Saturday 30 March 2019

ಕರಾಟೆಯ ಮಿನುಗುತಾರೆ
ಜಿ. ಎನ್. ಷಣ್ಮುಖ



ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಬೇಕು ಎನ್ನುವ ಮಾತಿದೆ. ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಿಯಾಗುವುದಿಲ್ಲ. ಬಾಲಕರಾಗಿದ್ದಾಾಗಲೇ ಸಾಧಿಸಿದವರೂ ನಮ್ಮೆೆದುರು ಇದ್ದಾಾರೆ. ವಯಸ್ಸಾಾದ ಮೇಲೂ ಸಾಧನೆ ಮಾಡುತ್ತಿಿರುವವರೂ ಇದ್ದಾಾರೆ. ಸಾಧನೆ ಎನ್ನುವುದು ನಿರಂತರ ಪ್ರಕ್ರಿಿಯೆ. ಅವಕಾಶ ಸಿಕ್ಕಾಾಗ ಅದನ್ನು ಬಿಡದೆ ಬಳಸಿಕೊಂಡಲ್ಲಿ ಸಾಧನೆ ಸಾಧ್ಯವಾಗುತ್ತದೆ.   
ಈ ಬಾಲಕನಿಗೆ 12 ವರ್ಷ. ಆದಿಚುಂಚನಗಿರಿ ವಿದ್ಯಾಾಸಂಸ್ಥೆೆಯಲ್ಲಿ 6ನೆಯ ತರಗತಿ ಓದುತ್ತಿಿದ್ದಾಾನೆ. ಈಗಾಗಲೇ ರಾಜ್ಯ, ರಾಷ್ಟ್ರೀಯ, ಅಂತಾರರಾಷ್ಟ್ರೀಯ ಕರಾಟೆ ಪಂದ್ಯಾಾವಳಿಗಳಲ್ಲಿ ಭಾಗವಹಿಸಿ ಪದಕಗಳ ಸರಮಾಲೆಯನ್ನೇ ಧರಿಸಿದ್ದಾಾನೆ. ಕರ್ನಾಟಕವನ್ನು ಮತ್ತು ಭಾರತವನ್ನು ಹಲವು ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ ಕೀರ್ತಿ ಈತನದು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಷಣ್ಮುಖ 5 ವರ್ಷಗಳಿಂದ ಕರಾಟೆ ಕ್ಷೇತ್ರದಲ್ಲಿದ್ದಾಾನೆ. ಅಂದರೆ ಒಂದನೆಯ ತರಗತಿಯಲ್ಲಿದ್ದಾಾಗಲೇ ಕರಾಟೆ ಆರಂಭಿಸಿ, ಇಂದಿಗೂ ಸತತ ತರಬೇತಿ ಮೂಲಕ ಅಪೂರ್ವ ಸಾಧನೆ ಮಾಡಿದ್ದಾಾನೆ.  ವಿದ್ಯಾಾಭ್ಯಾಾಸದ ಜೊತೆಗೆ ಇನ್ನೊೊಂದು ಕಲೆಯನ್ನು ರೂಢಿಸಿಕೊ
ಳ್ಳುವುದು ವಿದ್ಯಾಾರ್ಥಿ ದೆಸೆಯಲ್ಲಿ ಕಷ್ಟವಾದರೂ ಇದನ್ನು ನಿರ್ವಹಿಸಿಕೊಂಡು ಬರುತ್ತಿಿದ್ದಾಾನೆ.
ಕರಾಟೆ ಸ್ಪರ್ಧೆಗೆ ತೆರಳುತ್ತಿಿರುವುದರಿಂದ ಶಿಕ್ಷಣಕ್ಕೆೆ ತೊಂದರೆ ಆಗುತ್ತಿಿದ್ದರೂ ಸಂಸ್ಥೆೆಯವರು ಈತನ ಕಲಿಕೆಗೆ ವಿಶೇಷ ಸೌಲಭ್ಯ ಕಲ್ಪಿಿಸಿದ್ದಾಾರೆ. ಇದನ್ನು ಬಳಸಿಕೊಂಡು ಪಾಠದಲ್ಲೂ ಉತ್ತಮ ಸಾಧನೆ ಮಾಡುತ್ತಿಿದ್ದಾಾನೆ. ಕರಾಟೆಯ ಮೂಲಕ ಏನನ್ನಾಾದರೂ ವಿಶೇಷ ಸಾಧನೆ ಮಾಡಬೇಕೆನ್ನುವುದು ಈತನ ಕನಸಾಗಿದೆ. ಅದಕ್ಕಾಾಗಿ ಬಿಡುವಿನ ವೇಳೆಯನ್ನು ವ್ಯರ್ಥಪಡಿಸದೆ ಓದು ಮತ್ತು ಕರಾಟೆಗೆ ಮೀಸಲಿಡುತ್ತಿಿದ್ದಾಾನೆ.   
ಕರಾಟೆಯಲ್ಲಿ ಚಿನ್ನ, ಬೆಳ್ಳಿಿ, ಕಂಚಿನ ಪದಕಗಳನ್ನು ಪಡೆದಿದ್ದಾಾನೆ. ಜಿಲ್ಲಾಾ ಮಟ್ಟದಲ್ಲಿ ಆರಂಭಿಸಿ, ಈಗ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗಳಿಸಿ ಬರುವ ಮಟ್ಟಿಿಗೆ ಬೆಳೆದಿದ್ದಾಾನೆ. ಮಲೇಶಿಯಾ, ಶ್ರೀಲಂಕಾ ಮತ್ತು ದುಬೈನಲ್ಲಿ ನಡೆದ  ಸ್ಪರ್ಧೆಗಳಲ್ಲಿ ಈತ ಪದಕ ಧರಿಸಿದ್ದಾಾನೆ. ಕರಾಟೆ ಜೊತೆ ಇತ್ತೀಚೆಗೆ ಕಿಕ್ ಬಾಕ್ಸಿಿಂಗ್‌ನಲ್ಲೂ ತರಬೇತಿಯನ್ನು ಪಡೆಯುತ್ತಿಿದ್ದಾಾನೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಕಿಕ್ ಬಾಕ್ಸಿಿಂಗ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾಾನೆ. ಇದೇರೀತಿ ಕೇರಳ ಮತ್ತು ಪುಣೆಯಲ್ಲೂ ಪದಕ ಗಳಿಸಿದ್ದಾಾನೆ.  ಪೆಂಕಾಕ್ ಸಿಲತ್ ಎಂಬ ಇಂಡೋನೇಶಿಯಾದ ಕ್ರೀಡೆಯಲ್ಲೂ ಈತ ತರಬೇತಿ ಪಡೆಯುತ್ತಿಿದ್ದಾಾನೆ. ಈ ಕ್ರೀಡೆಯಲ್ಲಿ ಬೆಳ್ಳಿಿ ಪದಕವನ್ನು ಈಗಾಗಲೇ ಗೆದ್ದಿದ್ದಾಾನೆ.
