Monday 2 December 2019

ವಚನ ನೃತ್ಯವೈಭವದ
ಸಿ. ಡಿ. ರಕ್ಷಿತಾ


ವಯಸ್ಸು 18. ನೀಡಿದ ಕಾರ‌್ಯಕ್ರಮ ಸಾವಿರಕ್ಕೂ ಅಧಿಕ. ಭರತನಾಟ್ಯ, ವಚನ ನೃತ್ಯ, ಕರ್ನಾಟಕ ಸಂಗೀತದಲ್ಲಿ ಅತ್ಯುನ್ನತ ಸಾಧನೆ, ನೃತ್ಯ- ಸಂಗೀತಕ್ಕೆೆ ಮೀಸಲಾದ ವಿಶಾರದ ಪೂರ್ಣ ಪರಿಕ್ಷೆಯಲ್ಲಿ ತೇರ್ಗಡೆ, ವಿದ್ವತ್ ಪರೀಕ್ಷೆಗೆ ಸಿದ್ಧತೆ......
ಇದು ನಗರದ ವಿದಾರ್ಥಿನಿ ಸಿ. ಡಿ. ರಕ್ಷಿತಾ ಅವರ ಪರಿಚಯ. ಇಷ್ಟೆೆಲ್ಲಾಾ ಸಾಧನೆಯ ಫಲವಾಗಿ ಇವಳು ಫ್ರೆೆಂಚ್ ಎಡಿಶನ್‌ನ ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಿಗೆ ಭಾಜನಳಾಗಿದ್ದಾಾಳೆ. ಜೊತೆಗೆ 18ರೊಳಗಿನ ಭರತನಾಟ್ಯ ಸಾಧಕಿ ಎಂಬ ಗೌರವಕ್ಕೆೆ ಪಾತ್ರಳಾಗಿದ್ದಾಾಳೆ. ವಿಶೇಷವಾಗಿ ವಚನ ನೃತ್ಯ ಎನ್ನುವ ಪರಿಕಲ್ಪನೆಗೆ ಹೊಸ ಹೊಳಪನ್ನು, ಅರ್ಥವನ್ನು ತುಂಬಿ, ಆಯಾಮವನ್ನು ಒದಗಿಸಿದವರು.
ರಕ್ಷಿತಾ ಡಾ. ಕಟೀಲ್ ಅಶೋಕ್ ಪೈ ಕಾಲೇಜಿನಲ್ಲಿ ಪ್ರಥಮ ಬಿ ಎ ಓದುತ್ತಿಿದ್ದಾಾರೆ. ಬಾಲ್ಯದಿಂದಲೇ ತಾಯಿ ಜಾನಕಿ ಅವರ ಪ್ರೇರಣೆಯಿಂದ ಸಂಗೀತ, ಹಾಡುಗಾರಿಕೆಯತ್ತ ಆಕರ್ಷಣೆಗೊಳಗಾದವರು. ಇವರ ತಾಯಿ ಸಹ ಉತ್ತಮ ಹಾಡುಗಾರ್ತಿಯಾಗಿದ್ದು, ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಇದೇ ಹಾದಿಯಲ್ಲಿ ಮಗಳು ಕಾಲಿಟ್ಟಾಾಗ ತಂದೆ ದತ್ತಾಾತ್ರೇಯ ಅವರು ಬೆನ್ನುತಟ್ಟಿಿ ಹುರಿದುಂಬಿಸಿದರು. ಮಾತಾ-ಪಿತರ ಸಹಕಾರದಿಂದ ರಕ್ಷಿತಾ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿಿದ್ದಾಾರೆ.
ಆರಂಭದಲ್ಲಿ ವಿದುಷಿ ಪುಷ್ಪಾಾ ಕೃಷ್ಣಮೂರ್ತಿ ಅವರಲ್ಲಿ  ಕಲಿಕೆ ಆರಂಭಿಸಿದರು. ತದನಂತರ ಬೆಳಗಾವಿಯಲ್ಲಿ ಕೆಲಕಾಲ ಕಲಿತು ಮತ್ತೆೆ ಈಗ ಶಿವಮೊಗ್ಗದಲ್ಲಿಯೇ ಅಭ್ಯಾಾಸ ಮುಂದುವರೆಸಿದ್ದಾಾರೆ. ಕರ್ನಾಟಕ ಸಂಗೀತ ಅಕಾಡೆಮಿ ಕೊಡಮಾಡುವ ಭರತನಾಟ್ಯ ಶಿಷ್ಯವೇತನಕ್ಕೆೆ 2017-18ರ ಸಾಲಿನಲ್ಲಿ ಆಯ್ಕೆೆಯಾಗಿದ್ದಾಾರೆ.
ಮುಂಬೈಯ ಗಂಧರ್ವ ಸಂಗಿತ ಮಹಾವಿದ್ಯಾಾಲಯದವರು ನಡೆಸಿದ ವಿಶಾರದ ಪೂರ್ಣ ಪರೀಕ್ಷೆಯಲ್ಲಿ ಜಿಲ್ಲೆೆಗೆ ಪ್ರಥಮ ಸ್ಥಾಾನದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ವಿದ್ವತ್ ಪರೀಕ್ಷೆಗೆ ಈಗ ಸಿದ್ಧತೆ ನಡೆಸಿದ್ದಾಾರೆ. ಕರ್ನಾಟಕ ಸಂಗೀತದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾಾರೆ.
ಕರ್ನಾಟಕ ಚಿತ್ರಕಲಾ ಮಹಾಮಂಡಳಿಯವರು ನಡೆಸುವ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಾರೆ. ತನ್ನ ವಚನ ನೃತ್ಯ ವೈಭವವನ್ನು ಅನೇಕ ಮಠಗಳ, ಧಾರ್ಮಿಿಕ ಕಾರ‌್ಯಕ್ರಮಗಳಲ್ಲಿ ಪ್ರದರ್ಶಿಸಿ ಮಠಾಧೀಶರ ಆಶೀರ್ವಾದಕ್ಕೆೆ ಪಾತ್ರಳಾಗಿದ್ದಾಾಳೆ. ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ವಾಾಗತಗೀತೆಗೆ ಅಭಿನಯಿಸಿದ್ದಾಾರೆ, ರಾಜ್ಯ ಸಮಾಜ ಕಲ್ಯಾಾಣ ಇಲಾಖೆಯ ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿಿ, ಯುವಜನೋತ್ಸವದಲ್ಲಿ ರಾಜ್ಯಕ್ಕೆೆ ದ್ವಿಿತೀಯ, ಅಸಾಧಾರಣ ಬಾಲ ಪ್ರತಿಭೆ ಪ್ರಶಸ್ತಿಿ, ಮಲೆನಾಡ ನಾಟ್ಯ ಮಯೂರಿ... ಹೀಗೆ ಪ್ರಶಸ್ತಿಿ ಮತ್ತು ಬಿರುದುಗಳ ಸರಮಾಲೆಯನ್ನೆೆ ಇವರು ಧರಿಸಿದ್ದಾಾರೆ. 
  ಪೇಸ್ ಕಾಲೇಜಿನವರು ಕೊಡಮಾಡುವ ಅಸಾಧಾರಣ ಯುವ ಪ್ರತಿಭೆ ಪ್ರಶಸ್ತಿಿ ಇವರಿಗೆ ಲಭಿಸಿದೆ. ಜಿಲ್ಲಾಾ ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ, ನಾಡಹಬ್ಬ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪ್ರದರ್ಶನವನ್ನು ರಾಜ್ಯದಾದ್ಯಂತ  ಮತ್ತು ಮಹಾರಾಷ್ಟ್ರದ ಅನೇಕಭಾಗಗಳಲ್ಲಿ ನೀಡಿದ್ದಾಾರೆ.
ಬಸವಭಾವಗೀತೆಗಳು ಮತ್ತು ಮನುಕುಲದ ಮಂದಾರ ಎಂಬ ಎರಡು ಸಿಡಿಗಳನ್ನು ಚಂದ್ರಶೇಖರ್ ಶಿವಾಚಾರ‌್ಯರು ಹೊರತಂದಿದ್ದು, ಇವೆರಡರಲ್ಲೂ ರಕ್ಷಿತಾ ಅವರ ವಚನ ನೃತ್ಯವಿದೆ.
ಶಾಲಾ ಹಂತದಲ್ಲೇ ನಗರ, ಜಿಲ್ಲಾಾ ಮತ್ತು ರಾಜ್ಯಮಟ್ಟದ ವಿವಿಧ ಜಾನಪದ, ನೃತ್ಯ, ಹಾಡು, ಸ್ಪರ್ಧೆಗಳಲ್ಲಿ ಸತತ ಬಹುಮಾನವನ್ನು ಗಳಿಸುತ್ತ ಬಂದಿರುವ ರಕ್ಷಿತಾ ಇಂದಿಗೂ ಅದನ್ನು ಮುಂದುವರೆಸಿದ್ದಾಾರೆ. ಸಾವಿರಕ್ಕೂ ಹೆಚ್ಚು ಪ್ರದರ್ಶನವನ್ನು ನೀಡುವ ಮೂಲಕ ರಾಜ್ಯದಲ್ಲೇ ಹೆಸರುಮಾಡಿದ್ದಾಾರೆ. ಬ್ರೆೆವೋ ಇಂಟರ್‌ನ್ಯಾಾಶನಲ್ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ಮತ್ತು ಭರತನಾಟ್ಯದಲ್ಲಿ 18ರ ಒಳಗಿನ ಪ್ರತಿಭೆಯಾಗಿ ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ಕರ್ನಾಟಕದಲ್ಲೂ ಸಹ ತಮ್ಮ ಹೆಸರು ದಾಖಲಿಸಿದ್ದಾಾರೆ.
published on 30-11-19
  ...........................
ಕಲೆಯಲ್ಲೇ ಸಂತೃಪ್ತಿಿ ಕಂಡ 
ಶಿಲ್ಪಿಿ ಜ್ಞಾಾನೇಶ್ವರ್



ಕಲೆಯಲ್ಲಿಯೇ ಜೀವನ ಸಂತೃಪ್ತಿಿ ಕಂಡುಕೊಂಡವರಿದ್ದಾಾರೆ. ಅದನ್ನೇ ಉಸಿರಾಗಿಸಿಕೊಂಡವರಿದ್ದಾಾರೆ. ಅಷ್ಟೇ ಏಕೆ, ಕಲೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟವರಿದ್ದಾಾರೆ. ಶಿವಮೊಗ್ಗದ ಶಿಲ್ಪಿಿ ಜ್ಞಾಾನೇಶ್ವರ್ ಇಂತಹವರಲ್ಲೊೊಬ್ಬರು. ಈ ಬಾರಿಯ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತರಾದ ಇವರ ಕಲ್ಲಿನ ಕೆತ್ತನೆಗಳು, ವಿಗ್ರಹಗಳು ವಿದೇಶದಲ್ಲೂ ಪ್ರತಿಷ್ಠಾಾಪಿತವಾಗಿವೆ.
  ಶಿಲ್ಪಿಿ ಕಾಶೀನಾಥ್ ಅವರ ಸಹೋದರ ಜ್ಞಾಾನೇಶ್ವರ್. ಓದಿದ್ದು ಬಿಎಸ್‌ಸಿ ಆದರೂ ಆನಂತರ ಹುಬ್ಬಳ್ಳಿಿಯ ವಿಜಯ ಮಹಾಂತೇಶ್ ಲಲಿತಕಲಾ ಮಹಾವಿದ್ಯಾಾಲಯದಲ್ಲಿ ಚಿತ್ರಕಲೆ ಕೋರ್ಸನ್ನು ಪಡೆದರು. ಇವರ ಕುಟುಂಬವೇ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿದ್ದರಿಂದಲೋ ಏನೋ, ಆ ಕ್ಷೇತ್ರವೇ ಇವರನ್ನು ಸೆಳೆಯಿತು. ಇವರ ಮುತ್ತಾಾತ ತಿಪ್ಪಾಾಜಿ ಹೆಸರಾಂತ ಕಲಾವಿದರು. ಶಿವಮೊಗ್ಗದಲ್ಲಿ ಇವರ ಹೆಸರಿನಲ್ಲೇ ಆರ್ಟ್ ಗ್ಯಾಾಲರಿಯನ್ನು ಸಹೋದರ ಕಾಶೀನಾಥ್ ತೆರೆದಿದ್ದಾಾರೆ. ಸುಮಾರು 40 ವರ್ಷದಿಂದ ಜ್ಞಾಾನೇಶ್ವರ್ ಶಿಲ್ಪಿಿಯಾಗಿದ್ದು, ಸುಮಾರು 500 ಶಿಲ್ಪ ಅವರಿಂದ ಇಲ್ಲಿಯವರೆಗೆ ಕಡೆಯಲ್ಪಟ್ಟಿಿದೆ.
ಮುತ್ತಾಾತ ತಿಪ್ಪಾಾಜಿ, ತಾತ ಪರಶುರಾಮಪ್ಪ ಅವರ ಶಿಲ್ಪಕಲೆ ಇವರ ಮೇಲೆ ಗಾಢವಾದ ಪರಿಣಾಮ ಬೀರಿದ್ದರಿಂದ ಕಲಾವೃತ್ತಿಿಯೇ ಜೀವನವಾಯಿತು. ಅದರಲ್ಲೂ ಬಳ್ಳಿಿಗಾವಿಯ ಶಿಲ್ಪ ಇನ್ನಷ್ಟು ಇವರನ್ನು ಸೆಳೆಯಿತು. ಇವರ ಮಗ ಪ್ರವೀಣ್ ಮತ್ತು ಇಬ್ಬರು ಮೊಮ್ಮಕ್ಕಳೂ ಸಹ ಇದೇ ಕ್ಷೇತ್ರದಲ್ಲಿ ಮುಂದುವರೆದಿದ್ದಾಾರೆ. ಈ ಮೂಲಕ ಈ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಕೊಡುಗೆ ನೀಡುತ್ತಿಿದ್ದಾಾರೆ.
ಕಲೆಯನ್ನು ಕಷ್ಟದಿಂದ ಕಲಿಯಬೇಕು. ಒಮ್ಮೆೆ ಆಸಕ್ತಿಿ ಮೂಡಿದರೆ ಕಲಿಕೆ ಕಷ್ಟವಾಗದು. ಇದಕ್ಕೆೆ ಉತ್ತಮ ಭವಿಷ್ಯವಿದೆ. ಜೊತೆಗೆ ಅಷ್ಟೇ ಮಾರುಕಟ್ಟೆೆಯೂ ಇದೆ. ಅದರೆ ಹಣ ಗಳಿಸುವುದೊಂದೇ ಕಲೆಯ ಉದ್ದೇಶವಾಗಬಾರದು. ಶಿಲ್ಪಕಲೆಯ ಶಾಲೆಯನ್ನು ತೆರೆಯುವ ಆಲೋಚನೆ ಇದೆ. ಇದಕ್ಕೆೆ ಸ್ಥಳ ಬೇಕು, ಜೊತೆಗೆ ಎಲ್ಲರ ಸಹಕಾರ ಬೇಕು. ನಗರಾಭಿವೃದ್ಧಿಿ ಪ್ರಾಾಧಿಕಾರಕ್ಕೆೆ ಈ ಬಗ್ಗೆೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಿಲ್ಲ. ಆದರೂ ಪ್ರಯತ್ನ ಮುಂದುವರೆಸಿದ್ದೇನೆ. ಶಾಲೆ ಆರಂಭವಾದೊಡನೆ ಇಲ್ಲಿ ವಿದ್ಯಾಾರ್ಥಿಗಳಿಗೆ ಶಿಲ್ಪಕಲೆಯನ್ನು ಉಚಿತವಾಗಿ ಕಲಿಸುವ ವಿಚಾರ ಮಾಡಿದ್ದೇನೆ ಎನ್ನುತ್ತಾಾರೆ ಜ್ಞಾಾನೇಶ್ವರ್.   
ಶಿಲ್ಪಕಲೆ ಉಳಿದ ಕಲೆಯಂತೆ ಸುಲಭದಲ್ಲಿ ಕಲಿಯುವಂತಹುದಲ್ಲ. ಇದಕ್ಕೆೆ ಎಲ್ಲ ಕಲೆಗಿಂತ ಹೆಚ್ಚಿಿನ ತಾಳ್ಮೆೆ, ಸಂಯಮ ಬೇಕು. ಬಹಳ ನಿಧಾನದ ಕೆಲಸ ಇಲ್ಲಿ ನಡೆಯುತ್ತದೆ. ಇತ್ತೀಚೆಗೆ ಕಲ್ಲುಗಳೂ ಸಹ ಸುಲಭದಲ್ಲಿ ಸಿಗುತ್ತಿಿಲ್ಲ. ಕಲಾಕಾರರಿಗೆ ಸರಕಾರ ಸುಲಭದಲ್ಲಿ ಕಲ್ಲು ಸಿಗುವಂತೆ ಮಾಡಬೇಕಿದೆ. ಅಂದರೆ ಮಾತ್ರ ಕಲೆ ಉಳಿಯಲು, ಬೆಳೆಯಲು ಸಾಧ್ಯವಾಗುತ್ತದೆ.
ಈಗ ಪ್ಲಾಾಸ್ಟರ್ ಆಫ್ ಪ್ಯಾಾರಿಸ್, ಸಿಮೆಂಟ್ ಮತ್ತು ಮೆಟಲ್ ಶಿಲ್ಪ ಮಾರುಕಟ್ಟೆೆಗೆ ಕಾಲಿಟ್ಟಿಿದೆ. ಆದರೂ ಶಿಲ್ಪಕಲೆಗೆ ಇರುವ ಮಹತ್ವವೇನೂ ಕಡಿಮೆಯಾಗಿಲ್ಲ. ಹೆಚ್ಚು ದುಬಾರಿಯಾದರೂ ಇದರ ಅಂದವೇ ಬೇರೆ. ದೇವರು, ವಿವಿಧ ಮಹಾಪುರುಷರ, ದಾರ್ಶನಿಕರ ವಿಗ್ರಹವನ್ನು ಕಲ್ಲಿನಲ್ಲೇ ಕೆತ್ತುವ ಪರಿಪಾಠವಿದೆ. ಜೊತೆಗೆ ಇದು ನೋಡುಗರನ್ನೂ ಸೆಳೆಯುವವಂತಹುದು. ಇದರಿಂದಾಗಿಯೇ ತನ್ನದೇ ಆದ ಮಹತ್ವವನ್ನು ಶಿಲ್ಪಕಲೆ ಉಳಿಸಿಕೊಂಡಿದೆ. ಜೊತೆಗೆ ಜ್ಞಾಾನೇಶ್ವರ್ ಅವರಂತಹ ಕಲಾವಿದರೂ ಇದನ್ನು ಬೆಳೆಸಿದ್ದಾಾರೆ.
ಇವರ ಸಾಧನೆ ಗಮನಿಸಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ  ಪ್ರಶಸ್ತಿಿ ನೀಡಿ ಗೌರವಿಸಿದೆ. ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದೊರೆಯುವ ಮೂಲಕ ಇನ್ನಷ್ಟು ಪ್ರೋತ್ಸಾಾಹ ಇವರಿಗೆ ಸಿಕ್ಕಂತಾಗಿದೆ. ನಗರದ ಸಹೃದಯರೂ ಸಹ ಇವರಿಗೆ ಇನ್ನಷ್ಟು ಪ್ರೋತ್ಸಾಾಹ, ಅವಕಾಶ ಕೊಡುವಂತಾಗಬೇಕು. ವಿದೇಶದಲ್ಲಿ ಹೆಸರು ಮಾಡಿರುವ ಇಂತಹ ಕಲಾಕಾರರಿಗೆ ನಾಡಿನೆಲ್ಲೆೆಡೆ ಗೌರವ ದೊರೆಯಬೇಕಿದೆ.

published on 23-11-19
........................

Monday 18 November 2019

ಪರಿಸರವೇ ಉಸಿರಾಗಿರುವ
ಜಿ. ಎಲ್. ಜನಾರ್ದನ


ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡವರು ಜಿಲ್ಲೆೆಯಲ್ಲಿ ಹಲವರಿದ್ದಾಾರೆ. ಆದರೆ, ಪರಿಸರ ಸಂಬಂಧಿ ವಿಚಾರಗಳ ಬಗ್ಗೆೆ ಅತ್ಯಂತ ನಿಖರವಾಗಿ ಮಾತನಾಡುವವರು ವಿರಳ. ಅದರಲ್ಲೂ ಪರಿಸರ ವಿಷಯದ ಸಂಪನ್ಮೂಲ ವ್ಯಕ್ತಿಿಗಳಾಗಿ ರಾಜ್ಯ, ಹೊರರಾಜ್ಯ, ವಿದೇಶಗಳಲ್ಲಿ ವಿಚಾರ ಮಂಡಿಸುವವರು ಇನ್ನೂ ವಿರಳ. ಇಂತಹವರಲ್ಲಿ ಅತ್ಯಂತ ಸರಳ ವ್ಯಕ್ತಿಿತ್ವದ, ಮೃದು, ನಯ-ವಿನಯಕ್ಕೆೆ ಹೆಸರಾದ ಜಿ. ಎಲ್. ಜನಾರ್ದನ ಪ್ರಮುಖರು.
ಸಂತೆಕಡೂರಿನ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಹಕ ನಿರ್ದೇಶಕರಾಗಿ, ಜಿಲ್ಲೆೆಯಲ್ಲಿ ಅನೇಕ ಪರಿಸರ ಕಾರ‌್ಯಕ್ರಮಗಳನ್ನು ಸದಾ ಏರ್ಪಡಿಸುತ್ತ, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಈ ಬಗ್ಗೆೆ ಜನಜಾಗೃತಿ ಮೂಡಿಸುವಲ್ಲಿ ನಿರತರಾಗಿರುವ ಜನಾರ್ದನ್ ಒಬ್ಬ ಅಪರೂಪದ ವ್ಯಕ್ತಿಿ. ಸದ್ದಿಲ್ಲದೆ ಕೆಲಸ ಮಾಡುವವರು ಅವರು. ಯಾವುದೇ ಸನ್ಮಾಾನ, ಪ್ರಶಸ್ತಿಿ, ಪುರಸ್ಕಾಾರಗಳಿಗೆ ಜೋತುಬೀಳದವರು. ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತ ಜೋಳಿಗೆಯನ್ನು ಬಗಲಿಗೇರಿಸಿಕೊಂಡು ಸದಾ ಪರಿಸರಾಸಕ್ತರನ್ನು ಸಂಘಟಿಸಿ ಒಂದಿಲ್ಲೊೊಂದು ಹೋರಾಟದಲ್ಲಿ  ತೊಡಗಿಕೊಂಡಿರುತ್ತಾಾರೆ.
 ಬಿಎಸ್‌ಸಿ ಡಿಪ್ಲೊಮಾ  ಓದಿರುವ ಇವರು, ಆಸಕ್ತಿಿ ಬೆಳೆಸಿಕೊಂಡಿದ್ದು ಮಾತ್ರ ಸಾಂಸ್ಕೃತಿಕ ಪಾರಂಪರಿಕಗಳ ಸಂರಕ್ಷಣೆ, ಪರಿಸರ ಮತ್ತು ಮೌಲ್ಯಯುತ ಶಿಕ್ಷಣದವನ್ನು ಬೆಳೆಸುವುದರಲ್ಲಿ.
ಸಮಾಜ, ಪ್ರಾಾಣಿ  ಮತ್ತು ಭೂಮಿಯ ಮೇಲೆ ವಾತಾವರಣದ ಪರಿಣಾಮದ ಅರಿವು, ಶಾಲೆಗೆ ಹೋಗುವ ವಿದ್ಯಾಾರ್ಥಿಗಳಲ್ಲಿ ಪರಿಸರ ಜಾಗೃತಿ, ಮೂಡಿಸುತ್ತಿಿದ್ದಾಾರೆ. 2007ರಿಂದ ಇಲ್ಲಿಯವರೆಗೆ ಸುಮಾರು 20 ಸಾವಿರ ಮಕ್ಕಳಲ್ಲಿ ಈ ಜಾಗೃತಿ ಉಂಟುಮಾಡುವ ಕೆಲಸ ಮಾಡಿದ್ದಾಾರೆ. ಪರಿಸರ ಸ್ನೇಹಿ ಶಾಲಾ ಕಾರ‌್ಯಕ್ರಮವನ್ನು ಜಿಲ್ಲೆೆಯಿಂದ ಆರಂಭಿಸಿ ಈಗ ರಾಜ್ಯದಾದ್ಯಂತ ಪಸರಿಸಿದ್ದಾಾರೆ.
ಪರಿಸರ ಸಂದೇಶ ಎನ್ನುವ ಮ್ಯಾಾಗಜಿನ್ ಪ್ರಕಟಿಸುತ್ತಿಿದ್ದಾಾರೆ. ಇದನ್ನು ಜಿಲ್ಲೆೆಯ ಎಲ್ಲಾಾ 3 ಸಾವಿರ ಶಾಲೆಗಳಿಗೆ ಮತ್ತು ರಾಜ್ಯದ ಸುಮಾರು 2 ಸಾವಿರ ಶಾಲೆಗಳಿಗೆ ಕಳುಹಿಸುತ್ತಿಿದ್ದಾಾರೆ.
ಬ್ರಹ್ಮಪುತ್ರ, ಕೋಶಿಯಾ ಮತ್ತು ಶರಾವತಿ ನದಿಗಳ ಅಧ್ಯಯನ ಸಮಿತಿಯ ಸದಸ್ಯರಾಗಿ ಅಸ್ಸಾಾಂ, ಬಿಹಾರ್ ಮತ್ತು ಕರ್ನಾಟಕದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದರ ಹೊರತಾಗಿ ವಿಶ್ವಬ್ಯಾಾಂಕ್ ಪ್ರಾಾಯೋಜಿತ, ಕರ್ನಾಟಕದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಕುರಿತ ಯೋಜನೆಯ ಅಧ್ಯಯನ ಸಮಿತಿಯ ನಿರ್ದೇಶಕರಾಗಿ, ಮರುಭೂಮಿ ಅಭಿವೃಧಿ ಯೋಜನೆಯ ಯೋಜನಾ ನಿರ್ದೇಶಕರಾಗಿ, ಕರ್ನಾಟಕದ ರಾಷ್ಟ್ರೀಯ ಸಾಕ್ಷರತಾ ಮಿಶನ್‌ನ ರಾಜ್ಯ ಸಂಪನ್ಮೂಲ ವ್ಯಕ್ತಿಿಯಾಗಿ, 2009ರಿಂದ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಕಾರ‌್ಯನಿರ್ವಾಾಹಕ ನಿರ್ದೇಶಕರಾಗಿ,  ಭಾರತೀಯ ನದಿಗಳ ಅಧ್ಯಯನ ಸಮಿತಿಯ ರಾಜ್ಯ ಸಂಯೋಜಕರಾಗಿ ಕೆಲಸ ಮಾಡುತ್ತಿಿದ್ದಾಾರೆ. 
ಪ್ಯಾಾಲೆಸ್ತೀನಿನಲ್ಲಿ ಜರುಗಿದ ಜಾಗತಿಕ ಸಮಾವೇಶದಲ್ಲಿ ಕರ್ನಾಟಕದ ರೈತರು ಮತ್ತು ಮಾರುಕಟ್ಟೆೆ ಬಗ್ಗೆೆ, ಉತ್ತರಕಾಂಡ ರಾಜ್ಯದಲ್ಲಿ ಜರುಗಿದ ಸಮಾವೇಶದಲ್ಲಿ ಕರ್ನಾಟಕದ ನದಿಯ ಸ್ಥಿಿತಿಗತಿಗಳು, ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ  ನೆಲ ಮತ್ತು ಜಲ ಸಂಪತ್ತು ನಿರ‌್ವಹಣೆ,  ಪಶ್ಚಿಿಮಘಟ್ಟದ ಹೋರಾಟ ಬೆಳೆಸುವಲ್ಲಿ ಚಳವಳಿಗಳ ಪಾತ್ರ, ಜೈವಿಕ ಇಂಧನಗಳ ಅಭಿವೃದ್ಧಿಿ,  ಪಶ್ಚಿಿಮ ಘಟ್ಟಗಳಲ್ಲಿನ ಚಳವಳಿಗಳು ಇವೇ ಮೊದಲಾದವುಗಳ ಬಗ್ಗೆೆ ದೇಶ, ವಿದೇಶ, ವಿವಿಧ ರಾಜ್ಯಗಳಲ್ಲಿ ಪ್ರಬಂಧ ಮಂಡಿಸಿದ್ದಾಾರೆ.
 ಜನಾರ್ದನ ಅವರು, ಇಂಗ್ಲೀಷ್ ಮತ್ತು ಕನ್ನಡದಲ್ಲಿ 9 ಪುಸ್ತಕವನ್ನು ಪ್ರಕಟಿಸಿದ್ದಾಾರೆ. ಅವುಗಳಲ್ಲಿ ಕೆಲವೆಂದರೆ, ಕರುನಾಡ ಹಕ್ಕಿಿಗಳು,  ರಿವರ್ ವ್ಯಾಾಲಿ ಕಲ್ಚರ್ ಇನ್  ಶರಾವತಿ ರಿವರ್, ಇಕೋ ಫ್ರೆೆಂಡ್ಲಿಿ ಸ್ಕೂಲ್ ಗೈಡ್‌ಸ್‌,  ನ್ಯೂಕ್ಲಿಿಯರ್ ಪವರ್ ಪ್ಲಾಾಂಟ್‌ಸ್‌, ಕ, ಕಾ, ಕಿ, ಕೀ, ಕಾಗುಣಿತ ಹಾಡುತ್ತ ಕಲಿಯೋಣ, ಧನ್ವಂತರಿ ಶಾಲಾ ಗೈಡ್  ಮೊದಲಾದವು.
ಇವರ ಇಷ್ಟೆೆಲ್ಲಾಾ ಸಾಧನೆ ಗಮನಿಸಿ ರೋಟರಿ ಇಂಟರ್‌ನ್ಯಾಾಶನಲ್ ಸಂಸ್ಥೆೆ ವೊಕೇಶನಲ್ ಎಕ್‌ಸ್‌‌ಲೆನ್‌ಸ್‌ ಅವಾರ್ಡನ್ನು ನೀಡಿದೆ. ತಮ್ಮ ಇಳಿವಯಸ್ಸಿಿನಲ್ಲೂ ಪರಿಸರದ ಹೋರಾಟಕ್ಕೆೆ ಹೊಸ ಹೆಜ್ಜೆೆಯನ್ನು ಇಡುತ್ತಲೇ ಇದ್ದಾಾರೆ.

published on Nov 16-2019
............................... 

