ಉಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಇನ್ನೊೊಂದು ಜೀವ ಉಳಿಸಿದ ಸಾರ್ಥಕತೆಯನ್ನು ಪಡೆಯಬೇಕಿದೆ ಎನ್ನುತ್ತಾಾರೆ ಅವರು. ರಕ್ತ ಬೇಕಾದವರು ಧರಣೇಂದ್ರ ದಿನಕರ್ ಅವರನ್ನು 98441-01866ರಲ್ಲಿ ಸಂಪರ್ಕಿಸಬಹುದು.
published on 6 oct-2018
.................................