ನಗರದ ಕರಾಟೆ ಗುರು ಚಂದ್ರಕಾಂತ್ ಭಟ್ಟ ಅವರ ಶಿಷ್ಯನಾಗಿರುವ ಷಣ್ಮುಖನಿಗೆ ಆತನ ತಂದೆ ಎಸ್‌ಬಿಐ ಉದ್ಯೋೋಗಿ ನಾಗರಾಜ್ ಮತ್ತು ತಾಯಿ  ಶಾಂತಕುಮಾರಿ ಸತತ ಮಾರ್ಗದರ್ಶನ ಮಾಡುತ್ತಿಿದ್ದಾಾರೆ. ಮಗನ ಎಲ್ಲ ಸಾಧನೆಗೂ ಅವರು ಬೆಂಬಲವಾಗಿ ನಿಂತು ಬೇಕಾದ ತರಬೇತಿಯನ್ನು ಭಟ್ಟರಿಂದ ಕೊಡಿಸುತ್ತಿಿದ್ದಾಾರೆ. ಭಟ್ಟರ ಅಚ್ಚುಮೆಚ್ಚಿಿನ ಶಿಷ್ಯನೂ ಆಗಿರುವ ಷಣ್ಮುಖ, ಇಲ್ಲಿಯವರೆಗೆ ತಾನು ಕಾಲಿಟ್ಟ ಕ್ಷೇತ್ರದಲ್ಲಿ ಹಿಂದಿರುಗಿ ನೋಡಿಲ್ಲ. ಸತತ ಸಾಧನೆ ಮೂಲಕ ಮೆಟ್ಟಿಿಲನು ಏರುತ್ತಲೇ ಇದ್ದಾಾನೆ. ಉತ್ತಮ ಗುರುವಿನ ಮಾರ‌್ಗದರ್ಶನವಿದ್ದರೆ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆೆ ಇದು ಸಾಕ್ಷಿ.
ಷಣ್ಮುಖನಲ್ಲಿ ಅಪಾರವಾದ ಸಾಧನಾ ಶಕ್ತಿಿ ಇದೆ. ಹೇಳಿಕೊಟ್ಟಿಿದ್ದನ್ನು ಚಾಚೂತಪ್ಪದೆ ಪಾಲಿಸುವುದರಿಂದ ಬಹುಬೇಗ ಎಲ್ಲಾಾ ರೀತಿ ಕೌಶಲ್ಯಗಳನ್ನು ಕಲಿತು ಸಾಧನೆ ಮಾಡುತ್ತಿಿದ್ದಾಾನೆ ಎನ್ನುತ್ತಾಾರೆ ಚಂದ್ರಕಾಂತ್ ಭಟ್ಟ.
ನಗರದ ಬಾಲಕನೊಬ್ಬ ಈ ರೀತಿ ಕರಾಟೆ ಸಾಧನೆ ಮಾಡುತ್ತಿಿರುವುದು ಅಪರೂಪದ ಸಂಗತಿ. ಈತನ ಸಾಧನೆಯನ್ನು ಗಮನಿಸಿ ಆದಿಚುಂಚನಗಿರಿ ಶಾಖಾಮಠದ ಸ್ವಾಾಮೀಜಿ ಹಾಗೂ ವಿದ್ಯಾಾಸಂಸ್ಥೆೆಯ ಮುಖ್ಯಸ್ಥರೂ ಆಗಿರುವ ಪ್ರಸನ್ನನಾಥ ಸ್ವಾಾಮೀಜಿ ಈತನನ್ನು ಹಲವರು ಬಾರಿ ಗೌರವಿಸಿದ್ದಾಾರೆ. ಜೊತೆಗೆ ನಗರದ ಹಲವು ಸಂಘ-ಸಂಸ್ಥೆೆಗಳೂ ಸನ್ಮಾಾನಿಸಿವೆ.
published on 30.3.2019
,,,,,,,,,,,,,,,,,,,,,,,,,,,,,,,

Thursday 28 March 2019

  ಲೇಖಕಿ
ಮಮತಾ ಹೆಗ್ಡೆೆ


ಮನುಷ್ಯನಲ್ಲಿ ಬಗೆಬಗೆಯ ಭಾವನೆಗಳು ಹುದುಗಿಕೊಂಡಿರುತ್ತವೆ. ಇವು ಕೆಲವೊಮ್ಮೆೆ ಸಹಜವಾಗಿ, ಅಥವಾ ಒತ್ತಡದಿಂದಾಗಿ ಹೊರಹೊಮ್ಮುತ್ತವೆ. ಹೊರಹೊಮ್ಮುವ ಮೂಲಕ ಅದು ರೂಪವೊಂದನ್ನು ಪಡೆಯುತ್ತದೆ. ಇದು ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಯಾಗಿರಬಹುದು. ಒಟ್ಟಿಿನಲ್ಲಿ ಪ್ರಕೃತಿಯ ಈ ಸಹಜವಾದ ಕೊಡುಗೆ ವ್ಯಕ್ತಿಿಯನ್ನು ಹೊರಜಗತ್ತಿಿಗೆ ಪರಿಚಯಿಸಬಲ್ಲುದು.
ಮಮತಾ ಹೆಗ್ಡೆೆ ಶಿವಮೊಗ್ಗದ ಮಹಿಳಾ ಲೇಖಕಿಯರಲ್ಲಿ ಒಬ್ಬರು. ನಾಲ್ಕು ವರ್ಷಗಳಿಂದ  ಪತ್ರಿಿಕೆಗಳಿಗೆ ಲೇಖನ ಬರೆಯುವ ಮೂಲಕ  ಸಾಹಿತ್ಯದಲ್ಲಿ ಮತ್ತು ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾಾರೆ. ಅಭಿರುಚಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಿಕೆ, ಓದುವುದರಲ್ಲಿ ಆಸಕ್ತಿಿ ಹೊಂದಿದ್ದಾಾರೆ. ಈ ಆಸಕ್ತಿಿಯೇ ಇಂದು ಅವರು ನಾಲ್ಕು ಕೃತಿಗಳನ್ನು ಹೊರತರಲು ಕಾರಣವಾಗಿದೆ.