Saturday 9 November 2019

ಸರಳ, ಜನಪ್ರಿಿಯ ಅಧಿಕಾರಿ
ಬ್ರಿಿಜೆಟ್ ವರ್ಗೀಸ್ 


ಸಜ್ಜನರಿಗೆ ಅವರ ನಡವಳಿಕೆಯೇ ಭೂಷಣ ಎನ್ನುವ ಸಂಸ್ಕೃತದ ಉಕ್ತಿುದೆ. ಅವರ ಮಾತು, ಕೃತಿ, ನಡೆ-ನುಡಿ ಎಲ್ಲವೂ  ಶೋಭಿಸುತ್ತವೆ. ಮಾತು ಕಡಿಮೆ , ಕೆಲಸ ಹೆಚ್ಚು ಎನ್ನುವ ಮಾತಿಗೆ ಬದ್ಧರಾಗಿರುತ್ತಾಾರೆ. ಇವರು ಯಾರನ್ನೂ ನೋುಸದೆ, ಗೌರವದಿಂದ ಕಾಣುತ್ತಾಾರೆ. ಎಲ್ಲರಿಗೂ ಬೇಕಾದವರಾಗುತ್ತಾಾರೆ. ಈ ಮೂಲಕ "ಶ್ವಾಾಸಾರ್ಹತೆಗೆ ಪಾತ್ರರಾಗುತ್ತಾಾರೆ. 
ಅದರಲ್ಲೂ "ಶೇಷವಾಗಿ, ಸರಕಾರಿ ಅಧಿಕಾರಿಗಳ ಬಗ್ಗೆೆ ಜನರಲ್ಲಿ ಒಳ್ಳೆೆಯ ಭಾವನೆ ಏಕಾಏಕಿ ಮೂಡುವುದಿಲ್ಲ. ಎಷ್ಟೇ ಸದ್ಗುಣ ಸಂಪನ್ನ, ಜನೋಪಕಾರಿ ಅಧಿಕಾರಿಯಾದರೂ ಜನರ "ಶ್ವಾಾಸ ಗಳಿಸುವುದು ಮತ್ತು ಅದನ್ನು ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹುದರಲ್ಲಿ ನಗರದಲ್ಲಿ ಕೆಲಸ ಮಾಡುತ್ತಿಿರುವ ಅಧಿಕಾರಿಣಿಯೊಬ್ಬರು ಎಲ್ಲರ ಪಾಲಿಗೆ ಅಚ್ಚುಮೆಚ್ಚಿಿನವರಾಗಿದ್ದಾಾರೆ. ಯಾವುದೇ ಹಮ್ಮು- ಬಿಮ್ಮು ಇಲ್ಲದೆ, ತೀರಾ ಸರಳ ನಡೆ-ನುಡಿಯೊಂದಿಗೆ ಬೆರೆಯುವ ಇವರ ಹೆಸರು ಬ್ರಿಿಜೆಟ್ ವರ್ಗೀಸ್.
ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಇವರ ಹೆಸರು ಚಿರಪರಿಚಿತ. ಸದಾ ನಗುಮೊಗ, ಸರಳ ಸಜ್ಜನಿಕೆಯ ವ್ಯಕ್ತಿಿತ್ವ ಇವರದ್ದು. ಅಂಕಿ-ಸಂಖ್ಯೆೆ ಇಲಾಖೆಯ ಜಿಲ್ಲಾಾಧಿಕಾರಿಯಾಗಿ ಕೆಲಸ ಮಾಡುತ್ತಿಿರುವ ಇವರು. ಮೂಲತಃ ಕೇರಳದ ತ್ರಿಿಶ್ಯೂರು ಜಿಲ್ಲೆೆಯ ಹಳ್ಳಿಿಯೊಂದರ ಕೃ ಕುಟುಂಬದವರು. ಆದರೆ ಓದಿದ್ದು, ಬೆಳೆದಿದ್ದು ಕೆಲಸಕ್ಕೆೆ ಸೇರಿದ್ದು, ಕೆಲಸ ಮಾಡಿದ್ದೆೆಲ್ಲ ಶಿವಮೊಗ್ಗದಲ್ಲಿ. ಆದ್ದರಿಂದಲೇ ಅವರು ಕೇರಳಿಗರೆನಿಸಿಕೊಳ್ಳದೆ ಅಪ್ಪಟ ಶಿವಮೊಗ್ಗದವರಾಗಿ, ಮಲೆನಾಡಿನಲ್ಲಿ ಗುಣಗಳನ್ನೆೆಲ್ಲಾಾ ಮೈಗೂಡಿಸಿಕೊಂಡಿದ್ದಾಾರೆ. ಮೂಲಭಾಷೆ ಮಲಯಾಳಂ ಆದರೂ ಸ್ಫುಟವಾಗಿ ಕನ್ನಡ ಮಾತನಾಡುತ್ತಾಾರೆ.
ತೀರ್ಥಹಳ್ಳಿಿ ಸರಕಾರಿ ಬಾಲಕಿಯರ ಪ್ರೌೌಢಶಾಲೆಯಲ್ಲಿ ಹೈಸ್ಕೂಲು ಮುಗಿಸಿ, ತುಂಗಾ ಕಾಲೇಜಿನಿಂದ ಬಿಕಾಂ ಪದ" ಪಡೆದು, ಮೈಸೂರು ""ಯಲ್ಲಿ ಎಂಕಾಮ್ ಮುಗಿಸಿ, ಚಿಕ್ಕಮಗಳೂರಿನ ಸಂಜೆ ಕಾಲೇಜಿನಲ್ಲಿ ಓದಿ ಎಲ್‌ಎಲ್‌ಬಿ ಪದ" ಪಡೆದಿದ್ದಾಾರೆ. 1984ರಲ್ಲಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಗ್ರಾಾಫಿಸ್‌ಟ್‌ ಆಗಿ ಬೆಂಗಳೂರಲ್ಲಿ ಕೆಲಸಕ್ಕೆೆ ಸೇರಿದರು. ಇದೇ ವೇಳೆ ರಾಜ್ಯದ ""ಧ ಇಲಾಖೆಗಳಲ್ಲಿ ಟೈಪಿಸ್‌ಟ್‌ ಹುದ್ದೆೆಗೆ ಅರ್ಜಿ ಆಹ್ವಾಾನಿಸಿದಾಗ ಅದರಲ್ಲಿ ಆಯ್ಕೆೆಯಾಗಿ ತೀರ್ಥಹಳ್ಳಿಿಯ ಕೃ ಇಲಾಖೆಯಲ್ಲಿ 1985ರಲ್ಲಿ ಕೆಲಸಕ್ಕೆೆ ಸೇರ್ಪಡೆಗೊಂಡರು. ಅಲ್ಲಿಂದ ಅಂಕಿ-ಸಂಖ್ಯೆೆ ಇಲಾಖೆಯಲ್ಲಿ  ಸಹಾಯಕ ಅಂಕಿಸಂಖ್ಯಾಾ ಅಧಿಕಾರಿಯಾಗಿ ನೇಮಕಗೊಂಡು 2 ವರ್ಷ, ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕೆಲವು ಕಾಲ ಹಾಗೂ ಜಿಪಂನಲ್ಲಿ 12 ವರ್ಷ ಕೆಲಸ ನಿರ್ವ"ಸಿದ್ದಾಾರೆ.
2012ರಲ್ಲಿ ಜಿಲ್ಲಾಾ ಅಂಕಿಸಂಖ್ಯೆೆ ಅಧಿಕಾರಿಯಾಗಿ ಬಡ್ತಿಿಗೊಂಡು, 2015ರಲ್ಲಿ ಉಪ ನಿರ್ದೇಶಕರಾಗಿ, ಈಗ ಇಲಾಖೆಯ ಜಿಲ್ಲಾಾ ಅಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಕೇವಲ ಸರಕಾರಿ ಕೆಲಸ ಮಾತ್ರವಲ್ಲ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಕೇರಳ ಸಮಾಜಂನ ಸಮನ್ವಯ ಮ"ಳಾ ಸಮಾಜದ ಉಪಾಧ್ಯಕ್ಷರಾಗಿ ಸಮಾಜಮುಖಿ ಕೆಲಸಗಳನ್ನು ಈ ಮೂಲಕ ಮಾಡುತ್ತಿಿದ್ದಾಾರೆ. ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ಹಾಲಿ ಸರ್ಕಾರಿ ನೌಕರರ ಗೃಹ ನಿರ್ಮಾಾಣ ಸಹಕಾರ ಸಂಘದ ನಿರ್ದೇಶಕರಾಗಿದ್ದಾಾರೆ. 
ಇವರ ದಕ್ಷತೆ ಮತ್ತು ಸೇವಾ ಮನೋಭಾವವನ್ನು ಗಮನಿಸಿ ಜಿಲ್ಲಾಾಡಳಿತ 2019ರಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಿ ನೀಡಿ ಗೌರ"ಸಿದೆ. ಇತ್ತೀಚೆಗೆ ಜರುಗಿದ ಕೇರಳ ಸಮಾಜಂ ಮ"ಳಾ ಸಮಾಜದ ರ್ವಾಕೋತ್ಸವದಲ್ಲೂ ಇವರ ಸೇವೆ ಮತ್ತು ಜನಪ್ರಿಿಯತೆಯನ್ನು ಮನ್ನಿಿಸಿ ಗೌರ"ಸಲಾಗಿದೆ. ಸರಕಾರಿ ನೌಕರರ ಹೊರತಾಗಿ ಸಾರ್ವಜನಿಕ ವಲಯದಲ್ಲಿಯೂ ಅಚ್ಚುಮೆಚ್ಚಿಿನವರಾಗಿರುವುದರಿಂದ ವರ್ಗೀಸ್ ಮೇಡಂ ಎಂದೇ ಜನಪ್ರಿಿಯರಾಗಿದ್ದಾಾರೆ.
ಜನಸೇವೆ ಮೂಲಕ "ಶ್ವಾಾಸ ಗಳಿಸಿದ್ದೇನೆ. ಇದನ್ನು ಜನರು ಮತ್ತು ನೌಕರರು ಗುರುತಿಸಿದ್ದಾಾರೆ. ಅವರಿಟ್ಟ ನಂಬಿಕೆಯನ್ನು ಮುಂದುವರೆಸಿಕೊಂಡು ಹೋಗುವುದೇ ತನ್ನ ಮುಂದಿರುವ ಗುರಿ ಎನ್ನುತ್ತಾಾರೆ ಬ್ರಿಿಜೆಟ್. 

published on 9-11-19
..................................       

Thursday 7 November 2019

ಅಜಾತಶತ್ರು ನ್ಯಾಾಯವಾದಿ 
ಎ. ಟಿ. ಬೆಳ್ಳಿಿಯಪ್ಪ


ವೇಗವಾಗಿ ಓಡುವವನಿಗೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ಓಡುವುದನ್ನು ಒಂದು  ಕಲೆಯನ್ನಾಾಗಿರಿಸಿಕೊಂಡವನಿಗೆ ಮಾತ್ರ ಯಶಸ್ಸು ಸಿಗುತ್ತದೆ. ಈ ರೀತಿಯ ವ್ಯಕ್ತಿಿ ತಾನು ಬೆಳೆಯುವುದರ ಜೊತೆಗೆ ಇನ್ನೊೊಬ್ಬರನ್ನೂ ಬೆಳೆಸುತ್ತಾಾನೆ. ಅವರು ಸ್ವಯಂಪ್ರಕಾಶರಾಗಿ ಬೆಳಗುವಂತೆ ಮಾಡಿ, ಅವರ ಸಾಧನೆಯನ್ನು ಕಂಡು ಸಂತಸಪಡುತ್ತಾಾನೆ.
ಈ ಮಾತು ನಗರದ ಹಿರಿಯ ನ್ಯಾಾಯವಾದಿ ಎ. ಟಿ. ಬೆಳ್ಳಿಿಯಪ್ಪ ಅವರಿಗೆ ಅನ್ವಯವಾಗುತ್ತದೆ. ತಮ್ಮ ಪ್ರಾಾಮಾಣಿಕ ವೃತ್ತಿಿಪರತೆ ಮತ್ತು ದಕ್ಷತೆಯಿಂದ ಹೆಸರಾದವರು ಇವರು. ರಾಜ್ಯದಲ್ಲಿ ಖ್ಯಾಾತರಾಗಿ, ಅನೇಕ ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿ ಅವರ  ಏಳ್ಗೆೆಯನ್ನು ಬಯಸಿದವರು. ಈಗ 82ರ ಹರಯದಲ್ಲಿರುವ ಬೆಳ್ಳಿಿಯಪ್ಪ ಅನಾರೋಗ್ಯದಿಂದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿಿಲ್ಲ.
ಬೆಳ್ಳಿಿಯಪ್ಪ ಅವರ ಸೇವೆ ನ್ಯಾಾಯವಾದಿ ಕ್ಷೇತ್ರದಲ್ಲಿ ಗಣನೀಯವಾದುದು. ವಕೀಲ ವೃತ್ತಿಿಯಲ್ಲಿ ಅಪಾರ ಗೌರವ, ಪರಿಣಿತಿ ಮತ್ತು ಜನಮನ್ನಣೆ ಪಡೆದು, ಶ್ರೇಷ್ಠ ಮಟ್ಟದ ವಕೀಲರಾಗಿ  ಸೇವೆ ಸಲ್ಲಿಸಿ ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಕೇವಲ ನ್ಯಾಾಯವಾದಿಯಾಗಿ ಮಾತ್ರವಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವಲಯದಲ್ಲೂ ಅವರು ಸೇವೆ ಸಲ್ಲಿಸಿದ್ದಾಾರೆ.
 ಮೂಲತಃ ಕೊಡಗು ಜಿಲ್ಲೆೆ ವಿರಾಜಪೇಟೆ ತಾಲೂಕಿನ ಬಾಳೆಲೆ ಗ್ರಾಾಮದವರಾದ ಬೆಳ್ಳಿಿಯಪ್ಪ, ಪ್ರಾಾಥಮಿಕ ಶಿಕ್ಷಣವನ್ನು ಪೊನ್ನಂಪೇಟೆಯಲ್ಲಿ ಪಡೆದು, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾಾರೆ. ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಬಿ. ಎಲ್ ಪದವಿಯನ್ನು ಪಡೆದು ಮದ್ರಾಾಸ್‌ನಲ್ಲಿ ವಿಮಾ ಕಂಪನಿಯೊಂದರ ಲೀಗಲ್ ಅಸಿಸ್ಟೆೆಂಟ್ ಆಗಿ ನಾಲ್ಕು ವರ್ಷ ಕೆಲಸ ಮಾಡಿದರು. ಆನಂತರ ಮೈಸೂರಿನಲ್ಲಿ ವೃತ್ತಿಿ ಆರಂಭಿಸಿದರು.
ಇವರ ಪತ್ನಿಿ ಎಂ. ಡಿ. ಬೋಜಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ಶಿವಮೊಗ್ಗಕ್ಕೆೆ ವರ್ಗಾವಣೆಗೊಂಡಿದ್ದರಿಂದ 1972ರಿಂದ ಇಲ್ಲಿಯೇ ನೆಲೆಸಿ ವೃತ್ತಿಿಯನ್ನು ಮುಂದುವರೆಸಿದರು. ಅಂದು ಹೆಸರಾಂತ ವಕೀಲರಾಗಿದ್ದ ಎಚ್. ಎನ್. ಶ್ರೀನಿವಾಸರಾವ್ ಜೊತೆಯಲ್ಲಿ ಎಲ್ಲಾಾ ರೀತಿಯ ಕ್ರಿಿಮಿನಲ್ ಪ್ರಕರಣಗಳನ್ನು ನಡೆಸುತ್ತಿಿದ್ದರು. ಇಲ್ಲಿಂದ ಆರಂಭವಾದ ಅವರ ಯಶಸ್ಸಿಿನ ಪಯಣ ಇಂದಿಗೂ ಅಜರಾಮರವಾಗಿದೆ. ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಶಿಷ್ಯರನ್ನು ಅವರು ಉತ್ತಮ ನ್ಯಾಾಯವಾದಿಗಳನ್ನಾಾಗಿ ಮಾಡಿದ್ದಾಾರೆ.
ಅವರಲ್ಲಿ ಕೆಲವರೆಂದರೆ, ಎಸ್. ಟಿ. ರಂಗನಾಥ, ಕೆ. ಪಿ. ಗಾದಿಲಿಂಗಪ್ಪ, ಬಿ. ತೇಜಪ್ಪ, ಗೀತಾ ಶಿವಮೂರ್ತಿ, ಸರೋಜಾ ಚಂಗೊಳ್ಳಿಿ, ಪ್ರಭಾ ಗಿರಿಮಾಜಿ, ಹರಿಪ್ರಸಾದ್, ವಸಂತಮಾಧವ ಮೊದಲಾದವರು. ಶಿಷ್ಯರನ್ನೂ ಸಹ ತಮ್ಮಂತೆಯೇ ಶಿಸ್ತಿಿನ, ಪ್ರಾಾಮಾಣಿಕ ಹಾಗೂ ಕೌಶಲ್ಯಯುತ ವಕೀಲರನ್ನಾಾಗಿ ರೂಪಿಸಿದ್ದಾಾರೆ. ಇವರ ಪುತ್ರ ಭರತ್ ಬೆಳ್ಳಿಿಯಪ್ಪ ಸಹ ತಂದೆಯ ಗರಡಿಯಲ್ಲೇ ಬೆಳೆದು ಇಲ್ಲಿಯೇ ವೃತ್ತಿಿ ನಡೆಸುತ್ತಿಿದ್ದಾಾರೆ.   
ಜಿಲ್ಲಾಾ ವಕೀಲರ ಸಂಘದ ಅಧ್ಯಕ್ಷರಾಗಿ 1996-97, 99-2000ರಲ್ಲಿ ಕೆಲಸ ಮಾಡಿದ್ದಾಾರೆ. ಈ ಅವಧಿಯಲ್ಲಿ ಶಿವಮೊಗ್ಗ ವಕೀಲರ ಭವನ ನಿರ್ಮಾಾಣಕ್ಕೆೆ ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸುಲ್ಲಿ ಅವರು ಮಾಡಿದ ಯತ್ನ ಸ್ಮರಣೀಯ. 2001ರಲ್ಲಿ ರಾಜ್ಯ ವಕೀಲರ ಪರಿಷತ್ ಸದಸ್ಯರಾಗಿ, ಅದರ ಶಿಸ್ತು ಮೇಲ್ವಿಿಚಾರಣೆ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಾರೆ. ಇವರ ಪತ್ನಿಿ ಬೋಜಮ್ಮ 2009ರಲ್ಲಿ ನಿಧನಹೊಂದಿದ ನಂತರ ವೃತಿಯ ಕಡೆ ಹೆಚ್ಚಿಿನ ಗಮನವನ್ನು ಹರಿಸಲು ಸಾಧ್ಯವಾಗದೆ ನಿವೃತ್ತರಾಗಿದ್ದಾಾರೆ.
ಶಿವಮೊಗ್ಗ ಲಯನ್‌ಸ್‌ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾಾ ಕೊಡವ ಸಮಾಜದ ಅಧ್ಯಕ್ಷರಾಗಿ, ಕಾಂಗ್ರೆೆಸ್ ಸಕ್ರಿಿಯ ಕಾರ‌್ಯಕರ್ತರಾಗಿ ಸೇವೆ ಸಲ್ಲಿಸಿದ್ದಾಾರೆ. ಇಂತಹ ಅಜಾತಶತ್ರುವಿನ ಸಾರ್ಥಕ ಸೇವೆಯನ್ನು ಮನ್ನಿಿಸಿ, ಅವರ ಮಾರ್ಗದರ್ಶನದಲ್ಲಿ ಸಾಗಲು ಜಿಲ್ಲಾಾ ವಕೀಲರ ಸಂಘ ಸನ್ಮಾಾನಿಸಿದೆ. ಅವರ ಶಿಷ್ಯ ವೃಂದದವರು ಗುರುವಂದನೆಯನ್ನು ಸಲ್ಲಿಸಿದ್ದಾಾರೆ.

published on 26th oct-2019
...........................

Monday 4 November 2019

ವಯೊಲಿನ್ ಮಾಂತ್ರಿಿಕ  

ಹೊಸಳ್ಳಿಿ ವೆಂಕಟರಾಮ್


ಶಿವಮೊಗ್ಗ ನಗರದ ಪಕ್ಕದಲ್ಲಿರುವ ಹೊಸಹಳ್ಳಿಿ ಸಾಂಸ್ಕೃತಿಕವಾಗಿ ಶ್ರೀಮಂತ ಗ್ರಾಾಮ. ಸಂಸ್ಕೃತ, ಗಮಕ ಗ್ರಾಾಮವೂ ಹೌದು. ಇಲ್ಲಿನ ವಾಸಿಗಳಲ್ಲಿ, ಕಲೆ, ಸಂಸ್ಕೃತಿ ಹೇರಳವಾಗಿ ಹಾಸುಹೊಕ್ಕಾಾಗಿದೆ. ಈ ಗ್ರಾಾಮದಲ್ಲಿ ಮನೆಗೊಬ್ಬರಾದರೂ ಕಲಾ"ದರಿದ್ದಾಾರೆ. ಅದರಲ್ಲಿಯೂ ಪಿಟೀಲಿನಲ್ಲಿ (ವಯೊಲಿನ್) ಹೆಸರಾದ ಸಹೋದರರಿದ್ದಾಾರೆ ಅವರೇ ವೆಂಕಟರಾಂ ಮತ್ತು ಸುಬ್ಬರಾವ್.
 ಹೊಸಹಳ್ಳಿಿ ವೆಂಕಟರಾಮ್ ಈ ಬಾರಿಯ ಕರ್ನಾಟಕ ಸಂಗೀತ ಅಕಾಡೆ"ುಯ ಸದಸ್ಯರಾಗಿ ಆಯ್ಕೆೆಯಾಗಿದ್ದಾಾರೆ. ಇವರ ಅನೇಕ ವರ್ಷಗಳ ಸಂಗೀತ ವಾದನದ ತಪಸ್ಸಿಿಗೆ ಇದು ಸಂದ ಗೌರವ. ಸುಮಾರು 5 ದಶಕಗಳಿಂದ ಈ ಕ್ಷೇತ್ರದಲ್ಲಿ "ಶ್ವದಾದ್ಯಂತ ಹೆಸರು ಮಾಡಿದ ಅತ್ಯಂತ ಸರಳ ಮತ್ತು ಅಷ್ಟೇ ಸಹೃದಯ ಕಲಾ"ದ ಇವರು.
  ಮೈಸೂರಿನಲ್ಲಿ ಸಂಸ್ಕೃತ ಎಂ. ಎ. ಮುಗಿಸಿದ ನಂತರ ಮದ್ರಾಾಸ್‌ಗೆ ತೆರಳಿ ಅಲ್ಲಿ ಜಗದ್ವಿಿಖ್ಯಾಾತ ಪಿಟೀಲುವಾದಕ, ಪದ್ಮಭೂಷಣ ಲಾಲ್‌ಗುಡಿ ಜಯರಾಮ್ ಅವರಲ್ಲಿ ಸುಮಾರು 6 ವರ್ಷ ವಯೊಲಿನ್ ಕಲಿತು ಉತ್ತಮ ವಾದಕರೆನಿಸಿಕೊಂಡು ತವರಿಗೆ ಮರಳಿದರು. ಇಲ್ಲಿ ಉಚಿತವಾಗಿ ವಯೊಲಿನ್ ಶಿಕ್ಷಣವನ್ನು ನೀಡಿದರು. ಸ್ವತಃ ಅವರ ಸಹೋದರ ಸುಬ್ಬರಾವ್ ಅವರಿಗೆ ಗುರುವಾದರು. ಈಗ ಸುಬ್ಬರಾವ್ ಸಹ ಅನಂತರಾಮ್ ಅವರಂತೆಯೇ ಅದ್ಭುತ ಸಾಧಕರಾಗಿದ್ದಾಾರೆ.
1975ರಲ್ಲಿ ಮೊಟ್ಟಮೊದಲ ಕಾರ‌್ಯಕ್ರಮವನ್ನು  ಮೈಸೂರಿನಲ್ಲಿ ತ್ಯಾಾಗರಾಜ ಜಯಂತಿಯಲ್ಲಿ ನೀಡುವ ಮೂಲಕ ಅಪರ ಜನಮೆಚ್ಚುಗೆ ಗಳಿಸಿದರು. ಅಲ್ಲಿಂದ ಶುರುವಾದ ಇವರ ಯಶಸ್ವಿಿಗಾಥೆ ಇಲ್ಲಿಯವೆರೆಗೂ ಅದೇ ಹಾದಿಯಲ್ಲಿ ಸಾಗಿಬಂದಿದೆ.  ಮಂಗಳೂರು ಆಕಾಶವಾಣಿಯ ಬಿ ಗ್ರೇಡ್ ಕಲಾ"ದರಾಗಿ , ದೂರದರ್ಶನ ಮತ್ತು ಉದಯ ಟಿ"ಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾರೆ.  ಸಹೋದರ ಸುಬ್ಬರಾವ್ ಜೊತೆ ಸೇರಿ ದೇಶದ ಹಲವು ನಗರಗಳಲ್ಲಿ ಕಾರ‌್ಯಕ್ರಮ ಕೊಟ್ಟಿಿದ್ದಾಾರೆ. ಇವರು "ರಿಯ ಗಾಯಕರಾದ ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, "ದ್ಯಾಾಭೂಷಣ, ಲಂಡನ್‌ನ ಜಾನ್ ಮಾರ್, ಕದ್ರಿಿ ಗೋಪಾಲನಾಥ, ಮಾಸ್ಟರ್ ಶಶಾಂಕ್ ಮೊದಲಾದವರಿಗೆ ವಯೊಲಿನ್ ಸಾಥ್ ನೀಡಿದ ಕೀರ್ತಿ ಹೊಂದಿದ್ದಾಾರೆ.   
1986-8ರಲ್ಲಿ ರಶ್ಯಾಾ ಉತ್ಸವದಲ್ಲಿ ಪಾಲ್ಗೊೊಂಡು ಜನಮನಸೆಳೆದ ಅಸೀಮ ಕಲಾ"ದ ಇವರು. ಲಂಡನ್‌ನ ಭಾರತೀಯ "ದ್ಯಾಾಭವನ್ ಮತ್ತು ಯುಎಇಯಲ್ಲಿ, ಶ್ರೀಲಂಕಾದಲ್ಲಿ ತಮ್ಮ ವಯೊಲಿನ್ ಕಛೇರಿ ನಡೆಸಿದ್ದಾಾರೆ. ಇವರ ಸಾಧನೆಗೆ ನಾದಶ್ರೀ, ಕರ್ನಾಟಕ ಗಾನಕಲಾ ತಪಸ್ವಿಿ, ತಂತಿವಾದ್ಯ ಪ್ರ"ೀಣ, ನಾಟ್ಯಶ್ರೀ, ಕಲಾದೀಪ್ತಿಿ, ಸಂಗೀತ ಕಲಾ ತಪಸ್ವಿಿ ಮೊದಲಾದ ಬಿರುದುಗಳು ನೀಡಲ್ಪಟ್ಟಿಿವೆ. ಕರ್ನಾಟಕ ಗಾನಕಲಾ ಪರಿಷತ್‌ನ ಎಕ್‌ಸ್‌‌ಪರ್ಟ್ ಸ"ುತಿಯ ಸದಸ್ಯರಾಗಿ,  ನವದೆಹಲಿಯ ಸಿಸಿಆರ್‌ಟಿಯ ಪ್ರಾಾದೇಶಿಕ ಸ"ುತಿಯ ಸದಸ್ಯರಾಗಿ, ಹೊಸಹಳ್ಳಿಿಯ ಸಂಕೇತಿ ಸಂಗೀತ ಸಭಾದ ಸದಸ್ಯರಾಗಿ ಕೆಲಸ ಮಾಡುತ್ತಿಿದ್ದಾಾರೆ.
 ಮಣಿಪಾಲದ ಮಾಹೆ "ಶ್ವ"ದ್ಯಾಾಲಯದ ಅಕಾಡೆ"ು ಆಫ್ ಮ್ಯೂಸಿಕ್ ಮತ್ತು ಡಾನ್‌ಸ್‌‌ನಲ್ಲಿ 12 ವರ್ಷದಿಂದ ಕಲಿಸುತ್ತಿಿರುವ ವೆಂಕಟರಾಮ್, ಸುಮಾರು 200 ಮಕ್ಕಳಿಗೆ ವಯೊಲಿನ್ ತರಬೇತಿಯನ್ನು ಸ್ವಗ್ರಾಾಮದಲ್ಲಿ ಕೊಟ್ಟಿಿರುವ ಹೆಗ್ಗಳಿಕೆ ಹೊಂದಿದ್ದಾಾರೆ. ಸುತ್ತೂರು ಮಠ, ಬೆಂಗಳೂರಿನ ಗಾಯನ ಸಮಾಜದಲ್ಲಿ ಕಾರ‌್ಯಕ್ರಮ ನೀಡಿ ""ಧ ಬಿರುದು, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಇವರ ಅನುಪಮ ಸೇವೆ, ಶಾಸ್ತ್ರೀಯ ಮತ್ತು ಪಾರಂಪರಿಕೆಯ ಕಲೆಯನ್ನು ಮೆಚ್ಚಿಿ ಅನೇಕ ಸಂಘ- ಸಂಸ್ಥೆೆಗಳು ಗೌರ"ಸಿವೆ. 2008ರ ಮೈಸೂರು ದಸರಾದಲ್ಲೂ ಕಾರ‌್ಯಕ್ರಮ ನೀಡಿದ್ದಾಾರೆ.
   ತಮ್ಮ ಸಹೋದರನೊಂದಿಗೆ ನಡೆಸಿದ ದ್ವಂದ್ವ ಪಿಟೀಲು ವಾದನದ ಸಿಡಿ ಮಧುರಮೋಹನಂ ಸಹ ಬಿಡುಗಡೆ ಮಾಡಿದ್ದಾಾರೆ. ಪಿಟೀಲು ಕಲಿಕೆ ಕಷ್ಟ, ಆದರೆ, ನುಡಿಸುವುದು ಸುಲಭ ಎನ್ನುತ್ತಾಾರೆ ವೆಂಕಟರಾಮ್.
published on Nov 2.2019
 .................................

Saturday 28 September 2019



ಅಡಿಕೆ "ಷಯದಲ್ಲಿ ಡಿ.ಲಿಟ್ 
ಕಡಿದಾಳ್ ಗೋಪಾಲ್


 ಕೃಯ ಬಗ್ಗೆೆ ಇಂದು ಆಸಕ್ತಿಿ ಕಡಿಮೆಯಾಗುತ್ತಿಿರುವ ವೇಳೆಯೇ ಅದರಲ್ಲಿ "ಶೇಷ ಕಾಳಜಿ ಹೊಂದಿ, ತಮ್ಮ ಅಪಾರ ಅನುಭವದೊಂದಿಗೆ ಸಮಗ್ರ ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿದ ನಗರದ ಅಡಿಕೆ ವರ್ತಕ ಕಡಿದಾಳ್ ಗೋಪಾಲ್ ಹಂಪಿ ಕನ್ನಡ "ಶ್ವ"ದ್ಯಾಾಲಯದಿಂದ ಗೌರವ ಡಾಕ್ಟರೆಟ್ (ಡಿ. ಲಿಟ್) ಪಡೆದಿದ್ದಾಾರೆ. ಕರ್ನಾಟಕದಲ್ಲಿ ಅಡಿಕೆ ಕೃ: ಆರ್ಥಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎಂಬ ಈ ಗ್ರಂಥ ಅಡಿಕೆ ಬೆಳೆಯುವ ಪ್ರದೇಶದ ಯುವ ಜನಾಂಗಕ್ಕೆೆ ದಾರಿದೀಪವಾಗಿದೆ.
ಕಡಿದಾಳ್ ಗೋಪಾಲ್ ಹೆಸರು ಜಿಲ್ಲೆೆಯಲ್ಲಿ ಚಿರಪರಿಚಿತ. ತೀರ್ಥಹಳ್ಳಿಿ ತಾಲೂಕು ಹಾರೊಗೊಳಿಗೆ ಗ್ರಾಾಮದವರಾದ ಇವರು ಕೃಕ ಕುಟುಂಬದವರು. ಎಸ್ ಎಸ್‌ಎಲ್‌ಸಿಯವರೆಗೆ ಓದಿದ ನಂತರ "ದ್ಯಾಾಭ್ಯಾಾಸಕ್ಕೆೆ ಗುಡ್‌ಬೈ ಹೇಳಿ  ಅಡಿಕೆ ಕೃಗೆ ತಮ್ಮನ್ನು ತೊಡಗಿಸಿಕೊಂಡವರು. ಶಿವಮೊಗ್ಗ ಗ್ರಾಾಮಾಂತರ ಪ್ರದೇಶದಲ್ಲಿ ಅಡಿಕೆ ಕೃ ಮುಂದುವರೆಸುತ್ತಲೇ ಸುಮಾರು 50 ವರ್ಷದಿಂದ ಪ್ರಸಿದ್ಧ ಅಡಿಕೆ ವ್ಯಾಾಪಾರಸ್ಥರಾಗಿಯೂ ಹೆಸರುಗಳಿಸಿದ್ದಾಾರೆ. 
ಪ್ರಗತಿಪರ ಅಡಿಕೆ ಕರಕರಾಗಿರುವ ಗೋಪಾಲ್, ಮಾಜಿ ಮುಖ್ಯಮಂತ್ರಿಿ ಕಡಿದಾಳ್ ಮಂಜಪ್ಪ ಅವರ ಕುಟುಂಬದವರು, ಅಷ್ಟೇ ಅಲ್ಲ, ಹೋರಾಟಗಾರ, ಚಿಂತಕ, ಬರಹಗಾರ, ಕೃಕ ಕಡಿದಾಳು ಶಾಮಣ್ಣ ಅವರ ಸಹೋದರರೂ ಹೌದು. ಇವರು ಅಡಿಕೆ ಬೆಳೆಗಾರರ ನೂರಾರು ಸಮಾವೇಶದಲ್ಲಿ ಭಾಗವ"ಸಿದವರು. ಸಾಕಷ್ಟು ಸ್ಥಳಗಳಲ್ಲಿ ಅಡಿಕೆ ಬಗ್ಗೆೆ ಕಾರ್ಯಾಾಗಾರ, ಗ್ಠೋೋ ನಡೆಸಿಕೊಟ್ಟವರು. ತಮ್ಮ ಅನುಭವದ ಆಧಾರದಲ್ಲಿ ಮತ್ತು ಸ್ನೇ"ತರ ಮನ"ಯ ಮೇರೆಗೆ ಅಡಿಕೆ ಕೃಯ, ಮಾರುಕಟ್ಟೆೆಯ ಬಗ್ಗೆೆ ಗ್ರಂಥ ಬರೆದು ಅದಕ್ಕೆೆ ಜನಮನ್ನಣೆ ಸಿಗುವಂತೆ ಮಾಡಿದ್ದಾಾರೆ.
ಗೋಪಾಲ್ ತಮ್ಮ 65ನೆಯ ವಯಸ್ಸಿಿನಲ್ಲಿ ಮೈಸೂರಿನ ಕರ್ನಾಟಕ ಮುಕ್ತ ""ುಂದ ಎಂಎಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದಾಾರೆ.  ಇದರೊಟ್ಟಿಿಗೆ ಅಡಿಕೆ ಬಗ್ಗೆೆ ಚಿಕ್ಕಂದಿನಿಂದಲೂ ಕಾಳಜಿ ಇದ್ದುದರಿಂದಲೋ ಏನೋ, ಅದರ ಅಧ್ಯಯನಕ್ಕಾಾಗಿ, ಮಾರುಕಟ್ಟೆೆ, ಉಪಉತ್ಪನ್ನ, ಆಧುನಿಕ ಕೃ ಪದ್ದತಿ ಅರಿಯಲು ಅಡಿಕೆ ಬೆಳೆಯುವ ಹತ್ತಾಾರು ದೇಶಗಳಿಗೆ ತೆರಳಿ ಮಾ"ತಿ ಪಡೆದುಕೊಂಡು ಬಂದಿದ್ದಾಾರೆ. ತಮ್ಮ ಅನುಭವಗಳನ್ನು ಗ್ರಂಥದಲ್ಲಿ ದಾಖಲಿಸಿದ್ದಾಾರೆ. ಈ ಗ್ರಂಥವನ್ನು ಬರೆಯುವಲ್ಲಿ ಮತ್ತು ಶೈಕ್ಷಣಿಕವಾಗಿ ಇದನ್ನು ತಯಾರು ಮಾಡುವಲ್ಲಿ ಅವರಿಗೆ ನೆರವಾದವರು ಶಿವಮೊಗ್ಗ ಕೃ, ತೋಟಗಾರಿಕಾ  "ಶ್ವ"ದ್ಯಾಾಲಯದ ಮಾಜಿ  ಡೀನ್ ಪ್ರೊ. "ಘ್ನೇಶ್ ಮಂಚಾಲೆ ಅವರು.
ಜಿಲ್ಲಾಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ಶ್ರೀನಿಧಿ ಎಜುಕೇಶನ್ ಸಂಸ್ಥೆೆಯ ಸಂಸ್ಥಾಾಪಕರಾಗಿ, ರೋಟರಿ ಸೇರಿದಂತೆ ""ಧ ಸಾಮಾಜಿಕ ಸೇವಾಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿರುವ ಇವರು, ಯಾವುದೇ ರೀತಿಯ ಹೆಸರಿಗಾಗಲಿ, ಪದ" ಪಡೆಯುವ ಉದ್ದೇಶಕ್ಕಾಾಗಲಿ ತಾನು ಈ ಗ್ರಂಥ ಬರೆದಿಲ್ಲ. ಅಡಿಕೆ ಬೆಳಯುವ ಪ್ರದೇಶದವರಿಗೆ ಮತ್ತು ಯುವಜನರು ಈ ಕೃಯಲ್ಲಿ ತೊಡಗಿಕೊಳ್ಳಲು ಅನುವಾಗಲಿ, ತನ್ನಲ್ಲಿರುವ ಮಾ"ತಿ ಇತರರಿಗೆ ತಲುಪಲಿ ಎಂಬ "ನ್ನೆೆಲೆಯಲ್ಲಿ ಸ್ವತಂತ್ರವಾಗಿ ಅಧ್ಯಯನ ಮಾಡಿ ಬರೆದಿದ್ದಾಾಗಿ ಹೇಳುತ್ತಾಾರೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದದ ಅಡಿಕೆ ಇಂದಿಗೂ ಸಮಸ್ಯೆೆಗಳ ಸುಳಿಯಲ್ಲೇ ಇದೆ. ಇದರ ಐತಿಹಾಸಿಕ, ಸಾಂಸ್ಕೃತಿಕ, ಚಾರಿತ್ರಿಿಕ ಮಹತ್ವವನ್ನು ಜನರಲ್ಲಿ ಮೂಡಿಸುವುದು, ಸಂಸ್ಕರಣೆ, ಮಾರಾಟ, ವೈಜ್ಞಾಾನಿಕ ಪದ್ದತಿ, ಸರ್ಕಾರದ ನೀತಿಯ ಬಗ್ಗೆೆ ಅರಿವು ಉಂಟುಮಾಡುವ "ಚಾರಗಳನ್ನು ಈ ಗ್ರಂಥದಲ್ಲಿ ಅವರು ಪ್ರಸ್ತಾಾಪಿಸಿದ್ದಾಾರೆ. ಪ್ರಸ್ತುತ ಕಾಲಕ್ಕೆೆ ಇಂತಹ ಗ್ರಂಥದ ಅವಶ್ಯಕತೆ ಇದೆ. ಕೃ ಸಮಸ್ಯೆೆ ಗಂಭೀರವಾಗಿದೆ. ಇದನ್ನು ನೋಡಿಕೊಳ್ಳುವವರೇ ಇಲ್ಲದ ಸ್ಥಿಿತಿ ನಿರ್ಮಾಾಣವಾಗುತ್ತಿಿದೆ. ಆಧುನಿಕತೆಯನ್ನು ಅಳವಡಿಸಿಕೊಳ್ಳಲು ಸಣ್ಣ ರೈತರಿಗೆ ಸಾಧ್ಯವಾಗದ ಸ್ಥಿಿತಿ ಇದೆ. ಬೆಲೆಯ ಏರುಪೇರು ಈ ಎಲ್ಲ "ಚಾರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ  ಇದರಲ್ಲಿ ದಾಖಲಿಸಿದ್ದಾಾರೆ. 
28-9-2014
,,,,,,,,,,,,,,,,,,,,,,,,,,,,,,,,,,,

