Tuesday 20 December 2022

 ಸದ್ದಿಲ್ಲದ ಸೇವೆಗೆ ರಾಷ್ಟ್ರಪತಿ ಪುರಸ್ಕಾರ 

 


 



ಸರಕಾರಿ ಸೇವೆಯಲ್ಲಿರುವವರು  ಆಡಿದ ಮಾತಿಗಿಂತ  ಮಾಡಿದ ಕೆಲಸ, ಜನರೊಂದಿಗಿನ ಅವರ ಒಡನಾಟ  ಸದಾ ಪರಿಗಣಿಸಲ್ಪಡುತ್ತದೆ. ಜೊತೆಗೆ ಗೌರವಯುತ ಸಂಬಂಧ, ಮುಕ್ತ ವ್ಯವಹಾರ ಇಟ್ಟುಕೊಂಡವರು ಸದಾಕಾಲ ನೆನಪಿನಲ್ಲಿರುತ್ತಾರೆ. ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಾರೆ.  

ಈ ಮಾತು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ  ಬೆರಳಚ್ಚು ವಿಭಾಗದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ, ಸುಮಾರು  ೨೭ ವರ್ಷದಿಂದ ಇಲಾಖೆಯಲ್ಲಿರುವ, ೨೦೨೦ರ  ಸ್ವಾತಂತ್ರ್ಯೋತ್ಸವದ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿರುವ ಅತಿಕ್ ಉರ್ ರೆಹಮಾನ್ ಅವರಿಗೆ ಅನ್ವಯಿಸುತ್ತದೆ. ಅವರಿಗೆ ಕಳೆದ ವಾರ ಈ ಪ್ರಶಸ್ತಿಯನ್ನು ರಾಜ್ಯಪಾಲರು ಪ್ರದಾನ ಮಾಡಿದ್ದಾರೆ. 

  ರೆಹಮಾನ್ ಅವರದು ನಯ-ವಿನಯ, ಇನ್ನೊಬ್ಬರನ್ನು ಗೌರವದಿಂದ ಕಾಣುವ, ಸೌಮ್ಯ ಸ್ವಭಾವ, ಸದಾ ನಗುಮೊಗ, ಒಂದಿನಿತೂ ಸಿಡಿಮಿಡಿಗೊಳ್ಳದ ಸ್ವಭಾವ. ತಮ್ಮ ಉತ್ತಮ ಸೇವೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಮೇಲಧಿಕಾರಿಗಳ ಮನಗೆದ್ದಿದ್ದಾರೆ. ರೆಹಮಾನ್ ಎಂದರೆ ಬೆರಳಚ್ಚು ವಿಭಾಗದವರು ಎಂದೇ ಪರಿಚಿತರು. ಅಷ್ಟೊಂದು ಖ್ಯಾತಿಯನ್ನು ಪಡೆದವರು. ೨೬ ವರ್ಷಗಳಿಂದ ಬೆರಳಚ್ಚು ವಿಭಾಗದಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸಿರುವುದರಿಂದಲೇ ರಾಷ್ಟ್ರಪತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ಚೆನ್ನಗಿರಿ ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದವರಾದ ಇವರು ಅಲ್ಲಿಯೇ ಪದವಿಯವರೆಗೆ ಓದಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಮುಗಿಸಿ ಆನಂತರ ೧೯೯೩ರಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದರು. ಕಾನ್ಸ್ಟೇಬಲ್ ಆಗಿ ಆನವಟ್ಟಿಯಲ್ಲಿ, ಡಿಸಿಐಬಿಯಲ್ಲಿ ಕೆಲಸ ಮಾಡಿದ್ದಾರೆ. ಬೆರಳಚ್ಚು ಮುದ್ರೆ ವಿಭಾಗದಲ್ಲಿ ಕಾನ್‌ಸ್ಟೇಬಲ್‌ನಿಂದ ಪ್ರಭಾರ ಪಿಎಸ್‌ಐವರೆಗೆ ಕೆಲಸ ಮಾಡಿದ್ದಾರೆ. ಅಷ್ಟೊಂದು ಸುಲಭವಲ್ಲದ ಅಖಿಲ ಭಾರತ ಬೆರಳಚ್ಚುಮುದ್ರೆ ತಜ್ಞರ ಪರೀಕ್ಷೆಯಲ್ಲಿ ೨೦೦೧ರಲ್ಲಿ ಪಾಸಾಗಿ ತಜ್ಞರೆಂದು ಪ್ರಮಾಣಪತ್ರ ಪಡೆದಿದ್ದಾರೆ.  ಈ ಪರೀಕ್ಷೆ ತೆಗೆದುಕೊಳ್ಳುವಾಗ ಬೆಂಗಳೂರಿನಲ್ಲಿ ನಡೆಯುವ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ  ಆಯ್ಕೆಯಾಗಬೇಕು. ಅಂದರೆ ಈ ವಿಭಾಗದಲ್ಲಿ ಅಷ್ಟೊಂದು ಸೂಕ್ಷ್ಮತೆ ಮತ್ತು ಬುದ್ಧಿಮತ್ತೆಯನ್ನು ಹೊಂದಿರಬೇಕು. ಕನಿಷ್ಠ ಮೂರು ವರ್ಷ ಈ ವಿಭಾಗದಲ್ಲಿ ಸೇವೆ ಸಲ್ಲಿಸಿರಬೇಕೆಂಬ ನಿಯವಿದೆ. ಅಂತಹವರನ್ನು ಮಾತ್ರ ಅಖಿಲ ಭಾರತ ಮಟ್ಟದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.

 ಇಷ್ಟೊಂದು ಕಷ್ಟದ ಪರೀಕ್ಷೆಯನ್ನು ಪಾಸು ಮಾಡಿ ಬೆರಳಚ್ಚು ವಿಭಾಗದಲ್ಲ್ಲಿಯೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಸಿವಿಲ್ ಪೊಲೀಸರಾದರೂ ಹಿರಿಯ ಅಧಿಕಾರಿಗಳು ಇತರೆ ಕೆಲಸಕ್ಕೆ ಎಂದೂ ಇವರನ್ನು ನೇಮಿಸಿಲ್ಲ. ಹಿರಿಯ ಅಧಿಕಾರಿಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಕೆಲಸ ಮಾಡುತ್ತಿದ್ದಾರೆ. ಈ ವಿಭಾಗದಲ್ಲಿ ಅವರು ಮಾಡಿದ ಸಾಧನೆ ಗಮನಿಸಿ ಸುಮಾರು ೧೬೦ಕ್ಕೂ ಅಧಿಕ ನಗದು ಬಹುಮಾನ ಲಭಿಸಿದೆ. ಜೊತೆಗೆ ಸುಮಾರು ೨೫ ಗುಡ್ ಸರ್ವೀಸ್ ಎಂಟ್ರಿ, ಎಡಿಜಿಪಿ, ಎಸ್‌ಪಿ ಅವರಿಂದ ನಾಲ್ಕೈದು ಕಮಾಂಡೇಶನ್ ಲೆಟರ್ ಸಹ ಲಭಿಸಿದೆ.

 ನಿವೃತ್ತಿ ಅಂಚಿನಲ್ಲಿರುವ ರೆಹಮಾನ್ ಯಾರೊಂದಿಗೂ ಮುನಿಸಿಕೊಂಡಿದ್ದಿಲ್ಲ, ಜಗಳವಾಡಿದ್ದಿಲ್ಲ ಎನ್ನುತ್ತಾರೆ ಅವರ ಸಹಪಾಠಿಗಳೂ ಕೂಡ. ಅಷ್ಟೊಂದು ಶಾಂತಸ್ವಭಾವದ, ಸಹೃದಯಿ ವ್ಯಕ್ತಿ ಇವರಾಗಿದ್ದಾರೆ. ಇವರು ಕೆಲಸ ಮಾಡುವ ವಿಭಾಗ ಸಾರ್ವಜನಿಕರೊಂದಿಗಿನ ಸಂಪರ್ಕದ್ದಲ್ಲವಾದರೂ ಹೆಚ್ಚಿನ ಮಿತ್ರರನ್ನು ಅವರು ಹೊರಗಡೆ ಹೊಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠರೂ ಸಹ ರೆಹಮಾನ್ ಸಾಧನೆ ಮೆಚ್ಚಿ  ಅಭಿನಂದನೆ ಸಲ್ಲಿಸಿದ್ದಾರೆ. 

published on 19 Dec. 20202


......................... 


 ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡ 

ಶಿವಕುಮಾರ್

 



 ನಿಮ್ಮ ಅಂಗವೈಕಲ್ಯದ ಬಗ್ಗೆ ಯೋಚಿಸಬೇಡಿ, ಸಾಧನೆಯತ್ತ ಗಮನವಿಡಿ. ಅದು ಸಾಧನೆಗೆ ಎಂದೂ ಅಡ್ಡಿಯಾಗದು.

ಈ ಮಾತನ್ನು ಹೇಳಿದವರು ಜೀವನಪರ್‍ಯಂತ ಅಂಗವೈಕಲ್ಯನಾಗಿ, ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಿದ ವಿಜ್ಞಾನಿ ಸ್ಟೀಫನ್ ಹಾಕಿಂಗ್.

 ಈತನ ಮಾತು ಲಕ್ಷಾಂತರ ಅಂಗವಿಕಲರಿಗೆ ಸ್ಫೂರ್ತಿಯಾಗಿದೆ.  ಅನೇಕ ಸಾಧನೆ ಮಾಡಲು ನಾಂದಿಯಾಗಿದೆ. ಅಂಗವೈಕಲ್ಯ ಮರೆತು ಸ್ವಾವಲಂಬಿ ಜೀವನ ಸಾಗಿಸುವುದಕ್ಕೂ ಅನುಕೂಲವಾಗಿದೆ. 

ಶಿವಮೊಗ್ಗ ಸಮೀಪದ ಆಯನೂರು  ಚನ್ನಹಳ್ಳಿಯ ಸಿ. ಆರ್. ಶಿವಕುಮಾರ್ ಹುಟ್ಟುವಾಗ ಎಲ್ಲರಂತೆಯೇ ಚೆನ್ನಾಗಿಯೇ ಇದ್ದರು. ನಾಲ್ಕನೆಯ ವಯಸ್ಸಿನಲ್ಲಿ ಸಂಭವಿಸಿದ ಒಂದು ಸಣ್ಣ ಎಡವಟ್ಟಿನಿಂದ ಎರಡು ಕಾಲುಗಳ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ಅಂಗವಿಕಲರಾದರೂ ಛಲಬಿಡದೆ ಓದಿ, ವಿವಿಧೆಡೆ ಕೆಲಸ ಮಾಡುತ್ತ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ, ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ವರ್ಷದ ಅಂಗವಿಕಲರ ದಿನ ಸರಕಾರ  ಕೊಡಮಾಡುವ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶಿವಕುಮಾರ್ ಡಿಪ್ಲೊಮಾ ಇನ್ ಕಂಪ್ಯೂಟರ್ ಓದಿದ್ದಾರೆ. ಇದಕ್ಕೆ ಕಾರಣ, ಅಂಗವಿಕಲತೆಯನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿದ ಕ್ರೀಡಾಪಟು ಮಾಲತಿ ಹೊಳ್ಳ. ಅವರ ಸಂಸ್ಥೆಯು ಇವರಿಗೆ ಈ ಶಿಕ್ಷಣ ಕೊಡಿಸಿದೆ. ಬಳಿಕ ಕಾಲ್ ಸೆಂಟರ್‌ಗಳಲ್ಲಿ ಕೆಲವು ವರ್ಷ ಕೆಲಸ ಮಾಡಿ ಸದ್ಯ “ಸಕ್ಷಮ” (ವಿಶೇಷ ಚೇತನರ  ಸಬಲೀಕರಣಕ್ಕಾಗಿ ಸಮರ್ಪಿತ ರಾಷ್ಟೀಯ ಸಂಘಟನೆ) ಯಲ್ಲಿ ಜಿಲ್ಲಾ  ಸಂಚಾಲಕರಾಗಿದ್ದಾರೆ. ಒಂದರಿಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬೋಧನಾ ತರಗತಿಗಳನ್ನು ಉಚಿತವಾಗಿ ನಡೆಸುತ್ತಿದ್ದಾರೆ. ತಿಂಗಳಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ಎಲ್ಲಾ ವರ್ಗದ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಿದ್ದಾರೆ. ಕಥೆ, ಕವನಗಳನ್ನು ರಚಿಸುತ್ತಾರೆ.   

 ಸಕ್ಷಮದ ವತಿಯಿಂದ ಜಿಲ್ಲೆಯ ಎಲ್ಲಾ   ಗ್ರಾಮ ಪಂಚಾಯಿತಿಗೆ ಒಳಪಟ್ಟಂತಹ ಹಳ್ಳಿಗಳ ವಿಶೇಷಚೇತನರಿಗೆ  ಅವರ ನ್ಯೂನತೆಗಳ ಬಗ್ಗೆ ತಿಳಿಸಿ ಅದರ ಆಧಾರದ ಮೇಲೆ ವೈದ್ಯಕೀಯ ಮಾಸಾಶನದ ಪ್ರಮಾಣ ಪತ್ರ ಮಾಡಿಸಿಕೊಟ್ಟಿದ್ದಾರೆ. ಗ್ರಾಮ ಪಂಚಾಯ್ತಿ, ಮಹಾನಗರ ಪಾಲಿಕೆ, ಪುರಸಭೆಗಳಲ್ಲಿ, ಜಿಪಂ, ತಾಪಂಗಳಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಕೊರೊನಾ ಸಂದರ್ಭದಲ್ಲಿ ೨೫೦೦ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಸಾಮಗ್ರಿಗಳನ್ನು ವಿತರಿಸುವಲ್ಲಿ ಮುಂಚೂಣಿಯಲ್ಲಿದ್ದರು..

 ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ಕೊಡಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದು,  ೪೫ ಜನ ವಿಶೇಷಚೇತನರಿಗೆ ವ್ಹೀಲ್‌ಚೇರ್‌ಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಸಕ್ಷಮ ಕೇಂದ್ರದಲ್ಲೇ ಕೆಲಸ ಮಾಡುತ್ತಾ ಅಲ್ಲಿಗೆ ಬರುವ ಅಂಗವಿಕಲರ ಎಲ್ಲಾ ಕುಂದುಕೊರತೆಗಳನ್ನು ಆಲಿಸಿ ಅದಕ್ಕೆ ಸಮರ್ಪಕ ಪರಿಹಾರೋಪಾಯದ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.  

ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ಇವರು,  ಕರುನಾಡ ಕಣ್ಮಣಿ, ಕರುನಾಡ ಯುವರತ್ನ, ಹೆಮ್ಮೆಯ  ಸಾಧಕ, ಪ್ರಜಾಸೇವಾರತ್ನ, ಸೇವಾ ಸುರಭಿ, ಸೇವಾರತ್ನ, ಕೊರೊನಾ ವಾರಿಯರ್ ಮೊದಲಾದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ೧೫೦ ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ತಾನೇ ಒಬ್ಬ ಅಂಗವಿಕಲನಾಗಿ ತನ್ನಂತಹ ಸಾವಿರಾರು ಜನರಿಗೆ ದಾರಿದೀಪವಾಗುವ ಕೆಲಸವನ್ನು ಸಕ್ಷಮದ ಬೆಂಬಲದಿಂದ ಮಾಡುತ್ತಿದ್ದಾರೆ.  ಇತರರ ಬಾಳಿಗೆ ಅನುಕೂಲ ಕಲ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. 

published on dec, 12 2022.