ಮೂಲತಃ ಉಡುಪಿಯವರಾದ ಮಮತಾ, 37 ವರ್ಷಗಳಿಂದ ಶಿವಮೊಗ್ಗ ವಾಸಿ ಮತ್ತು ಗೃಹಿಣಿ. ಕುಟುಂಬವನ್ನು ನಿರ್ವಹಿಸಿಕೊಂಡು, ವಿವಿಧ ಸಂಘ-ಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿದ್ದವರು. ಆದರೆ ಬರೆವಣಿಗೆಯ ಆಸಕ್ತಿಿ ಅವರನ್ನು ಕೈಬೀಸಿ ಕರೆಯಿತು. ನಗರದ ಮಲೆನಾಡು ಮಿತ್ರ, ಶಿವಮೊಗ್ಗ ಟೈಮ್‌ಸ್‌ ಮತ್ತು ನಾವಿಕ ಪತ್ರಿಿಕೆಗಳಿಗೆ ಲೇಖನ ಬರೆಯತೊಡಗಿದರು. ಇದರಿಂದ ಅವರ ಬರೆವಣಿಗೆ ಹೆಚ್ಚು ಸ್ಪಂದನೆ ಸಿಗತೊಡಗಿತು. ವಾಚಕರ ಸಂಖ್ಯೆೆ ಏರತೊಡಗಿತು. ಅನೇಕರು ಬರೆಹ ಮೆಚ್ಚಿಿಕೊಂಡು ಬೆನ್ನುತಟ್ಟಿಿದರು. ಪ್ರೋತ್ಸಾಾಹಿತರಾಗಿ ಬರೆವಣಿಗೆಯನ್ನು ಮುಂದುವರೆಸಿದರು. 
   ಸಾಮಾಜಿಕ ಹಾಗೂ ವೈಚಾರಿಕತೆಯ ಆಧಾರದಲ್ಲಿ ನಾಲ್ಕು ಕೃತಿಗಳನ್ನು ಈವರೆಗೆ ಅವರು ರಚಿಸಿದ್ದಾಾರೆ. ಅವುಗಳೆಂದರೆ- ಹೂ ಮಿಂಚಿನ ಗೊಂಚಲು, ಮನೋನ್ನತಿ, ಅರಿವಿನ ಚಿಂತನೆ, ಅಂತರಂಗದ ಅಭಿರುಚಿ. ಇವೆಲ್ಲವೂ ಓದುರಗರಿಂದ ಪ್ರಸಂಸಗೆ ಒಳಗಾಗಿವೆ. ಈ ಕೃತಿಗಳೂ ಸಹ ಮೌಲ್ಯಯುತವಾಗಿರುವುದರಿಂದ  ಮಮತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆೆಯ ಹೆಸರುತಂದುಕೊಟ್ಟಿಿವೆ.
 ಸೀಮಿತ ಚೌಕಟ್ಟಿಿನೊಳಗೆ ನಿರೂಪಿಸಬೇಕಾದ ಸಂದರ್ಭಗಳಲ್ಲಿ ಚೊಕ್ಕವಾಗಿ, ಕಲಾತ್ಮಕವಾಗಿ, ಪರಿಣಾಮಕಾರಿಯಾಗಿ ಹೇಳುವ ಕಲೆ ಇವರಲ್ಲಿದೆ. ವಿಶಾಲವಾದ ಓದು, ಚಿಂತನಶೀಲತೆ, ಒಳನೋಟ, ರೂಢಿಸಿಕೊಂಡ ವಿಚಾರಗಳನ್ನು ಕೃತಿಗಳಲ್ಲಿ ರೂಪಿಸಿದ್ದಾಾರೆ. ಸಾವಧಾನವಾಗಿ ಸವಿಯಬಹುದಾದ, ಬುದ್ಧಿಿ-ಭಾವಗಳಿಗೆ ಚೈತನ್ಯ ನೀಡಬಲ್ಲ, ಚಿಕಿತ್ಸಕ ಗುಣಗಳುಳ್ಳ ಇವರ ಬರೆಹವನ್ನು ನಾವು ಕಾಣಬಹುದಾಗಿದೆ. ಬರೆಯುವುದು ಒಂಟಿತನದ ಕೆಲಸ. ಆದರೆ ಈ ಬರೆವಣಿಗೆಗೆ ಹಲವರು ಜನರು ಪರಿಣಾಮ ಬೀರಿರುತ್ತಾಾರೆ ಎಂಬ ಮಾತಿದೆ. ಈ ಪರಿಣಾಮ ಮಮತಾ ಅವರ ಕೃತಿಗಳಲ್ಲಿ ಕಂಡುಬರುತ್ತದೆ.   
ವಿಷಯಾಧಾರಿತವಾಗಿ ಅನೇಕ ಪ್ರಬಂಧಗಳನ್ನು ರಚಿಸಿದ್ದಾಾರೆ. ಜೊತೆಗೆ ಕವನಗಳ ರಚನೆಯಲ್ಲೂ, ಎತ್ತಿಿದಕೈ.  ಅನೇಕ ಸಾಹಿತ್ಯ ಗೋಷ್ಠಿಿಗಳಲ್ಲಿ ಕವನ ವಾಚನ ಮಾಡಿದ ಅನುಭವವಿದೆ. ಶಿವಮೊಗ್ಗದ  ಸಂಘ ಸಂಸ್ಥೆೆಗಳಾದ, ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಾ ಹಾಗೂ ರಾಜ್ಯದ ಲೇಖಕಿಯರ ಸಂಘ, ಓದುಗರ ವೇದಿಕೆ, ಬಂಟ ಸಮಾಜ, ಅತ್ರಿಿ ಮಹಿಳಾ ಸಮಾಜ, ವಿನಾಯಕ ನಗರದ ನಾಗರಿಕ ವೇದಿಕೆ ಇವುಗಳ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ಸದಸ್ಯಳಾಗಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿದ್ದಾಾರೆ.
 ಅತ್ರಿಿ ಮಹಿಳಾ ಸಮಾಜದಲ್ಲಿ ಅಧ್ಯಕ್ಷೆಯಾಗಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾಾರೆ. ನಿಯತಕಾಲಿಕಗಳಲ್ಲಿ, ಬಂಟ ಸಮಾಜದ ಮಾಸಿಕ ಪತ್ರಿಿಕೆಗಳಲ್ಲಿ ಸತತವಾಗಿ 2015 ರಿಂದ ಲೇಖನಗಳನ್ನು ಬರೆಯುತ್ತಿಿದ್ದಾಾರೆ. ಭದ್ರಾಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಾರೆ. ಸ್ವ-ರಚಿತ ಕವನ ವಾಚನ ರಚಿಸಿ ನಿವೇದಿಸಿದ್ದಾಾರೆ. ವಿಷಯಾಧಾರಿತ ಲೇಖನಗಳಿಗೆ ಕವನಗಳನ್ನು ಸತತವಾಗಿ ಬರೆಯುತ್ತಿಿದ್ದಾಾರೆ. ಅತ್ರಿಿ ಮಹಿಳಾ ಸಮಾಜದಲ್ಲಿ ನಾಟಕಗಳನ್ನು ಬರೆದು ಪ್ರಸ್ತುತಪಡಿಸಿದ್ದಾಾರೆ.