ಸಾಹಿತ್ಯದ ಹೊಸ ಪ್ರತಿಭೆ  
ಗಾರ್ಗಿ ಸೃಷ್ಟೀಂದ್ರ


 ಪ್ರತಿಭೆ ಪ್ರತಿ ಮಕ್ಕಳಲ್ಲಿಯೂ ಇರುತ್ತದೆ. ಆದರೆ ಅದು ಬೆಳಕಿಗೆ ಬರಬೇಕಾದರೆ ಅವಕಾಶ ಸಿಗಬೇಕು. ಮಕ್ಕಳು ಚಿಕ್ಕ ಸಂಗತಿಯನ್ನೂ ಸಂಭ್ರಮದಿಂದ ನೋಡಬೇಕು. ನಿರೀಕ್ಷೆ, ಕುತೂಹಲ ಉಳಿಸಿಕೊಂಡು ಸಿಗುವ ಅವಕಾಶವನ್ನು ಬಳಸಿಕೊಳ್ಳುವ ಆತ್ಮವಿಶ್ವಾಾಸ ಬೆಳೆಸಿಕೊಳ್ಳಬೇಕು.
ಆಧುನಿಕ ತಂತ್ರಜ್ಞಾಾನದ ಕಾಲಘಟ್ಟದಲ್ಲಿ ಮಕ್ಕಳು ಬದುಕನ್ನು, ಸಮಾಜವನ್ನು  ಹೇಗೆ ನೋಡುತ್ತಿಿದ್ದಾಾರೆ ಎನ್ನುವುದು ತೀರಾ ಮುಖ್ಯ.
 ಗಾರ್ಗಿ ಸೃಷ್ಟೀಂದ್ರ ಸಾಗರ ತಾಲೂಕು ಬಂದಗದ್ದೆೆಯ ವಿದ್ಯಾಾರ್ಥಿನಿ. ಕತೆ, ಕವನ, ನಾಟಕಗಳನ್ನು ಬರೆದಿದ್ದಾಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಬರವಣಿಗೆ ಮೂಲಕ ಸಂವೇದನೆ ಹೇಳಲು ಇವರಿಗೆ ಸಾಧ್ಯವಾಗಿದೆ. ಕನ್ನಡದ ಮೂಲಕ ಈಗ  ಬೆಳೆಯುತ್ತಿಿದ್ದಾಾರೆ. ಇದಕ್ಕಾಾಗಿಯೇ ಜಿಲ್ಲಾಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯನ್ನಾಾಗಿ ಇವರನ್ನು ಆಯ್ಕೆೆ ಮಾಡಲಾಗಿದೆ.
 ಬಂದಗದ್ದೆೆಯ ಕೃಷಿಕ ಶೈಲೇಂದ್ರ ಬಂದಗದ್ದೆೆ ಮತ್ತು ಸರಸ್ವತಿ ಹೆಗಡೆ ಅವರ ಪುತ್ರಿಿ.  ಸಾಗರದ ನಿರ್ಮಲಾ ಬಾಲಕಿಯರ ಪ್ರೌೌಢಶಾಲೆಯಲ್ಲಿ 10ನೆಯ ತರಗತಿ ಓದುತ್ತಿಿದ್ದಾಾಳೆ. ಶೈಲೇಂದ್ರ ಬಂದಗದ್ದೆೆ ಕೂಡ ತಮ್ಮ ಕವಿತೆ, ಲೇಖನದ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾಾರೆ. ಹೆಗ್ಗೋೋಡಿನ ನೀನಾಸಂ ಜತೆ ಅವರ ನಿಕಟ ಸಂಪರ್ಕವಿದೆ. ಸರಸ್ವತಿ ಹೆಗಡೆ ಕೂಡ ಯಕ್ಷಗಾನ ಕುಟುಂಬದ ಹಿನ್ನೆೆಲೆಯಿಂದ ಬಂದವರು. ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾಾರೆ.
ಇಂಥ ವಾತಾವರಣದಲ್ಲಿ ಬೆಳೆದ ಗಾರ್ಗಿ ಸಹಜವಾಗಿ ಓದು, ಬರವಣಿಗೆಯಲ್ಲಿ ಆಸಕ್ತಿಿ ಬೆಳೆದಿದೆ. ಸತತ ಮೂರು ವರ್ಷ ಪ್ರಾಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ’ಕಥೆ ಹೇಳುವ ಸ್ಪರ್ಧೆ’ ಯಲ್ಲಿ ಶಿವಮೊಗ್ಗ ಜಿಲ್ಲೆೆಗೆ ಪ್ರಥಮ ಸ್ಥಾಾನ ಪಡೆದುಕೊಂಡಿದ್ದಾಾರೆ. 8 ನೇ ವಯಸ್ಸಿಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ’ಅಮ್ಮ’ ಮತ್ತು ’ಅಕ’್ಕ ಕವಿತೆಗಳು ಜನಮೆಚ್ಚುಗೆ ಗಳಿಸಿತು. ಶಿವಮೊಗ್ಗದಲ್ಲಿ ನಡೆದ ’ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ’ಕನಸು’ ಆಶುಕವನಕ್ಕೆೆ ಪ್ರಥಮ ಸ್ಥಾಾನ ಲಭಿಸಿದೆ.
2013 ಮತ್ತು 2014 ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಿಯಲ್ಲಿ ಇವರು ಭಾಗವಹಿಸಿದ್ದರು. ಈ ವರ್ಷ ಶಿಕ್ಷಣ ಇಲಾಖೆ ಹಾಗೂ ಪ್ರಾಾಚ್ಯ ವಸ್ತುಗಳ ಸಂಶೋಧನಾ ಇಲಾಖೆ ವತಿಯಿಂದ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಹಾಗೂ ಟಿಪ್ಪು ಸಹರಾ ಯುವಜನ ಸಂಘ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆೆ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಪಡೆದಿದ್ದಾಾರೆ. ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾಾನ ಪಡೆದಿದ್ದಾಾರೆ.
ಗಾರ್ಗಿಯವರು ಕರಿಬೇವು ಎಂಬ ನಾಟಕ ಬರೆದಿದ್ದಾಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾಾರೆ.  ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾಾರೆ.
ಮಕ್ಕಳಿಗೆ ಸಾಹಿತ್ಯ ಸ್ಫೂರ್ತಿ ತುಂಬಿದಾಗ ಅವರಲ್ಲಿ ಬೌದ್ಧಿಿಕ ವಿಕಾಸವಾಗುತ್ತದೆ. ಸಾಹಿತ್ಯ, ಸಂಗೀತ, ಕಲೆಗಳಿಂದ ಜೀವನ ಮೌಲ್ಯ ಹೆಚ್ಚುತ್ತದೆ ಎನ್ನುವ ಮಾತಿದೆ. ಇದನ್ನು ಗಾರ್ಗಿ ಪಾಲಕರು ಮಾಡಿದ್ದಾಾರೆ.
 ಪಠ್ಯೇತರ ಚಟುವಟಿಕೆಯಲ್ಲದೇ ಶಾಲಾ ಪಠ್ಯದಲ್ಲೂ ಗಾರ್ಗಿ ಹಿಂದೆ ಬಿದ್ದಿಲ್ಲ. ಇಂಥ ಬಹುಮುಖ ಪ್ರತಿಭೆ ಹೊಸಗುಂದದಲ್ಲಿ ನಡೆಯುವ ಮಕ್ಕಳ ಜಿಲ್ಲಾಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪೀಠ ಅಲಂಕರಿಸುವ ಅವಕಾಶ ಪಡೆದಿದ್ದಾಾರೆ.
21.9.2019 
.....................
ಶಿಕ್ಷಕರಿಗೆ ಮಾದರಿ
ರತ್ನಾಾಕುಮಾರಿ


ವಿಜ್ಞಾಾನ ಮತ್ತು ತಂತ್ರಜ್ಞಾಾನದ ಕಾಲದಲ್ಲಿರುವ ನಾವು ನಮ್ಮ ಮಕ್ಕಳಿಗೆ ಅತ್ಯಾಾಧುನಿಕ ಮಾದರಿಯಲ್ಲಿ ಶಿಕ್ಷಣ ಕೊಡಿಸುವಲ್ಲಿ ವಿಫಲರಾಗಿದ್ದೇವೆ. ಆದರೆ ಕೆಲವು ಗ್ರಾಾಮಾಂತರ ಶಾಲೆಗಳಲ್ಲಿ ನಾವಿನ್ಯವಾಗಿ ಮತ್ತು ಕ್ರಿಿಯಾತ್ಮಕವಾಗಿ ಕಲಿಸುವುದರ ಮೂಲಕ, ಶಾಲೆಯ ಅಭಿವೃಧಿಯನ್ನೂ ಸಹ ಶಿಕ್ಷಕರು ಮಾಡುತ್ತಿಿದ್ದಾಾರೆ. ತಮ್ಮದೇ ಶಾಲೆ ಎಂಬಂತೆ ಮಮತೆಯಿಂದ ನೋಡಿಕೊಳ್ಳುತ್ತಿಿದ್ದಾಾರೆ. ಇಂತಹ ಉತ್ತಮ ವಾತಾವರಣ ಸೃಷ್ಟಿಿದ್ದರಿಂದ ಇಂದು ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆೆ ನಿಧಾನವಾಗಿ ಏರತೊಡಗಿದೆ.
ಎಸ್. ರತ್ನಾಾಕುಮಾರಿ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲಾ ಮುಖ್ಯಶಿಕ್ಷಕಿ. ಇವರು ಈ ಶಾಲೆಯ ಅಭಿವೃದ್ಧಿಿಗೆ ತಮ್ಮನ್ನು ಸಮರ್ಪಿಸಿಕೊಂಡವರು. ಸತತ ಯತ್ನದಿಂದ ಇಂದು ಈ ಶಾಲೆ ಹಲವು ಪ್ರಶಸ್ತಿಿಗಳನ್ನು ಬಾಚಿಕೊಂಡಿದೆ. ಇಷ್ಟೇ ಅಲ್ಲ, ಈ ಬಾರಿಯ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಿ ರತ್ನಾಾಕುಮಾರಿ ಅವರಿಗೆ ನೀಡಲ್ಪಟ್ಟಿಿದೆ.
ಒಬ್ಬ ಶಿಕ್ಷಕಿ ಮನಸ್ಸು ಮಾಡಿದರೆ ಯಾವರೀತಿ ಶಾಲೆಯನ್ನು ಅಭಿವೃದ್ಧಿಿಗೊಳಿಸಬಹುದು ಎನ್ನುವುದಕ್ಕೆೆ ರತ್ನಾಾಕುಮಾರಿ ಉದಾಹರಣೆ. ಇವರ ಆಸಕ್ತಿಿಯ ಪರಿಣಾಮವಾಗಿ  ಶಾಲಾಆವರಣ ಇಂದು ಹಸಿರಿನಿಂದ ಕಂಗೊಳಿಸುತ್ತಿಿದೆ. ಪರಿಸರದ ಬಗ್ಗೆೆ ಕಾಳಜಿ ಮತ್ತು ಜಾಗೃತಿಯನ್ನು ಮಕ್ಕಳಲ್ಲಿ ಹುಟ್ಟುಹಾಕಿದ್ದರಿಂದ ಮಕ್ಕಳೂ ಸಹ ಪರಿಸರಾತ್ಮಕವಾಗಿ ಬೆಳೆಯುತ್ತಿಿದ್ದಾಾರೆ. ಉತ್ತಮ ಔಷಧ ವನವನ್ನು ಸೃಷ್ಟಿಿಸಿದ್ದರಿಂದ  ಧನ್ವಂತರಿ ಪ್ರಶಸ್ತಿಿ ಈ ಶಾಲೆಗೆ ಕೊಡಲ್ಪಟ್ಟಿಿದೆ. ಪರಿಸರಮಿತ್ರ ಪ್ರಶಸ್ತಿಿಯೂ ದಕ್ಕಿಿದೆ. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಒಂದನೆಯ ತರಗತಿಯಿಂದಲೇ ಆರಂಭಿಸಲಾಗಿದೆ. ಶಾಲೆಗೆ ಲೇಖನ ಸಾಮಗ್ರಿಿಗಳನ್ನು ಪ್ರತಿವರ್ಷ ಬೆಂಗಳೂರು ಮತ್ತು ತೀರ್ಥಹಳ್ಳಿಿಯ ಹಲವು ಸಂಘ-ಸಂಸ್ಥೆೆಗಳ ನೆರವಿನಿಂದ ಉಚಿತವಾಗಿ ಕೊಡಿಸುತ್ತಿಿದ್ದಾಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ವಾತಾವರಣವನ್ನೂ ಸಹ ಬಿತ್ತುತ್ತಿಿದ್ದಾಾರೆ. 
ಮಕ್ಕಳಿಗೆ ಉತ್ತಮ ಪ್ರಾಾಥಮಿಕ ಶಿಕ್ಷಣ ದೊರೆಯಬೇಕೆಂಬ ಕನಸನ್ನು ಹೊತ್ತಿಿರುವ ಇವರು, ಅದಕ್ಕಾಾಗಿ ಹೆಜ್ಜೆೆ ಇಟ್ಟಿಿದ್ದಾಾರೆ. ಸಹೋದ್ಯೋೋಗಿ ಶಿಕ್ಷಕರು ಮತ್ತು ಗ್ರಾಾಮಸ್ಥರು  ಮತ್ತು ಎಸ್‌ಡಿಎಂಸಿಯವರ ನೆರವನ್ನು ಇದಕ್ಕಾಾಗಿ ಪಡೆಯುತ್ತಿಿದ್ದಾಾರೆ. ಶಾಲೆಯ ಅಭಿವೃದ್ಧಿಿಗೆ ಸುಮಾರು 11 ಲಕ್ಷ ರೂ. ಗಳನ್ನು  ದೇಣಿಗೆಯಾಗಿ ಸಂಗ್ರಹಿಸಿದ್ದಾಾರೆ. ಹಳೆಯ ವಿದ್ಯಾಾರ್ಥಿಗಳು, ಕೆಲವು ಕಂಪನಿಗಳು ಇಲ್ಲಿಯ ಶಾಲಾ ಪರಿಸರವನ್ನು ಗಮನಿಸಿ ಈ ನೆರವು ನೀಡಿದ್ದಾಾರೆ.
17 ವರ್ಷಗಳಿಂದ ಇಲ್ಲಿ ಶಿಕ್ಷಕಿಯಾಗಿರುವ ರತ್ನಾಾಕುಮಾರಿ, ಶಾಲೆಯನ್ನು ಜಿಲ್ಲೆೆಯಲ್ಲೇ ಮಾದರಿಯನ್ನಾಾಗಿ ಮಾಡಿದ್ದಾಾರೆ. ಕಲಿಕೆ ಎನ್ನುವುದು ಕೇವಲ ನಾಲ್ಕು ಗೋಡೆಯ ಮಧ್ಯಕ್ಕಷ್ಟೇ ಸೀಮಿತವಾಗಬಾರದು. ವಿವಿಧ ವಿಧಾನದ ಕಲಿಕೆಗೆ ಒತ್ತು ಕೊಡಬೇಕು. ಸುಮಾರು 32 ರೀತಿಯ ಕಲಿಕಾ ಸಾಮರ್ಥ್ಯಗಳನ್ನು ಕೊಠಡಿಯ ಹೊರಗೆ ಶಾಲೆಯಲ್ಲಿ ತಮ್ಮ ಶಾಲೆಯಲ್ಲಿ ಕಲಿಸಲಾಗುತ್ತಿಿದೆ ಎನ್ನುತ್ತಾಾರೆ.
ಈ  ಶಾಲೆ ಒಂದು ಹಂತದಲ್ಲಿ ಮಕ್ಕಳಿಲ್ಲದೆ ಮುಚ್ಚುವ ಸ್ಥಿಿತಿ ತಲುಪಿತ್ತು. ಆಗ ಇದಕ್ಕೆೆ ಉತ್ತರವಾಗಿ ರತ್ನಾಾಕುಮಾರಿ ಅವರು ಮಾಡಿದ ನಾನಾ ಕಸರತ್ತುಗಳು ಫಲಕೊಟ್ಟಿಿವೆ. 1ರಿಂದ 7ನೆಯ ತರಗತಿಯವರೆಗೆ ಇಲ್ಲಿ  47 ಮಕ್ಕಳಿರುವರಾದರೂ, ಇವರಲ್ಲಿ 8-10 ಕಿ. ಮೀ ದೂರದಿಂದ ಬರುವ ಮಕ್ಕಳೇ ಹೆಚ್ಚು. ಕಳೆದ ವರ್ಷ ಇವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಮಕ್ಕಳು ಮತ್ತು ಗ್ರಾಾಮಸ್ಥರು ಪ್ರತಿಭಟನೆ ನಡೆಸಿ ಶಿಕ್ಷಕಿಯನ್ನು ಮತ್ತೆೆ ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಿಯಾಗಿದ್ದಾಾರೆ. ಶಿಕ್ಷಕಿಯ ಸಮರ್ಪಣಾ ಭಾವ, ಶಾಲೆಯ ಪ್ರಗತಿಗೆ ತಮ್ಮನ್ನು ಅರ್ಪಿಸಿಕೊಂಡಿರುವುದು  ಇದಕ್ಕೆೆ ಕಾರಣ.
ಇವರ ಸಾಧನೆ ಗಮನಿಸಿ ಬೆಂಗಳೂರಿನ ಟೈಮ್‌ಸ್‌ ಬಳಗದ ಇನೋವೇಟಿವ್ ಟೀಚರ್ ಪ್ರಶಸ್ತಿಿ, ತಾಲೂಕು ಶಿಕ್ಷಕ ಪ್ರಶಸ್ತಿಿ, ಜಿಲ್ಲಾಾ ಶಿಕ್ಷಕ ಪ್ರಶಸ್ತಿಿ ಇವರಿಗೆ ಸಂದಿದೆ.
14 sept,2019
.................................
   

Saturday 7 September 2019

ಪ್ರಬುದ್ಧ ನಾಟ್ಯ ಕಲಾವಿದೆ
ಕವನಾ ಪ್ರಭು


ಭಾರತೀಯರಿಗೆ ಕಲೆ ಎನ್ನುವುದು ಉಪಾಸನಾ ದಿವ್ಯವಾಗಿದೆ. ಈ ಕಲೆಯು ಚಿತ್ರವಾಗಿ, ಶಿಲ್ಪವಾಗಿ, ನೃತ್ಯವಾಗಿ, ಸಂಗೀತವಾಗಿ, ಜನಪದರ ಬದುಕಿಗೆ ಸುಖವಾಗಿ, ಹಿತವಾಗಿ ಜನಪದ ಕಲೆಯೆನಿಸಿ ಬುದ್ಧಿಿಭಾವಗಳ ಸಂಸ್ಕಾಾರದೊದಿಗೆ ತಾನೂ ಸಂಸ್ಕಾಾರಗೊಳ್ಳುತ್ತಿಿದೆ. ಜೀವನದರ್ಶನ ಮತ್ತು ಆತ್ಮದರ್ಶನ ಮಾಡಿಸುವ ಈ ಕಲೆಗಳಲ್ಲಿ ಭರತನಾಟ್ಯ ಕಲಿಕೆಗೆ ಇಂದು ಹೆಚ್ಚಿಿನ ಮಹತ್ವ ಬಂದಿದೆ. ಕಲಿಕಾರ್ಥ ಎಷ್ಟು ತನ್ಮಯತೆ ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾನೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನಯಿಸಲು ಅವನು ಶಕ್ತನಾಗುತ್ತಾಾನೆ. ಶಿವಮೊಗ್ಗ ನಗರದಲ್ಲಿ ಇಂದಿನ ಯುವಪೀಳಿಗೆ ವಿಶೇಷವಾಗಿ ಭರತನಾಟ್ಯದೆಡೆ ಸೆಳೆಯಲ್ಪಡುತ್ತಿಿದೆ. ಇದೊಂದು ವಿಶೇಷ ಬೆಳವಣಿಗೆ ಎನ್ನಬಹುದು.
ನಗರದಲ್ಲಿ ನಟನಂ ಬಾಲನಾಟ್ಯ ಕೇಂದ್ರ ಭರತನಾಟ್ಯ ಕಲಿಕೆಗೆ ಹೆಸರುವಾಸಿ. ಇದರ ಗುರು ವಿದ್ವಾಾನ್ ಕೇಶವಕುಮಾರ್ ಪಿಳ್ಳೈ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ಪ್ರತಿವರ್ಷ ಭರತನಾಟ್ಯ ಕಲಿಕೆಗೆ ಸೇರ್ಪಡೆಗೊಳ್ಳುತ್ತಿಿದ್ದಾಾರೆ. ಅದರಂತೆ ಪ್ರತಿವರ್ಷ ವಿವಿಧ ನಾಟ್ಯ ಪರೀಕ್ಷೆಗಳನ್ನು ಸಮರ್ಥವಾಗಿ ಮುಗಿಸಿ
ರಂಗಪ್ರವೇಶಕ್ಕೂ ಆಯ್ದ ಕೆಲವರು ಅಣಿಯಾಗುತ್ತಿಿದ್ದಾಾರೆ. ಸುಮಾರು 15 ವರ್ಷಗಳ ಕಾಲ ನಾಟ್ಯ ತರಬೇತಿ ಪಡೆದ ಕವನಾ ಪ್ರಭು ಇಂದು ರಂಗಪ್ರವೇಶ ಮಾಡಲಿದ್ದಾಾರೆ. 
ನಗರದ ಪಂಚವಟಿ ಕಾಲನಿಯ ವಾಸಿ, ಉದ್ಯಮಿ ಕೆ. ಕೃಷ್ಣಾಾನಂದ ಪ್ರಭು ಮತ್ತು ಕೃತಿಕಾ ಪ್ರಭು ಅವರ ಮಗಳಾದ ಕವನಾ, ಪಿಇಎಸ್ ಇನ್ಸ್ಟಿಿಟ್ಯೂಟ್‌ನಲ್ಲಿ ಮೂರನೆಯ ವರ್ಷದ ಬಿಸಿಎ ಓದುತ್ತಿಿದ್ದಾಾಳೆ. 3ನೆಯ ವಯಸ್ಸಿಿನಲ್ಲೇ ಗೌಡ ಸಾರಸ್ವತ ಸಮಾಜದಲ್ಲಿ ನಡೆದ ಭಕ್ತ ಮಾರ್ಕಾಂಡೇಯ ನಾಟಕದಲ್ಲಿ ಬಾಲಭಕ್ತ ಮಾರ್ಕಾಂಡೇಯನಾಗಿ, 4ನೆಯ ವಯಸ್ಸಿಿನಲ್ಲಿ ಕೃಷ್ಣವೇಶ ಸ್ಪರ್ಧೆಯಲ್ಲಿ ಮೊದಲ ಸ್ಥಾಾನವನ್ನು ಪಡೆಯುವ ಮೂಲಕ ಕಲೆಯ ಪ್ರದರ್ಶನಕ್ಕೆೆ ಅಡಿಯಿಟ್ಟಿಿದ್ದರು.
ಕವನಾ ಸುಶಿಕ್ಷಿತ ಕುಟುಂಬದಿಂದ ಬಂದವರು. ನೈತಿಕ, ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಂಡ ಈ ಕುಟುಂಬ ಇವರ ಪ್ರತಿಭೆಗೆ ನೀರೆರೆಯಿತು. ಅವರ ತಂದೆ-ತಾಯಿ ಮಗಳ ಆಸಕ್ತಿಿ ಗಮನಿಸಿ 6ನೆಯ ವಯಸ್ಸಿಿನಿಂದ ನಟನಂ ಭರತನಾಟ್ಯ ಕೇಂದ್ರದಲ್ಲಿ ಭರತನಾಟ್ಯ ಅಭ್ಯಾಾಸಕ್ಕೆೆ ಕಳುಹಿಸಿದರು. ಇಂತಹ ವಾತಾವರಣದಲ್ಲಿ ಬೆಳೆದಿದ್ದರಿಂದ ಮತ್ತು ಅದ್ಭುತ ಪ್ರತಿಭೆಯ ಗುರುವೂ ಸಹ ಲಭಿಸಿದ್ದರಿಂದ ಕಲಿಕೆ ಅತ್ಯಂತ ಯಶಸ್ವಿಿಯಾಗಿ ಸಾಗಿಬಂದಿತು. ಅಲ್ಲಿ ಪ್ರತಿಯೊಂದನ್ನೂ ತದೇಕಚಿತ್ತದಿಂದ ಗಮನಿಸಿ, ಅಷ್ಟೇ ಶಾಸ್ತ್ರಬದ್ಧವಾಗಿ ಅಧ್ಯಯನ ನಡೆಸಿದ ಕವನಾ, ಈಗ ರಂಗಪ್ರವೇಶಕ್ಕೆೆ ಸಿದ್ಧರಾಗಿದ್ದಾಾರೆ.
ಕರ್ನಾಟಕ ಸರಕಾರ ನಡೆಸುವ ಭರತನಾಟ್ಯ ಪರೀಕ್ಷೆಯ ಜೂನಿಯರ್ ಮತ್ತು ಸೀನಿಯರ್‌ನಲ್ಲಿ ಪ್ರಥಮ, ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾಾರೆ. ಮುಂಬಯಿಯ ಅಖಿಲ ಭಾರತೀಯ ಗಂಧರ್ವ ವಿದ್ಯಾಾಲಯ ಮಂಡಳಿಯವರು ನಡೆಸಿರುವ ವಿಶಾರದ ಪ್ರಥಮ್ ಮತ್ತು ವಿಶಾರದ ಪ್ರಶಸ್ತಿಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾಾರೆ. ಸಹ್ಯಾಾದ್ರಿಿ ಕಲೋತ್ಸವದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ, ಶಂಕರ ಚಾನೆಲ್‌ನವರ ಜೈ ಹಿಂದ್ ಜೈ ಇಂಡಿಯಾ ಕಾರ‌್ಯಕ್ರಮದಲ್ಲಿ ಭಾಗವಹಿಸಿದ್ದಾಾರೆ. ಅಖಿಲ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ, ನಗರದ ಸಹ್ಯಾಾದ್ರಿಿ ಉತ್ಸವ, ಕೊಡಚಾದ್ರಿಿ ಉತ್ಸವ, 73ನೆಯ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ನೀಡಿ  ಸೈ ಎನಿಸಿಕೊಂಡಿದ್ದಾಾರೆ.
 ಬೆಂಗಳೂರು, ಬಳ್ಳಾಾರಿ, ಕೊಟ್ಟೂರು, ಬೆಳಗಾವಿ, ಉಡುಪಿ, ಸಾಗರ, ಇಟಗಿ ಸೇರಿದಂತೆ ಹಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಇಂದೋರ್, ವಿಶಾಖಪಟ್ಟಣಂ, ಮಹಾರಾಷ್ಟ್ರ, ಮೌಂಟ್‌ಅಬುನಲ್ಲೂ ಸಹ ವಿವಿಧ ಸಂದರ್ಭದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾಾರೆ. ತಮಿಳುನಾಡಿನ ಚಿದಂಬರಂನ ದೇವಸ್ಥಾಾನದಲ್ಲಿ ಜರುಗಿದ ಗಿನ್ನೀಸ್ ವಿಶ್ವದಾಖಲೆಯ ನೃತ್ಯಪ್ರದರ್ಶನದಲ್ಲೂ ಭಾಗವಹಿಸಿ ಯಶಸ್ವಿಿಯಾಗಿದ್ದಾಾರೆ.
published on 7-9-2019
................................