 .............................


Monday 5 December 2022

 ರಾಷ್ಟ್ರೀಯ ಕೇರಂ ಪಟು ರವಿ

 


ಕೇರಂ ಎಂದಾಕ್ಷಣ ನೆನೆಪಾಗುವುದು ಬಾಲ್ಯ. ರಜಾದಿನದಲ್ಲಿ  ಮನೆಮಂದಿ,  ನೆಂಟರಿಷ್ಟರು, ಮಿತ್ರರೊಂದಿಗೆ ಸೇರಿ ಆಡಿದ ಆಟ ಕಾಡುತ್ತದೆ. ಹೌದು, ಇಂತಹ ಆಟವನ್ನು ಮನೆಯಿಂದ ಹೊರಗೆ ಅಡಿ ಅದರಲ್ಲಿ ಯಶಸ್ಸು ಸಾಧಿಸುವವರು ಅಥವಾ ಅದೇ ಆಟವನ್ನು ಹವ್ಯಾಸವನ್ನಾಗಿ ಮಾಡಿಕೊಂಡವರು ತೀರಾ ಕಡಿಮೆ. ಏಕೆಂದರೆ ಇದಕ್ಕೆ ವಿಶೇಷ ಟೂರ್ನಿಗಳಾಗಲಿ, ಸಂಘಟನೆಗಳಾಗಲಿ, ಕಲಿಕಾ ಕೇಂದ್ರಗಳಾಗಲಿ, ವಿಶೇಷ ಕೋಚ್‌ಗಳಾಗಲಿ ಇಲ್ಲ. ಜೊತೆಗೆ ಇದನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಕೆಲಸವು ನಡೆಯುತ್ತಿಲ್ಲ. 

ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಸುಮಾರು ಆರೇಳು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ರಾಜ್ಯಮಟ್ಟದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಕ್ರೀಡಾಕೂಟ ನಡೆದಾಗ ಬಹುಮಾನ ಇವರ ಪಾಲಾಗಿದೆ. ಇಲ್ಲಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ೨೦೧೯ರಲ್ಲಿ, ೨೦೨ರಲ್ಲಿ  ಮತ್ತೆ ದೆಹಲಿಯಲ್ಲಿ, ೨೦೨೧ರಲ್ಲಿ ಚೆನ್ನೈನಲ್ಲಿ, ಕಳೆದ ವಾರ ತ್ರಿಪುರಾದಲ್ಲಿ ಆಡಿ ನಾಲ್ಕನೆಯ ಸ್ಥಾನ ಗಳಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ ಅವರಿಂದ ಸ್ಮನಾನಕ್ಕೊಳಗಾಗಿದ್ದಾರೆ. 

 ಇವರ ಸಾಧನೆಗೆ ಹಲವೆಡೆ ಗೌರವ ದಕ್ಕಿದೆ, ಸನ್ಮಾನ, ಪುರಸ್ಕಾರ ದೊರೆತಿದೆ. ಕೇರಂ ಆಡುವ ಮಿತ್ರರೆಲ್ಲ ಸೇರಿ ಭಾರತ್ ಕೇರಂ ಅಕಾಡೆಮಿಯನ್ನು ನಗರದಲ್ಲಿ ಸ್ಥಾಪಿಸಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಹಲವರಿಗೆ ತರಬೇತಿ ಕೊಡುತ್ತಿದ್ದಾರೆ. ಜೊತೆಗೆ ತಾವೂ ಆಡುತ್ತಿದ್ದಾರೆ. ಸುಮಾರು ೩೫ ಸದಸ್ಯರು ಅಕಾಡೆಮಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಆಯ್ದ ಭಾಗಗಳ ಶಾಲೆಗಳಲ್ಲಿ ಚಿಕ್ಕಮಕ್ಕಳಿಗೆ ಕೇರಂ ತರಬೇತಿ ನೀಡುವ ಯೋಚನೆಯಲ್ಲಿದ್ದಾರೆ. ಈ ಮೂಲಕ ಕೇರಂನ್ನು ಬಾಲ್ಯದಿಂದಲೇ ಬೆಳೆಸಿ ಮಕ್ಕಳಲ್ಲಿ  ಕ್ಷಿಪ್ರ ಚಿಂತನೆ,  ಚುರುಕುಮತಿ,  ಅತ್ಯುತ್ತಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಮೊದಲಾದವನ್ನು ಬೆಳೆಸಲು ಸಿದ್ಧರಾಗಿದ್ದಾರೆ.

ಕೇರಂ ಬುದ್ಧಿವಂತರ ಆಟವಾದ್ದರಿಂದ ಇದನ್ನು ಕಲಿತರೆ  ಮಾನಸಿಕ ಸದೃಢತೆ ಉಂಟಾಗುವುದರ ಜೊತೆಗೆ ಚಿಕಿತ್ಸಕ ಬುದ್ಧಿ, ಕೌಶಲ್ಯ ಬೆಳೆಯುತ್ತದೆ. ನೇರ ದೃಷ್ಟಿ, ಗಮನಹರಿಸುವಿಕೆಗೆ ಈ ಕಲೆ ನೆರವಾಗುತ್ತದೆ. ಇಂತಹ ಕಲೆ ಬೆಳೆಸುವತ್ತ ಅಕಾಡೆಮಿ ವತಿಯಿಂದ ಮುಂದಾದಾಗಿದ್ದಾರೆ. ಮಕ್ಕಳು ತಂತ್ರಗಾರಿಕೆಯ ಈ ಆಟ  ಕಲಿಯುವ ಮೂಲಕ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ರವಿ. 

published on Dec 5. 2022


.............................. 



  ಸಮಯಪ್ರಜ್ಞೆಗೆ ಸಂದ  

ರಾಜ್ಯ ಶೌರ್‍ಯ ಪ್ರಶಸ್ತಿ 

 

 


ಒಂಚು ಇಂಚಿನಷ್ಟು s ಗಾತ್ರದ ಸಮಯ ಒಂದು ಇಂಚಿನಷ್ಟು ಬಂಗಾರಕ್ಕೆ ಸಮ ಎಂಬ ಚೀನಾದ ಗಾದೆ ಮಾತಿದೆ. ಸಮಯ ಮಹತ್ವವಲ್ಲ, ಸಮಯ ಪ್ರಜ್ಞೆ ಅತಿ ಮುಖ್ಯವಾದುದು ಎಂದು ಆಂಗ್ಲ ವಿದ್ವಾಂಸನೊಬ್ಬ ಹೇಳಿದ್ದಾನೆ. ಇವೆರಡೂ ಮಾತುಗಳು ಸಮಯಪ್ರಜ್ಞೆಗಿರುವ ಮಹತ್ವವನ್ನು ವಿವರಿಸುತ್ತವೆ. ಸಮಯಪ್ರಜ್ಞೆಯಿಂದ ಎಷ್ಟೆಲ್ಲ ಸಮಸ್ಯೆ ಪರಿಹರಿಸಬಹುದು, ಏನೆಲ್ಲ ಅನಾಹುತ ತಪ್ಪಿಸಬಹುದು, ಜೀವ ಉಳಿಸಬಹುದು. ಅಂತಹುದೇ ಒಂದು ಕೆಲಸವನ್ನು ಇಲ್ಲೊಬ್ಬ ಶಾಲಾ ಬಾಲಕಿ ಮಾಡುವ ಮೂಲಕ ರಾಜ್ಯ ಶೌರ್‍ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ.  