ಸಾಹಿತ್ಯವು ಜೀವನಾಸಕ್ತಿಿಯನ್ನು ಹೆಚ್ಚಿಿಸಿ ಸಮಾಜದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಬೆಸೆಯುತ್ತದೆ. ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ.   . ಸಾಧನೆಯ ಹಾದಿಯಲ್ಲಿ ವಯಸ್ಸು, ಲಿಂಗ ಅಡ್ಡಿಿಯಾಗಲಾರದು. ಬರೆಯುವ ಅಥವಾ ಕಲಿಕೆಯ ಆಸಕ್ತಿಿಯಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ ಎನ್ನುತ್ತಾಾರೆ ಮಮತಾ ಹೆಗ್ಡೆೆ. 
published on march 23.2019
............................


ಕಲಾತಪಸ್ವಿಿ
ವೀರಣ್ಣ ಮಾಳೇನಹಳ್ಳಿಿ



ಸಂಗೀತದ ಗುರುಗಳಾಗಿ, ಸಾಹಿತ್ಯದಲ್ಲೂ, ಸಂಶೋಧನೆಯಲ್ಲೂ ಆಸಕ್ತಿಿ ಹೊಂದಿ, ಸಮಾಜಸೇವೆಯ ಮೂಲಕ ಇಳಿಯಯಸ್ಸಿಿನಲ್ಲೂ ಕೆಲಸ ಮಾಡುತ್ತಿಿರುವವರು ವೀರಣ್ಣ ಮಾಳೇನಹಳ್ಳಿಿ. ನಾಲ್ಕಾಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯುವಕರೂ ಸಹ ನಾಚುವಂತೆ ಇಂದಿಗೂ ಊರೂರು ಸುತ್ತಿಿ ತಮ್ಮ ಕಾಯಕತತ್ವವನ್ನು ನಿರ್ವಹಿಸುತ್ತಿಿದ್ದಾಾರೆ.
 ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ  ಜಿಲ್ಲೆೆಯ ಮಠ, ಮಂದಿರ, ಜಾತ್ರೆೆ, ಉತ್ಸವ, ಜಯಂತಿಗಳಲ್ಲಿ ಸಂಗೀತ ಸೇವೆಯನ್ನು ಸಲ್ಲಿಸುತ್ತಿಿರುವ ಏಕೈಕ ವ್ಯಕ್ತಿಿ.   ಗ್ರಾಾಮೀಣ ಪ್ರತಿಭೆಗಳನ್ನು ಗುರುತಿಸಿ ಉಚಿತವಾಗಿ  ತಮ್ಮ ಗುರು ಪಂಚಾಕ್ಷರಿ ಸಂಗೀತ ವಿದ್ಯಾಾಲಯದ ಮೂಲಕ ಸಂಗೀತವನ್ನು ಧಾರೆ ಎರೆಯುತ್ತಿಿರುವ ಇವರು, ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ, ದಾಸರ ಪದ, ವಚನ ಸಂಗೀತ,  ಭಕ್ತ-ಭಾವಗೀತೆ, ಜಾನಪದ ಗೀತೆ ಮತ್ತು ತಬಲಾ ವಾದನದಲ್ಲಿ ಸಿದ್ಧಹಸ್ತರು. ಕಲಾತಪಸ್ವಿಿಯಾಗಿದ್ದರೂ ಸಹ ಸಾಹಿತ್ಯ ಕೃಷಿಯಲ್ಲೂ ಹೆಮ್ಮೆೆಯ ಸಾಧನೆ ಮಾಡಿದ್ದಾಾರೆ. ಇತ್ತೀಚೆಗಷ್ಟೇ ಹಾನಗಲ್ ಕುಮಾರಸ್ವಾಾಮಿಗಳು, ರುದ್ರಮುನಿ ಮಹಾಸ್ವಾಾಮಿಗಳು ಮತ್ತು ಕಪ್ಪನಹಳ್ಳಿಿ ರೇವಣಸಿದ್ದ ಸ್ವಾಾಮೀಜಿಗಳು ನಡೆದುಬಂದ ಹಾದಿಯ ಕುರಿತ ಕೃತಿಯನ್ನು ಹೊರತಂದಿದ್ದಾಾರೆ.
ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ವೀರಣ್ಣ, ಆನಂತರ ಸಂಗಮೇಶ್ವರ ಗವಾಯಿಗಳಲ್ಲಿ ಸಂಗೀತ ಅಭ್ಯಾಾಸ ಮಾಡಿ, ಹುಮಾಯುನ್ ಹರ್ಲಾಪುರ್ ಅವರ ಜೊತೆ ಸೇರಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿಿದ್ದಾಾರೆ. ಒಂದರ್ಥದಲ್ಲಿ ಅವರು ಸಂಗೀತ ಸರಸ್ವತಿಯ ವರಪುತ್ರರೆನ್ನಬಹುದು. ಶಂಕರಘಟ್ಟದಲ್ಲಿ ಸಂಗೀತ ಶಾಲೆ ತೆರೆದು  ಭರತನಾಟ್ಯ  ಮತ್ತು ಸಂಗೀತದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಿದ್ದಾಾರೆ. ಹಾರ್ಮೋೋನಿಯಂ ಇವರ ಅಚ್ಚುಮೆಚ್ಚಿಿನ ವಾದನ. ಸಾಕಷ್ಟು ಗಾಯಕರ ಗಾಯನಕ್ಕೂ ಸಾಥ್ ಕೊಟ್ಟಿಿರುವುದು ಇನ್ನೊೊಂದು ವಿಶೇಷ.
ಭಕ್ತಿಿ ಪ್ರಧಾನ ಮತ್ತು ಪೌರಾಣಿಕ ನಾಟಕಗಳನ್ನೂ ವೀರಣ್ಣ ನಿರ್ದೇಶನ ಮಾಡಿದ್ದಾಾರೆ. ಸಮಾಜ ಸೇವೆಯೂ ಇವರ ಅವಿಭಾಜ್ಯ ಅಂಗ. ಬಸವಣ್ಣ ಪ್ರತಿಪಾದಿಸಿರುವ ಜಾತ್ಯತೀತತೆ, ಕಾಯಕತತ್ವ, ಸಹೋದರತ್ವವನ್ನು ಮಕ್ಕಳಲ್ಲಿ ಬಿತ್ತಿಿ ಬೆಳೆಸಬೇಕೆಂಬ ಸಂಕಲ್ಪ ಹೊಂದಿರುವ ಇವರು, ತಮ್ಮ ಸಿರಿಕಂಠದಿಂದ ಮಲೆನಾಡಿನೆಲ್ಲೆೆಡೆ ಪ್ರಖ್ಯಾಾತರು. ಸಂಗೀತದ ನೆಲೆಯಲ್ಲಿ ಮಾತ್ರ ಗೀತೆಗಳನ್ನು ಗ್ರಹಿಸದೆ ಸಾಹಿತ್ಯದ ಜವಾಬ್ದಾಾರಿಯಿಂದ ಅರ್ಥಕ್ಕೆೆ ಪ್ರಾಾಧಾನ್ಯತೆ ನೀಡಿ ಹಾಡುವುದು ಇವರ ವಿಶೇಷತೆ.