   

Saturday 27 July 2019

ದಣಿವಿಲ್ಲದ ಕ್ರೀಡಾಪಟು
ಎಂ. ಆರ್. ಸಣ್ಣನಂಜಮ್ಮ  


ಇವರಿಗೆ 68ರ ಹರಯ. ಕ್ರೀಡಾಕಟೂದಲ್ಲಿ ಇಂದಿಗೂ ಸಾಧನೆ ಮಾಡುತ್ತಲೇ ಇದ್ದಾಾರೆ. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳ ರಾಶಿಯನ್ನೇ ಬಾಚಿದ್ದಾಾರೆ. ಇನ್ನೂ ವಿಶೇಷವೆಂದರೆ, ಎರಡು ಬಾರಿ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊೊಂಡು ಈಗ ಮೂರನೆಯ ಬಾರಿಗೆ ತೆರಳಲು ಸನ್ನದ್ಧರಾಗಿದ್ದಾಾರೆ.
ಸಣ್ಣನಂಜಮ್ಮ ಹೆಸರು ಹಿರಿಯರ ಕ್ರೀಡಾಕ್ಷೇತ್ರದಲ್ಲಿ ಪರಿಚಿತವಾದದ್ದು. ಮೂರು ದಶಕಗಳಿಂದ ಅಥ್ಲೆೆಟಿಕ್‌ಸ್‌‌ನಲ್ಲಿ ಸಾಧನೆ ಮಾಡುತ್ತಲೇ ಇದ್ದಾಾರೆ. ಇವರ ಸಾಧನೆಗೆ ಎಂದೂ ವಯಸ್ಸು ಅಡ್ಡಿಿಯಾಗಿಲ್ಲ. ಏಕೆಂದರೆ ಸಾಧನೆಯ ಛಲವನ್ನು ಇನ್ನೂ ಇವರು ಹೊತ್ತಿಿದ್ದಾಾರೆ. ಮನಸ್ಸಿಿದ್ದರೆ ಮಾರ‌್ಗ ಎನ್ನುವ ಇವರು, ತನ್ನ ಸಾಧನೆಗೆ ಇನ್ನೂ ವಯಸ್ಸಾಾಗಿಲ್ಲ ಎಂದು ಚಟಾಕಿ ಹಾರಿಸುತ್ತಾಾರೆ.   
 ಆಗಸ್‌ಟ್‌ 17 ಮತ್ತು 18ರಂದು ರಂದು ಮಲೇಷಿಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ನಡಿಗೆ, ಓಟ , ಜಾವೆಲಿನ್ ಸ್ಪರ್ಧೆಗೆ  ಇವರು ಭಾರತದ ಪ್ರತಿನಿಧಿಯಾಗಿ ಆಯ್ಕೆೆಯಾಗಿದ್ದಾಾರೆ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಆಯ್ಕೆೆಯಾದ ಏಕೈಕ ಪ್ರತಿನಿಧಿ ಎನ್ನುವುದು ವಿಶೇಷ. ಎಂ.ಆರ್.ಸಣ್ಣನಂಜಮ್ಮ ಭಾರತ, ಕರ್ನಾಟಕ ಮತ್ತು ಶಿವಮೊಗ್ಗಕ್ಕೆೆ ಕೀರ್ತಿತಂದ ಹಿರಿಯ ಕ್ರೀಡಾಪಟು. ಶ್ರೀಲಂಕಾ ಮತ್ತು ಪೂನಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಿಯನ್ನು ಪಡೆದಿದ್ದಾಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿ ಹಲವು ರಾಜ್ಯ ಸುತ್ತಿಿದ್ದಾಾರೆ. ಇದರಿಂದ ತನಗೆ ಪ್ರಮುಖ ರಾಜ್ಯಗಳನ್ನು ನೋಡುವ ಅವಕಾಶ ದೊರೆಯಿತು ಎನ್ನುತ್ತಾಾರೆ ಅವರು.
ಸಣ್ಣನಂಜಮ್ಮ ತುಮಕೂರು ಜಿಲ್ಲೆೆ ತುರುವೆಕೆರೆ ತಾಲೂಕಿನ ಮೇಲಿನಬಳಗೆರೆ ಗ್ರಾಾಮದವರು. ಇವರನ್ನು ದಾವಣಗೆರೆಯ ವಾಸಿ ನಾಗಪ್ಪ ಎನ್ನುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ನಾಲ್ವರು ಹೆಣ್ಣು ಮತ್ತು ಒಬ್ಬ ಮಗನ್ನು ಹೊಂದಿರುವ ಇವರು, ಪತಿಯ ಮರಣಾನಂತರ   ಜೀವನೋಪಾಯಕ್ಕಾಾಗಿ ಹೆಣ್ಣುಮಕ್ಕಳ ಮನೆಯಲ್ಲಿ ವಾಸವಾಗುವ ದೃಷ್ಟಿಿಯಿಂದ ಶಿವಮೊಗ್ಗಕ್ಕೆೆ ಬಂದವರು. ಸದ್ಯ ಹೊಸಮನೆ ಬಡಾವಣೆಯಲ್ಲಿ ಮಗಳ ಮನೆಯಲ್ಲಿದ್ದಾಾರೆ. ಶಿವಮೊಗ್ಗಕ್ಕೆೆ ಬಂದನಂತರ ಹಲವು ಮಹಿಳಾ ಕ್ರೀಡಾಪಟುಗಳ ಪರಿಚಯವಾಗಿ ಅವರ ಒತ್ತಾಾಸೆಯ ಮೇರೆಗೆ ಕ್ರೀಡಾ ತರಬೇತಿ ಪಡೆಯಲು ಮುಂದಾದರು. ಬರಬರುತ್ತ ಆಸಕ್ತಿಿ ಹೆಚ್ಚಾಾಯಿತು. ಹಿರಿಯರಿಗಾಗಿ ವಿಶೆಷ ಕ್ರೀಡಾಕೂಟ ರಾಜ್ಯದಲ್ಲಿ ಪ್ರತಿವರ್ಷ ನಡೆಯುವುದರಿಂದ ಇದರಲ್ಲಿ ಪಾಲ್ಗೊೊಳ್ಳುತ್ತ ತಮ್ಮ ಕ್ರೀಡಾ ಉತ್ಸಾಾಹವನ್ನು ಹೆಚ್ಚಿಿಸಿಕೊಂಡರು.
ಇಂದು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಮಿಂಚುತ್ತಿಿದ್ದಾಾರೆ. ಇವರ ಮನೆಯಲ್ಲಿ ಪದಕಗಳ ರಾಶಿಯೇ ಇದೆ. ನಗರದ ಹತ್ತು- ಹಲವು ಸಂಘಟನೆಗಳು, ಸಾರ್ವಜನಿಕರು ಸನ್ಮಾಾನಿಸಿ, ಗೌರವಿಸಿದ್ದಾಾರೆ. ಸರಳ ಮತ್ತು ಸದಾ ನಗುಮೊಗದ ಜೀವಿಯಾಗಿರುವ ಇವರು, ಈ ವರ್ಷವೂ ಮಲೇಶಿಯಾ ಕ್ರೀಡಾಕೂಟಕ್ಕೆೆ ಆಯ್ಕೆೆಯಾಗುವ ಮೂಲಕ ಜಿಲ್ಲೆೆಗೆ ಹೆಸರು ತಂದಿದ್ದಾಾರೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಕಾರಣ ಹೋಗಿ ಬರುವ ಖರ್ಚನ್ನು ನಿಭಾಯಿಸಲು ಸಾರ್ವಜನಿಕರ ಮೊರೆ ಹೋಗಿದ್ದಾಾರೆ. ನಗರದ ದಾನಿಗಳು, ಉದ್ಯಮಿಗಳು ನೆರವು ನೀಡುವ ಮೂಲಕ ಇವರ ಕ್ರೀಡಾ ಸಾಧನೆಗೆ ನೆರವಾಗಬೇಕಿದೆ. 
ಇದರಲ್ಲಿ ಭಾಗವಹಿಸಲು ಸುಮಾರು 80 ಸಾವಿರ ರೂಪಾಯಿ ಅವಶ್ಯಕತೆ ಇದೆ. ಸಾರ್ವಜನಿಕರು ಸಂಘ -ಸಂಸ್ಥೆೆಯ ಪ್ರತಿನಿಧಿಗಳು, ಉದಾರ ಮನಸ್ಸಿಿನವರು ಆರ್ಥಿಕ ನೆರವನ್ನು ನೀಡುವುದರ ಮೂಲಕ ಪ್ರೋತ್ಸಾಾಹ ಕೊಡಬೇಕೆಂದು ಅವರು ಮನವಿ ಮಾಡಿದ್ದಾಾರೆ. ದಾನಿಗಳು ಮೊ: 9945516113 ಮೂಲಕ ಇವರನ್ನು ಸಂಪರ್ಕಿಸಬಹುದು.
ಇಷ್ಟೇ ಅಲ್ಲದೆ, ಅವರು ಸಾಮಾಜಿಕ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಹೊಸಮನೆಯ ಪತಂಜಲಿ ಸಂಸ್ಥೆೆಯ ಸದಸ್ಯರಾಗಿ ಅದರ ಎಲ್ಲಾಾ ಕಾರ‌್ಯಚಟುವಟಿಕೆಯಲ್ಲಿ ಲವಲವಿಕೆಯಿಂದ ಭಾಗವಹಿಸುತ್ತಿಿದ್ದಾಾರೆ. ಇಳಿವಯಸ್ಸಿಿನಲ್ಲಿಯೂ ಯುವಕರು ನಾಚುವಂತೆ ಕೆಲಸ ಮಾಡುತ್ತಾಾರೆ, ಕ್ರೀಡಾಕೂಟದಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. 
published on 27.7. 19
..............................

Monday 22 July 2019

 ಅಂತರಾಷ್ಟ್ರೀಯ ಕಬಡ್ಡಿಿಗೆ
14ರ ಪೋರ ಸನತ್



  ಬೆಳೆಯ ಸಿರಿ ಮೊಳಕೆಯಲ್ಲಿ ನೋಡು ಎಂಬ ಮಾತಿದೆ. ಕಿರಿಯ ವಯಸ್ಸಿಿನಲ್ಲಿ ಮಕ್ಕಳಲ್ಲಿರುವ ಆಸಕ್ತಿಿಗೆ ಸರಿಯಾಗಿ ನೀರೆರೆದರೆ ಅದು ಉತ್ತಮ ಫಲ ಕೊಡುತ್ತದೆ. ಬೇಕಾದ ಎಲ್ಲಾಾ ವ್ಯವಸ್ಥೆೆ ಕಲ್ಪಿಿಸಿ, ಸರಿಯಾದ ಮಾರ‌್ಗದರ್ಶನ ಕೊಡಿಸಿದರೆ ಯಶಸ್ಸು ಕಟ್ಟಿಿಟ್ಟ ಬುತ್ತಿಿ.  ಇದರ ಜೊತೆಗೆ ಸತತ ಯತ್ನ ಮತ್ತು ತರಬೇತಿ ಹಾಗೂ ಕಠಿಣ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯ ಎನಿಸುವುದಿಲ್ಲ.
ಇದಕ್ಕೆೆ ಪೂರಕ ಎಂಬಂತೆ ತನ್ನ ಕಿರಿಯ ವಯಸ್ಸಿಿನಲ್ಲೇ ಅಭೂತಪೂರ್ವ ಸಾಧನೆ ಮಾಡಿದ ಸನತ್ ಎಂಬ ಪೋರ ಎಲ್ಲರ ಗಮನ ಸೆಳೆದಿದ್ದಾಾನೆ. ಹೊಸನಗರ ತಾಲೂಕಿನ ಬಿದನೂರು ನಗರದ 14 ವರ್ಷದ ಬಾಲಕ ಸನತ್ 17 ವರ್ಷದ ವಯೋಮಾನದ ಒಳಗಿನ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿಗೆ ಆಯ್ಕೆೆಯಾಗುವ ಮೂಲಕ ಮಲೆನಾಡಿಗೆ ಕೀರ್ತಿ ತಂದಿದ್ದಾಾನೆ.
ಹೊಸನಗರದ ರಾಮಕೃಷ್ಣ ಶಾಲೆಯಲ್ಲಿ 9ನೆಯ ತರಗತಿ ವ್ಯಾಾಸಾಂಗ ಮಾಡುತ್ತಿಿರುವ ಸನತ್, ಕಿರಿವಯಸ್ಸಿಿನಲ್ಲೇ ಕಬಡ್ಡಿಿ ಬಗ್ಗೆೆ ಆಸಕ್ತಿಿ ತೋರಿ ಸತತ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾಾನೆ. ಇತ್ತೀಚೆಗೆ ಗೋವಾದಲ್ಲಿ ಖೇಲೋ ಇಂಡಿಯಾ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕಬಡ್ಡಿಿ ಪಂದ್ಯಾಾವಳಿಯಲ್ಲಿ ಕಬಡ್ಡಿಿ ತಂಡದ ನಾಯಕನಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದನು. ಅಲ್ಲಿ ತಂಡ ಜಯಗಳಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ. ಉತ್ತಮ ನಾಯಕತ್ವ ಮತ್ತು ಆಟದಿಂದ ಎಲ್ಲರ ಮನಗೆದ್ದಿದ್ದಾಾನೆ.
ದುಬೈನಲ್ಲಿ ಈ ವರ್ಷದ ನವೆಂಬರ್ 15ರಿಂದ 20ರವರೆಗೆ 17 ವರ್ಷದ ವಯೋಮಾನದ ಒಳಗಿನವರ ಅಂತರಾಷ್ಟ್ರೀಯ ಕಬಡ್ಡಿಿ ಪಂದ್ಯಾಾವಳಿ ನಡೆಯಲಿದ್ದು, ಸನತ್ ಭಾರತವನ್ನು ಪ್ರತಿನಿಧಿಸಲಿದ್ದಾಾನೆ. ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಪಂದ್ಯವಾವಳಿಯಲ್ಲಿ ಸನತ್ ಭಾಗವಹಿಸುತ್ತಿಿರುವ ಬಗ್ಗೆೆ ಆತನ ಪೋಷಕರು ಮತ್ತು ಹೊಸನಗರದ ರಾಮಕೃಷ್ಣ ವಿದ್ಯಾಾಲಯದಲ್ಲಿ ಸಂಭ್ರಮ ಮನೆಮಾಡಿದೆ.
ಸನತ್ ಸಾಧನೆಗೆ ನೆರವಾಗಿದ್ದು ಆತನ ಪೋಷಕರು. ಮೂಡುಗೊಪ್ಪ ಗ್ರಾಾಮಪಂಚಾಯ್ತಿಿಯ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಹೆಚ್.ವೈ.ಸತೀಶ್ ಗೌಡ ಮತ್ತು ಸರೋಜಾ ದಂಪತಿಗಳ ದ್ವಿಿತೀಯ ಪುತ್ರನಾದ ಈತ, ಪೂರ್ವ ಪ್ರಾಾಥಮಿಕ ಮತ್ತು ಪ್ರಾಾಥಮಿಕ ಶಾಲೆಯ ಅವಧಿಯಲ್ಲೂ ಉತ್ತಮ ಕಬಡ್ಡಿಿಯಾಟದಿಂದ ಅಂದೇ ಭರವಸೆ ಮೂಡಿಸಿದ್ದ. ಈಗ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಭವಿಷ್ಯದ ಕಬಡ್ಡಿಿ ಆಟಗಾರನಾಗುವ ಎಲ್ಲ ಭರವಸೆಯನ್ನು ಮೂಡಿಸಿದ್ದಾಾನೆ.
  ಪ್ರೊಕಬಡ್ಡಿಿ ಆಟಗಾರನಾಗುವ ಮೂಲಕ ಈ ನಾಡಿಗೆ ಕೀರ್ತಿ ತರುವ ಮಹದಾಸೆಯನ್ನು ಸನತ್ ಹೊತ್ತಿಿದ್ದಾಾನೆ.  ತನ್ನ ಕ್ರೀಡಾ ಬೆಳವಣಿಗೆಗೆ ಆಸರೆಯಾದ ತಂದೆತಾಯಿ, ರಾಮಕೃಷ್ಣ ವಿದ್ಯಾಾಲಯದ ದೈಹಿಕ ಶಿಕ್ಷಕ ನಾಗರಾಜ್ ಮತ್ತು ತರಬೇತುದಾರ ಅಫ್ರೋಜ್ ಅವರ ಕೊಡುಗೆಯನ್ನು ಸ್ಮರಿಸುತ್ತಾಾನೆ.
ತುಂಬಾ ಚಿಕ್ಕಂದಿನಲ್ಲೇ ಕಬಡ್ಡಿಿ ಬಗ್ಗೆೆ ಸನತ್ ತುಂಬಾ ಆಸಕ್ತಿಿ ಹೊಂದಿದ್ದ. ಓದಿನಲ್ಲೂ ಚುರುಕು ಹೊಂದಿರುವ ಆತನಿಗೆ ಕಬಡ್ಡಿಿ ಆಡಲು ಎಲ್ಲಾಾ ಸಹಕಾರ ನೀಡಿದ್ದೇನೆ. ಚಿಕ್ಕವಯಸ್ಸಿಿನಲ್ಲೇ ಈ ಸಾಧನೆ ಮಾಡಿರುವುದು ಹೆಮ್ಮೆೆ ತಂದಿದೆ. ಮುಂದಿನ ಆತನ ಸಾಧನೆಗೆ ಇದೇ ರೀತಿಯ ಸಹಕಾರ ನೀಡುವುದಾಗಿ ಪಾಲಕರು ಹೇಳುತ್ತಾಾರೆ.
  ಮಹತ್ವಾಾಕಾಂಕ್ಷೆ ಇಲ್ಲದೆ ಯಾರೂ ಏನನ್ನೂ ಸಾಧಿಸಲಾರರು ಎಂಬ ಮಾತಿದೆ. ಮಹತ್ತಾಾದುದನ್ನು ಸಾಧಿಸಲು ಯಾರೂ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕಿಲ್ಲ. ಪ್ರಬಲ ಇಚ್ಛಾಾಶಕ್ತಿಿ, ಮನೋಬಲ ಮತ್ತು ಆತ್ಮವಿಶ್ವಾಾಸ ಇದ್ದರೆ ಏನನ್ನಾಾದರೂ ಸಾಧಿಸಬಹುದು. ಈ ಎಲ್ಲಾಾ ಗುಣ ಹೊಂದಿರುವ ಸನತ್, ಕಬಡ್ಡಿಿಯ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಬೇಕಿದೆ. ಮುಂದೆ ಕರುನಾಡನ್ನು ಮಾತ್ರವಲ್ಲ, ದೇಶವನ್ನು ಪ್ರತಿನಿಧಿಸುವಂತಾಗಬೇಕು. ಪ್ರೊಕಬಡ್ಡಿಿ ಆಟಗಾರನಾಗುವ ಆತನ ಆಶಯ ಈಡೇರಬೇಕಿದೆ.

published on 20-7-2019
..........................................

Saturday 13 July 2019

ತಾಳಮದ್ದಲೆಯ ಕಳ
ಶಾಂತಾರಾಮ ಪ್ರಭು  
 


ಕೆಲವರು  ವೃತ್ತಿುಂದ ನಿವೃತ್ತರಾದ ನಂತರ ತಟಸ್ಥರಾಗುತ್ತಾಾರೆ. ಆರಾಮವಾಗಿ ಮನೆಯಲ್ಲೇ ಕುಳಿತುಬಿಡುತ್ತಾಾರೆ. ಇನ್ನೂ ಕೆಲವರು  ಇನ್ನಷ್ಟು ಕ್ರಿಿಯಾಶೀಲರಾಗುತ್ತಾಾರೆ, ಹೊಸ ಕೆಲಸ ಕೈಗೆತ್ತಿಿಕೊಳ್ಳುತ್ತಾಾರೆ. ಅಥವಾ ತಮ್ಮ ಪ್ರವೃತ್ತಿಿಯನ್ನು ಚುರುಕಾಗಿಸುತ್ತಾಾರೆ.
ಶಾಂತಾರಾಮ ಪ್ರಭು  ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ತಾಳಮದ್ದಲೆ ಮತ್ತು ಸಾ"ತ್ಯ ಕ್ಷೇತ್ರ. ಶಿಕ್ಷಣ ಕ್ರೇತ್ರದಲ್ಲಿ ಅಪಾರ ಅನುಭವ ಹೊಂದಿದ, ಸಾ"ತ್ಯ ಪರಿಷತ್‌ನಲ್ಲಿ ಸಕ್ರಿಿಯವಾಗಿ ತೊಡಗಿಸಿಕೊಂಡ, ಬಹುಭಾಷಾ ಪ್ರ"ೀಣ, ಉತ್ತಮ ಭಾಷಣಕಾರ, ಲೇಖಕ. ಇಂತಹ ನಿರಂತರ ಕಲಿಕೆಯ, ಬಹು ಕ್ಷೇತದ್ರ ಸಾಧಕ  ಪ್ರಭು ಅವರಿಗೆ ಯಕ್ಷಗಾನ ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾರಣ ಯಕ್ಷಗಾನ ಮತ್ತು ಬಯಲಾಟ ಅಕಾಡೆ"ು ಕೊಡಮಾಡುವ ಅಕಾಡೆ"ು ಪ್ರಶಸ್ತಿಿ ಘೋತವಾಗಿದೆ. ಇವರು ನಿವೃತ್ತಿಿಯ ನಂತರ ಇನ್ನಷ್ಟು ಸಾಧಕರಾದವರು. 
  33 ವರ್ಷಗಳ ಕಾಲ ಕನ್ನಡ, ಇಂಗ್ಲೀಷ್ ಉಪನ್ಯಾಾಸಕರಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಿ. ಜತೆಗೆ ತಾಳಮದ್ದಲೆಯ ಉತ್ತಮ ವಾಗ್ಮಿಿಯಾಗಿ ಹೆಸರು ಮಾಡಿದವರು. ಪಿ. ಶಾಂತಾರಾಮ ಪ್ರಭು ಹೊಸನಗರ ತಾಲೂಕು ನಿಟ್ಟೂರಿನವರು. ನಿವೃತ್ತ ಉಪನ್ಯಾಾಸಕರಾಗಿಯೂ ಅಧ್ಯಾಾಪನ ವೃತ್ತಿಿ ಮುಂದುವರೆಸುತ್ತಿಿದ್ದಾಾರೆ. 46 ವರ್ಷಗಳ ಸುದೀರ್ಘ ಕಾಲದ ಶಿಕ್ಷಕರು. (1971 ರಿಂದ) ಪ್ರಾಾಥ"ುಕ ಹಂತದಿಂದ ಪದ"ಯವರೆಗೆ ತೀರ್ಥಹಳ್ಳಿಿಯಲ್ಲಿ ಓದು. ಕರ್ನಾಟಕ ""ುಂದ ಕನ್ನಡ ಮತ್ತು ಮೈಸೂರು ""ುಂದ ಇಂಗ್ಲಿಿಷ್ ಎಂ.ಎ. ಪದ" ಪಡೆದರು. ಆನಂತರ ಸಾ"ತಿ ಎ.ಎನ್. ಮೂರ್ತಿರಾವ್ ಅವರ ಸಮಗ್ರ ಸಾ"ತ್ಯದ ಮೇಲೆ ಪಿಎಚ್‌ಡಿ ಪಡೆದರು. ""ಧ ಭಾಷೆಗಳ ಮೇಲಿನ ಡಿಪ್ಲೋಮೊ ಕೋರ್ಸ್‌ಗಳು, ಹಲವು ಭಾಷೆಗಳ ಮೇಲಿನ ಅಧ್ಯಯನ, "ೀಗೆ ನಿತ್ಯ ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
  ಶಾಂತಾರಾಂ ಪ್ರಭು ಅಪ್ಪಟ್ಟ ಗ್ರಾಾ"ುೀಣ ಬದುಕಿನೊಂದಿಗೆ ಹಾಸುಹೊಕ್ಕಾಾದವರು. "ಶ್ವ ರಾಮಾಯಣ ಕಥಾವಾ"ನಿ ಎಂಬ ಗ್ರಂಥದ ರಚನೆಯ ಮೂಲಕ ದೇಶ "ದೇಶಗಳಲ್ಲಿ ನಮ್ಮ ರಾಮಾಯಣ ಪೌರಾಣಿಕ ಗ್ರಂಥಗಳ ಕುರಿತ "ಚಾರಗಳು ಹೇಗೆ ಸಾಮ್ಯತೆ ಪಡೆದಿದೆ ಎನ್ನುವುದನ್ನು ನಿರೂಪಿಸಿದ್ದಾಾರೆ. ಪ್ರಪಂಚದಾದ್ಯಂತ ಇರುವ ರಾಮನ ಕುರಿತಾದ ಗ್ರಂಥಗಳ ಬಗ್ಗೆೆ ಬರೆದ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.  ಅನೇಕ ಚಿಂತನಾ ಬರಹ, ಕಥೆ, ಲೇಖನ ಸಂಗ್ರಹ ಇವರೊಟ್ಟಿಿಗೆ ಬೆಸೆದುಕೊಂಡಿದೆ. ಇದಕ್ಕೆೆಲ್ಲ ಕಳಶ"ಟ್ಟಂತೆ ಒಳ್ಳೆೆಯ ಅರ್ಥಗಾರಿಕೆ ಇವರ "ರಿಮೆ. ಅದಕ್ಕೆೆ ಅಕಾಡೆ"ುಯ ಪ್ರಶಸ್ತಿಿ ಸಲ್ಲುತ್ತಿಿದೆ.
  ತಾಳಮದ್ದಲೆಯಲ್ಲಿ ಸೌಮ್ಯ ಪಾತ್ರ ನಿರ್ವಹಣೆಯಲ್ಲಿ ಸಿದ್ದಹಸ್ತರು. ಧರ್ಮರಾಜ, ರಾಮ, "ಷ್ಣು, ಕೃಷ್ಣ, "ಧುರ, ಭೀಷ್ಮ, ದಶರಥ ಮುಂತಾದ ಪಾತ್ರಕ್ಕೆೆ ಒಳ್ಳೆೆಯ ಅಧ್ಯಾಾಯನ"ರುವುದು ಇವರ "ರಿಮೆ. ಆದಿ ನಾರಾಯಣ ದರ್ಶನದ "ಷ್ಣು ಇವರ ಬಹಳ ಪ್ರಸಿದ್ಧ ಪಾತ್ರ. ಹಂದಲಸು ಲಕ್ಷ್ಮೀನಾರಾಯಣ ಭಟ್ಟರ ಶಿಷ್ಯರಾಗಿ 1971 ರಿಂದಲೂ ತಾಳಮದ್ದಲೆಯಲ್ಲಿ ತೊಡಗಿಸಿಕೊಂಡ ಪ್ರಭು, ತಾಳಮದ್ದಲೆಯ ಎಲ್ಲ ಪ್ರದರ್ಶನದಲ್ಲೂ ಪರಿಚಿತರು. ಗೋಪಾಲಕೃಷ್ಣ ಶ್ರೇಣಿ, ಸಾಮಗ, ಆನಂದ ಮಾಸ್ತರ್, ಪೆರ್ಲ, ರಾಮದಾಸ ಸಾಮಗರಂತಹ "ರಿಯರ ಒಡನಾಟ"ರುವವರು.
ಕೊಂಕಣಿ, ಕನ್ನಡ, ಇಂಗ್ಲಿಿಷ್, ಸಂಸ್ಕೃತ, "ಂದಿ, ಮಲಯಾಳಂ, ಮರಾಠಿ, ತುಳು "ೀಗೆ 8 ಭಾಷೆಗಳನ್ನು ನಿರ್ಗಳವಾಗಿ ಮಾತನಾಡಬಲ್ಲರು. ಬೇರೆ ಭಾಷೆಗಳಲ್ಲಿಯೂ ಸಾ"ತ್ಯ ರಚಿಸಿದ್ದಾಾರೆ. ಕನ್ನಡ ಸಾ"ತ್ಯ ಪರಿಷತ್ತಿಿನ ಹೊಸನಗರ ತಾಲೂಕು ಅಧ್ಯಕ್ಷರಾಗಿ ಪ್ರಪ್ರಥಮ ಕನ್ನಡ ಸಾ"ತ್ಯ ಸಮ್ಮೇಳನ ಮಾಡಿದ "ರಿಮೆ ಇವರದ್ದು. ಈಗ ಇಳಿವಯಸ್ಸಿಿನಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಮಾತ್ರವಲ್ಲ, ಎಲ್ಲಿಯೇ ಯಕ್ಷಗಾನ ತಾಳಮದ್ದಲೆಗೆ ಕರೆ ಬಂದರೂ ಅಲ್ಲಿಗೆ ತೆರಳುತ್ತಾಾರೆ. ಪಾದರಸದ ವ್ಯಕ್ತಿಿತ್ವದ ಇವರಿಗೆ ಹಲವರು ಗೌರವ, ಸನ್ಮಾಾನಗಳು ದಕ್ಕಿಿವೆ.

published on 13 july 2019
..................................

Saturday 29 June 2019

ವಾಗ್ಮಿಿ, ಸಂಪನ್ಮೂಲ ವ್ಯಕ್ತಿಿ
ಶುಭಾ ಮರವಂತೆ


 ವಾಗ್ಮಿಿಯು ತನ್ನ ಭಾಷಣವನ್ನು ಕೇಳುಗರ ಹೃದಯದ ಮೇಲೆ ಬರೆಯುತ್ತಾಾನೆ, ಕಾಗದದ ಮೇಲಲ್ಲ ಎನ್ನುವ ಪ್ರಸಿದ್ಧ ಉಕ್ತಿಿ ಆಂಗ್ಲ ಭಾಷೆಯಲ್ಲಿದೆ. ಶಬ್ದಕ್ಕೆೆ ಅಷ್ಟೊೊಂದು ಅಸಾಧಾರಣ ಶಕ್ತಿಿ ಇದೆ. ಇಂತಹ ಅಪ್ರತಿಮ ಭಾಷಣಕಾರ ಎಲ್ಲರಿಂದ ಗುರುತಿಸಲ್ಪಡುತ್ತಾಾನೆ, ಗೌರ"ಸಲ್ಪಡುತ್ತಾಾನೆ, ಜನರಲ್ಲಿ "ಚಾರ ಪ್ರಚೋದನೆಗೆ ಕಾರಣನಾಗುತ್ತಾಾನೆ.   
ಈ ಮಾತು ನಗರದ ಸಹ್ಯಾಾದ್ರಿಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ, "ಂದಿ, ಉರ್ದು ಮತ್ತು ಸಂಸ್ಕೃತ ಭಾಷೆಯ ಮುಖ್ಯಸ್ಥರಾಗಿರುವ ಶುಭಾ ಮರವಂತೆ ಅವರಿಗೆ ನೂರರಷ್ಟು ಸರಿಹೊಂದುತ್ತದೆ. ಶಿವಮೊಗ್ಗ ಸುತ್ತಮುತ್ತ ಚಿರಪರಿಚಿತ ಹೆಸರು. ಬಹುಮುಖ ಪ್ರತಿಭೆ ಇವರದ್ದು. ಉತ್ತಮ ವಾಗ್ಮಿಿಯಾಗಿ, ಸಂಪನ್ಮೂಲ ವ್ಯಕ್ತಿಿಯಾಗಿ, ಸಾ"ತ್ಯ ಕ್ಷೇತ್ರದಲ್ಲಿ ಮತ್ತು ಪ್ರಾಾಧ್ಯಾಾಪಕರಾಗಿ ವೃತ್ತಿಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು. ನಾಡು- ನುಡಿ, ಸಾ"ತ್ಯ- ಸಂಸ್ಕೃತಿ, ಬದುಕು- ಕಲೆಯ ಬಗ್ಗೆೆ ನಿರರ್ಗಳವಾಗಿ ಮಾತನಾಡಬಲ್ಲ ಕಲೆ ಇವರಲ್ಲಿದೆ. ಪ್ರಬುದ್ಧ ಭಾಷೆಯ ಬಳಕೆ, ಮಾತಿನ ಲಯ, "ಶಿಷ್ಟ ಶೈಲಿಯ ಮೂಲಕ ಜನಮನ ಗೆಲ್ಲುತ್ತಾಾರೆ.
ಯಕ್ಷಗಾನದಲ್ಲಿ ಅಪೂರ್ವ ಸೇವೆ ಸಲ್ಲಿಸಿರುವ ಮರವಂತೆ ದಾಸ್ ಭಾಗವತರ ಕುಟುಂಬದಲ್ಲಿ ಜನಿಸಿದವರು ಶುಭಾ. ತಂದೆ ಶ್ರೀನಿವಾಸ ದಾಸ್ ಭಾಗವತರು. ತಾು ಮಹಾಲಕ್ಷ್ಮೀ ದಾಸ್. ಬಾಲ್ಯದ ಶಿಕ್ಷಣವನ್ನು ಹುಟ್ಟೂರು ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಮುಗಿಸಿ, ಧಾರವಾಡದ ಕರ್ನಾಟಕ "ಶ್ವ"ದ್ಯಾಾಲಯದಲ್ಲಿ ಕನ್ನಡ ಸ್ನಾಾತಕೋತ್ತರ ಪದ"ಯನ್ನು ರ್ಯಾಾಂಕ್‌ನೊಂದಿಗೆ ಪಡೆದಿದ್ದಾಾರೆ. ಶಿವರಾಮ ಕಾರಂತರ ಕಾದಂಬರಿಯಲ್ಲಿ ಸ್ತ್ರೀ ಸಂವೇದನೆ ಎನ್ನುವ "ಷಯದ ಬಗ್ಗೆೆ ಪಿಎಚ್‌ಡಿ ಮಾಡಿದ್ದಾಾರೆ. ಭಾಷಾ "ಜ್ಞಾಾನ, ಮ"ಳಾ ಅಧ್ಯಯನ. ಬಸವ ಅಧ್ಯಯನ, ಪ್ರಾಾಚ್ಯ ಲೇಖನ, ಪ್ರಾಾಕೃತ ಅಧ್ಯಯನಗಳಲ್ಲಿ ಪಿ. ಜಿ. ಡಿಪ್ಲೋಮಾ ಪಡೆದಿದ್ದಾಾರೆ. ಪತ್ರಿಿಕೋದ್ಯಮದಲ್ಲೂ ಎಂ ಎ ಮುಗಿಸಿದ್ದಾಾರೆ.
ಇದಕ್ಕೂ ಮುನ್ನ ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲೂ ಸೇವೆ ಸಲ್ಲಿಸಿರುವ ಇವರು, ಬಾಲ್ಯದಿಂದಲೇ ಸಾ"ತ್ಯ ಪ್ರೀತಿ ಬೆಳೆಸಿಕೊಂಡವರು. ಹತ್ತನೆಯ ತರಗತಿಯಲ್ಲಿರುವಾಗಲೇ ತೊದಲು ಎನ್ನುವ ಕಾವ್ಯ ಸಂಕಲನ ಹೊರತಂದಿದ್ದಾಾರೆ. ಶರಧಿ ಶಯನನೆ ನಮ್ಮ ವರಾಹ ಸ್ವಾಾ"ುಯೇ ಎನ್ನುವ ಭಕ್ತಿಿಗೀತೆಗಳ ಸಿಡಿಯೊಂದನ್ನು ರಚಿಸಿ ಹೊರತಂದಿದ್ದಾಾರೆ. 
ತಮ್ಮ ಕಥೆ, ಕವನ, ಹನಿಗವನ ಮತ್ತು ಲೇಖನಗಳಿಗೆ  ರಾಜ್ಯಮಟ್ಟದ ಹಲವರು ಬಹುಮಾನಗಳನ್ನು ಪಡೆದಿದ್ದಾಾರೆ. ಆತ್ಮರಾಜ ಮತ್ತು ಇತರ ಕಥನಗಳು, ಪದಸಂತತಿ, ಕನಕದಾಸರ ಮಧ್ಯಕಾಲೀನ ಚರಿತೆಯ ಪುನರಚನೆ, ಮರಳಿ ಹೆಣ್ಣಿಿಗೆ, ಚಂದ್ರಶೇಖರ ಕಂಬಾರ ಮೊದಲಾದ ಕೃತಿಗಳನ್ನು ರಚಿಸಿದ್ದಾಾರೆ. ಇವರ ಹಲವಾರು ಲೇಖನಗಳು ನಾಡಿನ ಪತ್ರಿಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು "ಶ್ವ"ದ್ಯಾಾಲಯದ ಮೊದಲ "ದ್ಯಾಾರ್ಥಿ ಸಾ"ತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆೆಯಾದ ಹೆಮ್ಮೆೆ ಇವರದ್ದು.
. ಇವರು ರಾಜ್ಯ, ರಾಷ್ಟ್ರಮಟ್ಟದ ಅನೇಕ ಕಾರ‌್ಯಕ್ರಮಗಳಲ್ಲಿ ಉಪನ್ಯಾಾಸ ನೀಡಿದ್ದಾಾರೆ. ನೀಡಿದ ಉಪನ್ಯಾಾಸಗಳ ಸಂಖ್ಯೆೆ ಸಾ"ರ ದಾಟುತ್ತವೆ. ಉದಯ ಟಿ"ಯ ಹರಟೆ ಕಾರ‌್ಯಕ್ರಮದಲ್ಲಿ ಭಾಗವ"ಸಿದ್ದಾಾರೆ. ಪೀಸ್ ಆಫ್ ಮೈಂಡ್ ಚಾನೆಲ್‌ನಲ್ಲಿ ಇವರ ಕಾರ‌್ಯಕ್ರಮದ ಸರಣಿ ಪ್ರಸಾರವಾಗುತ್ತಿಿದೆ.
ಮುಂಬೈನ ಸುಶೀಲಾ ಶೆಟ್ಟಿಿ ಕಥಾ ಪ್ರಶಸ್ತಿಿ, "ಶ್ವಕಲಾರತ್ನ ಪ್ರಶಸ್ತಿಿ, ಕರ್ನಾಟಕ ಸರಕಾರದಿಂದ ಕನಕದಾಸ ಫೆಲೋಶಿಪ್, ಗೋಕಾಕ್ ಫೆಲೋಶಿಪ್, ಸಂಶೋಧನೆಗೆ ಯುಜಿಸಿ ಅನುದಾನವನ್ನೂ ಇವರು ಪಡದಿದ್ದಾಾರೆ.
ಬಲ್ಲಿರೇನಯ್ಯ ಎನ್ನುವ ಯಕ್ಷಗಾನ ಮಾಸಿಕ ಪತ್ರಿಿಕೆಯಲ್ಲಿ ತಮ್ಮ ಕುಟುಂಬದ ಯಕ್ಷಪಯಣದ ಸ್ಮತಿಚಿತ್ರವನ್ನು ಅಂಕಣವಾಗಿ ಬರೆಯುತ್ತಿಿದ್ದಾಾರೆ. ಯಕ್ಷಗಾನ ಮತ್ತು ಗಮಕ ಕಲಾ"ದೆಯೂ ಆಗಿರುವ ಇವರು, ಪ್ರಸ್ತುತ 9 "ದ್ಯಾಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡುತ್ತಿಿದ್ದಾಾರೆ. 

published on 29-june2019
..................................