ಒಂದು ವರ್ಷದ ಹಿಂದೆ ಶಾಲೆಯಿಂದ ಮನೆಗೆ ಬಂದ ೪ನೆಯ ತರಗತಿ ಓದುವ ತುಂಟ ಧನುಷ್ ಟಿವಿ ವೀಕ್ಷಣೆಗೆ ಸ್ವಿಚ್ ಹಾಕಲು ಮುಂದಾಗುತ್ತಾನೆ. ಟಿವಿ ಆನ್ ಆಗಲಿಲ್ಲ. ವೈರ್ ಹಿಡಿದು ಅಲ್ಲಾಡಿಸಲೆತ್ನಿಸಿದಾಗ ಆತನಿಗೆ ಭಾರೀ ಪ್ರಮಾಣದಲ್ಲಿ ಶಾಕ್ ಹೊಡೆಯುತ್ತದೆ. ಕಾರಣ ಆತನ ಕೈಲಿ ಹಿಡಿದಿದ್ದ ವೈರ್‌ನ ಭಾಗವನ್ನು ಇಲಿ ಕಡಿದಿತ್ತು. ಅದರಿಂದ ತಪ್ಪಿಸಿಕೊಳ್ಳಲಾಗದೆ ಆತ ಒದ್ದಾಡುತ್ತಿದ್ದ. ಹೆದರಿ ಕೂಗಾಡುತ್ತಾನೆ. ಈತನ ಜೊತೆ ಶಾಲೆಯಿಂದ ಮನೆಗೆ ಬಂದಿದ್ದ, ೫ನೆಯ ತರಗತಿ ಓದುವ  ಅಕ್ಕ ಪ್ರಾರ್ಥನಾ ಊಟ ಮಾಡುತ್ತಿದ್ದಳು. ತಮ್ಮನ ಕೂಗಾಡುವಿಕೆಯನ್ನು ಕೇಳಿ ಊಟದ ತಟ್ಟೆ ಇಟ್ಟು ಓಡಿಬಂದು ನೋಡುತ್ತಾಳೆ. ಕೈಲಿದ್ದ ವೈರ್‌ನಿಂದ ಶಾಕ್ ಹೊಡೆದು ಸಹೋದರ  ಅಪಾಯದ ಸ್ಥಿತಿಯಲ್ಲಿದ್ದ. ಕೈ ಹಿಡಿದು ಎಳೆದರೂ ಕರೆಂಟ್ ಬಿಡಲಿಲ್ಲ. ಹಿಂದೆ ಮುಂದೆ ನೋಡದೆ ಆತನ ಶರ್ಟ್ ಕಾಲರನ್ನು ಹಿಡಿದು ಬಲವಾಗಿ ಆತನನ್ನು ಎಳೆಯುತ್ತಾಳೆ. ಆಗ ವೈರ್ ಬಿಟ್ಟು ಆತ ಸರಿಯುತ್ತಾನೆ. ಇದರಿಂದ ಆತನ ಜೀವ ಉಳಿಯುತ್ತದೆ.

ಹೀಗೆ ಜೀವ ಹೋಗುವ ಹಂತದಲ್ಲಿದ್ದ ಸಹೋದರನನ್ನು ರಕ್ಷಿಸಿದ ಪ್ರಾರ್ಥನಾಳ ಕೀರ್ತಿ ಎಲ್ಲೆಡೆ ಜಾಹೀರಾಗುತ್ತದೆ. ಸನ್ಮಾನಗಳು  ನಡೆಯುತ್ತವೆ. ಶ್ಲಾಘನೆಗೆ ಒಳಗಾಗುತ್ತಾಳೆ. ಕೆಲವು ಸಂಘಟನೆಗಳು ಈಕೆಗೆ ಶೌರ್‍ಯ ಪ್ರಶಸ್ತಿ ಕೊಡಿಸಬೇಕೆಂದು ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಮಾಡುತ್ತಾರೆ. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಂದೆಗೆ ಸಿದ್ಧಗೊಳಿಸಿ ಅಧಿಕಾರಿಗಳಿಗೆ ತಲುಪಿಸುತ್ತಾರೆ. ಅದು ಬೆಂಗಳೂರಿಗೆ ಕಳುಹಿಸಲ್ಪಟ್ಟು ಈ ವರ್ಷ ಮೊನ್ನೆ ಜರುಗಿದ ಮಕ್ಕಳ ದಿನದಂದು ಪ್ರಾರ್ಥನಾಳಿಗೆ ಕಿತ್ತ್ತೂರು ಚೆನ್ನಮ್ಮ ಶೌರ್‍ಯ ಪ್ರಶಸ್ತಿ ರಾಜ್ಯಪಾಲರಿಂದ ಕೊಡಲ್ಪಟ್ಟಿತು.   

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉರಗನಹಳ್ಳಿಯಲ್ಲಿ ನಡೆದಿದ್ದ ಘಟನೆ ಇದು. ಇಲ್ಲಿನ ರೈತ ಧನಂಜಯ ಮತ್ತು ನೀಲಾವತಿ ಅವರ ಇಬ್ಬರು ಮಕ್ಕಳಿವರು. ಉರಗನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಓದುತ್ತಿದ್ದಾರೆ. ಶಾಕ್ ಹೊಡೆದ ಮತ್ತು ರಕ್ಷಿಸಿದ ಸುದ್ದಿಯನ್ನು ಶಾಲೆಯ ಮುಖ್ಯ ಶಿಕ್ಷಕಿಗೆ ತಿಳಿಸುತ್ತಾರೆ. ಆನಂತರ ಟಿವಿಯಲ್ಲಿ, ಪತ್ರಿಕೆಯಲ್ಲಿ ಸುದ್ದಿಯಾಗುತ್ತದೆ. ಸ್ಥಳೀಯರು ಪ್ರಶಸ್ತಿಗೆ ಅರ್ಜಿ ಹಾಕಲು ತಂದೆಗೆ ಸೂಚಿಸುತ್ತಾರೆ. ಆದರೆ ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದ ಕಾರಣ ಅವರು ಶಾಲೆಯ ಮುಖ್ಯ ಶಿಕ್ಷಕಿ ಸುಮಿತ್ರಾ ಹೆಗಡೆ ಅವರನ್ನು ಕಾಣುತ್ತ್ತಾರೆ. ಅವರು ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ವರದಿ ಸಿದ್ಧ್ದಪಡಿಸಿಕೊಡುವ ಮೂಲಕ ರಾಜ್ಯ ಪ್ರಶಸ್ತಿಗೆ ಶಿಫಾರಸಾಗುವಂತೆ ಮಾಡುತ್ತಾರೆ. 

 ಪ್ರಶಸ್ತಿಯು ೧೦ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಬಾಲಕಿ ಪ್ರಾರ್ಥನಾಳ ಸಮಯಪ್ರಜ್ಞೆ ಅಥವಾ ಅನಾಹುತದ ಸಮಯದಲ್ಲಿ ತೋರಿದ ಬುದ್ಧಿವಂತಿಕೆ ಸಹೋದರನ ಜೀವ ಉಳಿಸಿದೆ. ಅದಕ್ಕೆ ತಾನೆ ಹೇಳುವುದು ಸಮಯಪ್ರಜ್ಞೆ  ಮೆರೆಯಬೇಕೆಂದು. 

ಶಿವಮೊಗ್ಗ ಜಿಲ್ಲೆಗೆ ಇದೇ ಮೊದಲಬಾರಿ ಈ ಪ್ರಶಸ್ತಿ ಪ್ರಾರ್ಥನಾಳಿಂದ ಬಂದಂತಾಗಿದೆ.  

published on 21 nov 2022

.....................



Tuesday 17 May 2022





 



ದತ್ತಾತ್ರೇಯ ಹೆಗಡೆ
................................

ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಯೂರಲು ಆಮ್ ಅದ್ಮಿ ಪಕ್ಷ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಬೇರೆ ಪಕ್ಷದ ಪ್ರಮುಖರನ್ನು  ಸೆಳೆಯುತ್ತಿದೆ. ಈ ಬಾರಿ ಜಿಲ್ಲೆಯ ಎಲ್ಲಾ ೭ ವಿಧಾನಸಭೆ ಕ್ಷೇತ್ರದಲ್ಲೂ ಚುನಾವಣೆಗೆ ಇಳಿಯುವ ಉದ್ದೇಶÀ ಹೊಂದಿರುವುದರಿAದ ಬರುವವರಿಗೆಲ್ಲ ಮಣೆ ಹಾಕುತ್ತಿದೆ.
ವಿಧಾನಸಭೆಗೆ ಸ್ಪರ್ಧಿಸಲಿಚ್ಛಿಸಿ, ಬೇರೆ ಪಕ್ಷದಲ್ಲಿ  ಟಿಕೆಟ್ ಸಿಗದೆ ಅಥವಾ ಸಿಗದು ಎಂದು ಭಾವಿಸಿರುವವರೆಲ್ಲ ಆಮ್ ಆದ್ಮಿಯತ್ತ  ಹೆಜ್ಜೆ ಹಾಕುತ್ತಿದ್ದಾರೆ. ವಿಧಾನಸಭೆಗೆ ಟಿಕೆಟ್ ಅಲ್ಲಿ ಸುಲಭವಾಗಿ ಸಿಗುತ್ತದೆೆ. ಇದೇ ಉದ್ದೇಶದಿಂದ ಜಿಲ್ಲೆಯ ಇಬ್ಬರು ಕಾಂಗ್ರೆಸಿಗರು ಎಎಪಿ ಸೇರಿದ್ದಾರೆ.
ಸಾಗರದವರಾದ ಹೈಕೋರ್ಟ ನ್ಯಾಯವಾದಿ ಕೆÀ. ದಿವಾಕರ ಕಾಂಗ್ರೆಸ್ ಮತ್ತು ಬಿಜೆಪಿ, ಕೆಜೆಪಿಯಲ್ಲಿದ್ದವರು. ಕಾಂಗ್ರೆಸ್‌ನಲ್ಲ್ಲಿ ವಿವಿಧ ಹುದ್ದೆಯನ್ನು ಹೊಂದಿದ್ದರು. ಆದರೆ ಈ ನಿನ್ನೆ ಎಎಪಿ ಸೇರಿದ್ದ್ದಾರೆ. ಅವರು ಪಕ್ಷ ಸೇರುವ ಮುನ್ನವೇ ಅವರನ್ನು ಸಾಗರಕ್ಕೆ ಅಭ್ಯರ್ಥಿಯನ್ನಾಗಿಸಲಾಗಿದೆ. ಅಂದರೆ ಆಯಾಯ ತಾಲೂಕಿನ ಪ್ರಮುಖರನ್ನು ಸೆಳೆದು ಅವರಿಗೆ ಟಿಕೆಟ್ ಕೊಡಲಾಗುತ್ತಿದೆ. ಭದ್ರಾವತಿಯಲ್ಲೂ ಆನಂದ ಎನ್ನುವವರು ಕಾಂಗ್ರೆಸ್‌ನಲ್ಲಿದ್ದರು. ಈ ಹಿಂದೆ ಬಿಜೆಪಿಯಲ್ಲೂ ಇದ್ದರು. ಅವರನ್ನು ನಿನ್ನೆ ಎಎಪಿಗೆÀ ಸೇರಿಸಿಕೊಳ್ಳಲಾಗಿದೆ.
ಇನ್ನು ಶಿವಮೊಗ್ಗದಲ್ಲಿ ಮನೋಹರ ಗೌಡ ಎಲ್ಲಾ ಪಕ್ಷ ಹೊಕ್ಕು ಬರಬಂದವರು. ಅವರಿಗೂ ಒಮ್ಮೆ ವಿಧಾನಸಭೆ ಚುನಾವಣೆಗೆ ಇಳಿಯುವ ಹುಮ್ಮಸ್ಸು ಬಂದಿದೆ. ತಾನೇ ಉಮೇದುವಾರ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬೇರೆ ಪಕ್ಷದವರಿಗೆ ಗಾಳ ಹಾಕಿ ಅವರನ್ನು ಉಮೇದುವಾರರನ್ನಾಗಿಸುವ ಕೆಲಸ ಎಎಪಿಯಿಂದ ನಡೆÉಯುತ್ತಿದೆ.
ಆದರೆ ಎಎಪಿಯ ಸಂಘಟನೆÀಯನ್ನೊಮ್ಮೆ ತಿರುಗಿ ನೋಡಿದಾಗ, ಯಾವುದೇ ಕರ‍್ಯಕ್ರಮ ಇಲ್ಲದೆ, ಕೆಲವೇ ಬೆರಳೆಣಿಕೆಯಷ್ಟು ನಾಯಕರಿಂದ ಕೂಡಿರುವುದು ಕಂಡುಬರುತ್ತಿದೆ. ಭ್ರಷ್ಟಾಚಾರದ ವಿರುದ್ದ ಹೋರಾಡುವುದೊಂದೇ ಅವರ ಗುರಿ. ಇದರ ಹೊರತು ಯಾವುದೇ ಸಿದ್ಧಾಂತ ಇಲ್ಲ. ಪ್ರಣಾಳಿಕೆ ಇಲ್ಲ. ಯಾರೇ ಬಂದರೂ ಸೇರಿಸಿಕೊಳ್ಳಲಾಗುತ್ತದೆ. ಎಲ್ಲೂ ಸಲ್ಲದವರು ಇಲ್ಲಿ ಸಲ್ಲುತ್ತ್ತಾರೆನ್ನುವುದು ಜನರ ಅಭಿಪ್ರಾಯ. ಇದಕ್ಕಾಗಿ ಆ ಪಕ್ಷದ ಬಗ್ಗೆ ಜನರಲ್ಲಿ ಒಲವು ಜಿಲ್ಲೆಯಲ್ಲಿ ಇಲ್ಲದಿರುವುದು ಕಂಡುಬರುತ್ತಿದೆ.