ಕೇವಲ ಸಂಗೀತಕ್ಕೆೆ ಮಾತ್ರ ಸೀಮಿತರಾಗದೆ, ಇತಿಹಾಸ, ಪುರಾಣ, ದೇವರು, ಧರ‌್ಮ ಮೊದಲಾದ ವಿಷಯದಲ್ಲೂ ತಮ್ಮನ್ನು ವ್ಯಾಾಪಿಸಿಕೊಂಡಿದ್ದಾಾರೆ. ಬೆಳಗುತ್ತಿಿರುವ ದೀಪ ಮಾತ್ರ ಇನ್ನೊೊಂದು ದೀಪವನ್ನು ಪ್ರಜ್ವಲಿಸಬಹುದು ಎಂಬ ಮಾತಿದೆ. ಇದನ್ನು ಅಳವಡಿಸಿಕೊಂಡ ಸರಳ ಜೀವಿ ಇವರು. ಸಂಶೋಧನಾ ವಿದ್ಯಾಾರ್ಥಿಯಂತೆ  ತಾವು ತೆರಳುವ ಊರುಗಳಲ್ಲಿನ ಇತಿಹಾಸ, ಪುರಾಣ, ಕೋಟೆ, ಶಿಲ್ಪ, ದೇವತೆಗಳ ಬಗ್ಗೆೆ ಮಾಹಿತಿ ಕಲೆಹಾಕಿ, ಸಂಪಾದಿಸಿ, ಉತ್ತಮ ಕೃತಿಗಳನ್ನು ರಚಿಸಿದ್ದಾಾರೆ.
ಮೂಲತಃ ಕೃಷಿಕರಾದರೂ ಅದನ್ನು ಮಕ್ಕಳಿಗೆ ವಹಿಸಿ ತಾನೊಬ್ಬ ಕಲಾವಿದನಾಗಿ ಸಮಾಜಮುಖಿ ಸೇವೆ ಸಲ್ಲಿಸುತ್ತಿಿದ್ದಾಾರೆ. ವೀರಣ್ಣ ಅವರಿಗೆ 2010ರಲ್ಲಿ ಶಾಸ್ತ್ರೀಯ ಸಂಗೀತಕ್ಕೆೆ ರಾಜ್ಯಪ್ರಶಸ್ತಿಿ ದಕ್ಕಿಿದೆ. ನೂರಾರು ಪ್ರಶಸ್ತಿಿ, ಸಾರ್ವಜನಿಕ ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ.
ಪ್ರಯತ್ನ ಮತ್ತು ಪರಿಶ್ರಮವಿದ್ದಾಾಗ ಮಾತ್ರ ಮನುಷ್ಯನ ಸಾಧನೆ ಸಾಧ್ಯ. ಆಗ ಬದುಕು ಸುಂದರವಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು, ಸಮಸ್ಯೆೆಗಳನ್ನು ಧೈರ್ಯವಾಗಿ ಎದುರಿಸಬೇಕು ಎನ್ನುವ ವೀರಣ್ಣ, ಗೋಣಿಬೀಡು ಮಠದ ಭಕ್ತರು. ಅಲ್ಲಿನ ಸ್ವಾಾಮೀಜಿಗಳ ಪ್ರೇರೇಪಣೆಯಂತೆ ಕೆಲಸ ಮಾಡಿದ್ದರಿಂದ ಕಿಂಚಿತ್ತಾಾದರೂ ಸಾಧನೆ ಸಾಧ್ಯವಾಗಿದೆ ಎನ್ನುತ್ತಾಾರೆ.
 ಭದ್ರಾಾವತಿ ತಾಲೂಕು ಶಂಕರಘಟ್ಟದ ಸಮೀಪವಿರುವ ಮಾಳೇನಹಳ್ಳಿಿಯವರಾದ ವೀರಣ್ಣ, ಇಲ್ಲಿಯವರೆಗೆ 8 ಕೃತಿಗಳನ್ನು ರಚಿಸಿದ್ದಾಾರೆ. ಬತ್ತದ ಇವರ ಸಾಹಿತ್ಯ, ಸಂಗೀತದ ಚಿಲುಮೆ ಇನ್ನಷ್ಟು ಕಾಲ ಪ್ರವಹಿಸಬೇಕಿದೆ.
published on 16.3.19
............................      

Saturday 2 March 2019

3 ರಾಜ್ಯಪ್ರಶಸ್ತಿಿ ಪಡೆದ 
  ಬಾಲನಟಿ  ಸುಕನ್ಯಾಾ


ಕಲೆ ಪ್ರತಿಕೃತಿಯಲ್ಲ, ಪ್ರತಿಸೃಷ್ಟಿಿ. ನಮ್ಮ ಮೈ-ಮನಸ್ಸನ್ನು  ಮುಟ್ಟಿಿ, ತಟ್ಟಿಿ, ಬದುಕಿನ ಅವಿಭಾಜ್ಯವಾಗಿ ಉಳಿದುಬಂದಿದೆ. ಸಂತಸದ ಹೊನಲಾಗಿ ಹರಿದುಬಂದಿದೆ. ಕಲೆ ಒಂದು ಸೃಜನಶೀಲ ಚಟುವಟಿಕೆ, ಕೌಶಲ್ಯವನ್ನು ಪ್ರಕಟಿಸುವ ವಿಧವೂ ಹೌದು. ಕಲಾಕಾರ ತನ್ನ ಅಭಿನಯದ ಮೂಲಕ ವಿಷಯವನ್ನು ಬಿಂಬಿಸಿದರೆ, ಇತರರು ಅದರ ಸವಿಯನ್ನು ಅನುಭವಿಸುತ್ತಾಾರೆ. ಕಲೆಯು ಉಪಾಸನೆಯ ಒಂದು ಮಾಧ್ಯಮವೆಂದೂ ತಪ್ಪಲ್ಲ.
ನಾನಾರೀತಿಯ ಕಲೆಗಳಲ್ಲಿ ಮಕ್ಕಳು ಇಂದು ಹೆಸರು ಮಾಡುತ್ತಿಿದ್ದಾಾರೆ. ಬಾಲಕಲಾವಿದರಾಗಿಯೇ ಅನೇಕರು ತಮ್ಮ ಛಾಪನ್ನು ಮೂಡಿಸುತ್ತಿಿದ್ದಾಾರೆ. ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚುತ್ತಿಿದ್ದಾಾರೆ. ಇಂತಹವರಲ್ಲಿ ಶಿವಮೊಗ್ಗದ ಸುಕನ್ಯಾಾ ಒಬ್ಬರು.