Saturday 22 June 2019


ಉಚಿತವಾಗಿ ಯೋಗ ಕಲಿಸುವ
ಎನ್. ಪಿ. ವೆಂಕಟೇಶ್


 ಯೋಗ ಎನ್ನುವುದು ಒಂದು ದೀಪ. ಅದು ಎಂದೂ ಮಂಕಾಗುವುದಿಲ್ಲ. ನೀವು ಎಷ್ಟು ಅದನ್ನು ಆಳವಾಗಿ ಕಲಿಯುತ್ತೀರೋ ಅಷ್ಟು ಅದು ಜ್ವಾಾಜ್ವಲ್ಯಮಾನವಾಗಿ ಉರಿಯುತ್ತದೆ ಎಂದು ಅಂತರರಾಷ್ಟ್ರೀಯ ಯೋಗ ಪಟು ಬಿ ಕೆ. ಎಸ್. ಅಯ್ಯಂಗಾರ್ ಹೇಳಿದ ಮಾತಿದೆ. ಇದನ್ನು ನಾವು ರೂಢಿಸಿಕೊಂಡಷ್ಟು ಹೆಚ್ಚು ಅನುಭವ ಸಿಗುತ್ತದೆ. ಆರೋಗ್ಯದಾಯಕ ಬದುಕು ಲಭಿಸುತ್ತದೆ.
ನಮ್ಮ ದೇಹದ ಹೊರಭಾಗದಲ್ಲಿ ಏನು ಘಟಿಸುತ್ತದೆಯೋ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ದೇಹದ ಒಳಭಾಗದಲ್ಲಿ ಏನು ಸಂಭವಿಸುತ್ತದೆಯೋ ಅದನ್ನು ನಿಯಂತ್ರಿಿಸಬಹುದು. ಅದು ಯೋಗದಿಂದ ಮಾತ್ರ ಸಾಧ್ಯ.  ನಮ್ಮ ಹಾಲಿ ಜೀವನ ಎಲ್ಲಿ ಕೇಂದೀಕೃತವಾಗಿರುತ್ತದೆಯೋ ಅಲ್ಲಿಗೆ ಯೋಗ ನಮ್ಮನ್ನು ಕರೆದೊಯ್ಯುತ್ತದೆ. ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವುದು ಮತ್ತು ನಿಯಂತ್ರಿಿಸುವುದೇ ಯೋಗದ ಕೆಲಸ.
ಯೋಗ ಈಗ ಸಾಮಾನ್ಯವಾಗಿದೆ. ಸಣ್ಣಮಕ್ಕಳೂ ಸಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗ ಸ್ಪರ್ಧೆಯಲ್ಲಿ ಪದಕ ಗೆಲ್ಲುತ್ತಿಿದ್ದಾಾರೆ. ಈ ರೀತಿ ಮಕ್ಕಳನ್ನು ತಯಾರು ಮಾಡಲು ಯೋಗ ಶಿಕ್ಷಣ ಕೇಂದ್ರಗಳು ಅಲ್ಲಲಿ ತೆರೆದುಕೊಂಡಿವೆ. ಶಿವಮೊಗ್ಗ ನಗರದ ಮಾರ್ನಮಿಬೈಲ್‌ನ ಎರಡನೆಯ ಕ್ರಾಾಸ್‌ನಲ್ಲಿ  ವರ್ಷಿಣಿ ಯೋಗ ಕೇಂದ್ರ 5 ವರ್ಷದಿಂದ ಕಾರ್ಯಾಾಚರಿಸುತ್ತಿಿದೆ. ಇದರ ಸ್ಥಾಾಪಕರು ಮತ್ತು ಗುರು ಎನ್. ಪಿ. ವೆಂಕಟೇಶ್.
ವೆಂಕಟೇಶ್ 20 ವರ್ಷಗಳಿಂದ ಯೋಗದಲ್ಲಿ ಪರಿಣಿತರು. ಅನಾರೋಗ್ಯ ಸಂಭವಿಸಿದಾಗ ತಮ್ಮ ತಂದೆ ಕೊಟ್ಟ ಸಲಹೆ ಮೇರೆಗೆ ಯೋಗಾಸನವನ್ನು ಮಾಡಲಾರಂಭಿಸಿದ್ದರು. ಆನಂತರ ಅದರಿಂದ ಗುಣಮುಖರಾಗಿದ್ದರಿಂದ ಯೋಗದ ಮೇಲೆ ವಿಶೇಷ ಪ್ರೀತಿ, ವಿಶ್ವಾಾಸ ಬೆಳೆಯಿತು. ಅದನ್ನೇ ಏಕೆ ಮುಂದುವರೆಸಬಾರದು ಎಂದು ನಿರ್ಧರಿಸಿ ನಗರದ ರಾಘವೇಂದ್ರ ಯೋಗ ಕೇಂದ್ರದಲ್ಲಿ ಕಲಿಕೆ ಆರಂಭಿಸಿದರು. ಈಗ ಯೋಗದಲ್ಲಿ ಇನ್‌ಸ್‌‌ಟ್ರಕ್ಟರ್ ಕೋರ್ಸನ್ನು ಮುಗಿಸಿ ಶಾಲೆ ತೆರೆದಿದ್ದಾಾರೆ.
ಶಿವಮೊಗ್ಗ ಸಹಿತ ರಾಜ್ಯದ ಹಲವೆಡೆ ಯೋಗ ಕಲಿಕೆಯನ್ನು ನಡೆಸುತ್ತಿಿದ್ದಾಾರೆ. ಇದರೊಟ್ಟಿಿಗೆ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ನ್ನು ನಗರದಲ್ಲಿ ಮತ್ತು ದಾವಣಗೆರೆಯಲ್ಲಿ ನಡೆಸಿ, ಅಲ್ಲಿ ಗೆದ್ದು ರಾಜ್ಯದ ಮಕ್ಕಳನ್ನು ಎರಡು ಬಾರಿ ಬ್ಯಾಾಂಕಾಕ್‌ಗೆ ಕರದೊಯ್ದ ಕೀರ್ತಿ ಇವರದ್ದು. ಎರಡು ಬಾರಿಯೂ ಚಿನ್ನ, ಬೆಳ್ಳಿಿ, ಕಂಚು ಸಹಿತ ಹಲವು ಪದಕಗಳನ್ನು ಗೆದ್ದು ತರುವಂತೆ ಮಾಡಿದ್ದಾಾರೆ. 2018 ಮತ್ತು 2019ರಲ್ಲಿ ಈ ಚಾಂಪಿನ್‌ಶಿಪ್ ನಡೆದಿತ್ತು.
 ವೆಂಕಟೇಶ್ ಹಣದ ಆಸೆಗೆ ಎಂದೂ ಯೋಗ ಕಲಿಸುತ್ತಿಿಲ್ಲ. ಉಚಿತವಾಗಿ ತರಗತಿ ನಡೆಸುತ್ತಿಿದ್ದಾಾರೆ. ಹಲವರು ಯೋಗವನ್ನು ವಾಣಿಜ್ಯಾಾತ್ಮಕವಾಗಿ ನಡೆಸುತ್ತಿಿರುವುದು ಹೆಚ್ಚುತ್ತಿಿದೆ. ಆದರೆ ಇವರು ಈ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಮಕ್ಕಳಿಗೆ ಕಲಿಸಲು ತೀರ್ಮಾನಿಸಿದ್ದಾಾರೆ. ಜೊತೆಗೆ  ಗೋಪಾಳದ ವೃದ್ಧಾಾಶ್ರಮದಲ್ಲಿ ಸುಮಾರು 250 ಜನರಿಗೆ ಬೆಳಿಗ್ಗೆೆ ಮತ್ತು ಸಂಜೆ ಒಂದೂವರೆ ಗಂಟೆ ಯೋಗ ಕಲಿಸುತ್ತಿಿದ್ದಾಾರೆ.
ನಗರದ ಡಿವಿಎಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಟಿಸಿಎಚ್ ಕೋರ್ಸನ್ನು ಮುಗಿಸಿರುವ ವೆಂಕಟೇಶ್,  2001ರಲ್ಲಿ ನಗರದ ಆದಿಚುಂಚನಗಿರಿ ಕಲ್ಯಾಾಣ ಮಂದಿರದಲ್ಲಿ ನಡೆದ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾಾನ ಗಳಿಸಿದ್ದಾಾರೆ. 20013ರಲ್ಲಿ ದಾವಣಗೆರೆಯಲ್ಲಿ ಜರುಗಿದ ಚಾಂಪಿಯನ್‌ಶಿಪ್‌ನಲ್ಲಿ ದ್ವಿಿತೀಯ ಮತ್ತು 2005ರಲ್ಲಿ ಮೈಸೂರಿನಲ್ಲಿ ತೃತೀಯ ಸ್ಥಾಾನ ಗಳಿಸಿದ್ದಾಾರೆ. ಆನಂತರ ಹಲವಾರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ಮಕ್ಕಳನ್ನು ತಯಾರು ಮಾಡಿ ಪ್ರಶಸ್ತಿಿ ಗೆದ್ದು ತರುವಂತೆ ಮಾಡುತ್ತಿಿದ್ದಾಾರೆ.
ಯೋಗ ಸುಂದರ ಬದುಕನ್ನು ರೂಪಿಸತ್ತದೆ. ಇದರ ತರಬೇತಿ ಪಡೆಯುವುದರಿಂದ  ದೇಹ ಅರಳುತ್ತದೆ. ಮನಸ್ಸು ವಿಕಸಿಸುತ್ತದೆ. ನಿರಂತರವಾಗಿ ಯೋಗ ಮಾಡುವುದರಿಂದ ಮಾತ್ರ ನಾವಂದುಕೊಂಡ ಸಾಧನೆ ಸಾಧ್ಯ ಎನ್ನುತ್ತಾಾರೆ ವೆಂಕಟೇಶ್. 

published 0n 22.6.19
..................

Saturday 15 June 2019

ದಾಖಲೆಯ ಪುಟ ಸೇರಿದ
ಸಚಿನ್ ವರ್ಣೇಕರ್




ಕೌಶಲ್ಯ ಮತ್ತು ದೃಢ ವಿಶ್ವಾಾಸವಿದ್ದರೆ ವ್ಯಕ್ತಿಿಯನ್ನು ಯಾರೂ ಸೋಲಿಸಲಾಗದು ಎಂಬ ಮಾತಿದೆ. ಇವೆರಡೂ ಒಂದೆಡೆ ಸೇರಿದರೆ ಯಶಸ್ಸು ದ್ವಿಿಗುಣಗೊಳ್ಳುತ್ತದೆ, ಸಾಧಿಸಲು ಅಸಾಧ್ಯವಾದುದು ಯಾವುದೂ ಇರುವುದಿಲ್ಲ. 
ಪ್ರತಿಭೆಯ ಜೊತೆ ಕೌಶಲ್ಯ ಇದ್ದರೆ ವ್ಯಕ್ತಿಿ ಉನ್ನತ ಸ್ಥಾಾನಕ್ಕೇರಬಹುದು, ಸಾಧನೆಯಲ್ಲಿ ಇನ್ನಷ್ಟು ಮುಂದಡಿಯಿಡಬಹುದು. ಪ್ರಸ್ತುತ ದಿನಗಳಲ್ಲಿ ಕೌಶಲ್ಯಕ್ಕೆೆ ತುಂಬಾ ಮಹತ್ವವಿದೆ. ಯುವಜನತೆ ಕೌಶಲ್ಯವಂತರಾದರೆ ಅವರನ್ನು ಯಾರೂ ಹಿಂದಿಕ್ಕಲು ಸಾಧ್ಯವಿಲ್ಲ. ಜೀವನದ ಸಾಧನೆಗೆ ಇದೇ ಮೆಟ್ಟಿಿಲಾಗುತ್ತದೆ.
ಸಚಿನ್ ವರ್ಣೇಕರ್ ಭದ್ರಾಾವತಿಯ ಯುವಕ. ಅಲ್ಲಿನ ಸಿ. ಎನ್. ರಸ್ತೆೆಯ ಭೂತನಗುಡಿಯಲ್ಲಿ ಚಿನ್ನದ ಅಂಗಡಿ ನಡೆಸುತ್ತಿಿದ್ದಾಾರೆ. ವಿದ್ಯಾಾಭ್ಯಾಾಸದ  ದಿನದಲ್ಲೇ ಚಿತ್ರಕಲೆಯಲ್ಲಿ ಹೆಚ್ಚಿಿನ ಆಸಕ್ತಿಿ ಇದ್ದುದರಿಂದ ಮತ್ತು ಅದರಲ್ಲಿ ಅನೇಕ ಬಹುಮಾನಗಳನ್ನು ಪಡೆದಿದ್ದರಿಂದ ಹೊಸ ರೀತಿಯ ಚಿತ್ರ, ಕೆತ್ತನೆಗಳತ್ತ ಚಿಂತನೆ ನಡೆಸುತ್ತಲೇ ಇದ್ದರು. ಅತ್ಯಂತ ಸೂಕ್ಷ್ಮದ, ತೀರಾ ಸಹನೆಯ ಮತ್ತು ಅಷ್ಟೇ ಕಷ್ಟದ ಕೆಲಸ ಇದಾದರೂ, ಛಲ ಬಿಡದೆ ಸಚಿನ್ ಚಿನ್ನದ ಅತಿ ಚಿಕ್ಕ ಶಿವಲಿಂಗ ಮತ್ತು ರಾಮಮಂದಿರ ನಿರ್ಮಿಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾಾರೆ.
  ಸಚಿನ್ ತನ್ನ ಸೋದರ ಮಾವನ ಅಂಗಡಿಯಲ್ಲಿ ಕೆಲಸ ಮಾಡುತ್ತ, ವಿವಿಧ ವಿನ್ಯಾಾಸದ ತಯಾರಿಕೆಯನ್ನು ನೋಡಿ ಕಲಿತವರು. ಒಂದು ವರ್ಷದ ಅನಿಮೇಶನ್ ಕೋರ್ಸನ್ನು ಇದೇ ವೇಳೆ ಶಿವಮೊಗ್ಗದಲ್ಲಿ ಪೂರೈಸಿ, ತಮ್ಮದೇ ಆದ ಚಿನ್ನದ ಅಂಗಡಿ ವ್ಯವಹಾರ ಆರಂಭಿಸಿದರು. ಚಿನ್ನದ ಕುಸುರಿ ಕಲೆಯಲ್ಲಿ ಜ್ಞಾಾನವಿದ್ದುದರಿಂದ ಮತ್ತು ಹೊಸತನದ್ದು ಏನನ್ನಾಾದರೂ ಮಾಡಬೇಕೆಂದು ಮನಸ್ಸು ಹಾತೊರೆಯುತ್ತಿಿದ್ದುದರಿಂದ ಹೊಸ ನಮೂನೆಯ ಆಭರಣಗಳನ್ನು ತಯಾರಿಸುವ ಕೆಲಸ ಆರಂಭಿಸಿ, ಕೌಶಲ್ಯವನ್ನು ಅದರಲ್ಲಿ ತೋರಿಸುತ್ತಿಿದ್ದಾಾರೆ. ಇದೇ ವೇಳೆ ಅತಿ ಕಡಿಮೆ ಬಂಗಾರ ಬಳಸಿ ಶಿವಲಿಂಗವನ್ನು ಏಕೆ ರಚಿಸಬಾರದೆಂದು ಯೋಚಿಸಿದರು. ಅದರಂತೆ  112 ಮಿಲಿ ಬಂಗಾರ ಬಳಸಿ ಶಿವಲಿಂಗವನ್ನು ಒಂದೇ ದಿನದಲ್ಲಿ ಕಳೆದ ಶಿವರಾತ್ರಿಿ ವೇಳೆ ರಚಿಸಿದರು. ಇದಾದ ಬಳಿಕ ರಾಮಮಂದಿರವನ್ನೂ ಸಹ ರಾಮನವಮಿ ಸಂದರ್ಭದಲ್ಲಿ ರಚಿಸಿದ್ದಾಾರೆ. ಇದಕ್ಕೆೆ 18 ಗ್ರಾಾಮ್ ಬಂಗಾರ ಬಳಸಿದ್ದಾಾರೆ.
ಇದನ್ನು ಕೆಲವು ಮುಖಂಡರಿಗೆ ಮತ್ತು ಮಿತ್ರರಿಗೆ ತೋರಿಸಿದಾಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಸ್‌‌ಗೆ ಕಳುಹಿಸುವಂತೆ ಸೂಚಿಸಿದ್ದರಿಂದ  ಇದನ್ನೆೆಲ್ಲಾಾ ವೀಡಿಯೋ ಮಾಡಿ, ದಾಖಲೆ ಸಹಿತ ಕಳುಹಿಸಿದರು. ಅಲ್ಲಿಂದ ಇವರ ಸಾಧನೆಗೆ ಮನ್ನಣೆ ಸಿಕ್ಕಿಿದೆ. ಹೆಸರು ಈಗ ದಾಖಲಾಗಿದೆ. ಸದ್ಯದಲ್ಲೇ ಅವರ ಪ್ರಮಾಣಪತ್ರ ಇವರ ಕೈಸೇರಲಿದೆ.
ಈ ಶಿವಲಿಂಗವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ತೋರಿಸಿದ್ದಾಾರಲ್ಲದೆ, ಅಲ್ಲಿನ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿಡಲು ಅದೇ ರೀತಿಯ ಇನ್ನೊೊಂದು ಶಿವಲಿಂಗವನ್ನು ಮಾಡಿಕೊಟ್ಟಿಿದ್ದಾಾರೆ. ಕರ್ಕಿುಯ ದೈವಜ್ಞಪೀಠದ ಸ್ವಾಾಮೀಜಿಯವರಿಗೂ ಇದನ್ನು ತೋರಿಸಿ ಅವರಿಂದಲೂ  ಪ್ರಶಂಸೆಗೊಳಗಾಗಿದ್ದಾಾರೆ. ಈ ಯುವಕನ ಸಾಧನೆ ಮೆಚ್ಚಿಿ ಹಲವರು ಸನ್ಮಾಾನಿಸಿದ್ದಾಾರೆ.
ಮುಂದಿನ ದಿನಗಳಲ್ಲಿ ಇದೇ ಮಾದರಿಯ ಇನ್ನೂ ಹಲವು ರಚನೆಗಳನ್ನು ಸಾಂದರ್ಭಿಕವಾಗಿ ಮಾಡಲು ಯೋಚಿಸಿರುವ ಸಚಿನ್, ಅವಕಾಶ ಸಿಕ್ಕಲ್ಲಿ ಪ್ರಮುಖ ಸಭೆ, ಸಮಾರಂಭಗಳಲ್ಲಿ ಇದನ್ನು ಪ್ರದರ್ಶಿಸುವ ನಿರ್ಧಾರವನ್ನೂ ಮಾಡಿದ್ದಾಾರೆ. ಇದರಿಂದ ಸಾರ್ವಜನಿಕರಲ್ಲಿ ಇದು ಹೆಚ್ಚು ಪ್ರಚಲಿತವಾಗಲಿದೆಯಲ್ಲದೆ, ಯುವಕರಲ್ಲಿ ಅಥವಾ ಆಸಕ್ತರಲ್ಲಿ ಈ ಬಗ್ಗೆೆ ಜಾಗೃತಿ ಮೂಡಲಿದೆ. ಯುವಕರು ಇಂತಹ ಹೊಸ ವಿಧದ ಕೌಶಲ್ಯವನ್ನು ಕಲಿಯಲು ಪ್ರೇರಣೆಯಾಗುತ್ತದೆ ಎನ್ನುತ್ತಾಾರೆ ಸಚಿನ್.
ಸಚಿನ್ ಅವರ ಈ ಕೌಶಲ್ಯವನ್ನು ಪ್ರೋತ್ಸಾಾಹಿಸುವ ಕೆಲಸವಾಗಬೇಕಿದೆ. ಸಂಘ-ಸಂಸ್ಥೆೆಗಳು, ಗಣ್ಯರು ಇಂತಹ ಯುವಕರನ್ನು ಇನ್ನಷ್ಟು ಗುರುತಿಸುವ ಮೂಲಕ ಹೆಚ್ಚಿಿನ ಸಾಧನೆಗೆ ಪ್ರೇರೇಪಿಸಬೇಕಿದೆ.
published on 15.6.2019
,,,,,,,,,,,,,,,,,,,,,,,,,,,       

Saturday 8 June 2019

ಡಾನ್‌ಸ್‌ ಸ್ಪೋೋರ್ಟ್‌ಸ್‌ ಚಾಂಪಿಯನ್ 
ನಿಧಿ ಸುರೇಶ್




ಜಿಲ್ಲೆೆಯ ಮಟ್ಟಿಿಗೆ ಈ ಬಾಲೆಯದ್ದು ವಿಶೇಷ ಸಾಧನೆ. ಇನ್ನೂ ಹಲವರು ಕೇಳರಿಯದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಕಲೆ ಇದು. ಇದನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸುಲಭದ ಮಾತೇನಲ್ಲ. ಓದಿನ ಜೊತೆಗೆ ಅಷ್ಟೇ ಸಮಯವಿಟ್ಟು, ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಾಳೆ. ಈಕೆಯ ಹೆಸರು ನಿಧಿ ಸುರೇಶ್.
ನೃತ್ಯದಲ್ಲಿ ಜಿಲ್ಲೆೆಯ ಹಲವು ಪ್ರತಿಭೆಗಳು  ರಾಜ್ಯ-ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಿರಿಮೆಯನ್ನು ಹೆಚ್ಚಿಿಸಿದ್ದಾಾರೆ. ನೃತ್ಯದ
ಲ್ಲೇ ವಿವಿಧ ಪ್ರಾಾಕಾರಗಳಿದ್ದು, ಅವುಗಳ ಮೂಲಕ ವಿಶಿಷ್ಟ ಸಾಧನೆಯನ್ನು ಈಗಿನ ಯುವಕ-ಯುವತಿಯರು ಮಿಂಚುತ್ತಿಿದ್ದಾಾರೆ. ಅಂತಹ ನೃತ್ಯದ ವಿಶೇಷ ವಿಭಾಗವಾದ ಡ್ಯಾಾನ್‌ಸ್‌ ಸ್ಪೋೋರ್ಟ್‌ಸ್‌ ಈಗ ಹೆಚ್ಚು ಪ್ರಚಲಿತವಾಗತೊಡಗಿದೆ. ಈ ವಿಭಾಗದಲ್ಲಿ ತೀರ್ಥಹಳ್ಳಿಿಯ ಈ ಬಾಲಕಿ ದಕ್ಷಿಣ ಭಾರತದ ಮಟ್ಟದ ಚಿನ್ನದ ಪದಕ ಗೆದ್ದಿದ್ದಾಾಳೆ.
ನಿಧಿ ಬಾಲ್ಯದಿಂದಲೂ ಡಾನ್‌ಸ್‌‌ನಲ್ಲಿ ಪರಿಣಿತೆ. ಆದ್ದರಿಂದ ಈ ಕಲೆಯನ್ನು ಕಲಿಯಲು ವಿಶೇಷ ತೊಂದರೆ ಎದುರಾಗಲೇ ಇಲ್ಲ. ಆದರೆ ಕೆಲವೊಂದು ಟ್ರಿಿಕ್‌ಸ್‌‌ಗಳನ್ನು ಮಾತ್ರ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಇದನ್ನು ಅತಿ ಸುಲಭದಲ್ಲಿ ಕಲಿತು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಾಘನೀಯವೇ ಸರಿ. ವಿಶೇಷವಾಗಿ ಮಹಾನ್ ನಗರಗಳಲ್ಲಿ ಮಾತ್ರ ಇದು ಕಾಣಸಿಗುವ ಕಲೆ ಇದು. ಇನ್‌ಸ್ಟಾಾಗ್ರಾಾಮ್‌ನಲ್ಲಿ ಇದನ್ನು ನೋಡಿದ ನಿಧಿ, ಆಡಿಶನ್‌ಗಾಗಿ ಆಹ್ವಾಾನಿಸಿದ್ದನ್ನು ಗಮನಿಸಿ ಹೋಗಿದ್ದಳು. ಅಲ್ಲಿ ಆಯ್ಕೆೆಯೂ ಆದಳು. ಆದರೆ ತರಬೇತಿ ಅವಶ್ಯಕತೆ ಇತ್ತು. ಮಾಸ್ಟರ್ ತರುಣ್ ಎನ್ನುವವರು ಮೂರು ದಿನ ತರಬೇತಿ ನೀಡಿದ್ದರು. ಆನಂತರ ಒಂದು ತಿಂಗಳ ಕಾಲ ಮನೆಯಲ್ಲೇ ಇದನ್ನು ಸತತವಾಗಿ ಅಭ್ಯಸಿಸಿ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾದಳು.
 ಗೋವಾದಲ್ಲಿ ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್‌ಶಿಪ್ ನಡೆದಾಗ ನಿಧಿ ಅದರಲ್ಲಿ ಚಿನ್ನದ ಪದಕ ಧರಿಸಿದ್ದಳು. 15 ವರ್ಷ ಮೇಲ್ಪಟ್ಟವರ ಸ್ಪರ್ಧೆ ಇದಾಗಿತ್ತು. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರೂ ನಿಧಿ ಗೋಲ್‌ಡ್‌ ವಿನ್ನರ್ ಆಗಿ ಹೊರಹೊಮ್ಮಿಿದ್ದಾಾಳೆ. ಡಾನ್‌ಸ್‌ ಸ್ಪೋೋರ್ಟ್‌ಸ್‌ ಕೌನ್ಸಿಿಲ್ ಆಫ್ ಇಂಡಿಯಾ ಇದನ್ನು ಏರ್ಪಡಿಸಿತ್ತು. ಈಗ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆೆಯಾಗಿರುವುದರಿಂದ ಇನ್ನೂ ಹೆಚ್ಚಿಿನ ತರಬೇತಿ ಪಡೆಯುತ್ತಿಿದ್ದಾಾಳೆ. ಕೋಲ್ಕತ್ತಾಾದಲ್ಲಿ ಇದು ನಡೆಯಲಿದೆ. ಇದರಲ್ಲಿ ಇನ್ನೂ ಹೆಚ್ಚಿಿನ ಸಾಧನೆ ಮಾಡಬೇಕಿರುವುದರಿಂದ ವಿಶೇಷ ಶ್ರಮವನ್ನು ಹಾಕಿ  ಅಭ್ಯಾಾಸ ಮಾಡುತ್ತಿಿದ್ದಾಾಳೆ.
ನಿಧಿ ತೀರ್ಥಹಳ್ಳಿಿಯ ಕಾಂಗ್ರೆೆಸ್ ಮುಖಂಡ ಆಮ್ರಪಾಲಿ ಸುರೇಶ್ ಮತ್ತು ನಾಗಮಣಿ ದಂಪತಿಯ ಪುತ್ರಿಿ. ಬಾಲ್ಯದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದು, ಸದ್ಯ ಪ್ರಥಮ ಪಿಯುನಲ್ಲಿ ಅಲ್ಲಿಯೇ ಓದು ಮುಂದುವರೆಸಿದ್ದಾಾಳೆ. ಈ ನೃತ್ಯದಲ್ಲಿ ಇನ್ನಷ್ಟು ಕಲಿಕೆಯನ್ನು ಹೆಚ್ಚಿಿಸುವ ಇಚ್ಛೆೆ ಹೊಂದಿರುವ ನಿಧಿ, ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆೆ ಇಡುವುದಾಗಿ ಹೇಳುತ್ತಾಾಳೆ. ಏರೊನಾಟಿಕ್‌ಸ್‌ ಇಂಜಿನೀಯರ್ ಆಗುವ ಗುರಿ ಈಕೆಯದಾಗಿದೆ.
   ಈ ಕಲೆಯ ಜೊತೆ ಕರಾಟೆ ಪಟುವೂ ಆಗಿರುವ ನಿಧಿ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿಿತೀಯ ಸ್ಥಾಾನಿಯಾಗಿ ಹೊರಹೊಮ್ಮಿಿದ್ದಾಾಳೆ. ಕಬಡ್ಡಿಿ ಆಟಗಾರ್ತಿಯಾಗಿಯೂ ತಾನು ಓದುತ್ತಿಿರುವ ಶಾಲೆಯನ್ನು ಪ್ರತಿನಿಧಿಸುತ್ತಿಿದ್ದಾಾಳೆ. ಉತ್ತಮ ದೇಹದಾರ್ಢ್ಯಕ್ಕೆೆ ಕ್ರೀಡೆ ಅತ್ಯವಶ್ಯ. ಈ ಮೂಲಕ ಸಾಧನೆ ಮಾಡಿ ಏರ್‌ಫೋರ್ಸ್ ಸೇರಬೇಕೆನ್ನುವ ಮಹದಾಸೆ ಹೊಂದಿದ್ದೇನೆ. ಪಾಲಕರು ತನ್ನ ಸಾಧನೆಯ ಕನಸನ್ನು ನನಸು ಮಾಡಲು ಎಲ್ಲಾಾ ರೀತಿಯ ನೆರವು ನೀಡುತ್ತಿಿದ್ದಾಾರೆ ಎನ್ನುತ್ತಾಾಳೆ ನಿಧಿ.

published on 8-6-2019
........................................ 