ಕೆಲವೇ ನಾಯಕರು ಇಲ್ಲಿ ಕಾಣುತ್ತಿದ್ದಾರೆ. ಆದರೆ ಅವರಲ್ಲಿ ಏಕತೆ ಇಲ್ಲ. ಅವರನ್ನು ಕಂಡರೆ ಇವರಿಗಾಗದು. ಇವರನ್ನು ಕಂಡರೆÉ ಅವರಿಗಾಗದು. ಕೆಲವರು ತಾವೇ ಪಕ್ಷದ ಅಧ್ಯಕ್ಷ, ಸಂಚಾಲಕ ಎಂದೆಲ್ಲ್ಲ ಬಿಂಬಿಸಿಕೊAಡಿದ್ದಾರೆ. ರಾಜ್ಯ ಮಟ್ಟದಲ್ಲೇ ಸಂಘಟಿತ ಪಕ್ಷ ಇದಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ನಿಯಂತ್ರಿಸುವವರು ಯಾರೂ ಇಲ್ಲ. ಹಾಗಾಗಿ ಇಲ್ಲಿ ಎಲ್ಲರು ಅಧ್ಯಕ್ಷರು, ಸಂಚಾಲಕರು. ಯಾರು ಬೇಕಾದರೂ ಪಕ್ಷ ಸೇರಬಹುದು. ಅವರ ಹಿನ್ನೆಲೆ ಕೇಳುವುದಿಲ್ಲ.
ಜಿಲ್ಲೆಯ ಮಟ್ಟಿಗೆ ಎಎಪಿಯ ಹೆಸರು  ಸ್ವಲ್ಪ ಮಟ್ಟಿಗೆ ಕೇಳಿಬರುತ್ತಿದೆಯಾದರೂ ಅದು ಪರಿಣಾಮ ಬೀರದು ಎನ್ನುವುದು ಜನರ ಮಾತು. ಆದರೆÀ ಈ ನಾಯಕರಲ್ಲಿ ಮಾತ್ರ ತಾವೇ ಮುಂದಿನ ಬಾರಿ ಅಧಿಕಾರಕ್ಕೇರುತ್ತೇವೆ ಎನ್ನುವ ಮನೋಭಾವವಿದೆ. ಹುಮ್ಮಸ್ಸ್ಸು ಸಾಕಷ್ಟಿದೆ. ಆದರೆ ಕೆಲಸ ಮಾಡುವವರಿಲ್ಲ. ನಾಯಕರಲ್ಲಿ ಒಗ್ಗಟ್ಟಿನÀ ಮಂತ್ರ ಕಾಣೆಯಾಗಿದೆ. ಯಾವುದೇ ಕರ‍್ಯಕ್ರಮವಿಲ್ಲ. ಕರಪತ್ರದ ಮೂಲಕ ಜಾಗೃತಿ ಮಾತ್ರ  ಮಾಡುತ್ತಿದ್ದ್ದಾರೆ. ಸಂಘಟಿತ ಹೋರಾಟ, ಕರ‍್ಯಕ್ರಮ ರೂಪಿಸಿಲ್ಲ. ದೇಶ ಮತ್ತು ರಾಜ್ಯದಲ್ಲಿ ಇಷ್ಟೊಂದು ಹೋರಾಟ, ಪ್ರತಿಭಟನೆಯನ್ನು ವಿವಿಧ ಪಕ್ಷ ಮತ್ತು ಸಮಾಜ, ಸಂಘಟನೆಯವರು ಮಾಡುತ್ತಿದ್ದರೂ ಎಎಪಿಗೆ ಮಾತ್ರ ಇದು ಬೇಕಾಗಿಲ್ಲ. ಪಕ್ಷದಲ್ಲಿ ಬೆಳೆಯುತ್ತಾರೆಂದೆನಿಸಿದರೆ ಅವರನ್ನು ಹಾಗೆಯೇ ನಗಣ್ಯ ಮಾಡಲಾಗುತ್ತಿದೆ. ಅದಕ್ಕಾಗಿಯೇ ಈ ಪಕ್ಷ ಸೇರಿದ ಕೆಲವರೆಲ್ಲ ವಾರದಲ್ಲೇ ಅಲ್ಲಿಂದ ಹೊರಬಂದರು. ಕೆಲವರ ಕೈಯಲ್ಲಿ ಮಾತ್ರ ಆ ಪಕ್ಷ ಇದೆ.  
ಮತದಾರರ ಮನಸ್ಸಿನ ಬಾಗಿಲನ್ನು ತಟ್ಟುವಲ್ಲಿ ಆ ಪಕ್ಷ ವಿಫಲವಾಗಿದೆ.  ದೆಹಲಿಯಲ್ಲಿನ ಸಾಧÀನೆಯನ್ನು ಇಲ್ಲಿ ಹೇಳಿದರೆ ಮತ ಬಾರದು. ಕರ್ನಾಟಕ ರಾಜಕೀಯ ಚಿತ್ರಣವೇ ಬೇರೆ. ಇಲ್ಲೇನಿದ್ದರೂ ಜಾತಿ, ಮತ, ಪಕ್ಷ ಮತ್ತು ರ‍್ಮವೇ ಪ್ರಮುಖವಾಗುತ್ತದೆ. ಇದೆಲ್ಲ ಗೊತ್ತಿಲ್ಲದೆಯೇ ಕೆಲವೇ ನಾಯಕರು ಈ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಜಿಲ್ಲೆಯ ಮಟ್ಟಿಗೆ ಈ ಪಕ್ಷಕ್ಕೆ ಯಾವ ಮಹತ್ವ ಇದ್ದಂತೆ ಸದ್ಯಕ್ಕ್ಕೆ ಕಾಣುತ್ತಿಲ್ಲ. ಆದರೆ ಟಿಕೆಟ್ ಪಡೆದು ಸ್ಪರ್ಧಿಸಬೇಕೆಂಬ ಆಸೆ ಉಳ್ಳವರು ಈ ಪಕ್ಷದತ್ತ್ತ ದೃಷ್ಟಿ ಇಟ್ಟಿದ್ದಾರೆ. 