 ಸುಕನ್ಯಾಾ 6ನೆಯ ತರಗತಿಯ ವಿದ್ಯಾಾರ್ಥಿನಿ. ಓ. ಟಿ. ರಸ್ತೆೆಯ ಸ್ವಾಾಮಿ ವಿವೇಕಾನಂದ ಶಾಲೆಯ ವಿದ್ಯಾಾರ್ಥಿನಿ. ಪ್ರತಿಭಾನ್ವಿಿತೆ ಕೂಡ. ಸಂಗೀತ, ಭಜನೆ ಹಾಡುವುದರಲ್ಲಿ ಮುಂದು. ಈ ಆಸಕ್ತಿಿ ಸಿನಿಮಾ ಕ್ಷೇತ್ರಕ್ಕೂ ಹೊರಳಿದ್ದು ವಿಶೇಷವೇ. ನಗರದವರೇ ಆದ ಶರತ್‌ಚಂದ್ರ ಅವರು ಮುರಿದ ಗೊಂಬೆ ಎನ್ನುವ ಕಿರುಚಿತ್ರವನ್ನು ನಿರ್ಮಿಸಬೇಕೆನ್ನುವ ಆಸೆ ಹೊತ್ತು ಬಾಲನಟಿಯೊಬ್ಬರನ್ನು ಹುಡುಕುತ್ತಿಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಿಿಗೆ ಬಿದ್ದಿದ್ದು ಸುಕನ್ಯಾಾ. ಈಕೆಯ ತಂದೆ ಕೃಷ್ಣಪ್ಪ ಮತ್ತು ತಾಯಿ ಕವಿತಾ ಅವರ ಪರವಾನಿಗೆ ಪಡೆದು ಚಿತ್ರದಲ್ಲಿ ನಟನೆಗೆ ಅವಕಾಶ ಕೊಟ್ಟರು. ಬಡವರ ಮನೆಯ ಹುಡುಗಿ ರಮ್ಯಾಾಳ ಪಾತ್ರ ಈಕೆಯದು. ಅದನ್ನು ಕಣ್ಣಿಿಗೆ ಕಟ್ಟುವಂತೆ ಮಾಡಿದ್ದಾಾಳೆ. ಇದೇ ಅವರಿಗೆ ರಾಜ್ಯ ಪ್ರಶಸ್ತಿಿ ಪಡೆಯಲು ಬಾಗಿಲು ತೆರೆಯಿತು.
ಸಿಕ್ಕ ಅವಕಾಶವನ್ನು  ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಏಕೆಂದರೆ ಅವಕಾಶಗಳು ಮತ್ತೆೆ ಮತ್ತೆೆ ಬರುವುದಿಲ್ಲ. ಸುಕನ್ಯಾಾ ನಟನೆಗೆ ಒಪ್ಪಿಿಕೊಂಡ ಬಳಿಕ ಶೂಟಿಂಗ್‌ನಲ್ಲಿ ಸಕ್ರಿಿಯವಾಗಿ ಮತ್ತು ಅಷ್ಟೇ ಆಸಕ್ತಿಿಯಿಂದ ಪಾಲ್ಗೊೊಂಡಿದ್ದಳು. ಸಂಭಾಷಣೆಯನ್ನೂ ಅಚ್ಚುಕಟ್ಟಾಾಗಿ ನಿರ್ವಹಿಸಿದ್ದಾಾಳೆ. ಈ ಚಿತ್ರ ಗಮನಿಸಿದವರಿಗೆ ಮುದ್ದುಮುಖದ ಸುಕನ್ಯಾಾಳ ಪಾತ್ರ ಇಷ್ಟವಾಗದೇ ಇರಲಾರದು.
ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಬಾಲಕಲಾವಿದೆ ಪ್ರಶಸ್ತಿಿ ಸಹ ಕಳೆ ಬಾರಿ ಈಕೆಗೆ ದಕ್ಕಿಿತ್ತು.  ಮೈಸೂರಿನ ಕರುನಾಡು ಕಿರುಚಿತ್ರ ಸ್ಪರ್ಧೆಯಲ್ಲೂ  ಅತ್ಯುತ್ತಮ ಬಾಲಕಲಾವಿದೆ ಬಹುಮಾನಕ್ಕೆೆ ಸುಕನ್ಯಾಾ ಪಾತ್ರಳಾಗಿದ್ದಾಾಳೆ. ಬೆಂಗಳೂರಿನಲ್ಲಿ ಜರುಗಿದ ನಾಳೆಯ ನಿರ್ದೇಶಕರು ಕಿರುಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಾಲಕಲಾವಿದೆ ಪ್ರಶಸ್ತಿಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಾಳೆ. ಈ ಮೂಲಕ ಒಂದೇ ಸಿನಿಮಾಕ್ಕೆೆ ಮೂರು ಬಾಲಕಲಾವಿದೆ ಪ್ರಶಸ್ತಿಿಯನ್ನು ಪಡೆದ ಹೆಗ್ಗಳಿಕೆ ಈಕೆಯದು. ಮುರಿದ ಗೊಂಬೆ ಈಗಾಗಲೇ ಹಲವರು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ.
 ಸುಕನ್ಯಾಾ ಉತ್ತಮ ಹಾಡುಗಾರಿಕೆಯವಳು. ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ತನ್ನ ಕಂಠಸಿರಿಯನ್ನು ಪ್ರದರ್ಶಿಸಿದ್ದಾಾಳೆ. ಭಜನೆ ಹಾಡಲು ಕುಳಿತರೆ ಅದನ್ನು ಕೇಳುವುದೇ ಒಂದು ಸೊಗಸು. ಹೀಗೆ ಹಾಡುಗಾರಿಕೆ ಕ್ಷೇತ್ರದಿದಂ ನಡಟನಾ ಕ್ಷೇತ್ರಕ್ಕೆೆ ಕಾಲಿಟ್ಟ ನಾಂತರ ವಿವಿಧ ದಾರಾವಾಹಿಗಳಲ್ಲಿ ನಟಿಲುಸ ವಕಾಸಗಳು ಬರುತ್ತಿಿವೆ. ಆದರೆ ಪಾಲಕರು ಸದ್ಯ ಓದಿನ ಕಡೆ ಗಮನಕೊಟುವುದ ಒಳ್ಳೆೆಯದೆಂಬ ದೃಷ್ಟಿಿಯಿಂದ  ಸ್ವಲ್ಪ ಹಿಂಧೆಠು ಹಾಕಿದ್ದಾಾರೆ. ಆದರೂ ವರ್ಷಕ್ಕೊೊಂದೆರಡು ಧಾರಾವಾಹಿಗಳಲ್ಲಿ ನಗಳು ನಟಿಸಲಿ ಎಂಬ ತೀರ್ಮಾನ ಮಾಡಿದ್ದಾಾರೆ.