Wednesday 5 June 2019

ಹುಟ್ಟಿಿದೂರಿಗೆ ತಂತ್ರಜ್ಞಾಾನ ತಂದ 
ರಾಘವೇಂದ್ರ 



ತಂತ್ರಜ್ಞಾಾನ ಮತ್ತು ಸಂಶೋಧನೆ ಮೂಲಕ ಮಾರುಕಟ್ಟೆೆಯಲ್ಲಿ ಹೊಸ  ಸೇವೆ ಮತ್ತು ಉತ್ಪನ್ನಗಳನ್ನು ಇಂದು ಕಾಣಬಹುದಾಗಿದೆ. ಜನರ ಅನೇಕ ಅವಶ್ಯಕತೆಗಳಿಗೆ ಪರಿಹಾರವೂ ಇದರಿಂದಾಗಿ ದೊರೆತಿದೆ. ದಿನೇ ದಿನೇ ಹೊಸ ಸಂಶೋಧನೆಗಳು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿಿದೆ. ನಗರದ ಯುವಕನೊಬ್ಬ ಆಕೃತಿ 3ಡಿ ಕಂಪನಿಯ ಹುಟ್ಟುಹಾಕಿ  ಡಿಸೈನ್ ಥಿಂಕಿಂಗ್ ಪ್ರಯೋಗಾಲಯವನ್ನು ನಗರದಲ್ಲಿ ಸ್ಥಾಾಪಿಸಿದ್ದಾಾರೆ. 
 ನಗರದ ಈ ಯುವಕನ ಹೆಸರು ರಾಘವೇಂದ್ರ. ವಿನೋಬನಗರದ ಕೆಎಚ್‌ಬಿ ಕಾಲನಿ ವಾಸಿಯಾಗಿರುವ ಆಡಿಟರ್ ಮತ್ತು ತೆರಿಗೆ ಸಲಹಾಗಾರರಾಗಿರುವ ಬಿ. ಸುರೇಂದ್ರ ಅವರ ಪುತ್ರ. ಇವರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾಾನ ಸಂಸ್ಥೆೆಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ಪದವಿ ಪಡೆದು ಅಲ್ಲಿಯೇ ಸಿಎಫ್‌ಡಿ ಮತ್ತು ಏರೋ ಡೈನಾಮಿಕ್‌ಸ್‌ ವಿಷಯದಲ್ಲಿ ಸಂಶೋಧನೆ ನಡೆಸಿ ಎಂ. ಟೆಕ್ ಮುಗಿಸಿದ್ದಾಾರೆ.
ಇವರ ತ್ರಿಿ ಡಿ ಪ್ರಿಿಂಟಿಂಗ್ ಸಂಶೋಧನೆ  ಇವರಿಗೆ ಅನೇಕ ಗೌರವಗಳನ್ನು ತಂದುಕೊಟ್ಟಿಿದೆ. ಇದರಿಂದಾಗಿ ಅವರಿಗೆ ಅನೇಕ ಶೈಕ್ಷಣಿಕ ಪ್ರಶಸ್ತಿಿ ಮತ್ತು ಗೌರವಗಳು ದಕ್ಕಿಿವೆ. ಬೆಂಗಳೂರಿನ  ಜೈನ್ ವಿಶ್ವವಿದ್ಯಾಾಲಯದ ಚಿನ್ನದ ಪದಕ ಮತ್ತು ಸಿಎಸ್‌ಐಆರ್- ಎನ್‌ಎಎಲ್‌ನ ಬಂಗಾರದ ಪದಕ  ಲಭಿಸಿದೆ. ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಐಎಎಂ-3ಡಿ ಸ್ಪರ್ಧೆಯಲ್ಲಿ  ಮತ್ತು ಜಪಾನಿನಲ್ಲಿ ನಡೆದ ಸಾಂಸ್ಕೃತಿಕ ವಿನಿಮಿಯ ಕಾರ‌್ಯಕ್ರಮದಲ್ಲಿ ಭಾರತವನ್ನು ಅವರು ಪ್ರತಿನಿಧಿಸಿದ್ದರು. 
2016ರಲ್ಲಿ ಬಿಇ ಎರೋಸ್ಪೇಸ್‌ನಲ್ಲೂ ಚಿನ್ನದ ಪದಕದೊಂದಿಗೆ ಪಾಸಾಗಿದ್ದಾಾರೆ. ಇವೆಲ್ಲಾಾ ಸಾಧನೆಯ ನಂತರ ಆಕೃತಿ 3ಡಿ ಕಂಪನಿಯನ್ನು ಹುಟ್ಟುಹಾಕಿ ಸದ್ಯ ಅದರ ಸಂಸ್ಥಾಾಪಕ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಈ ಕಂಪನಿಯು ಸುರತ್ಕಲ್‌ನಲ್ಲಿದ್ದು, ಇಂದಿನಿಂದ ಶಿವಮೊಗ್ಗದ ಮಾಚೇನಹಳ್ಳಿಿಯ  ಕಿಯೋನಿಕ್‌ಸ್‌ ಐಟಿ ಪಾರ್ಕಿನಲ್ಲಿ ತನ್ನ ಶಾಖೆಯನ್ನು ತೆರೆದಿದೆ.
ತಾನು ಕಲಿತಿದ್ದನ್ನು ಕೇವಲ ರಾಜ್ಯಕ್ಕೆೆ ಮಾತ್ರವಲ್ಲದೆ ಸ್ವಂತ ಊರಿಗೂ ತಲುಪಿಸಬೇಕು, ಆ ಮೂಲಕ ಇಲ್ಲಿನ ಯುವಜನತೆಯಲ್ಲೂ ವಿಶೇಷ ಜ್ಞಾಾನ ಹುಟ್ಟುಹಾಕುವುದರ ಮೂಲಕ ಹಲವರಿಗೆ ಮಾರ‌್ಗದರ್ಶನ ಮತ್ತು ಉದ್ಯೋೋಗ  ನೀಡಬೇಕೆಂಬ ಹೆಬ್ಬಯಕೆ ಹೊತ್ತಿಿರುವ ರಾಘವೇಂದ್ರ, ಈ ಸಂಸ್ಥೆೆಯ ಮೂಲಕ  ಕೈಗಾರಿಕೆಗಳಿಗೆ ಅಥವಾ ಇತರ ಸಂಸ್ಥೆೆಗಳಿಗೆ ಹೊಸ ಉತ್ನನ್ನಗಳ ವಿನ್ಯಾಾಸ ರೂಪಿಸಿಕೊಡುವುದು, ಪ್ರೊಟೊಟೈಪಿಂಗ್,  ತ್ರಿಿಡಿ ಪ್ರಿಿಂಟಿಂಗ್ ಮಾಡಿಕೊಡಲಿದ್ದಾಾರೆ.
ಇತ್ತೀಚಿನ ದಿನಗಳಲ್ಲಿ ತ್ರಿಿಡಿ ಪ್ರಿಿಇಟಿಂಗ್ ಹೆಚ್ಚು ಜನಪ್ರಿಿಯವಾಗುತ್ತಿಿರುವ ಹಿನ್ನೆೆಲೆಯಲ್ಲಿ ಇನ್ನಷ್ಟು ಆಧುನಿಕವಾಗಿ ಇದನ್ನು ರೂಪಿಸಿ ಅದರಲ್ಲೂ ವಿಶೇಷವಾಗಿ ಕೈಗಾರಿಕೆಗಳಿಗೆ ಅತಿಅವಶ್ಯವಾಗಿರುವುದರಿಂದ ಅವರ ಎಲ್ಲ ಅವಶ್ಯಕತೆಗಳನ್ನು ನೀಗಿಸಿ, ವಹಿವಾಟು ನಿರ‌್ವಹಣೆಯಲ್ಲಿ ಹೊಸ ಕ್ರಾಾಂತಿಯನ್ನು ಮಾಡಲು  ಸನ್ನದ್ಧರಾಗಿದ್ದಾಾರೆ.
ಕಡಿಮೆ ವೇಗದ ಏರೋ ಡೈನಾಮಿಕ್, ವಿಂಡ್ ಎನರ್ಜಿ ಮತ್ತು ಏರಿಯಲ್ ವೆಹಿಕಲ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸಲು ಯೋಜನೆ ರೂಪಿಸಿದ್ದಾಾರೆ. ಹೈದರಾಬಾದ್, ತ್ರಿಿವೇಂದ್ರಮ್, ಚೆನ್ನೈ ಮತ್ತು ಕೊಲ್ಕತ್ತಾಾದಲ್ಲಿ ನಡೆದ ಹಲವಾರು ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊೊಂಡು ಪ್ರಬಂಧ ಮಂಡಿಸಿದ್ದಾಾರೆ.
ಬ್ಯಾಾಡ್ಮಿಿಂಟನ್ ಆಗಿರುವ ಇವರು, ಪೇಂಟಿಂಗ್, ಪೆನ್ಸಿಿಲ್ ಸ್ಕೆೆಚ್, ಕವನ ಬರೆಯುವುದನ್ನೂ ರೂಢಿಸಿಕೊಂಡಿದ್ದಾಾರೆ.         
ಶಿವಮೊಗ್ಗದಲ್ಲೂ ಸಾಕಷ್ಟು ಪ್ರತಿಭಾವಂತರಿರುವುದರಿಂದ ಅವರ ತಂಡ ಕಟ್ಟಿಿ  ಹೊಸ ಹೊಸ ಸಂಶೋಧನೆ ಮಾಡುವುದು ಮತ್ತು ಶಾಲಾ- ಕಾಲೇಜುಗಳಲ್ಲಿ ತ್ರಿಿಡಿ ಪ್ರಿಿಂಟಿಂಗ್ ಕಲಿಕೆಗೆ ಸಹಕರಿಸುವುದು ಇವರ ಉದ್ದೇಶವಾಗಿದೆ.  ನಗರದ ಪ್ರತಿಭೆಗಳು ವಿಜ್ಞಾಾನ ಮತ್ತು ತಂತ್ರಜ್ಞಾಾನ, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅಂತರರಾಜ್ಯ ಮತ್ತು ವಿದೇಶಗಳಿಗೆ ತೆರಳುತ್ತಿಿರುವ ಸಂದರ್ಭದಲ್ಲಿ ನಗರದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ಇಲ್ಲಿಯೇ ಆಕೃತಿ 3ಡಿ ಸಂಸ್ಥೆೆಯನ್ನು ಕಟ್ಟಲು ರಾಘವೇಂದ್ರ ಮುಂದಡಿ ಇಟ್ಟಿಿದ್ದಾಾರೆ.

published on 1st June 2019
..............................

Saturday 25 May 2019

"ಟಿಯು ರ್ಯಾಾಂಕ್ ಸಾಧಕಿ
 ಸುೀದಾ ಆರ್ಶಿ ಫಾತಿಮಾ


ಸತತ ಪ್ರಯತ್ನ, ಛಲ ಮತ್ತು ಹಠ ಇದರ ಸ್ಥಾಾನವನ್ನು ಬೇರಾವುದೂ ತುಂಬಲು ಈ ಜಗತ್ತಿಿನಲ್ಲಿ ಸಾಧ್ಯ"ಲ್ಲ. ಇದರೊಟ್ಟಿಿಗೆ ದೃಢನಿರ್ಧಾರವೂ ಸೇರಿದರೆ ಆ ವ್ಯಕ್ತಿಿ ಸರ್ವಶಕ್ತನಾಗುತ್ತಾಾನೆ ಎನ್ನುವ ಮಾತಿದೆ.
ಶಿವಮೊಗ್ಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾಾನವನ್ನು ಹೊಂದಿದೆ. ಇಲ್ಲಿನ "ದ್ಯಾಾರ್ಥಿಗಳು  ಸಾಕಷ್ಟು ಪ್ರತಿಭಾವಂತರು, ಅಸಾಧಾರಣ ಮೇಧಾ"ಗಳು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ "ದ್ಯೆೆಯ ಪ್ರತಿಭೆಯನ್ನು ತೋರ್ಪಡಿಸಿದ್ದಾಾರೆ.   
ಆರ್ಶಿ ಫಾತಿಮಾ ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎದಲ್ಲಿ "ಟಿಯುಗೆ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಅಪ್ರತಿಮ ಪ್ರತಿಭೆ ಮೆರೆದಿದ್ದಾಾರೆ. ಬಾಲ್ಯದಿಂದಲೂ ಪ್ರತಿಭಾವಂತ "ದ್ಯಾಾರ್ಥಿನಿಯಾಗಿರುವ ಇವರು, ಸತತ ಅಧ್ಯಯನ ಮತ್ತು ಓದಿನ ನಿಷ್ಠೆೆಯ ಮೂಲಕ ಈ ಸಾಧನೆ ಮಾಡಿದ್ದಾಾರೆ. "ಟಿಯುನಲ್ಲಿ ರ್ಯಾಾಂಕ್ ಗಳಿಸುವುದು ಸುಲಭದ ಕೆಲಸವಲ್ಲ. ಇಂತಹ ಅತಿ ಕಷ್ಟದ ಕೆಲಸವನ್ನು ಸಾಧಿಸಿ ಜಿಲ್ಲೆೆಗೆ ಮತ್ತು "ದ್ಯಾಾಸಂಸ್ಥೆೆಗೆ ಹಾಗೂ ಕುಟುಂಬಕ್ಕೆೆ ಕೀರ್ತಿ ತಂದಿದ್ದಾಾರೆ.
  ಸುೀದಾ ಎಸ್‌ಎಸ್‌ಎಲ್‌ಸಿಯವರೆಗೆ ಓದಿದ್ದು ವಾಸ" ಸ್ಕೂಲ್‌ನಲ್ಲಿ. ಆನಂತರ ಪಿಯುವನ್ನು ಡಿ"ಎಸ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ "ಜ್ಞಾಾನ "ಷಯದ ಮೂಲಕ ಓದಿ  ಶೇ. 70ರಷ್ಟು ಸಾಧನೆ ಮಾಡಿದರು. ಜೆಎನ್‌ಎನ್‌ಸಿಯಲ್ಲಿ "ಜ್ಞಾಾನದಿಂದ ಬಿಬಿಎಂಗೆ ಸೇರಿ ಅಲ್ಲಿ  ಶೇ. 94ರಷ್ಟು ಅಂಕ ಪಡೆದು ಕುವೆಂಪು ""ಗೆ ಎರಡನೆಯ ರ್ಯಾಾಂಕ್ ಪಡೆದ್ದಾಾರೆ. ಎಂಬಿಎಗೆ ಪಿಎಸ್‌ಎ ಸರಿ ಅಲ್ಲಿ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಸಾಧನೆಯ ಹಾದಿಯನ್ನು ಮುಂದುವರೆಸಿದ್ದಾಾರೆ.
ನಗರದ ಆರ್‌ಎಂಎಲ್‌ನಗರದ ವಾಸಿಯಾಗಿರುವ ಸುೀದಾ ತಂದೆ ಸಯ್ಯದ್ ಫೈಜುಲ್ಲಾಾ ವ್ಯಾಾಪಾರೋದ್ಯ"ುಯಾಗಿದ್ದಾಾರೆ. ಇವರ ಅಣ್ಣನೂ ಸಹ ಪಿಇಎಸ್‌ನಲ್ಲಿ ಇಂಜಿನೀಯರಿಂಗ್‌ನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ ಸೌದಿಯಲ್ಲಿ ಮೆಕ್ಯಾಾನಿಕಲ್ ಇಂಜಿನೀಯರ್ ಆಗಿ ಕೆಲಸದಲ್ಲಿದ್ದಾಾರೆ. ಸುೀದಾ ಈಗ ನಗರದ ಗ್ಯಾಾಲಘರ್ ಸಂಸ್ಥೆೆಯಲ್ಲಿ  ಸೀನಿಯರ್ ಇನ್ಶೂರೆನ್‌ಸ್‌ ಪ್ರೊಫೆಸರ್ ಆಗಿ ಕಾರ‌್ಯನಿರ್ವ"ಸುತ್ತಿಿದ್ದು, ಮುಂದೆ ಪಿಎಚ್‌ಡಿ ಮಾಡುವ ಆಸೆ ಹೊತ್ತಿಿದ್ದಾಾರೆ.
ಎಂಬಿಎ ಮುಗಿದ ನಂತರ ಬೆಂಗಳೂರಿನ ಪ್ರತ್ಠಿಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆೆ ಲಭಿಸಿದ್ದರೂ ಅಲ್ಲಿಗೆ ತೆರಳದೆ ನಗರದಲ್ಲೇ ಉದ್ಯೋೋಗ ಆಯ್ಕೆೆ ಮಾಡಿಕೊಂಡಿದ್ದಾಾರೆ. ಪ್ರತಿದಿನ ಕನಿಷ್ಟ ಎರಡೂವರೆ ಗಂಟೆ ಓದುತ್ತಿಿದ್ದೆೆ. ಅಂದಿನ ಕಲಿಕೆಯನ್ನು ಅಂದೇ ಓದಿ ಮುಗಿಸುತ್ತಿಿದ್ದೆೆ. ಕಾಲೇಜಿನ ವಾಚನಾಲಯದಿಂದ ಪುಸ್ತಕಗಳನ್ನು ತಂದು ಸ್ವತಃ ನೋಟ್‌ಸ್‌ ಸಿದ್ಧಮಾಡಿಕೊಳ್ಳುತ್ತಿಿದ್ದೆೆ. ಸತತ ಪರಿಶ್ರಮ ಮತ್ತು ನಿಷ್ಠೆೆ ಇದ್ದರೆ ಸಾಧನೆ ಮಾಡಬಹುದು ಎನ್ನುತ್ತಾಾರೆ ಅವರು.
ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಕರಿದ್ದುದರಿಂದ ಅವರ ಮಾರ್ಗದರ್ಶನವೂ ಸಾಕಷ್ಟು ನೆರವು ನೀಡಿತು. ಅಧ್ಯಯನದಲ್ಲಿ ಆತ್ಮ"ಶ್ವಾಾಸ ಮೂಡುವಂತೆ ಮಾಡುವ ಅಧ್ಯಾಾಪಕರು ತನ್ನೆೆಲ್ಲ ಸಾಧನೆಗೆ ಕಾರಣರಾದರೆಂದು ತುಂಬು ಅಭಿಮಾನದಿಂದ ಅವರನ್ನು ನೆನೆಪಿಸಿಕೊಳ್ಳುತ್ತಾಾರೆ.
  "ದ್ಯಾಾರ್ಥಿಗಳು ತಮ್ಮ ಆತ್ಮತೃಪ್ತಿಿಗಾಗಿ ಓದಬಾರದು. ನಮ್ಮ ಅಧ್ಯಯನದಿಂದ ಪಾಲಕರಿಗೆ ಕೀರ್ತಿ ಬರಬೇಕು. ನಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಾಗಬೇಕು. ಅಧ್ಯಾಾಪಕರ ಮಾರ‌್ಗದರ್ಶನದಂತೆ ನಿರಂತರ ಅಧ್ಯಯನ ಮತ್ತು ಅಂದಂದಿನ ಪಾಠವನ್ನು ಅಂದೇ ಓದುವುದರಿಂದ ಸಾಧನೆ ಸಾಧ್ಯವಾಗುತ್ತದೆ. "ದ್ಯಾಾರ್ಥಿ ದೆಸೆಯಲ್ಲಿ ಏನೇ ಮಾಡಿದರೂ ಸಾಧನೆ ಮಾಡಬೇಕು. ಕನಸನ್ನು ಕಂಡು ಅದನ್ನು ನನಸಾಗಿಸಲು ಯತ್ನಿಿಸಬೇಕು ಎನ್ನುತ್ತಾಾರೆ ಸುೀದಾ.   
ಪ್ರತಿಭಾನ್ವಿಿತರಾದ ಸುೀದಾ, ಅವರ ಸೋದರ ಮತ್ತು ಸಹೋದರಿ ಸಹ  ಓದಿನಲ್ಲಿ ಮುಂದು. ಇವರ ಪಾಲಕರೂ ಸಹ ಮಕ್ಕಳನ್ನು ಚೆನ್ನಾಾಗಿ ಓದಿಸಿ ಸತ್ಪ್ರಜೆಗಳನ್ನಾಾಗಿ, ಉತ್ತಮ ಸಂಸ್ಕಾಾರವಂತರನ್ನಾಾಗಿ ಮಾಡುವ ಗುರಿ ಹೊಂದಿದ್ದಾಾರೆ. ಮಕ್ಕಳು ಇದನ್ನು ಸಾಧಿಸಿ ತೋರಿಸುತ್ತಿಿದ್ದಾಾರೆ. ಶಿಕ್ಷಣದಿಂದ ಸಮಾಜದಲ್ಲಿ ಮುಂದೆ ಬಂದು ಉತ್ತಮ ಜೀವನ ನಡೆಸಬೇಕು, ಸ್ವಾಾವಲಂಬಿಗಳಾಗಬೇಕು ಎನ್ನುವುದು ಇವರ ಅಭಿಮತ. 

published on 25-5-2019
........................................

Saturday 11 May 2019

      
ಕಬಡ್ಡಿಿ ರೆಫ್ರಿಿಯಾಗಿ 
ಸಿದ್ದಯ್ಯ

 

ಪ್ರತಿದಿನವೂ ಹೊಸ ಅವಕಾಶಗಳು ನಮ್ಮೆೆದುರು ಬರುತ್ತವೆ. ನಾವು ನಿನ್ನೆೆಯ ಗೆಲುವಿನ ಅಥವಾ ಸೋಲಿನ ಆಧಾರದ ಮೇಲೆ ಮುಂದಿನ ಹೆಜ್ಜೆೆ ಇಡುತ್ತಾಾ ಹೋಗಬೇಕು. ಇದು ಕ್ರೀಡೆಯಲ್ಲಿ ಮಹತ್ವದ ಘಟ್ಟ. ಇವುಗಳನ್ನು ಅಳವಡಿಸಕೊಂಡವರು ಮಾತ್ರ ಉತ್ತಮ ಕ್ರೀಡಾಪಟುವಾಗಿ ಮಿಂಚಬಲ್ಲ ಎನ್ನುವ ಮಾತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುತ್ತ ಹೋದಂತೆ ಉನ್ನತ ಹುದ್ದೆೆಯನ್ನೂ ಪಡೆಯಬಹುದು. ಕೋಚ್ ಆಗಿ, ನಿರ್ಣಾಯಕರಾಗಿ, ರೆಫ್ರಿಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು. ಇದಕ್ಕೆೆಲ್ಲ ಮುಖ್ಯವಾಗಿ ಬೇಕಾದದ್ದು ಶಿಸ್ತು, ಉತ್ತಮ ಗುಣನಡತೆ ಮತ್ತು ಆತ್ಮವಿಶ್ವಾಾಸ. ಇವು ಆಟಗಾರನನ್ನು ಉತ್ತಮ ವ್ಯಕ್ತಿಿತ್ವದವನನ್ನಾಾಗಿ ರೂಪಿಸುವುದರ ಜೊತೆಗೆ ಆತನಿಗೆ ಉನ್ನತ ಸ್ಥಾಾನವನ್ನೂ ಕೊಡಬಲ್ಲವು.
ಭದ್ರಾಾವತಿಯ ಪೇಪರ್‌ಟೌನ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ದೈಹಿಕ ಶಿಕ್ಷಕ  ಎನ್. ಸಿದ್ದಯ್ಯ ರಾಷ್ಟ್ರೀಯ ಕಬಡ್ಡಿಿ ರೆಫ್ರಿಿಯಾಗಿ ಆಯ್ಕೆೆಯಾಗಿದ್ದಾಾರೆ. 20 ವರ್ಷಗಳಿಂದ ಕ್ರೀಡಾ ಜೀವನದಲ್ಲಿ ಅವರು ಮಾಡಿದ ಸಾಧನೆ ಅವರನ್ನು ಆ ಕ್ಷೇತ್ರದಲ್ಲಿ ಉನ್ನತ ಸ್ಥಾಾನಕ್ಕೆೆ ಕರೆದೊಯ್ದಿಿದೆ. ಈಗಾಗಲೇ ನಿರ್ಣಾಯಕರಾಗಿ ರಾಷ್ಟ್ರಮಟ್ಟದಲ್ಲೂ ಕೆಲಸ ನಿರ್ವಹಿಸುತ್ತಿಿರುವ ಸಿದ್ದಯ್ಯ ಈಗ ರೆಫ್ರಿಿಯಾಗಿ ಜಿಲ್ಲೆೆಗೆ ಹೆಮ್ಮೆೆ ತಂದಿದ್ದಾಾರೆ. ಮೇ 13ರಿಂದ ಪೂನಾದಲ್ಲಿ ನಡೆಯಲಿರುವ ಇಂಡೋರ್ ಇಂಟರ್ ನ್ಯಾಾಶನಲ್ ಕಬಡ್ಡಿಿ ಪ್ರೀಮಿಯರ್ ಲೀಗ್‌ಗೆ ರೆಫ್ರಿಿಯಾಗಿ ನೇಮಕಗೊಂಡಿದ್ದಾಾರೆ.
ಚನ್ನಗಿರಿ ತಾಲೂಕು ಶೆಟ್ಟಿಿಹಳ್ಳಿಿಯವರಾದ ಸಿದ್ದಯ್ಯ ಪ್ರಾಾಥಮಿಕ ಮತ್ತು ಹೈಸ್ಕೂಲು ವಿದ್ಯಾಾಭ್ಯಾಾಸವನ್ನು ಸ್ವಗ್ರಾಾಮದಲ್ಲೇ ಓದಿ ಆನಂತರ ಭದ್ರಾಾವತಿಯಲ್ಲಿ ಕಾಲೇಜು ಶಿಕ್ಷಣ ಪಡೆದರು. ಹೈಸ್ಕೂಲು ಕಲಿಯುವಾಗಲೇ ಕ್ರೀಡೆಯಲ್ಲಿ ಮುಂದು. ಕಬಡ್ಡಿಿ ಅವರ ನೆಚ್ಚಿಿನ ಆಟ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅನೇಕ ಬಾರಿ ಭಾಗವಹಿಸಿದ್ದಾಾರೆ. ಜೊತೆಗೆ ತಂಡ ಕಟ್ಟಿಿಕೊಂಡು ಹಲವಾರು ಟೂರ್ನಿ ಆಡಿ ಜಯಿಸಿ ಬಂದಿದ್ದಾಾರೆ. 
ಭದ್ರಾಾವತಿಯಲ್ಲಿ ಓದುವಾಗ ಕೋಚ್‌ಗಳಾದ ರಂಗನಾಥ ಮತ್ತು ದೇವರಾಜ್ ಅವರಿಂದ ಸತತ ತರಬೇತಿ ಪಡೆದುದರ ಫಲವಾಗಿ ಇನ್ನಷ್ಟು ಪಕ್ವ ಕ್ರೀಡಾಪಟುವಾಗಿ ಹೊರಹೊಮ್ಮಿಿದರು. ಭದ್ರಾಾವತಿಯಲ್ಲಿ ಈ ಇಬ್ಬರು ತರಬೇತುದಾರರು ಬಹುತೇಕ ಕ್ರೀಡಾಪಟುಗಳನ್ನು ತಯಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದಾಾರೆ. ಮಲ್ಲಾಾಡಿಹಳ್ಳಿಿಯ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ಕೋರ್ಸು ಮುಗಿಸಿ ಭದ್ರಾಾವತಿಗೆ ಬಂದು ಕೆಲಸಕ್ಕೆೆ ಸೇರಿದರು. ಅಲ್ಲಿಂದ ಅವರ ಕ್ರೀಡಾ ಜೀವನದ ಯಶಸ್ಸು ಮೇಲಕ್ಕೆೆರುತ್ತಲೇ ಇದೆ.
ಭದ್ರಾಾವತಿಯ ಭದ್ರಾಾ ಕಬಡ್ಡಿಿ ತಂಡದ ಆಟಗಾರರಾಗಿ ಆಡಿ, ಅದನ್ನು ಮುನ್ನಡೆಸಿ, ಆ ತಂಡ ರಾಜ್ಯದಲ್ಲೇ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಸಿದ್ದಯ್ಯ ಅವರ ಪಾತ್ರ ದೊಡ್ಡದು. ಜಿಲ್ಲೆೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲೇ ಕಬಡ್ಡಿಿಯಲ್ಲಿ ಸಿದ್ದಯ್ಯ ಅವರದು ಮಹತ್ವದ ಹೆಸರು. ಆದ್ದರಿಂದಲೇ ನಿರ್ಣಾಯಕರಾಗಿ ನೂರಾರು ಸ್ಥಳಗಳಲ್ಲಿ ಕೆಲಸ ಮಾಡಿ, ಈಗ ರೆಫ್ರಿಿಯಾಗಿ ಭಡ್ತಿಿ ಹೊಂದಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೆ ಇದೊಂದು ಹೆಮ್ಮೆೆಯ ವಿಚಾರವೇ ಸರಿ.
ಕ್ರೀಡೆ ಉತ್ತಮ ಗುಣ ನಡತೆಯನ್ನು ಕಲಿಸುತ್ತದೆ. ನಿಯಮದಂತೆ ಆಡುವುದನ್ನು ಕಲಿಸುತ್ತದೆ. ಜಯ ಅಥವಾ ಅಪಜಯ ಯಾವುದೇ ಎದುರಾದರೂ ಮುಂದಿನ ಹೆಜ್ಜೆೆಯನ್ನು ಹೇಗೆ ಧೈರ್ಯದಿಂದ ಇಡಬೇಕೆನ್ನುವುದನ್ನು ಹೇಳಿಕೊಡುತ್ತದೆ. ಉತ್ತಮ ಹವ್ಯಾಾಸ, ಆತ್ಮವಿಶ್ವಾಾಸ, ಶಿಸ್ತು ಮತ್ತು ಸಮೂಹದ ನಾಯಕನಾಗಿ ಬೆಳೆಯುವುದನ್ನು ಹೇಳಿಕೊಡುತ್ತದೆ. ಇಷ್ಟೆೆಲ್ಲಾಾ ಗುಣಗಳನ್ನು ಕ್ರೀಡೆಯಿಂದ ಕಲಿತು ಇಂದು ರೆಫ್ರಿಿಯಾಗಿದ್ದೇನೆ ಎನ್ನುತ್ತಾಾರೆ ಸಿದ್ದಯ್ಯ.
ಮೇ 13ರಿಂದ ಪುಣೆಯಲ್ಲಿ  ಆನಂತರ ಮೈಸೂರಿನಲ್ಲಿ  ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕಬಡ್ಡಿಿ ಚಾಂಪಿಯನ್‌ಶಿಪ್‌ಗೆ ರೆಫ್ರಿಿಯಾಗಿ ತೆರಳಲು ಸಿದ್ಧತೆ ನಡೆಸುತ್ತಿಿದ್ದಾಾರೆ.  

published on 11-5-2019
...........................................     

Tuesday 7 May 2019

ರ್ಟ್ರೋಯ ಬಾಲ ಪ್ರತಿಭೆ
ದಿನೇಶ್ ನಾಯ್‌ಕ್‌
.............................