published on 14 may 2022
.........................   

Monday 2 December 2019

ವಚನ ನೃತ್ಯವೈಭವದ
ಸಿ. ಡಿ. ರಕ್ಷಿತಾ


ವಯಸ್ಸು 18. ನೀಡಿದ ಕಾರ‌್ಯಕ್ರಮ ಸಾವಿರಕ್ಕೂ ಅಧಿಕ. ಭರತನಾಟ್ಯ, ವಚನ ನೃತ್ಯ, ಕರ್ನಾಟಕ ಸಂಗೀತದಲ್ಲಿ ಅತ್ಯುನ್ನತ ಸಾಧನೆ, ನೃತ್ಯ- ಸಂಗೀತಕ್ಕೆೆ ಮೀಸಲಾದ ವಿಶಾರದ ಪೂರ್ಣ ಪರಿಕ್ಷೆಯಲ್ಲಿ ತೇರ್ಗಡೆ, ವಿದ್ವತ್ ಪರೀಕ್ಷೆಗೆ ಸಿದ್ಧತೆ......
ಇದು ನಗರದ ವಿದಾರ್ಥಿನಿ ಸಿ. ಡಿ. ರಕ್ಷಿತಾ ಅವರ ಪರಿಚಯ. ಇಷ್ಟೆೆಲ್ಲಾಾ ಸಾಧನೆಯ ಫಲವಾಗಿ ಇವಳು ಫ್ರೆೆಂಚ್ ಎಡಿಶನ್‌ನ ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಿಗೆ ಭಾಜನಳಾಗಿದ್ದಾಾಳೆ. ಜೊತೆಗೆ 18ರೊಳಗಿನ ಭರತನಾಟ್ಯ ಸಾಧಕಿ ಎಂಬ ಗೌರವಕ್ಕೆೆ ಪಾತ್ರಳಾಗಿದ್ದಾಾಳೆ. ವಿಶೇಷವಾಗಿ ವಚನ ನೃತ್ಯ ಎನ್ನುವ ಪರಿಕಲ್ಪನೆಗೆ ಹೊಸ ಹೊಳಪನ್ನು, ಅರ್ಥವನ್ನು ತುಂಬಿ, ಆಯಾಮವನ್ನು ಒದಗಿಸಿದವರು.
ರಕ್ಷಿತಾ ಡಾ. ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಪ್ರಥಮ ಬಿ ಎ ಓದುತ್ತಿಿದ್ದಾಾರೆ. ಬಾಲ್ಯದಿಂದಲೇ ತಾಯಿ ಜಾನಕಿ ಅವರ ಪ್ರೇರಣೆಯಿಂದ ಸಂಗೀತ, ಹಾಡುಗಾರಿಕೆಯತ್ತ ಆಕರ್ಷಣೆಗೊಳಗಾದವರು. ಇವರ ತಾಯಿ ಸಹ ಉತ್ತಮ ಹಾಡುಗಾರ್ತಿಯಾಗಿದ್ದು, ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಇದೇ ಹಾದಿಯಲ್ಲಿ ಮಗಳು ಕಾಲಿಟ್ಟಾಾಗ ತಂದೆ ದತ್ತಾಾತ್ರೇಯ ಅವರು ಬೆನ್ನುತಟ್ಟಿಿ ಹುರಿದುಂಬಿಸಿದರು. ಮಾತಾ-ಪಿತರ ಸಹಕಾರದಿಂದ ರಕ್ಷಿತಾ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿಿದ್ದಾಾರೆ.
ಆರಂಭದಲ್ಲಿ ವಿದುಷಿ ಪುಷ್ಪಾಾ ಕೃಷ್ಣಮೂರ್ತಿ ಅವರಲ್ಲಿ  ಕಲಿಕೆ ಆರಂಭಿಸಿದರು. ತದನಂತರ ಬೆಳಗಾವಿಯಲ್ಲಿ ಕೆಲಕಾಲ ಕಲಿತು ಮತ್ತೆೆ ಈಗ ಶಿವಮೊಗ್ಗದಲ್ಲಿಯೇ ಅಭ್ಯಾಾಸ ಮುಂದುವರೆಸಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿ ಕೊಡಮಾಡುವ ಭರತನಾಟ್ಯ ಶಿಷ್ಯವೇತನಕ್ಕೆೆ 2017-18ರ ಸಾಲಿನಲ್ಲಿ ಆಯ್ಕೆೆಯಾಗಿದ್ದಾಾರೆ.
ಮುಂಬೈಯ ಗಂಧರ್ವ ಸಂಗಿತ ಮಹಾವಿದ್ಯಾಾಲಯದವರು ನಡೆಸಿದ ವಿಶಾರದ ಪೂರ್ಣ ಪರೀಕ್ಷೆಯಲ್ಲಿ ಜಿಲ್ಲೆೆಗೆ ಪ್ರಥಮ ಸ್ಥಾಾನದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ವಿದ್ವತ್ ಪರೀಕ್ಷೆಗೆ ಈಗ ಸಿದ್ಧತೆ ನಡೆಸಿದ್ದಾಾರೆ. ಕರ್ನಾಟಕ ಸಂಗೀತದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ಕರ್ನಾಟಕ ಚಿತ್ರಕಲಾ ಮಹಾಮಂಡಳಿಯವರು ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಾರೆ. ತನ್ನ ವಚನ ನೃತ್ಯ ವೈಭವವನ್ನು ಅನೇಕ ಮಠಗಳ, ಧಾರ್ಮಿಿಕ ಕಾರ‌್ಯಕ್ರಮಗಳಲ್ಲಿ ಪ್ರದರ್ಶಿಸಿ ಮಠಾಧೀಶರ ಆಶೀರ್ವಾದಕ್ಕೆೆ ಪಾತ್ರಳಾಗಿದ್ದಾಾಳೆ. ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ವಾಾಗತಗೀತೆಗೆ ಅಭಿನಯಿಸಿದ್ದಾಾರೆ, ರಾಜ್ಯ ಸಮಾಜ ಕಲ್ಯಾಾಣ ಇಲಾಖೆಯ ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿಿ, ಯುವಜನೋತ್ಸವದಲ್ಲಿ ರಾಜ್ಯಕ್ಕೆೆ ದ್ವಿಿತೀಯ, ಅಸಾಧಾರಣ ಬಾಲ ಪ್ರತಿಭೆ ಪ್ರಶಸ್ತಿಿ, ಮಲೆನಾಡ ನಾಟ್ಯ ಮಯೂರಿ... ಹೀಗೆ ಪ್ರಶಸ್ತಿಿ ಮತ್ತು ಬಿರುದುಗಳ ಸರಮಾಲೆಯನ್ನೆೆ ಇವರು ಧರಿಸಿದ್ದಾಾರೆ. 
  ಪೇಸ್ ಕಾಲೇಜಿನವರು ಕೊಡಮಾಡುವ ಅಸಾಧಾರಣ ಯುವ ಪ್ರತಿಭೆ ಪ್ರಶಸ್ತಿಿ ಇವರಿಗೆ ಲಭಿಸಿದೆ. ಜಿಲ್ಲಾಾ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ನಾಡಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನವನ್ನು ರಾಜ್ಯದಾದ್ಯಂತ  ಮತ್ತು ಮಹಾರಾಷ್ಟ್ರದ ಅನೇಕಭಾಗಗಳಲ್ಲಿ ನೀಡಿದ್ದಾಾರೆ.
ಬಸವಭಾವಗೀತೆಗಳು ಮತ್ತು ಮನುಕುಲದ ಮಂದಾರ ಎಂಬ ಎರಡು ಸಿಡಿಗಳನ್ನು ಚಂದ್ರಶೇಖರ್ ಶಿವಾಚಾರ‌್ಯರು ಹೊರತಂದಿದ್ದು, ಇವೆರಡರಲ್ಲೂ ರಕ್ಷಿತಾ ಅವರ ವಚನ ನೃತ್ಯವಿದೆ.
ಶಾಲಾ ಹಂತದಲ್ಲೇ ನಗರ, ಜಿಲ್ಲಾಾ ಮತ್ತು ರಾಜ್ಯಮಟ್ಟದ ವಿವಿಧ ಜಾನಪದ, ನೃತ್ಯ, ಹಾಡು, ಸ್ಪರ್ಧೆಗಳಲ್ಲಿ ಸತತ ಬಹುಮಾನವನ್ನು ಗಳಿಸುತ್ತ ಬಂದಿರುವ ರಕ್ಷಿತಾ ಇಂದಿಗೂ ಅದನ್ನು ಮುಂದುವರೆಸಿದ್ದಾಾರೆ. ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡುವ ಮೂಲಕ ರಾಜ್ಯದಲ್ಲೇ ಹೆಸರುಮಾಡಿದ್ದಾಾರೆ. ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ಮತ್ತು ಭರತನಾಟ್ಯದಲ್ಲಿ 18ರ ಒಳಗಿನ ಪ್ರತಿಭೆಯಾಗಿ ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ಕರ್ನಾಟಕದಲ್ಲೂ ಸಹ ತಮ್ಮ ಹೆಸರು ದಾಖಲಿಸಿದ್ದಾಾರೆ.
published on 30-11-19
  ...........................
ಕಲೆಯಲ್ಲೇ ಸಂತೃಪ್ತಿಿ ಕಂಡ 
ಶಿಲ್ಪಿಿ ಜ್ಞಾಾನೇಶ್ವರ್



