Saturday 20 April 2019

ಕಲಾಕ್ಷೇತ್ರದ ಯುವ ಪ್ರತಿಭೆ
ಅಭಿರಾಮ್ ಭಾಗವತ್


ಎಳವೆಯಿಂದಲೇ ಕಲೆಗಳತ್ತ ಆಸಕ್ತಿಿಯಿದ್ದರೆ  ಎಲ್ಲವನ್ನೂ ಕಲಿಯಬಹುದು. ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಅವಕಾಶ ಮತ್ತು ವೇದಿಕೆ ಬೇಕು. ಇದಕ್ಕೆೆ ತಕ್ಕ ವಾತಾವರಣ ನಿರ್ಮಾಣವದಾಗ ಅದು ಪ್ರಕಟಗೊಳ್ಳುತ್ತದೆ. ಪಾಲಕರು ಮಕ್ಕಳಲ್ಲಿರುವ ಪ್ರತಿಭೆ ಗಮನಿಸಿ ಅದು ಹೊರಬರುವಂತೆ ಮಾಡಬೇಕು.
ಶಿವಮೊಗ್ಗ ನಗರದಲ್ಲಿ ಅಭಿರಾಮ್ ಭಾಗವತ್ ಹೆಸರು ಚಿರಪರಿಚಿತ. ಈ ಬಾಲಕ ಕೊಳಲು ಮತ್ತು ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿಿದ್ದಾಾನೆ. ಈಗಾಗಲೇ ಜಿಲ್ಲೆೆ ಮತ್ತು ಹೊರಜಿಲ್ಲೆೆಗಳಲ್ಲಿ ಸಾಕಷ್ಟು ಕಾರ‌್ಯಕ್ರಮಗಳನ್ನು ಕೊಡುವ ಮೂಲಕ ಬಾಲಪ್ರತಿಭೆಯಾಗಿ ಪ್ರಕಾಶಿಸುತ್ತಿಿದ್ದಾಾನೆ.
ಅಭಿರಾಮ ನಗರದ ಗೋಪಾಳದ ವಾಸಿ. ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನಲ್ಲಿ ದ್ವಿಿತೀಯ ಪಿಯುಗೆ ಕಾಲಿಟ್ಟಿಿದ್ದಾಾನೆ. ಎಸ್ಸೆೆಸೆಲ್ಸಿಿಯಲ್ಲಿ ರಾಜ್ಯಕ್ಕೆೆ 7ನೆಯ ರ್ಯಾಾಂಕ್ ಗಳಿಸಿದ್ದ ಈತ, ಅದೇ ರೀತಿ ಸಂಗೀತದಲ್ಲೂ ಅಪಾರ ಸಾಧನೆಯನ್ನು ಮಾಡಿದ್ದಾಾನೆ. ಶಾರದಾದೇವಿ ಅಂಧರ ಶಾಲೆಯಲ್ಲಿ ಎಸ್ಸೆೆಸೆಲ್ಸಿಿಯವರೆಗೆ ಓದಿದ್ದಾಾನೆ. ಈ ಹಂತದಲ್ಲೇ ಹಾಡುಗಾರಿಕೆ, ಕೊಳಲು, ತಬಲಾ, ವೀಣೆ ಮೊದಲಾದವುಗಳಲ್ಲಿ ಸಾಕಷ್ಟು ಪರಿಣಿತಿ ಪಡೆದಿದ್ದಾಾನೆ. 2006ರಲ್ಲಿ ಸಂಗೀತಕ್ಕೆೆ ಕಾಲಿಟ್ಟ ಈತ ಅಲ್ಲಿಂದ ಸತತವಾಗಿ ಸಾಧನೆಯಲ್ಲೇ ಮುಂದುವರೆದಿದ್ದಾಾನೆ. ತಬಲಾದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ್ದಾಾನೆ. ಆದರೆ ಈಗ ತಬಲಾ ಬಾರಿಸುತ್ತಿಿಲ್ಲ. ಬದಲಾಗಿ ಕರ್ನಾಟಕ ಹಾಡುಗಾರಿಕೆಯಲ್ಲಿ ಹೆಚ್ಚಿಿನ ಕಲಿಕೆ ಮುಂದುವರೆಸಿದ್ದಾಾನೆ. 
ವಿದ್ವಾಾನ್ ಹೊಸಹಳ್ಳಿಿ ಅನಂತರಾಮ್ ಅವರಲ್ಲಿ ಕರ್ನಾಟಕ ಸಂಗೀತದ ವಿದ್ವತ್‌ನ್ನು ಅಭ್ಯಸಿಸಿ ಕೊಳಲುವಾದನವನ್ನು ನಗರದ ಎಚ್.ಎನ್. ಶ್ರೀಧರ್ ಅವರಲ್ಲಿ ತರಬೇತಿ ಪಡೆಯುತ್ತಿಿದ್ದಾಾರೆ, ರಾಜಲಕ್ಷ್ಮೀ ಅವರಲ್ಲಿ ಕೊಳಲನ್ನೂ ಸಹ ಕಲಿತಿದ್ದಾಾನೆ. ವಯೋಲಿನ್ ಅನ್ನು ಮಧುಮುರಳಿ ಅವರಲ್ಲಿ ಕಲಿತಿದ್ದಾಾನೆ. ಆದರೆ ಈಗ ಕೊಳಲು ಮತ್ತು ಹಾಡುಗಾರಿಕೆಯಲ್ಲಿ ಮಾತ್ರ ಸಾಧನೆಗೈಯ್ಯುತ್ತಿಿದ್ದಾಾನೆ.