ಪ್ರತಿಭಾನ್ವಿಿತೆ ಸುಕನ್ಯಾಾಳಿಗೆ ಉತ್ತಮ ಭವಿಷ್ಯ ಇದೆ, ವೇದಿಕೆಯೂ ಇದೆ. ಅದನ್ನು ಸರಿಯಾಗಿ ಬಳಸಿಕೊಂಡಲ್ಲಿ ಕಲೆಯ ಮೂಲಕವೇ ಹೆಸರುಗಳಿಸಬಹುದು. ಕಲೆ ಯಾವತ್ತೂ ಸಾಧಕನ ಸ್ವತ್ತಾಾಗಿರುವುದರಿಂದ ಮತ್ತು ಸಾಧನೆಗೆ ಸಾಕಷ್ಟು ಅವಕಾಶ ಇರುವುದರಿಂದ ವಿದ್ಯಾಾಭ್ಯಾಾಸದ ಜೊತೆಗೆ ಕಲೆಗೂ ಗಮನ ನೀಡುತ್ತ ಸಾಗಬಹುದಾಗಿದೆ.
ಮುರಿದ ಗೊಂಬೆ ಕಿರುಚಿತ್ರ ಆಯುಶ್ ಟಿವಿಯಲ್ಲಿ ಪ್ರಸಾರವಾಗಿದೆ. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಬಾಲಕಲಾವಿದೆ ಪ್ರಶಸ್ತಿಿಯನ್ನೂ ಇದೇ ಚಾನೆಲ್‌ನವರು ಆಯೋಜಿಸಿದ್ದರು.. ಈ ಬಾಲಕಿಯ ಕಲಾಜೀವನ ಇನ್ನಷ್ಟು ಎತ್ತರಕ್ಕೆೆ ಬೆಳೆಯಬೇಕಿದೆ. March 2-2019
,,,,,,,,,,,,,,,,,,,,,,,,,,,,



ಚೌಡಿಕೆಯ ಅದ್ಭುತ ಗಣಿ
ಲಕ್ಷ್ಮಣರಾವ್ ಗೋಂಧಳಿ



ಜಾನಪದ ಕಲೆಯನ್ನೇ ನಂಬಿ ಜೀವನ ನಡೆಸುವವರು ಇಂದಿಗೂ  ಸಾಕಷ್ಟು ಜನರಿದ್ದಾಾರೆ. ವಂಶಪರಂಪರೆಯಾಗಿ ಬಂದ ಕಲೆಯನ್ನು ಬಿಡದೆ ಮೂರ್ನಾಲ್ಕು ತಲೆಮಾರಿಗೂ ಮುಂದುವರೆಸಿಕೊಂಡು ಬಂದಿರುವ ಕುಟುಂಬವೊಂದು ಭದ್ರಾಾವತಿಯಲ್ಲಿದೆ. ಅಪರೂಪದ್ದಾಾದ ಚೌಡಿಕೆ ಪದ ಹೇಳುತ್ತ, ಊರೂರು ಸುತ್ತುವುದೇ ಇವರ ಕಾಯಕ. ಇಂದಿಗೂ ಈ ಕಲೆಯೇ ಇವರ ಜೀವನಾಧಾರ. ಇಂತಹ ಅಸಾಮಾನ್ಯ ಕಲಾವಿದನಿಗೆ ಕರ್ನಾಟಕ ಜಾನಪದ ಪರಿಷತ್ತು ಪ್ರಸಕ್ತ ಸಾಲಿನ ರಾಜ್ಯಪ್ರಶಸ್ತಿಿಯನ್ನು ಘೋಷಿಸಿದೆ.
ಲಕ್ಷ್ಮಣರಾವ್  ಗೋಂಧಳಿ 67ರ ಹರಯದವರು. ಶಾಲೆ- ಕಾಲೇಜು ಮೆಟ್ಟಿಿಲು ಹತ್ತಿಿದವರಲ್ಲ. ಅತಿ ಬಡತನದ ಕುಟುಂಬವಾದ್ದರಿಂದ, ಅಜ್ಜ- ತಂದೆ ಎಲ್ಲರೂ ಚೌಡಿಕೆಯನ್ನೇ ವೃತ್ತಿಿಯಾಗಿರಿಸಿಕೊಂಡಿದ್ದರು. ಜೀವನ ನಡೆಸುವುದೇ ಕಷ್ಟಸಾಧ್ಯವಾದ ಕಾಲದಲ್ಲಿ ಲಕ್ಷ್ಮಣರಾವ್ ಸಹ ವೃತ್ತಿಿಪರ ಕಲಾವಿದರಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದರು. ಇಲ್ಲಿಯವರೆಗೂ ಯಾರೂ ಅವರ ಕಲೆಯನ್ನು ಗುರುತಿಸಿರಲಿಲ್ಲ. ಆದರೆ ಜಾನಪದ ಪರಿಷತ್ ಚೌಡಿಕೆಯ ಅದ್ಭುತ ಗಣಿಯಂತಿರುವ, ಕಲೆಯ ದೊಡ್ಡ ಸಾಮ್ರಾಾಜ್ಯದಂತಿರುವ ಇವರನ್ನು ಗುರುತಿಸುವ ಮೂಲಕ ಇಡೀ ರಾಜ್ಯಕ್ಕೇ ಈ ಕುಟುಂಬದ ಸಾಧನೆಯನ್ನು ಪರಿಚಯಿಸಿದೆ. 
 ಒಂದು ಗಂಟೆಯಿಂದ ಇಡೀ ರಾತ್ರಿಿಯವರೆಗೆ ಪದ ಹೇಳುವ ಪ್ರತಿಭಾನ್ವಿಿತರು ಇವರು. ಹಬ್ಬ- ಹರಿದಿನಗಳಲ್ಲಿ, ಸುಗ್ಗಿಿ ಸಮಯದಲ್ಲಿ ಲಾಟೀನು ಮತ್ತು ದೀಪ ಹಿಡಿದುಕೊಂಡು ಹಳ್ಳಿಿಗಳಿಗೆ ತೆರಳಿ ಪದ ಹೇಳಿ ಅವರು ಕೊಟ್ಟ ಅಕ್ಕಿಿ, ಧಾನ್ಯ, ಹಣವನ್ನು ಪಡೆದು ಬರುವುದು ಇವರ ಅಜ್ಜ ಯಲ್ಲೋೋಜಿರಾವ್ ಕಾಲದಿಂದ ಬಂದ ಸಂಪ್ರದಾಯ. ಇದನ್ನೇ ಲಕ್ಷ್ಮಣರಾವ್ ಅವರ ತಂದೆ ಫಕೀರಪ್ಪ ಸಹ ಮುಂದುವರೆಸಿದರು. ಈಗ ಲಕ್ಷ್ಮಣರಾವ್ ಜೊತೆಗೆ ಅವರ ಪತ್ನಿಿ ಜಯಂತಿ, ಹಾಗೂ ಮೂವರು ಪುತ್ರರೂ ಅದನ್ನು ನಡೆಸಿಕೊಂಡು ಬರುತ್ತಿಿದ್ದಾಾರೆ.