ಕಲೆಯಲ್ಲಿಯೇ ಜೀವನ ಸಂತೃಪ್ತಿಿ ಕಂಡುಕೊಂಡವರಿದ್ದಾಾರೆ. ಅದನ್ನೇ ಉಸಿರಾಗಿಸಿಕೊಂಡವರಿದ್ದಾಾರೆ. ಅಷ್ಟೇ ಏಕೆ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಿದ್ದಾಾರೆ. ಶಿವಮೊಗ್ಗದ ಶಿಲ್ಪಿಿ ಜ್ಞಾಾನೇಶ್ವರ್ ಇಂತಹವರಲ್ಲೊೊಬ್ಬರು. ಈ ಬಾರಿಯ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತರಾದ ಇವರ ಕಲ್ಲಿನ ಕೆತ್ತನೆಗಳು, ವಿಗ್ರಹಗಳು ವಿದೇಶದಲ್ಲೂ ಪ್ರತಿಷ್ಠಾಾಪಿತವಾಗಿವೆ.
  ಶಿಲ್ಪಿಿ ಕಾಶೀನಾಥ್ ಅವರ ಸಹೋದರ ಜ್ಞಾಾನೇಶ್ವರ್. ಓದಿದ್ದು ಬಿಎಸ್‌ಸಿ ಆದರೂ ಆನಂತರ ಹುಬ್ಬಳ್ಳಿಿಯ ವಿಜಯ ಮಹಾಂತೇಶ್ ಲಲಿತಕಲಾ ಮಹಾವಿದ್ಯಾಾಲಯದಲ್ಲಿ ಚಿತ್ರಕಲೆ ಕೋರ್ಸನ್ನು ಪಡೆದರು. ಇವರ ಕುಟುಂಬವೇ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೋ ಏನೋ, ಆ ಕ್ಷೇತ್ರವೇ ಇವರನ್ನು ಸೆಳೆಯಿತು. ಇವರ ಮುತ್ತಾಾತ ತಿಪ್ಪಾಾಜಿ ಹೆಸರಾಂತ ಕಲಾವಿದರು. ಶಿವಮೊಗ್ಗದಲ್ಲಿ ಇವರ ಹೆಸರಿನಲ್ಲೇ ಆರ್ಟ್ ಗ್ಯಾಾಲರಿಯನ್ನು ಸಹೋದರ ಕಾಶೀನಾಥ್ ತೆರೆದಿದ್ದಾಾರೆ. ಸುಮಾರು 40 ವರ್ಷದಿಂದ ಜ್ಞಾಾನೇಶ್ವರ್ ಶಿಲ್ಪಿಿಯಾಗಿದ್ದು, ಸುಮಾರು 500 ಶಿಲ್ಪ ಅವರಿಂದ ಇಲ್ಲಿಯವರೆಗೆ ಕಡೆಯಲ್ಪಟ್ಟಿಿದೆ.
ಮುತ್ತಾಾತ ತಿಪ್ಪಾಾಜಿ, ತಾತ ಪರಶುರಾಮಪ್ಪ ಅವರ ಶಿಲ್ಪಕಲೆ ಇವರ ಮೇಲೆ ಗಾಢವಾದ ಪರಿಣಾಮ ಬೀರಿದ್ದರಿಂದ ಕಲಾವೃತ್ತಿಿಯೇ ಜೀವನವಾಯಿತು. ಅದರಲ್ಲೂ ಬಳ್ಳಿಿಗಾವಿಯ ಶಿಲ್ಪ ಇನ್ನಷ್ಟು ಇವರನ್ನು ಸೆಳೆಯಿತು. ಇವರ ಮಗ ಪ್ರವೀಣ್ ಮತ್ತು ಇಬ್ಬರು ಮೊಮ್ಮಕ್ಕಳೂ ಸಹ ಇದೇ ಕ್ಷೇತ್ರದಲ್ಲಿ ಮುಂದುವರೆದಿದ್ದಾಾರೆ. ಈ ಮೂಲಕ ಈ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಕೊಡುಗೆ ನೀಡುತ್ತಿಿದ್ದಾಾರೆ.
ಕಲೆಯನ್ನು ಕಷ್ಟದಿಂದ ಕಲಿಯಬೇಕು. ಒಮ್ಮೆೆ ಆಸಕ್ತಿಿ ಮೂಡಿದರೆ ಕಲಿಕೆ ಕಷ್ಟವಾಗದು. ಇದಕ್ಕೆೆ ಉತ್ತಮ ಭವಿಷ್ಯವಿದೆ. ಜೊತೆಗೆ ಅಷ್ಟೇ ಮಾರುಕಟ್ಟೆೆಯೂ ಇದೆ. ಅದರೆ ಹಣ ಗಳಿಸುವುದೊಂದೇ ಕಲೆಯ ಉದ್ದೇಶವಾಗಬಾರದು. ಶಿಲ್ಪಕಲೆಯ ಶಾಲೆಯನ್ನು ತೆರೆಯುವ ಆಲೋಚನೆ ಇದೆ. ಇದಕ್ಕೆೆ ಸ್ಥಳ ಬೇಕು, ಜೊತೆಗೆ ಎಲ್ಲರ ಸಹಕಾರ ಬೇಕು. ನಗರಾಭಿವೃದ್ಧಿಿ ಪ್ರಾಾಧಿಕಾರಕ್ಕೆೆ ಈ ಬಗ್ಗೆೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದೇನೆ. ಶಾಲೆ ಆರಂಭವಾದೊಡನೆ ಇಲ್ಲಿ ವಿದ್ಯಾಾರ್ಥಿಗಳಿಗೆ ಶಿಲ್ಪಕಲೆಯನ್ನು ಉಚಿತವಾಗಿ ಕಲಿಸುವ ವಿಚಾರ ಮಾಡಿದ್ದೇನೆ ಎನ್ನುತ್ತಾಾರೆ ಜ್ಞಾಾನೇಶ್ವರ್.   
ಶಿಲ್ಪಕಲೆ ಉಳಿದ ಕಲೆಯಂತೆ ಸುಲಭದಲ್ಲಿ ಕಲಿಯುವಂತಹುದಲ್ಲ. ಇದಕ್ಕೆೆ ಎಲ್ಲ ಕಲೆಗಿಂತ ಹೆಚ್ಚಿಿನ ತಾಳ್ಮೆೆ, ಸಂಯಮ ಬೇಕು. ಬಹಳ ನಿಧಾನದ ಕೆಲಸ ಇಲ್ಲಿ ನಡೆಯುತ್ತದೆ. ಇತ್ತೀಚೆಗೆ ಕಲ್ಲುಗಳೂ ಸಹ ಸುಲಭದಲ್ಲಿ ಸಿಗುತ್ತಿಿಲ್ಲ. ಕಲಾಕಾರರಿಗೆ ಸರಕಾರ ಸುಲಭದಲ್ಲಿ ಕಲ್ಲು ಸಿಗುವಂತೆ ಮಾಡಬೇಕಿದೆ. ಅಂದರೆ ಮಾತ್ರ ಕಲೆ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ.
ಈಗ ಪ್ಲಾಾಸ್ಟರ್ ಆಫ್ ಪ್ಯಾಾರಿಸ್, ಸಿಮೆಂಟ್ ಮತ್ತು ಮೆಟಲ್ ಶಿಲ್ಪ ಮಾರುಕಟ್ಟೆೆಗೆ ಕಾಲಿಟ್ಟಿಿದೆ. ಆದರೂ ಶಿಲ್ಪಕಲೆಗೆ ಇರುವ ಮಹತ್ವವೇನೂ ಕಡಿಮೆಯಾಗಿಲ್ಲ. ಹೆಚ್ಚು ದುಬಾರಿಯಾದರೂ ಇದರ ಅಂದವೇ ಬೇರೆ. ದೇವರು, ವಿವಿಧ ಮಹಾಪುರುಷರ, ದಾರ್ಶನಿಕರ ವಿಗ್ರಹವನ್ನು ಕಲ್ಲಿನಲ್ಲೇ ಕೆತ್ತುವ ಪರಿಪಾಠವಿದೆ. ಜೊತೆಗೆ ಇದು ನೋಡುಗರನ್ನೂ ಸೆಳೆಯುವವಂತಹುದು. ಇದರಿಂದಾಗಿಯೇ ತನ್ನದೇ ಆದ ಮಹತ್ವವನ್ನು ಶಿಲ್ಪಕಲೆ ಉಳಿಸಿಕೊಂಡಿದೆ. ಜೊತೆಗೆ ಜ್ಞಾಾನೇಶ್ವರ್ ಅವರಂತಹ ಕಲಾವಿದರೂ ಇದನ್ನು ಬೆಳೆಸಿದ್ದಾಾರೆ.
ಇವರ ಸಾಧನೆ ಗಮನಿಸಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ  ಪ್ರಶಸ್ತಿಿ ನೀಡಿ ಗೌರವಿಸಿದೆ. ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದೊರೆಯುವ ಮೂಲಕ ಇನ್ನಷ್ಟು ಪ್ರೋತ್ಸಾಾಹ ಇವರಿಗೆ ಸಿಕ್ಕಂತಾಗಿದೆ. ನಗರದ ಸಹೃದಯರೂ ಸಹ ಇವರಿಗೆ ಇನ್ನಷ್ಟು ಪ್ರೋತ್ಸಾಾಹ, ಅವಕಾಶ ಕೊಡುವಂತಾಗಬೇಕು. ವಿದೇಶದಲ್ಲಿ ಹೆಸರು ಮಾಡಿರುವ ಇಂತಹ ಕಲಾಕಾರರಿಗೆ ನಾಡಿನೆಲ್ಲೆೆಡೆ ಗೌರವ ದೊರೆಯಬೇಕಿದೆ.

published on 23-11-19
........................