ಕಳೆದ ವಾರ ಶಿವಮೊಗ್ಗದಲ್ಲಿ ಜರುಗಿದ ರಾಮೋತ್ಸವದಲ್ಲಿ ಹಾಡುಗಾರಿಕೆ ಮೂಲಕ ಎಲ್ಲರ ಗಮನಸೆಳೆದಿರುವ ಈತ, ಭರವಸೆಯ ಗಾಯಕನಾಗಿದ್ದಾಾನೆ. ತಂದೆ ಗೋಪಾಲಕೃಷ್ಣ ಮತ್ತು ತಾಯಿ ಉಮಾ ಸಹ ಮಗನ ಪ್ರತಿಭೆಯನ್ನು ಎಲ್ಲಾಾ ರೀತಿಯಲ್ಲೂ ಪೋಷಿಸುತ್ತಿಿದ್ದಾಾರೆ. ಬಾಲ್ಯದಿಂದಲೂ ಹಾಡುವುದರಲ್ಲಿ ಆಸಕ್ತಿಿ ಹೊಂದಿದ್ದರಿಂದ ಪಾಲಕರು ಸಂಗೀತಕ್ಕೆೆ ಸೇರಿಸಿದರು. ಫಲವಾಗಿ ಸಂಗೀತ ಶಾರದೆಯ ಕೃಪಾಶೀರ್ವಾದ ಈತನಿಗೆ ದಕ್ಕಿಿದೆ. ಹಾಡುಗಾರಿಕೆಯಲ್ಲಿ ವಿದ್ವತ್‌ನ್ನು ಮುಗಿಸಿದ್ದಾಾನೆ. 
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ, ಕುಂದಾಪುರ ಸಮೀಪದ ಕಾಳಾವರದ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ಮಾತೃಛಾಯಾ, ಶಿವಮೊಗ್ಗದ ಪಂಚಮುಖಿ ಆಂಜನೇಯ ದೇವಾಲಯ, ಹರಕೆರೆ ಶಿವ ದೇವಾಲಯ, ವಿದ್ಯಾಾಗಣಪತಿ ಸಮಿತಿಯವರ ಕಾರ‌್ಯಕ್ರಮದಲ್ಲಿ, ಬೆಂಗಳೂರಿನ ಕತ್ರಿಿಗುಪ್ಪೆೆಯ ಪ್ರಸನ್ನ ಆಂಜನೇಯ ದೇವಾಲಯದಲ್ಲಿ, ಜೊತೆಗೆ ಮುಂಬೈ, ಮೈಸೂರು, ಉಡುಪಿ ಮೊದಲಾದೆಡೆ ಸಾಕಷ್ಟು ಕಾರ‌್ಯಕ್ರಮಗಳನ್ನು ನೀಡಿದ್ದಾಾನೆ.  ದಾವಣಗೆರೆಯಲ್ಲಿ ಬಾಲಕನ ಅಸಾಧಾರಣ ಸಾಧನೆ ಗಮನಿಸಿ ಸರಸ್ವತಿ ಪುರಸ್ಕಾಾರ ಎಂಬ ಪ್ರಶಸ್ತಿಿಯನ್ನು ಪ್ರದಾನ ಮಾಡಿದ್ದಾಾರೆ. 
ಕಲೆಯಲ್ಲಿ ಪಾವಿತ್ರ್ಯತೆಯನ್ನು ಕಂಡವರು ಮಾತ್ರ  ಸಾಧಕರಾಗುತ್ತಾಾರೆ. ಜೊತೆಗೆ ಕಲಾ ಸೌಂದರ್ಯವೂ ಅವರಲ್ಲಿರಬೇಕು. ಈ ಸೌಂದರ‌್ಯ ಕೇವಲ ಬಾಹ್ಯವಾಗಿರದೆ, ಕಲೆಯ ಆತ್ಮದ ಒಳ ಹಸಿರಾಗಿರಬೇಕು. ಅದನ್ನು ರಸ ಎಂದು ಕರೆಯಲಾಗುತ್ತದೆ. ಇಂತಹ ರಸಪೂರ್ಣವಾದ ಕಲೆ ಹೃದಯಸಂವಾದಿಯಾಗಿದ್ದಾಾಗ ಎಲ್ಲರನ್ನೂ ಆಕರ್ಷಿಸುತ್ತದೆ, ಕಲಾವಿದನೂ ಸಹ ಪರಿಪೂರ್ಣನಾಗಲು ಸಾಧ್ಯವಾಗುತ್ತದೆ. ಬಹುಕಾಲ ಮರೆಯದ ಕಲೆ ಅದಾಗುತ್ತದೆ. 
 ಅಭಿರಾಮ್‌ನಲ್ಲಿ ಈ ಹೃದಯಸಂವಾದಿ ಕಲೆ ಇದೆ. ಆದ್ದರಿಂದಲೇ ಜನರನ್ನು ಆಕರ್ಷಿಸುವ ಶಕ್ತಿಿ ಆತನ ಹಾಡುಗಾರಿಕೆ ಅಥವಾ ಕೊಳಲುವಾದನಲ್ಲಿದೆ. ಆನಂದವನ್ನು ನೀಡುವ ಶಕ್ತಿಿ ಅದರಲ್ಲಿದೆ.  ರಸದೃಷ್ಟಿಿ, ರಸಪುಷ್ಟಿಿ ಈ ಕಲೆಯ ಅಂತರಂಗದಲ್ಲಿದೆ.
ಇಂತಹ ಕಲೆಯ ಚೆಲುವನ್ನು ತುಂಬಿಕೊಂಡ ಬಾಲಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಾಹ ಎಲ್ಲೆೆಡೆ ಸಿಗಬೇಕಿದೆ.
published on  20-4-2019

...............................

No comments:

Post a Comment