 ಕರ್ನಾಟಕ ಹಾಗೂ ಹೊರರಾಜ್ಯದಲ್ಲಿ ಇವರು ಅನೇಕ ಕಾರ‌್ಯಕ್ರಮಗಳನ್ನು ಇವರು ನೀಡಿ ಖ್ಯಾಾತರಾಗಿದ್ದಾಾರೆ. ಸುಮಾರು 4 ದಶಕದಿಂದ ಜಾನಪದ ಕಲೆ ಉಳಿಸಿ- ಬೆಳೆಸಿದ್ದಾಾರೆ. ಆಕಾಶವಾಣಿ, ದೂರದರ್ಶನ ಮತ್ತು ಕೆಲವು ಖಾಸಗಿ ಚಾನಲ್‌ಗಳಲ್ಲಿ ಇವರ ಕಾರ‌್ಯಕ್ರಮ ಪ್ರಸಾರವಾಗಿದೆ. ವಿಷಾದದ ವಿಚಾರವೆಂದರೆ, ಶಿವಮೊಗ್ಗ ಜಿಲ್ಲೆೆಯಲ್ಲೇ ಇವರ ಕಲೆಯನ್ನು ಯಾರೂ ಪ್ರೋತ್ಸಾಾಹಿಸಿಲ್ಲ. ಹಾಗಂತ ಜಿಲ್ಲೆೆಯ ಎಲ್ಲಾಾ ತಾಲೂಕಿನಲ್ಲೂ ವಿವಿಧ ಸಂದರ್ಭಗಳಲ್ಲಿ ಕಾರ‌್ಯಕ್ರಮ ಕೊಡುತ್ತಿಿದ್ದಾಾರೆ. ಸಿಗಂಧೂರಿನಲ್ಲಿ ಪ್ರತಿವರ್ಷ ರಥೋತ್ಸವದಂದು ಇವರ ಕಾರ‌್ಯಕ್ರಮ ನಡೆಯುತ್ತದೆ. ಬಂಗಾರುಮಕ್ಕಿಿ ದೇವಸ್ಥಾಾನದಲ್ಲೂ ವರ್ಷದಲ್ಲೊೊಮ್ಮೆೆ ಇವರಿಗೆ ಆಹ್ವಾಾನವಿದೆ.  ಲೆಕ್ಕವಿಲ್ಲದಷ್ಟು ವೇದಿಕೆ ಕಾರ‌್ಯಕ್ರಮಗಳನ್ನು ನೀಡಿದ್ದರೂ ಕಲಾಪೋಷಕರ ಕಣ್ಣಿಿಗೆ ಇವರು ಬಿದ್ದಿಲ್ಲ ಎನ್ನುವುದೇ ಸೋಜಿಗ.
ಮಹಾರಾಷ್ಟ್ರದ ಅಂಬಾಭವಾನಿ, ಯಲ್ಲಮ್ಮನ ಕುರಿತಾದ ಪುರಾಣ ಕಥೆಗಳನ್ನು ಹೆಚ್ಚಾಾಗಿ ಚೌಡಿಕೆ ಪದಗಳಲ್ಲಿ ಹೇಳುವುದರ ಜೊತೆಗೆ ರಾಜ-ಮಹಾರಾಜರ ಕಾಲದ ಕಥೆಗಳನ್ನೂ ಅಳವಡಿಸಿಕೊಂಡಿದ್ದಾಾರೆ. ಸುಮಾರು  60ರಷ್ಟು ಹಾಡು ಇವರ ಕಣಜದಲ್ಲಿದೆ. ವೇಷಭೂಷಣದೊಂದಿಗೆ, ಚೌಡಿಕೆ ಹಿಡಿದು, ಕುಣಿತವನ್ನೂ ಅಳವಡಿಸಿಕೊಂಡು ವೇದಿಕೆ ಏರಿದರೆ ಆ ಕಾರ‌್ಯಕ್ರಮದ ಸೊಗಸೇ ಬೇರೆ. ಇಂದಿಗೂ ತಿಂಗಳಿಗೆ 2-3 ಕಾರ‌್ಯಕ್ರಮ ಇವರಿಗೆ ಸಿಗುತ್ತಿಿದೆ. ಹಬ್ಬದ ವೇಳೆ ಇನ್ನಷ್ಟು ಹೆಚ್ಚು ಕಾರ‌್ಯಕ್ರಮವಿರುತ್ತದೆ.
 ಇಂದಿನ ಯುವಪಿಳಿಗೆ ಇಂತಹ ಕಲೆಗಳನ್ನು ಉಳಿಸಿಕೊಂಡು ಹೋಗಬೇಕಿದೆ. ಕಲಿಯಲು ಆಸಕ್ತಿಿ ಇರುವವರಿಗೆ ಕಲಿಸಲು ತಾನು ಸಿದ್ಧ ಎನ್ನುತ್ತಾಾರೆ ಲಕ್ಷ್ಮಣರಾವ್. ಜಿಲ್ಲಾಾ ಜಾನಪದ ಕಲಾಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಅವರು ಸಾಹಿತ್ಯ ಹುಣ್ಣಿಿಮೆ ಕಾರ‌್ಯಕ್ರಮದಲ್ಲಿ ಇವರ ಕಲೆಯ ಸವಿಯನ್ನು ಈ ಹಿಂದೆ ಉಣಬಡಿಸಿದ್ದರು. ಇದೇ ಆಧಾರದಲ್ಲಿ ಪರಿಷತ್‌ನ ವಾರ್ಷಿಕ ಪ್ರಶಸ್ತಿಿಗೂ ಶಿಫಾರಸು ಮಾಡಿದ್ದರು. ಇವರ ಕಾರ‌್ಯಕ್ರಮ ಏರ್ಪಡಿಸಲು ಆಸಕ್ತಿಿ ಹೊಂದಿದವರಿದ್ದಲ್ಲಿ ಮೊಬೈಲ್ ನಂಬರ್-8660177201ಗೆ ಸಂಪರ್ಕಿಸಬಹುದು. 
23. jan 2019
............................