ಕ್ರೀಡೆಯಲ್ಲಿ ವಯಸ್ಸು ಮಹತ್ವವಲ್ಲ. ದೈ"ಕವಾಗಿ ಸದೃಢವಾಗಿರುವುದಕ್ಕಿಿಂತಲೂ ಬಲಿಷ್ಠ ಮನಸ್ಸಿಿರಬೇಕು. ಕಠಿಣ ಶ್ರಮ, ಹೋರಾಟದ ಮನೋಭಾವ ಅವಶ್ಯ. ಇಲ್ಲಿ ಬುದ್ಧಿಿವಂತಿಕೆಯ ಪ್ರದರ್ಶನಕ್ಕಿಿಂತ ಸವಾಲನ್ನು ಹೇಗೆ ಎದುರಿಸಬೇಕೆಂಬ ಜಾಣ್ಮೆೆ ಮುಖ್ಯ.
ಇಷ್ಟೆೆಲ್ಲ ಗುಣ ಹೊಂದಿದವರು ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಭದ್ರಾಾವತಿಯ ಎಸ್‌ಎಸ್‌ಎಲ್‌ಸಿ "ದ್ಯಾಾರ್ಥಿ ದಿನೇಶ್ ನಾಯ್‌ಕ್‌ ರ್ಟ್ರೋಯ ಖೊಖೊ ಆಟಗಾರನಾಗಿ ಹೊರಹೊ"್ಮುದ್ದಾಾನೆ. ಪ್ರಾಾಥ"ುಕ ಶಾಲೆುಂದಲೇ ಅಥ್ಲೆೆಟಿಕ್‌ಸ್‌‌ನಲ್ಲಿ ಅಪಾರ ಸಾಧನೆ ಮಾಡುತ್ತ, ಪ್ರಶಸ್ತಿಿಗಳನ್ನು ಸೂರೆಮಾಡಲಾರಂಭಿಸಿದ ಈ ಬಾಲಕ ನಂತರದ ದಿನಗಳಲ್ಲಿ ಖೊಖೊವನ್ನು ಹೆಚ್ಚಾಾಗಿ ಆಡಲಾರಂಭಿಸಿ, ಈಗ ರ್ಟ್ರೋಯ ಜೂನಿಯರ್ ತಂಡದ ನಾಯಕನಾಗಿ ಮುನ್ನಡೆದಿದ್ದಾಾನೆ. ಅನೇಕ ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಗೆದ್ದು ತಂದಿದ್ದಾಾನೆ.
4ನೆಯ ತರಗತಿಯಲ್ಲಿದ್ದಾಾಗ ಖೊಖೊ ಆರಂಭಿಸಿದ ದಿನೇಶ್, ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದು ಯಶಸ್ವಿಿಯಾಗಿದ್ದಾಾನೆ. 7ನೆಯ ತರಗತಿಯ ನಂತರ ಭದ್ರಾಾವತಿಯ ಖೊಖೊ ಕ್ಲಬ್‌ಗೆ ಸೇರ್ಪಡೆಗೊಂಡು ಪ್ರತಿದಿನ ಸಂಜೆ ಅಲ್ಲಿ ಎರಡು ಗಂಟೆ ತರಬೇತು ಪಡೆದಿದ್ದಾಾನೆ. ತನ್ನ ಈ ಸಾಧನೆಗೆ ಶಿಕ್ಷಕರಾದ ಧನಂಜಯ ಮತ್ತು ನೂತನ್ ಅವರನ್ನು ಇಂದಿಗೂ ಸ್ಮರಿಸುತ್ತಾಾನೆ.
ಭದ್ರಾಾವತಿ ತಾಲೂಕು "ರಿಯೂರಿನ ತಾಂಡಾದ ವಾಸಿ ಕುಮಾರ್ ನಾಯ್‌ಕ್‌ ಮತ್ತು ಕಮಲೀಬಾು ಅವರ 3ನೆಯ ಪುತ್ರನಾಗಿರುವ ದಿನೇಶ್, ಮನೆಯಲ್ಲಿ ಕಿತ್ತು ತಿನ್ನುವ ಬಡತನ"ದ್ದರೂ ಕ್ರೀಡೆಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಛಲ ತೊಟ್ಟಿಿದ್ದಾಾನೆ. ಇದಕ್ಕಾಾಗಿ ದಾವಣಗೆರೆಯ ಕ್ರೀಡಾ ಹಾಸ್ಟೆೆಲಿನಲ್ಲಿ ಉಳಿದು ಒಂದು ವರ್ಷ ಅಂದರೆ ಎಸ್‌ಎಸ್‌ಎಲ್ಸಿಿತಯನ್ನು ಓದಿ ಬಂದಿದ್ದು, ಫಲಿತಾಂಶ ಕಾಯುತ್ತಿಿದ್ದಾಾನೆ.
ಕುಮಾರ್ ನಾಯ್‌ಕ್‌ ಮತ್ತು ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಮನೆಯಲ್ಲಿ ಹೆಚ್ಚಿಿನ ಓದನ್ನು ಯಾರೂ ಮುಂದುವರೆಸದ ಕಾರಣ ಕ್ರೀಡೆಯಂತೆಯೇ ಓದಿನಲ್ಲೂ ಸಾಧಾರಣ ಚುರುಕಿರುವ ದಿನೇಶ್‌ನನ್ನು ಹೇಗಾದರೂ ಓದಿಸಿಸಲು ಪಾಲಕರು ನಿರ್ಧರಿಸಿದ್ದಾಾರೆ. ಕ್ರೀಡಾ ಖೋಟಾದಲ್ಲಿ ಸ್ಕಾಾಲರ್‌ಶಿಪ್ ಸಹ ಈತನಿಗೆ ದೊರೆಯುತ್ತಿಿದ್ದು, ಪಿಯು ಓದಿಗೆ ಸಾರ್ವಜನಿಕರ ನೆರವನ್ನು ಪಡೆಯಲು ಯೋಚಿಸಿದ್ದಾಾನೆ.
"ರಿಯೂರಿನಲ್ಲಿ ಸರ್ಕಾರಿ ಪ್ರಾಾಥ"ುಕ ಶಾಲೆಯನ್ನು ಮುಗಿಸಿದ ನಂತರ, ಎರಡು ವರ್ಷ ಭದ್ರಾಾವತಿಯ "ಶ್ವೇಶ್ವರಯ್ಯ ಹೈಸ್ಕೂಲಿನಲ್ಲಿ ಮುಗಿಸಿದ್ದಾಾನೆ. ಅಲ್ಲಿ ಚೆನ್ನಾಾಗಿ ಆರಂಭಿಕ ತರಬೇತಿ ಲಭಿಸಿದ್ದರಿಂದ ಖೊಖೊದಲ್ಲಿ ಸತತ ಸಾಧನೆಯ ಹಾದಿಯಲ್ಲಿದ್ದಾಾನೆ. ಈತ 14ರ ಒಳಗಿನ ರಾಜ್ಯ ತಂಡದ ನಾಯಕನಾಗಿ  ಒಡಿಶಾ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ನವದೆಹಲಿಯಲ್ಲಿ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾಾನೆ. ಇವುಗಳಲ್ಲೆೆಲ್ಲ ಗೆದ್ದು ""ಧ ಪದಕಗಳು ಲಭಿಸಿವೆ. ಮುಂದಿನ ತಿಂಗಳು ಕೊಲ್ಕೊೊತ್ತಾಾದಲ್ಲಿ ರ್ಟ್ರೋಯ ಕಿರಿಯರ ಖೊಖೊ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದಕ್ಕೆೆ ತಯಾರಿ ನಡೆಸಿದ್ದಾಾನೆ. ರಾಜ್ಯಮಟ್ಟದಲ್ಲೂ ಮೈಸೂರು, ಬೆಂಗಳೂರು, ದಾವಣಗೆರೆ, ಹಾವೇರಿ ಮತ್ತು ಬೀದರ್‌ನಲ್ಲಿ ನಡೆದ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿ ಜಯಶೀಲನಾಗಿದ್ದಾಾನೆ.  ಬಹುತೇಕ ಪಂದ್ಯಾಾವಳಿಗಳಲ್ಲಿ ಈತನಿಗೆ ಅಲ್‌ರೌಂಡರ್ ಪ್ರಶಸ್ತಿಿ ಸಹ ದಕ್ಕಿಿದೆ. ಇದು ಈತನ ಆಟದ ಸಾಮರ್ಥ್ಯಕ್ಕೆೆ ಸಿಕ್ಕ ಮನ್ನಣೆಯಾಗಿದೆ. 
ಪಿಯು ಓದುತ್ತಲೇ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಖೋಟಾದಿಂದಲೇ ಮುಂದೆ ಹುದ್ದೆೆ ಪಡೆಯಬೇಕೆಂಬ ಕನಸನ್ನು ಹೊತ್ತಿಿರುವ ದಿನೇಶ್‌ಗೆ ಕುಟುಂಬದ ಸಹಕಾರವೂ ಇದೆ. ಕೈಲಾದಷ್ಟು ನೆರವು ನೀಡಿ ಮಗನನ್ನು ಹರಸುತ್ತಿಿದ್ದಾಾರೆ. ಆದರೆ ಬಡವನಾಗಿರುವುದರಿಂದ ಟೂರ್ನಿಗಳಿಗೆ ತೆರಳಲು ಮತ್ತು ಹೆಚ್ಚಿಿನ "ದ್ಯಾಾಭ್ಯಾಾಸಕ್ಕೆೆ ದಾನಿಗಳ ಮೊರೆ ಹೋಗಿದ್ದಾಾನೆ.  ದಾನಿಗಳು ನೆರವನ್ನು ನೀಡುವ ಮೂಲಕ ಜಿಲ್ಲೆೆಯ ಅದರಲ್ಲೂ ಬಡಕುಟುಂಬದ ಬಾಲಕನ ಸಾಧನೆಗೆ, ಆಮೂಲಕ ಜಿಲ್ಲೆೆಗೆ ಹೆಸರು ತರಲು ಕಾರಣರಾಗಬೇಕಿದೆ
published on 4.5.19

Saturday 20 April 2019

ಕಲಾಕ್ಷೇತ್ರದ ಯುವ ಪ್ರತಿಭೆ
ಅಭಿರಾಮ್ ಭಾಗವತ್


ಎಳವೆಯಿಂದಲೇ ಕಲೆಗಳತ್ತ ಆಸಕ್ತಿಿಯಿದ್ದರೆ  ಎಲ್ಲವನ್ನೂ ಕಲಿಯಬಹುದು. ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ಮತ್ತು ವೇದಿಕೆ ಬೇಕು. ಇದಕ್ಕೆೆ ತಕ್ಕ ವಾತಾವರಣ ನಿರ್ಮಾಣವದಾಗ ಅದು ಪ್ರಕಟಗೊಳ್ಳುತ್ತದೆ. ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಗಮನಿಸಿ ಅದು ಹೊರಬರುವಂತೆ ಮಾಡಬೇಕು.
ಶಿವಮೊಗ್ಗ ನಗರದಲ್ಲಿ ಅಭಿರಾಮ್ ಭಾಗವತ್ ಹೆಸರು ಚಿರಪರಿಚಿತ. ಈ ಬಾಲಕ ಕೊಳಲು ಮತ್ತು ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿಿದ್ದಾಾನೆ. ಈಗಾಗಲೇ ಜಿಲ್ಲೆೆ ಮತ್ತು ಹೊರಜಿಲ್ಲೆೆಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ಕೊಡುವ ಮೂಲಕ ಬಾಲಪ್ರತಿಭೆಯಾಗಿ ಪ್ರಕಾಶಿಸುತ್ತಿಿದ್ದಾಾನೆ.
ಅಭಿರಾಮ ನಗರದ ಗೋಪಾಳದ ವಾಸಿ. ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವಿಿತೀಯ ಪಿಯುಗೆ ಕಾಲಿಟ್ಟಿಿದ್ದಾಾನೆ. ಎಸ್ಸೆೆಸೆಲ್ಸಿಿಯಲ್ಲಿ ರಾಜ್ಯಕ್ಕೆೆ 7ನೆಯ ರ್ಯಾಾಂಕ್ ಗಳಿಸಿದ್ದ ಈತ, ಅದೇ ರೀತಿ ಸಂಗೀತದಲ್ಲೂ ಅಪಾರ ಸಾಧನೆಯನ್ನು ಮಾಡಿದ್ದಾಾನೆ. ಶಾರದಾದೇವಿ ಅಂಧರ ಶಾಲೆಯಲ್ಲಿ ಎಸ್ಸೆೆಸೆಲ್ಸಿಿಯವರೆಗೆ ಓದಿದ್ದಾಾನೆ. ಈ ಹಂತದಲ್ಲೇ ಹಾಡುಗಾರಿಕೆ, ಕೊಳಲು, ತಬಲಾ, ವೀಣೆ ಮೊದಲಾದವುಗಳಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದಾಾನೆ. 2006ರಲ್ಲಿ ಸಂಗೀತಕ್ಕೆೆ ಕಾಲಿಟ್ಟ ಈತ ಅಲ್ಲಿಂದ ಸತತವಾಗಿ ಸಾಧನೆಯಲ್ಲೇ ಮುಂದುವರೆದಿದ್ದಾಾನೆ. ತಬಲಾದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ್ದಾಾನೆ. ಆದರೆ ಈಗ ತಬಲಾ ಬಾರಿಸುತ್ತಿಿಲ್ಲ. ಬದಲಾಗಿ ಕರ್ನಾಟಕ ಹಾಡುಗಾರಿಕೆಯಲ್ಲಿ ಹೆಚ್ಚಿಿನ ಕಲಿಕೆ ಮುಂದುವರೆಸಿದ್ದಾಾನೆ. 
ವಿದ್ವಾಾನ್ ಹೊಸಹಳ್ಳಿಿ ಅನಂತರಾಮ್ ಅವರಲ್ಲಿ ಕರ್ನಾಟಕ ಸಂಗೀತದ ವಿದ್ವತ್‌ನ್ನು ಅಭ್ಯಸಿಸಿ ಕೊಳಲುವಾದನವನ್ನು ನಗರದ ಎಚ್.ಎನ್. ಶ್ರೀಧರ್ ಅವರಲ್ಲಿ ತರಬೇತಿ ಪಡೆಯುತ್ತಿಿದ್ದಾಾರೆ, ರಾಜಲಕ್ಷ್ಮೀ ಅವರಲ್ಲಿ ಕೊಳಲನ್ನೂ ಸಹ ಕಲಿತಿದ್ದಾಾನೆ. ವಯೋಲಿನ್ ಅನ್ನು ಮಧುಮುರಳಿ ಅವರಲ್ಲಿ ಕಲಿತಿದ್ದಾಾನೆ. ಆದರೆ ಈಗ ಕೊಳಲು ಮತ್ತು ಹಾಡುಗಾರಿಕೆಯಲ್ಲಿ ಮಾತ್ರ ಸಾಧನೆಗೈಯ್ಯುತ್ತಿಿದ್ದಾಾನೆ.
ಕಳೆದ ವಾರ ಶಿವಮೊಗ್ಗದಲ್ಲಿ ಜರುಗಿದ ರಾಮೋತ್ಸವದಲ್ಲಿ ಹಾಡುಗಾರಿಕೆ ಮೂಲಕ ಎಲ್ಲರ ಗಮನಸೆಳೆದಿರುವ ಈತ, ಭರವಸೆಯ ಗಾಯಕನಾಗಿದ್ದಾಾನೆ. ತಂದೆ ಗೋಪಾಲಕೃಷ್ಣ ಮತ್ತು ತಾಯಿ ಉಮಾ ಸಹ ಮಗನ ಪ್ರತಿಭೆಯನ್ನು ಎಲ್ಲಾಾ ರೀತಿಯಲ್ಲೂ ಪೋಷಿಸುತ್ತಿಿದ್ದಾಾರೆ. ಬಾಲ್ಯದಿಂದಲೂ ಹಾಡುವುದರಲ್ಲಿ ಆಸಕ್ತಿಿ ಹೊಂದಿದ್ದರಿಂದ ಪಾಲಕರು ಸಂಗೀತಕ್ಕೆೆ ಸೇರಿಸಿದರು. ಫಲವಾಗಿ ಸಂಗೀತ ಶಾರದೆಯ ಕೃಪಾಶೀರ್ವಾದ ಈತನಿಗೆ ದಕ್ಕಿಿದೆ. ಹಾಡುಗಾರಿಕೆಯಲ್ಲಿ ವಿದ್ವತ್‌ನ್ನು ಮುಗಿಸಿದ್ದಾಾನೆ. 
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕುಂದಾಪುರ ಸಮೀಪದ ಕಾಳಾವರದ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ಮಾತೃಛಾಯಾ, ಶಿವಮೊಗ್ಗದ ಪಂಚಮುಖಿ ಆಂಜನೇಯ ದೇವಾಲಯ, ಹರಕೆರೆ ಶಿವ ದೇವಾಲಯ, ವಿದ್ಯಾಾಗಣಪತಿ ಸಮಿತಿಯವರ ಕಾರ‌್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಿಗುಪ್ಪೆೆಯ ಪ್ರಸನ್ನ ಆಂಜನೇಯ ದೇವಾಲಯದಲ್ಲಿ, ಜೊತೆಗೆ ಮುಂಬೈ, ಮೈಸೂರು, ಉಡುಪಿ ಮೊದಲಾದೆಡೆ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾನೆ.  ದಾವಣಗೆರೆಯಲ್ಲಿ ಬಾಲಕನ ಅಸಾಧಾರಣ ಸಾಧನೆ ಗಮನಿಸಿ ಸರಸ್ವತಿ ಪುರಸ್ಕಾಾರ ಎಂಬ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ. 
ಕಲೆಯಲ್ಲಿ ಪಾವಿತ್ರ್ಯತೆಯನ್ನು ಕಂಡವರು ಮಾತ್ರ  ಸಾಧಕರಾಗುತ್ತಾಾರೆ. ಜೊತೆಗೆ ಕಲಾ ಸೌಂದರ್ಯವೂ ಅವರಲ್ಲಿರಬೇಕು. ಈ ಸೌಂದರ‌್ಯ ಕೇವಲ ಬಾಹ್ಯವಾಗಿರದೆ, ಕಲೆಯ ಆತ್ಮದ ಒಳ ಹಸಿರಾಗಿರಬೇಕು. ಅದನ್ನು ರಸ ಎಂದು ಕರೆಯಲಾಗುತ್ತದೆ. ಇಂತಹ ರಸಪೂರ್ಣವಾದ ಕಲೆ ಹೃದಯಸಂವಾದಿಯಾಗಿದ್ದಾಾಗ ಎಲ್ಲರನ್ನೂ ಆಕರ್ಷಿಸುತ್ತದೆ, ಕಲಾವಿದನೂ ಸಹ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ. ಬಹುಕಾಲ ಮರೆಯದ ಕಲೆ ಅದಾಗುತ್ತದೆ. 
 ಅಭಿರಾಮ್‌ನಲ್ಲಿ ಈ ಹೃದಯಸಂವಾದಿ ಕಲೆ ಇದೆ. ಆದ್ದರಿಂದಲೇ ಜನರನ್ನು ಆಕರ್ಷಿಸುವ ಶಕ್ತಿಿ ಆತನ ಹಾಡುಗಾರಿಕೆ ಅಥವಾ ಕೊಳಲುವಾದನಲ್ಲಿದೆ. ಆನಂದವನ್ನು ನೀಡುವ ಶಕ್ತಿಿ ಅದರಲ್ಲಿದೆ.  ರಸದೃಷ್ಟಿಿ, ರಸಪುಷ್ಟಿಿ ಈ ಕಲೆಯ ಅಂತರಂಗದಲ್ಲಿದೆ.
ಇಂತಹ ಕಲೆಯ ಚೆಲುವನ್ನು ತುಂಬಿಕೊಂಡ ಬಾಲಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಾಹ ಎಲ್ಲೆೆಡೆ ಸಿಗಬೇಕಿದೆ.
published on  20-4-2019

...............................

Saturday 13 April 2019

ಚಿನ್ನದ ಪವರ್ ಲಿಫ್ಟರ್
ಮೆಕ್ಯಾಾನಿಕ್ ರಮೇಶ್


 ದೈ"ಕ ಶಕ್ತಿಿಯೊಡನೆ ಮಾನಸಿಕವಾಗಿಯೂ ಬಲಿಷ್ಠರಾಗಲು ಭಾರ ಎತ್ತು"ಕೆ ಅಥವಾ ಪವರ್ ಲಿಫ್ಟಿಿಂಗ್‌ನಂತಹ ಕಸರತ್ತು ಅವಶ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ದೈ"ಕ ಹಾಗೂ ಮಾನಸಿಕ ಕ್ಷಮತೆ ಪಡೆಯಲು ಹೆಚ್ಚು ಪ್ರಮಾಣದಲ್ಲಿ ಯುವಕರು ಮುಂದಾಗುತ್ತಿಿದ್ದಾಾರೆ. ಈ ಮೂಲಕ ತಮ್ಮದೇ ಆದ ಸಾಧನೆಯನ್ನೂ ಮಾಡಲು ಮುಂದಾಗುತ್ತಿಿದ್ದಾಾರೆ.
ಶಿವಮೊಗ್ಗದಲ್ಲಿ ಪವರ್ ಲಿಫ್ಟಿಿಂಗ್ ಅಥವಾ ದೇಹದಾರ್ಡಯಕ್ಕೆೆ ಮೊದಲಿನಿಂದಲೂ ತನ್ನದೇ ಆದ ಖ್ಯಾಾತಿ ಇದೆ. ಹಲವು ಖ್ಯಾಾತನಾಮರು ಜಿಲ್ಲೆೆಯ ಹೆಸರು ಇಂದಿಗೂ ಈ ಕ್ಷೇತ್ರದಲ್ಲಿ "ುನುಗುವಂತೆ ಮಾಡಿದ್ದಾಾರೆ. ಇವರ ಶಿಷ್ಯರಾಗಿ ಕೆಲಸ ಮಾಡುತ್ತಿಿರುವವರು ಇಂದು ರಾಷ್ಟ್ರ, ಅಂತರರ್ಟ್ರೋಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಇದನ್ನು ಮುಂದುವರೆಸಿಕೊಂಡು ಹೋಗುತ್ತಿಿದ್ದಾಾರೆ.
 ಆರ್. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಪ್ರಮುಖ ಹೆಸರು. ನಗರದ ಬೊಮ್ಮನಕಟ್ಟೆೆ ಆಶ್ರಯ ಬಡಾವಣೆಯವರಾದ ಇವರು, ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದು, ಕಳೆದ ವಾರ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಗೆದ್ದು ತರುವ ಮೂಲಕ ಜಿಲ್ಲೆೆಯ ಹೆಸರನ್ನು ಉನ್ನತಕ್ಕೇರಿಸಿದ್ದಾಾರೆ. 60ರ ಹರಯದಲ್ಲೂ ಯುವಕರಂತೆ ಕಟ್ಟುಮಸ್ತಾಾದ ದೇಹವನ್ನು ಹೊಂದಿ, ಯುವಕರೂ ಸಹ ನಾಚುವಂತೆ ಕೆಲಸ ಮಾಡುತ್ತಾಾರೆ.
ನಗರದ ಪುಲಿಕೇಶಿ ವ್ಯಾಾಯಾಮ ಶಾಲೆ ಸಾಧಕರಿಗೆಲ್ಲ ತವರುಮನೆುದ್ದಂತೆ. ಇಲ್ಲಿ ಕಲಿತ ಬಹುತೇಕರು ಸಾಧನೆ ಮಾಡಿ ತಮ್ಮ ಹೆಸರನ್ನು ಚಿರಸ್ಥಾುಗೊಳಿಸಿಕೊಂಡಿದ್ದಾಾರೆ. ಅವರ ಸಾಲಿಗೆ ಈಗ ರಮೇಶ್ ಸೇರುತ್ತಾಾರೆ. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಮಾಡಿದ ಸಾಧನೆ ಅನನ್ಯ.  ಈವರೆಗೆ ಅವರು 5 ರಾಜ್ಯ ಪ್ರಶಸ್ತಿಿ, 4 ರ್ಟ್ರೋಯ ಪ್ರಶಸ್ತಿಿ ಮತ್ತು ಒಂದು ಅಂತರ್ಟ್ರಾಾಯ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
 ಕಳೆದ ವಾರ ಪಶ್ಚಿಿಮ ಬಂಗಾಳದ ಹೌರಾದಲ್ಲಿ ನಡೆದ ರ್ಟ್ರೋಯ ಪವರ್ ಲಿಫ್ಟಿಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಹುಮಾನ ಸ"ತ ಚಿನ್ನದ ಪದಕ ಧರಿಸಿ ಬಂದಿದ್ದಾಾರೆ. ಇದಕ್ಕೂ ಮುನ್ನ ಅವರು ಗಳಿಸಿದ ಪ್ರಶಸ್ತಿಿಗಳೆಂದರೆ- 2017ರಲ್ಲಿ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಚಾಂಪಿಯನ್ಶಿಿಪ್‌ನಲ್ಲಿ  ಪ್ರಥಮ ಬಹುಮಾನ, 2018ರಲ್ಲಿ  ಹೊಸಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2015ರಲ್ಲಿ ಹರಿಯಾಣದ ಸೋನೆಪತ್‌ನಲ್ಲಿ ಜರುಗಿದ  ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಬಹುಮಾನ, 2014ರಲ್ಲಿ  ಆಗ್ರ್ರಾಾದಲ್ಲಿ ನಡೆದ ರ್ಟ್ರೋಯ ಚಾಂಪಿಯನ್ಶಿಿಪ್‌ನಲ್ಲಿ ತೃತೀಯ, 2015ರಲ್ಲಿ ಇಂದೋರ್‌ನಲ್ಲಿ ನಡೆದ ರ್ಟ್ರೋಯ ಸ್ಪರ್ಧೆಯಲ್ಲಿ ದ್ವಿಿತೀಯ  ಮತ್ತು 2015ರಲ್ಲಿ ದಾವಣಗೆರೆಯಲ್ಲಿ ಜರುಗಿದ ರ್ಟ್ರೋಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಪದಕ ಗೆದ್ದಿದ್ದಾಾರೆ.
2017ರಲ್ಲಿ ಬ್ಯಾಾಂಕಾಕ್‌ನಲ್ಲಿ ನಡೆದ ಅಂತರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ  ಚಿನ್ನದ ಪದಕ ಸ"ತ ಪ್ರಥಮ ಸ್ಥಾಾನವನ್ನು ತಮ್ಮದಾಗಿಸಿಕೊಂಡಿದ್ದಾಾರೆ. ಇಂತಹ ಸಾಧಕ ನಗರದಲಿರುವುದು ನಿಜಕ್ಕೂ ಹೆಮ್ಮೆೆಯ ಸಂಗತಿ.  ಆಟೋ ಕಾಂಪ್ಲೆೆಕ್‌ಸ್‌‌ನಲ್ಲಿ ಮೆಕ್ಯಾಾನಿಕ್ ಆಗಿ ಕೆಲಸ ಮಾಡುತ್ತಿಿರುವ ರಮೇಶ್, ಇಂದಿಗೂ ತಮ್ಮ ಗುರು ಸ್ವಾಾ"ುನಾಥನ್ ಅವರನ್ನು ಸ್ಮರಿಸುತ್ತಾಾರೆ. ಅವರ ಮಾರ್ಗದರ್ಶನದಲ್ಲೇ ತಾನು ಬೆಳೆದು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಾರೆ.
ರಮೇಶ್ ಪ್ರತಿದಿನ ಬೆಳಿಗ್ಗೆೆ ಎರಡು ಗಂಟೆ ತಪ್ಪದೆ ಪವರ್‌ಲಿಫ್ಟಿಿಂಗ್ ತರಬೇತಿಯನ್ನು ಪಡೆಯುತ್ತಿಿದ್ದಾಾರೆ. ಜೊತೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾಾರೆ. ಜಿಲ್ಲೆೆಯ ಹಲವೆಡೆ ಮತ್ತು "ಶ್ವ"ದ್ಯಾಾಲಯ ಮಟ್ಟದಲ್ಲಿ ನಡೆಯುವ ಆಯ್ಕೆೆಗೆ, ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ತೆರಳುತ್ತಾಾರೆ.
 ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುವಾಗ ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುತ್ತಿಿರುವವರ "ರುದ್ಧ ಪ್ರಶಸ್ತಿಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ ಎನ್ನುತ್ತಾಾರೆ.
published on 13-4-2017

Saturday 30 March 2019

ಕರಾಟೆಯ ಮಿನುಗುತಾರೆ
ಜಿ. ಎನ್. ಷಣ್ಮುಖ



ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಬೇಕು ಎನ್ನುವ ಮಾತಿದೆ. ಸಾಧನೆಗೆ ಯಾವತ್ತೂ ವಯಸ್ಸು ಅಡ್ಡಿಿಯಾಗುವುದಿಲ್ಲ. ಬಾಲಕರಾಗಿದ್ದಾಾಗಲೇ ಸಾಧಿಸಿದವರೂ ನಮ್ಮೆೆದುರು ಇದ್ದಾಾರೆ. ವಯಸ್ಸಾಾದ ಮೇಲೂ ಸಾಧನೆ ಮಾಡುತ್ತಿಿರುವವರೂ ಇದ್ದಾಾರೆ. ಸಾಧನೆ ಎನ್ನುವುದು ನಿರಂತರ ಪ್ರಕ್ರಿಿಯೆ. ಅವಕಾಶ ಸಿಕ್ಕಾಾಗ ಅದನ್ನು ಬಿಡದೆ ಬಳಸಿಕೊಂಡಲ್ಲಿ ಸಾಧನೆ ಸಾಧ್ಯವಾಗುತ್ತದೆ.   
ಈ ಬಾಲಕನಿಗೆ 12 ವರ್ಷ. ಆದಿಚುಂಚನಗಿರಿ ವಿದ್ಯಾಾಸಂಸ್ಥೆೆಯಲ್ಲಿ 6ನೆಯ ತರಗತಿ ಓದುತ್ತಿಿದ್ದಾಾನೆ. ಈಗಾಗಲೇ ರಾಜ್ಯ, ರಾಷ್ಟ್ರೀಯ, ಅಂತಾರರಾಷ್ಟ್ರೀಯ ಕರಾಟೆ ಪಂದ್ಯಾಾವಳಿಗಳಲ್ಲಿ ಭಾಗವಹಿಸಿ ಪದಕಗಳ ಸರಮಾಲೆಯನ್ನೇ ಧರಿಸಿದ್ದಾಾನೆ. ಕರ್ನಾಟಕವನ್ನು ಮತ್ತು ಭಾರತವನ್ನು ಹಲವು ಚಾಂಪಿಯನ್‌ಶಿಪ್‌ಗಳಲ್ಲಿ ಪ್ರತಿನಿಧಿಸಿದ ಕೀರ್ತಿ ಈತನದು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ಷಣ್ಮುಖ 5 ವರ್ಷಗಳಿಂದ ಕರಾಟೆ ಕ್ಷೇತ್ರದಲ್ಲಿದ್ದಾಾನೆ. ಅಂದರೆ ಒಂದನೆಯ ತರಗತಿಯಲ್ಲಿದ್ದಾಾಗಲೇ ಕರಾಟೆ ಆರಂಭಿಸಿ, ಇಂದಿಗೂ ಸತತ ತರಬೇತಿ ಮೂಲಕ ಅಪೂರ್ವ ಸಾಧನೆ ಮಾಡಿದ್ದಾಾನೆ.  ವಿದ್ಯಾಾಭ್ಯಾಾಸದ ಜೊತೆಗೆ ಇನ್ನೊೊಂದು ಕಲೆಯನ್ನು ರೂಢಿಸಿಕೊ
ಳ್ಳುವುದು ವಿದ್ಯಾಾರ್ಥಿ ದೆಸೆಯಲ್ಲಿ ಕಷ್ಟವಾದರೂ ಇದನ್ನು ನಿರ್ವಹಿಸಿಕೊಂಡು ಬರುತ್ತಿಿದ್ದಾಾನೆ.
ಕರಾಟೆ ಸ್ಪರ್ಧೆಗೆ ತೆರಳುತ್ತಿಿರುವುದರಿಂದ ಶಿಕ್ಷಣಕ್ಕೆೆ ತೊಂದರೆ ಆಗುತ್ತಿಿದ್ದರೂ ಸಂಸ್ಥೆೆಯವರು ಈತನ ಕಲಿಕೆಗೆ ವಿಶೇಷ ಸೌಲಭ್ಯ ಕಲ್ಪಿಿಸಿದ್ದಾಾರೆ. ಇದನ್ನು ಬಳಸಿಕೊಂಡು ಪಾಠದಲ್ಲೂ ಉತ್ತಮ ಸಾಧನೆ ಮಾಡುತ್ತಿಿದ್ದಾಾನೆ. ಕರಾಟೆಯ ಮೂಲಕ ಏನನ್ನಾಾದರೂ ವಿಶೇಷ ಸಾಧನೆ ಮಾಡಬೇಕೆನ್ನುವುದು ಈತನ ಕನಸಾಗಿದೆ. ಅದಕ್ಕಾಾಗಿ ಬಿಡುವಿನ ವೇಳೆಯನ್ನು ವ್ಯರ್ಥಪಡಿಸದೆ ಓದು ಮತ್ತು ಕರಾಟೆಗೆ ಮೀಸಲಿಡುತ್ತಿಿದ್ದಾಾನೆ.   
ಕರಾಟೆಯಲ್ಲಿ ಚಿನ್ನ, ಬೆಳ್ಳಿಿ, ಕಂಚಿನ ಪದಕಗಳನ್ನು ಪಡೆದಿದ್ದಾಾನೆ. ಜಿಲ್ಲಾಾ ಮಟ್ಟದಲ್ಲಿ ಆರಂಭಿಸಿ, ಈಗ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ಗಳಿಸಿ ಬರುವ ಮಟ್ಟಿಿಗೆ ಬೆಳೆದಿದ್ದಾಾನೆ. ಮಲೇಶಿಯಾ, ಶ್ರೀಲಂಕಾ ಮತ್ತು ದುಬೈನಲ್ಲಿ ನಡೆದ  ಸ್ಪರ್ಧೆಗಳಲ್ಲಿ ಈತ ಪದಕ ಧರಿಸಿದ್ದಾಾನೆ. ಕರಾಟೆ ಜೊತೆ ಇತ್ತೀಚೆಗೆ ಕಿಕ್ ಬಾಕ್ಸಿಿಂಗ್‌ನಲ್ಲೂ ತರಬೇತಿಯನ್ನು ಪಡೆಯುತ್ತಿಿದ್ದಾಾನೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಕಿಕ್ ಬಾಕ್ಸಿಿಂಗ್ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾಾನೆ. ಇದೇರೀತಿ ಕೇರಳ ಮತ್ತು ಪುಣೆಯಲ್ಲೂ ಪದಕ ಗಳಿಸಿದ್ದಾಾನೆ.  ಪೆಂಕಾಕ್ ಸಿಲತ್ ಎಂಬ ಇಂಡೋನೇಶಿಯಾದ ಕ್ರೀಡೆಯಲ್ಲೂ ಈತ ತರಬೇತಿ ಪಡೆಯುತ್ತಿಿದ್ದಾಾನೆ. ಈ ಕ್ರೀಡೆಯಲ್ಲಿ ಬೆಳ್ಳಿಿ ಪದಕವನ್ನು ಈಗಾಗಲೇ ಗೆದ್ದಿದ್ದಾಾನೆ.
ನಗರದ ಕರಾಟೆ ಗುರು ಚಂದ್ರಕಾಂತ್ ಭಟ್ಟ ಅವರ ಶಿಷ್ಯನಾಗಿರುವ ಷಣ್ಮುಖನಿಗೆ ಆತನ ತಂದೆ ಎಸ್‌ಬಿಐ ಉದ್ಯೋೋಗಿ ನಾಗರಾಜ್ ಮತ್ತು ತಾಯಿ  ಶಾಂತಕುಮಾರಿ ಸತತ ಮಾರ್ಗದರ್ಶನ ಮಾಡುತ್ತಿಿದ್ದಾಾರೆ. ಮಗನ ಎಲ್ಲ ಸಾಧನೆಗೂ ಅವರು ಬೆಂಬಲವಾಗಿ ನಿಂತು ಬೇಕಾದ ತರಬೇತಿಯನ್ನು ಭಟ್ಟರಿಂದ ಕೊಡಿಸುತ್ತಿಿದ್ದಾಾರೆ. ಭಟ್ಟರ ಅಚ್ಚುಮೆಚ್ಚಿಿನ ಶಿಷ್ಯನೂ ಆಗಿರುವ ಷಣ್ಮುಖ, ಇಲ್ಲಿಯವರೆಗೆ ತಾನು ಕಾಲಿಟ್ಟ ಕ್ಷೇತ್ರದಲ್ಲಿ ಹಿಂದಿರುಗಿ ನೋಡಿಲ್ಲ. ಸತತ ಸಾಧನೆ ಮೂಲಕ ಮೆಟ್ಟಿಿಲನು ಏರುತ್ತಲೇ ಇದ್ದಾಾನೆ. ಉತ್ತಮ ಗುರುವಿನ ಮಾರ‌್ಗದರ್ಶನವಿದ್ದರೆ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆೆ ಇದು ಸಾಕ್ಷಿ.
ಷಣ್ಮುಖನಲ್ಲಿ ಅಪಾರವಾದ ಸಾಧನಾ ಶಕ್ತಿಿ ಇದೆ. ಹೇಳಿಕೊಟ್ಟಿಿದ್ದನ್ನು ಚಾಚೂತಪ್ಪದೆ ಪಾಲಿಸುವುದರಿಂದ ಬಹುಬೇಗ ಎಲ್ಲಾಾ ರೀತಿ ಕೌಶಲ್ಯಗಳನ್ನು ಕಲಿತು ಸಾಧನೆ ಮಾಡುತ್ತಿಿದ್ದಾಾನೆ ಎನ್ನುತ್ತಾಾರೆ ಚಂದ್ರಕಾಂತ್ ಭಟ್ಟ.
ನಗರದ ಬಾಲಕನೊಬ್ಬ ಈ ರೀತಿ ಕರಾಟೆ ಸಾಧನೆ ಮಾಡುತ್ತಿಿರುವುದು ಅಪರೂಪದ ಸಂಗತಿ. ಈತನ ಸಾಧನೆಯನ್ನು ಗಮನಿಸಿ ಆದಿಚುಂಚನಗಿರಿ ಶಾಖಾಮಠದ ಸ್ವಾಾಮೀಜಿ ಹಾಗೂ ವಿದ್ಯಾಾಸಂಸ್ಥೆೆಯ ಮುಖ್ಯಸ್ಥರೂ ಆಗಿರುವ ಪ್ರಸನ್ನನಾಥ ಸ್ವಾಾಮೀಜಿ ಈತನನ್ನು ಹಲವರು ಬಾರಿ ಗೌರವಿಸಿದ್ದಾಾರೆ. ಜೊತೆಗೆ ನಗರದ ಹಲವು ಸಂಘ-ಸಂಸ್ಥೆೆಗಳೂ ಸನ್ಮಾಾನಿಸಿವೆ.
published on 30.3.2019
,,,,,,,,,,,,,,,,,,,,,,,,,,,,,,,

Thursday 28 March 2019

  ಲೇಖಕಿ
ಮಮತಾ ಹೆಗ್ಡೆೆ


ಮನುಷ್ಯನಲ್ಲಿ ಬಗೆಬಗೆಯ ಭಾವನೆಗಳು ಹುದುಗಿಕೊಂಡಿರುತ್ತವೆ. ಇವು ಕೆಲವೊಮ್ಮೆೆ ಸಹಜವಾಗಿ, ಅಥವಾ ಒತ್ತಡದಿಂದಾಗಿ ಹೊರಹೊಮ್ಮುತ್ತವೆ. ಹೊರಹೊಮ್ಮುವ ಮೂಲಕ ಅದು ರೂಪವೊಂದನ್ನು ಪಡೆಯುತ್ತದೆ. ಇದು ಸಾಹಿತ್ಯ, ಸಂಗೀತ, ನೃತ್ಯ, ಕ್ರೀಡೆಯಾಗಿರಬಹುದು. ಒಟ್ಟಿಿನಲ್ಲಿ ಪ್ರಕೃತಿಯ ಈ ಸಹಜವಾದ ಕೊಡುಗೆ ವ್ಯಕ್ತಿಿಯನ್ನು ಹೊರಜಗತ್ತಿಿಗೆ ಪರಿಚಯಿಸಬಲ್ಲುದು.
ಮಮತಾ ಹೆಗ್ಡೆೆ ಶಿವಮೊಗ್ಗದ ಮಹಿಳಾ ಲೇಖಕಿಯರಲ್ಲಿ ಒಬ್ಬರು. ನಾಲ್ಕು ವರ್ಷಗಳಿಂದ  ಪತ್ರಿಿಕೆಗಳಿಗೆ ಲೇಖನ ಬರೆಯುವ ಮೂಲಕ  ಸಾಹಿತ್ಯದಲ್ಲಿ ಮತ್ತು ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾಾರೆ. ಅಭಿರುಚಿ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಿಕೆ, ಓದುವುದರಲ್ಲಿ ಆಸಕ್ತಿಿ ಹೊಂದಿದ್ದಾಾರೆ. ಈ ಆಸಕ್ತಿಿಯೇ ಇಂದು ಅವರು ನಾಲ್ಕು ಕೃತಿಗಳನ್ನು ಹೊರತರಲು ಕಾರಣವಾಗಿದೆ.
ಮೂಲತಃ ಉಡುಪಿಯವರಾದ ಮಮತಾ, 37 ವರ್ಷಗಳಿಂದ ಶಿವಮೊಗ್ಗ ವಾಸಿ ಮತ್ತು ಗೃಹಿಣಿ. ಕುಟುಂಬವನ್ನು ನಿರ್ವಹಿಸಿಕೊಂಡು, ವಿವಿಧ ಸಂಘ-ಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿದ್ದವರು. ಆದರೆ ಬರೆವಣಿಗೆಯ ಆಸಕ್ತಿಿ ಅವರನ್ನು ಕೈಬೀಸಿ ಕರೆಯಿತು. ನಗರದ ಮಲೆನಾಡು ಮಿತ್ರ, ಶಿವಮೊಗ್ಗ ಟೈಮ್‌ಸ್‌ ಮತ್ತು ನಾವಿಕ ಪತ್ರಿಿಕೆಗಳಿಗೆ ಲೇಖನ ಬರೆಯತೊಡಗಿದರು. ಇದರಿಂದ ಅವರ ಬರೆವಣಿಗೆ ಹೆಚ್ಚು ಸ್ಪಂದನೆ ಸಿಗತೊಡಗಿತು. ವಾಚಕರ ಸಂಖ್ಯೆೆ ಏರತೊಡಗಿತು. ಅನೇಕರು ಬರೆಹ ಮೆಚ್ಚಿಿಕೊಂಡು ಬೆನ್ನುತಟ್ಟಿಿದರು. ಪ್ರೋತ್ಸಾಾಹಿತರಾಗಿ ಬರೆವಣಿಗೆಯನ್ನು ಮುಂದುವರೆಸಿದರು. 
   ಸಾಮಾಜಿಕ ಹಾಗೂ ವೈಚಾರಿಕತೆಯ ಆಧಾರದಲ್ಲಿ ನಾಲ್ಕು ಕೃತಿಗಳನ್ನು ಈವರೆಗೆ ಅವರು ರಚಿಸಿದ್ದಾಾರೆ. ಅವುಗಳೆಂದರೆ- ಹೂ ಮಿಂಚಿನ ಗೊಂಚಲು, ಮನೋನ್ನತಿ, ಅರಿವಿನ ಚಿಂತನೆ, ಅಂತರಂಗದ ಅಭಿರುಚಿ. ಇವೆಲ್ಲವೂ ಓದುರಗರಿಂದ ಪ್ರಸಂಸಗೆ ಒಳಗಾಗಿವೆ. ಈ ಕೃತಿಗಳೂ ಸಹ ಮೌಲ್ಯಯುತವಾಗಿರುವುದರಿಂದ  ಮಮತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆೆಯ ಹೆಸರುತಂದುಕೊಟ್ಟಿಿವೆ.
 ಸೀಮಿತ ಚೌಕಟ್ಟಿಿನೊಳಗೆ ನಿರೂಪಿಸಬೇಕಾದ ಸಂದರ್ಭಗಳಲ್ಲಿ ಚೊಕ್ಕವಾಗಿ, ಕಲಾತ್ಮಕವಾಗಿ, ಪರಿಣಾಮಕಾರಿಯಾಗಿ ಹೇಳುವ ಕಲೆ ಇವರಲ್ಲಿದೆ. ವಿಶಾಲವಾದ ಓದು, ಚಿಂತನಶೀಲತೆ, ಒಳನೋಟ, ರೂಢಿಸಿಕೊಂಡ ವಿಚಾರಗಳನ್ನು ಕೃತಿಗಳಲ್ಲಿ ರೂಪಿಸಿದ್ದಾಾರೆ. ಸಾವಧಾನವಾಗಿ ಸವಿಯಬಹುದಾದ, ಬುದ್ಧಿಿ-ಭಾವಗಳಿಗೆ ಚೈತನ್ಯ ನೀಡಬಲ್ಲ, ಚಿಕಿತ್ಸಕ ಗುಣಗಳುಳ್ಳ ಇವರ ಬರೆಹವನ್ನು ನಾವು ಕಾಣಬಹುದಾಗಿದೆ. ಬರೆಯುವುದು ಒಂಟಿತನದ ಕೆಲಸ. ಆದರೆ ಈ ಬರೆವಣಿಗೆಗೆ ಹಲವರು ಜನರು ಪರಿಣಾಮ ಬೀರಿರುತ್ತಾಾರೆ ಎಂಬ ಮಾತಿದೆ. ಈ ಪರಿಣಾಮ ಮಮತಾ ಅವರ ಕೃತಿಗಳಲ್ಲಿ ಕಂಡುಬರುತ್ತದೆ.   
ವಿಷಯಾಧಾರಿತವಾಗಿ ಅನೇಕ ಪ್ರಬಂಧಗಳನ್ನು ರಚಿಸಿದ್ದಾಾರೆ. ಜೊತೆಗೆ ಕವನಗಳ ರಚನೆಯಲ್ಲೂ, ಎತ್ತಿಿದಕೈ.  ಅನೇಕ ಸಾಹಿತ್ಯ ಗೋಷ್ಠಿಿಗಳಲ್ಲಿ ಕವನ ವಾಚನ ಮಾಡಿದ ಅನುಭವವಿದೆ. ಶಿವಮೊಗ್ಗದ  ಸಂಘ ಸಂಸ್ಥೆೆಗಳಾದ, ಕರ್ನಾಟಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಾ ಹಾಗೂ ರಾಜ್ಯದ ಲೇಖಕಿಯರ ಸಂಘ, ಓದುಗರ ವೇದಿಕೆ, ಬಂಟ ಸಮಾಜ, ಅತ್ರಿಿ ಮಹಿಳಾ ಸಮಾಜ, ವಿನಾಯಕ ನಗರದ ನಾಗರಿಕ ವೇದಿಕೆ ಇವುಗಳ ಕಾರ್ಯಕಾರಿ ಸಮಿತಿಯಲ್ಲಿ ಮತ್ತು ಸದಸ್ಯಳಾಗಿ ಕಾರ್ಯನಿರ್ವಹಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿದ್ದಾಾರೆ.
 ಅತ್ರಿಿ ಮಹಿಳಾ ಸಮಾಜದಲ್ಲಿ ಅಧ್ಯಕ್ಷೆಯಾಗಿ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾಾರೆ. ನಿಯತಕಾಲಿಕಗಳಲ್ಲಿ, ಬಂಟ ಸಮಾಜದ ಮಾಸಿಕ ಪತ್ರಿಿಕೆಗಳಲ್ಲಿ ಸತತವಾಗಿ 2015 ರಿಂದ ಲೇಖನಗಳನ್ನು ಬರೆಯುತ್ತಿಿದ್ದಾಾರೆ. ಭದ್ರಾಾವತಿ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾಾರೆ. ಸ್ವ-ರಚಿತ ಕವನ ವಾಚನ ರಚಿಸಿ ನಿವೇದಿಸಿದ್ದಾಾರೆ. ವಿಷಯಾಧಾರಿತ ಲೇಖನಗಳಿಗೆ ಕವನಗಳನ್ನು ಸತತವಾಗಿ ಬರೆಯುತ್ತಿಿದ್ದಾಾರೆ. ಅತ್ರಿಿ ಮಹಿಳಾ ಸಮಾಜದಲ್ಲಿ ನಾಟಕಗಳನ್ನು ಬರೆದು ಪ್ರಸ್ತುತಪಡಿಸಿದ್ದಾಾರೆ.
ಸಾಹಿತ್ಯವು ಜೀವನಾಸಕ್ತಿಿಯನ್ನು ಹೆಚ್ಚಿಿಸಿ ಸಮಾಜದೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಬೆಸೆಯುತ್ತದೆ. ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ.   . ಸಾಧನೆಯ ಹಾದಿಯಲ್ಲಿ ವಯಸ್ಸು, ಲಿಂಗ ಅಡ್ಡಿಿಯಾಗಲಾರದು. ಬರೆಯುವ ಅಥವಾ ಕಲಿಕೆಯ ಆಸಕ್ತಿಿಯಷ್ಟೇ ಇಲ್ಲಿ ಮುಖ್ಯವಾಗಿರುತ್ತದೆ ಎನ್ನುತ್ತಾಾರೆ ಮಮತಾ ಹೆಗ್ಡೆೆ. 
published on march 23.2019
............................


ಕಲಾತಪಸ್ವಿಿ
ವೀರಣ್ಣ ಮಾಳೇನಹಳ್ಳಿಿ



ಸಂಗೀತದ ಗುರುಗಳಾಗಿ, ಸಾಹಿತ್ಯದಲ್ಲೂ, ಸಂಶೋಧನೆಯಲ್ಲೂ ಆಸಕ್ತಿಿ ಹೊಂದಿ, ಸಮಾಜಸೇವೆಯ ಮೂಲಕ ಇಳಿಯಯಸ್ಸಿಿನಲ್ಲೂ ಕೆಲಸ ಮಾಡುತ್ತಿಿರುವವರು ವೀರಣ್ಣ ಮಾಳೇನಹಳ್ಳಿಿ. ನಾಲ್ಕಾಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯುವಕರೂ ಸಹ ನಾಚುವಂತೆ ಇಂದಿಗೂ ಊರೂರು ಸುತ್ತಿಿ ತಮ್ಮ ಕಾಯಕತತ್ವವನ್ನು ನಿರ್ವಹಿಸುತ್ತಿಿದ್ದಾಾರೆ.
 ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ  ಜಿಲ್ಲೆೆಯ ಮಠ, ಮಂದಿರ, ಜಾತ್ರೆೆ, ಉತ್ಸವ, ಜಯಂತಿಗಳಲ್ಲಿ ಸಂಗೀತ ಸೇವೆಯನ್ನು ಸಲ್ಲಿಸುತ್ತಿಿರುವ ಏಕೈಕ ವ್ಯಕ್ತಿಿ.   ಗ್ರಾಾಮೀಣ ಪ್ರತಿಭೆಗಳನ್ನು ಗುರುತಿಸಿ ಉಚಿತವಾಗಿ  ತಮ್ಮ ಗುರು ಪಂಚಾಕ್ಷರಿ ಸಂಗೀತ ವಿದ್ಯಾಾಲಯದ ಮೂಲಕ ಸಂಗೀತವನ್ನು ಧಾರೆ ಎರೆಯುತ್ತಿಿರುವ ಇವರು, ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ, ದಾಸರ ಪದ, ವಚನ ಸಂಗೀತ,  ಭಕ್ತ-ಭಾವಗೀತೆ, ಜಾನಪದ ಗೀತೆ ಮತ್ತು ತಬಲಾ ವಾದನದಲ್ಲಿ ಸಿದ್ಧಹಸ್ತರು. ಕಲಾತಪಸ್ವಿಿಯಾಗಿದ್ದರೂ ಸಹ ಸಾಹಿತ್ಯ ಕೃಷಿಯಲ್ಲೂ ಹೆಮ್ಮೆೆಯ ಸಾಧನೆ ಮಾಡಿದ್ದಾಾರೆ. ಇತ್ತೀಚೆಗಷ್ಟೇ ಹಾನಗಲ್ ಕುಮಾರಸ್ವಾಾಮಿಗಳು, ರುದ್ರಮುನಿ ಮಹಾಸ್ವಾಾಮಿಗಳು ಮತ್ತು ಕಪ್ಪನಹಳ್ಳಿಿ ರೇವಣಸಿದ್ದ ಸ್ವಾಾಮೀಜಿಗಳು ನಡೆದುಬಂದ ಹಾದಿಯ ಕುರಿತ ಕೃತಿಯನ್ನು ಹೊರತಂದಿದ್ದಾಾರೆ.
ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ವೀರಣ್ಣ, ಆನಂತರ ಸಂಗಮೇಶ್ವರ ಗವಾಯಿಗಳಲ್ಲಿ ಸಂಗೀತ ಅಭ್ಯಾಾಸ ಮಾಡಿ, ಹುಮಾಯುನ್ ಹರ್ಲಾಪುರ್ ಅವರ ಜೊತೆ ಸೇರಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿಿದ್ದಾಾರೆ. ಒಂದರ್ಥದಲ್ಲಿ ಅವರು ಸಂಗೀತ ಸರಸ್ವತಿಯ ವರಪುತ್ರರೆನ್ನಬಹುದು. ಶಂಕರಘಟ್ಟದಲ್ಲಿ ಸಂಗೀತ ಶಾಲೆ ತೆರೆದು  ಭರತನಾಟ್ಯ  ಮತ್ತು ಸಂಗೀತದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿಿದ್ದಾಾರೆ. ಹಾರ್ಮೋೋನಿಯಂ ಇವರ ಅಚ್ಚುಮೆಚ್ಚಿಿನ ವಾದನ. ಸಾಕಷ್ಟು ಗಾಯಕರ ಗಾಯನಕ್ಕೂ ಸಾಥ್ ಕೊಟ್ಟಿಿರುವುದು ಇನ್ನೊೊಂದು ವಿಶೇಷ.
ಭಕ್ತಿಿ ಪ್ರಧಾನ ಮತ್ತು ಪೌರಾಣಿಕ ನಾಟಕಗಳನ್ನೂ ವೀರಣ್ಣ ನಿರ್ದೇಶನ ಮಾಡಿದ್ದಾಾರೆ. ಸಮಾಜ ಸೇವೆಯೂ ಇವರ ಅವಿಭಾಜ್ಯ ಅಂಗ. ಬಸವಣ್ಣ ಪ್ರತಿಪಾದಿಸಿರುವ ಜಾತ್ಯತೀತತೆ, ಕಾಯಕತತ್ವ, ಸಹೋದರತ್ವವನ್ನು ಮಕ್ಕಳಲ್ಲಿ ಬಿತ್ತಿಿ ಬೆಳೆಸಬೇಕೆಂಬ ಸಂಕಲ್ಪ ಹೊಂದಿರುವ ಇವರು, ತಮ್ಮ ಸಿರಿಕಂಠದಿಂದ ಮಲೆನಾಡಿನೆಲ್ಲೆೆಡೆ ಪ್ರಖ್ಯಾಾತರು. ಸಂಗೀತದ ನೆಲೆಯಲ್ಲಿ ಮಾತ್ರ ಗೀತೆಗಳನ್ನು ಗ್ರಹಿಸದೆ ಸಾಹಿತ್ಯದ ಜವಾಬ್ದಾಾರಿಯಿಂದ ಅರ್ಥಕ್ಕೆೆ ಪ್ರಾಾಧಾನ್ಯತೆ ನೀಡಿ ಹಾಡುವುದು ಇವರ ವಿಶೇಷತೆ.
ಕೇವಲ ಸಂಗೀತಕ್ಕೆೆ ಮಾತ್ರ ಸೀಮಿತರಾಗದೆ, ಇತಿಹಾಸ, ಪುರಾಣ, ದೇವರು, ಧರ‌್ಮ ಮೊದಲಾದ ವಿಷಯದಲ್ಲೂ ತಮ್ಮನ್ನು ವ್ಯಾಾಪಿಸಿಕೊಂಡಿದ್ದಾಾರೆ. ಬೆಳಗುತ್ತಿಿರುವ ದೀಪ ಮಾತ್ರ ಇನ್ನೊೊಂದು ದೀಪವನ್ನು ಪ್ರಜ್ವಲಿಸಬಹುದು ಎಂಬ ಮಾತಿದೆ. ಇದನ್ನು ಅಳವಡಿಸಿಕೊಂಡ ಸರಳ ಜೀವಿ ಇವರು. ಸಂಶೋಧನಾ ವಿದ್ಯಾಾರ್ಥಿಯಂತೆ  ತಾವು ತೆರಳುವ ಊರುಗಳಲ್ಲಿನ ಇತಿಹಾಸ, ಪುರಾಣ, ಕೋಟೆ, ಶಿಲ್ಪ, ದೇವತೆಗಳ ಬಗ್ಗೆೆ ಮಾಹಿತಿ ಕಲೆಹಾಕಿ, ಸಂಪಾದಿಸಿ, ಉತ್ತಮ ಕೃತಿಗಳನ್ನು ರಚಿಸಿದ್ದಾಾರೆ.
ಮೂಲತಃ ಕೃಷಿಕರಾದರೂ ಅದನ್ನು ಮಕ್ಕಳಿಗೆ ವಹಿಸಿ ತಾನೊಬ್ಬ ಕಲಾವಿದನಾಗಿ ಸಮಾಜಮುಖಿ ಸೇವೆ ಸಲ್ಲಿಸುತ್ತಿಿದ್ದಾಾರೆ. ವೀರಣ್ಣ ಅವರಿಗೆ 2010ರಲ್ಲಿ ಶಾಸ್ತ್ರೀಯ ಸಂಗೀತಕ್ಕೆೆ ರಾಜ್ಯಪ್ರಶಸ್ತಿಿ ದಕ್ಕಿಿದೆ. ನೂರಾರು ಪ್ರಶಸ್ತಿಿ, ಸಾರ್ವಜನಿಕ ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ.
ಪ್ರಯತ್ನ ಮತ್ತು ಪರಿಶ್ರಮವಿದ್ದಾಾಗ ಮಾತ್ರ ಮನುಷ್ಯನ ಸಾಧನೆ ಸಾಧ್ಯ. ಆಗ ಬದುಕು ಸುಂದರವಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು, ಸಮಸ್ಯೆೆಗಳನ್ನು ಧೈರ್ಯವಾಗಿ ಎದುರಿಸಬೇಕು ಎನ್ನುವ ವೀರಣ್ಣ, ಗೋಣಿಬೀಡು ಮಠದ ಭಕ್ತರು. ಅಲ್ಲಿನ ಸ್ವಾಾಮೀಜಿಗಳ ಪ್ರೇರೇಪಣೆಯಂತೆ ಕೆಲಸ ಮಾಡಿದ್ದರಿಂದ ಕಿಂಚಿತ್ತಾಾದರೂ ಸಾಧನೆ ಸಾಧ್ಯವಾಗಿದೆ ಎನ್ನುತ್ತಾಾರೆ.
 ಭದ್ರಾಾವತಿ ತಾಲೂಕು ಶಂಕರಘಟ್ಟದ ಸಮೀಪವಿರುವ ಮಾಳೇನಹಳ್ಳಿಿಯವರಾದ ವೀರಣ್ಣ, ಇಲ್ಲಿಯವರೆಗೆ 8 ಕೃತಿಗಳನ್ನು ರಚಿಸಿದ್ದಾಾರೆ. ಬತ್ತದ ಇವರ ಸಾಹಿತ್ಯ, ಸಂಗೀತದ ಚಿಲುಮೆ ಇನ್ನಷ್ಟು ಕಾಲ ಪ್ರವಹಿಸಬೇಕಿದೆ.
published on 16.3.19
............................      

Saturday 2 March 2019

3 ರಾಜ್ಯಪ್ರಶಸ್ತಿಿ ಪಡೆದ 
  ಬಾಲನಟಿ  ಸುಕನ್ಯಾಾ


ಕಲೆ ಪ್ರತಿಕೃತಿಯಲ್ಲ, ಪ್ರತಿಸೃಷ್ಟಿಿ. ನಮ್ಮ ಮೈ-ಮನಸ್ಸನ್ನು  ಮುಟ್ಟಿಿ, ತಟ್ಟಿಿ, ಬದುಕಿನ ಅವಿಭಾಜ್ಯವಾಗಿ ಉಳಿದುಬಂದಿದೆ. ಸಂತಸದ ಹೊನಲಾಗಿ ಹರಿದುಬಂದಿದೆ. ಕಲೆ ಒಂದು ಸೃಜನಶೀಲ ಚಟುವಟಿಕೆ, ಕೌಶಲ್ಯವನ್ನು ಪ್ರಕಟಿಸುವ ವಿಧವೂ ಹೌದು. ಕಲಾಕಾರ ತನ್ನ ಅಭಿನಯದ ಮೂಲಕ ವಿಷಯವನ್ನು ಬಿಂಬಿಸಿದರೆ, ಇತರರು ಅದರ ಸವಿಯನ್ನು ಅನುಭವಿಸುತ್ತಾಾರೆ. ಕಲೆಯು ಉಪಾಸನೆಯ ಒಂದು ಮಾಧ್ಯಮವೆಂದೂ ತಪ್ಪಲ್ಲ.
ನಾನಾರೀತಿಯ ಕಲೆಗಳಲ್ಲಿ ಮಕ್ಕಳು ಇಂದು ಹೆಸರು ಮಾಡುತ್ತಿಿದ್ದಾಾರೆ. ಬಾಲಕಲಾವಿದರಾಗಿಯೇ ಅನೇಕರು ತಮ್ಮ ಛಾಪನ್ನು ಮೂಡಿಸುತ್ತಿಿದ್ದಾಾರೆ. ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚುತ್ತಿಿದ್ದಾಾರೆ. ಇಂತಹವರಲ್ಲಿ ಶಿವಮೊಗ್ಗದ ಸುಕನ್ಯಾಾ ಒಬ್ಬರು.
 ಸುಕನ್ಯಾಾ 6ನೆಯ ತರಗತಿಯ ವಿದ್ಯಾಾರ್ಥಿನಿ. ಓ. ಟಿ. ರಸ್ತೆೆಯ ಸ್ವಾಾಮಿ ವಿವೇಕಾನಂದ ಶಾಲೆಯ ವಿದ್ಯಾಾರ್ಥಿನಿ. ಪ್ರತಿಭಾನ್ವಿಿತೆ ಕೂಡ. ಸಂಗೀತ, ಭಜನೆ ಹಾಡುವುದರಲ್ಲಿ ಮುಂದು. ಈ ಆಸಕ್ತಿಿ ಸಿನಿಮಾ ಕ್ಷೇತ್ರಕ್ಕೂ ಹೊರಳಿದ್ದು ವಿಶೇಷವೇ. ನಗರದವರೇ ಆದ ಶರತ್‌ಚಂದ್ರ ಅವರು ಮುರಿದ ಗೊಂಬೆ ಎನ್ನುವ ಕಿರುಚಿತ್ರವನ್ನು ನಿರ್ಮಿಸಬೇಕೆನ್ನುವ ಆಸೆ ಹೊತ್ತು ಬಾಲನಟಿಯೊಬ್ಬರನ್ನು ಹುಡುಕುತ್ತಿಿದ್ದರು. ಈ ಸಂದರ್ಭದಲ್ಲಿ ಅವರ ಕಣ್ಣಿಿಗೆ ಬಿದ್ದಿದ್ದು ಸುಕನ್ಯಾಾ. ಈಕೆಯ ತಂದೆ ಕೃಷ್ಣಪ್ಪ ಮತ್ತು ತಾಯಿ ಕವಿತಾ ಅವರ ಪರವಾನಿಗೆ ಪಡೆದು ಚಿತ್ರದಲ್ಲಿ ನಟನೆಗೆ ಅವಕಾಶ ಕೊಟ್ಟರು. ಬಡವರ ಮನೆಯ ಹುಡುಗಿ ರಮ್ಯಾಾಳ ಪಾತ್ರ ಈಕೆಯದು. ಅದನ್ನು ಕಣ್ಣಿಿಗೆ ಕಟ್ಟುವಂತೆ ಮಾಡಿದ್ದಾಾಳೆ. ಇದೇ ಅವರಿಗೆ ರಾಜ್ಯ ಪ್ರಶಸ್ತಿಿ ಪಡೆಯಲು ಬಾಗಿಲು ತೆರೆಯಿತು.
ಸಿಕ್ಕ ಅವಕಾಶವನ್ನು  ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಏಕೆಂದರೆ ಅವಕಾಶಗಳು ಮತ್ತೆೆ ಮತ್ತೆೆ ಬರುವುದಿಲ್ಲ. ಸುಕನ್ಯಾಾ ನಟನೆಗೆ ಒಪ್ಪಿಿಕೊಂಡ ಬಳಿಕ ಶೂಟಿಂಗ್‌ನಲ್ಲಿ ಸಕ್ರಿಿಯವಾಗಿ ಮತ್ತು ಅಷ್ಟೇ ಆಸಕ್ತಿಿಯಿಂದ ಪಾಲ್ಗೊೊಂಡಿದ್ದಳು. ಸಂಭಾಷಣೆಯನ್ನೂ ಅಚ್ಚುಕಟ್ಟಾಾಗಿ ನಿರ್ವಹಿಸಿದ್ದಾಾಳೆ. ಈ ಚಿತ್ರ ಗಮನಿಸಿದವರಿಗೆ ಮುದ್ದುಮುಖದ ಸುಕನ್ಯಾಾಳ ಪಾತ್ರ ಇಷ್ಟವಾಗದೇ ಇರಲಾರದು.
ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಅತ್ಯುತ್ತಮ ಬಾಲಕಲಾವಿದೆ ಪ್ರಶಸ್ತಿಿ ಸಹ ಕಳೆ ಬಾರಿ ಈಕೆಗೆ ದಕ್ಕಿಿತ್ತು.  ಮೈಸೂರಿನ ಕರುನಾಡು ಕಿರುಚಿತ್ರ ಸ್ಪರ್ಧೆಯಲ್ಲೂ  ಅತ್ಯುತ್ತಮ ಬಾಲಕಲಾವಿದೆ ಬಹುಮಾನಕ್ಕೆೆ ಸುಕನ್ಯಾಾ ಪಾತ್ರಳಾಗಿದ್ದಾಾಳೆ. ಬೆಂಗಳೂರಿನಲ್ಲಿ ಜರುಗಿದ ನಾಳೆಯ ನಿರ್ದೇಶಕರು ಕಿರುಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಾಲಕಲಾವಿದೆ ಪ್ರಶಸ್ತಿಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾಾಳೆ. ಈ ಮೂಲಕ ಒಂದೇ ಸಿನಿಮಾಕ್ಕೆೆ ಮೂರು ಬಾಲಕಲಾವಿದೆ ಪ್ರಶಸ್ತಿಿಯನ್ನು ಪಡೆದ ಹೆಗ್ಗಳಿಕೆ ಈಕೆಯದು. ಮುರಿದ ಗೊಂಬೆ ಈಗಾಗಲೇ ಹಲವರು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ.
 ಸುಕನ್ಯಾಾ ಉತ್ತಮ ಹಾಡುಗಾರಿಕೆಯವಳು. ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ತನ್ನ ಕಂಠಸಿರಿಯನ್ನು ಪ್ರದರ್ಶಿಸಿದ್ದಾಾಳೆ. ಭಜನೆ ಹಾಡಲು ಕುಳಿತರೆ ಅದನ್ನು ಕೇಳುವುದೇ ಒಂದು ಸೊಗಸು. ಹೀಗೆ ಹಾಡುಗಾರಿಕೆ ಕ್ಷೇತ್ರದಿದಂ ನಡಟನಾ ಕ್ಷೇತ್ರಕ್ಕೆೆ ಕಾಲಿಟ್ಟ ನಾಂತರ ವಿವಿಧ ದಾರಾವಾಹಿಗಳಲ್ಲಿ ನಟಿಲುಸ ವಕಾಸಗಳು ಬರುತ್ತಿಿವೆ. ಆದರೆ ಪಾಲಕರು ಸದ್ಯ ಓದಿನ ಕಡೆ ಗಮನಕೊಟುವುದ ಒಳ್ಳೆೆಯದೆಂಬ ದೃಷ್ಟಿಿಯಿಂದ  ಸ್ವಲ್ಪ ಹಿಂಧೆಠು ಹಾಕಿದ್ದಾಾರೆ. ಆದರೂ ವರ್ಷಕ್ಕೊೊಂದೆರಡು ಧಾರಾವಾಹಿಗಳಲ್ಲಿ ನಗಳು ನಟಿಸಲಿ ಎಂಬ ತೀರ್ಮಾನ ಮಾಡಿದ್ದಾಾರೆ.
ಪ್ರತಿಭಾನ್ವಿಿತೆ ಸುಕನ್ಯಾಾಳಿಗೆ ಉತ್ತಮ ಭವಿಷ್ಯ ಇದೆ, ವೇದಿಕೆಯೂ ಇದೆ. ಅದನ್ನು ಸರಿಯಾಗಿ ಬಳಸಿಕೊಂಡಲ್ಲಿ ಕಲೆಯ ಮೂಲಕವೇ ಹೆಸರುಗಳಿಸಬಹುದು. ಕಲೆ ಯಾವತ್ತೂ ಸಾಧಕನ ಸ್ವತ್ತಾಾಗಿರುವುದರಿಂದ ಮತ್ತು ಸಾಧನೆಗೆ ಸಾಕಷ್ಟು ಅವಕಾಶ ಇರುವುದರಿಂದ ವಿದ್ಯಾಾಭ್ಯಾಾಸದ ಜೊತೆಗೆ ಕಲೆಗೂ ಗಮನ ನೀಡುತ್ತ ಸಾಗಬಹುದಾಗಿದೆ.
ಮುರಿದ ಗೊಂಬೆ ಕಿರುಚಿತ್ರ ಆಯುಶ್ ಟಿವಿಯಲ್ಲಿ ಪ್ರಸಾರವಾಗಿದೆ. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಬಾಲಕಲಾವಿದೆ ಪ್ರಶಸ್ತಿಿಯನ್ನೂ ಇದೇ ಚಾನೆಲ್‌ನವರು ಆಯೋಜಿಸಿದ್ದರು.. ಈ ಬಾಲಕಿಯ ಕಲಾಜೀವನ ಇನ್ನಷ್ಟು ಎತ್ತರಕ್ಕೆೆ ಬೆಳೆಯಬೇಕಿದೆ. March 2-2019
,,,,,,,,,,,,,,,,,,,,,,,,,,,,