Saturday 16 June 2018

ಸ್ವಯಂ ಸಾಧಕ ಪ್ರತಿಭೆ
ಪೃಥ್ವಿಿ ಗೌಡ

 .ಯಾರ ನೆರವೂ ಇಲ್ಲದೆ ಸ್ವಪ್ರಯತ್ನದಿಂದ ಮೇಲೆ ಬರುವುದು ಸುಲಭದ ಮಾತಲ್ಲ. ಆದರೆ ಆತ ಕ್ರಿಿಯಾಶೀಲನಾದಲ್ಲಿ ಸ್ವಂತಿಕೆಯಿಂದಲೇ ಎಲ್ಲವನ್ನೂ ಸಾಧಿಸಬಲ್ಲ. ನಗರದ ಯುವಕನೊಬ್ಬ ಸ್ವಪ್ರಯತ್ನ, ಸತತ ಶ್ರಮದಿಂದ ಕಷ್ಟಕರವಾದುದನ್ನು ಇಷ್ಟಪಟ್ಟು ಸಾಧಿಸಿ ಜನಪ್ರಿಿಯನಾಗಿದ್ದಾಾನೆ. ರಂಗಕಲೆ, ಸಿನಿಮಾ, ಕಿರುಚಿತ್ರ, ಹಾಡುಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರಸಿದ್ಧಿಿಯಾಗಿದ್ದಾಾನೆ.
ಪೃಥ್ವಿಿ ಗೌಡ. ಶಿವಮೊಗ್ಗದಲ್ಲಿ ಈತನ ಹೆಸರು ಕೇಳದವರು ವಿರಳ. ಇತ್ತೀಚೆಗೆ ಜರುಗಿದ ಕಿರುಚಿತ್ರ ಸ್ಪರ್ಧೆ (ಅಂಬೆಗಾಲು-3)ಯಲ್ಲಿ ಉತ್ತಮ ನಟ ಎಂಬ ಕೀರ್ತಿಗೆ ಭಾಜನನಾಗುವ ಮೂಲಕ ಮತ್ತೊೊಮ್ಮೆೆ ತನ್ನ ಬಹುಮುಖ ಪ್ರತಿಭೆಯನ್ನು ಪ್ರಚುರಪಡಿಸಿದ್ದಾಾನೆ. ಸಾಧನೆಗೆ ಸತತ ಪ್ರಯತ್ನ ಬೇಕು ಎನ್ನುವುದನ್ನು ಅರಿತಿರುವ ಈತ, ಈಗ ಅದರಲ್ಲೇ ಸಂಪೂರ್ಣವಾಗಿ ಕೆಲಸ ಮಾಡುತ್ತ, ಇನ್ನಷ್ಟು ಬೆಳೆಯುವ ಆಶಾವಾದ ಹೊಂದಿದ್ದಾಾನೆ. 
ನಗರದ ಅಶೋಕನಗರವಾಸಿಯದ  ಪೃಥ್ವಿಿ, ಹೈಸ್ಕೂಲು ಓದುತ್ತಿಿರುವಾಗಲೇ ಸಂಗೀತ, ರಂಗಕಲೆಯತ್ತ ಆಸಕ್ತಿಿ ಬೆಳೆಸಿಕೊಂಡವನು. ಆಗ ಪ್ರೋತ್ಸಾಾಹ ಸಿಕ್ಕದೆ ತಾನೇ ಮುಂದೆ ಬಂದು ಕಲೆಯನ್ನು ಪ್ರದರ್ಶಿಸುವ ಮೂಲಕ ಹೊರಜಗತ್ತಿಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾಾನೆ. ಆನಂತರವೂ ಇದೇ ಕ್ಷೇತ್ರದಲ್ಲಿ ಮುಂದುವರೆದ ಪರಿಣಾಮವಾಗಿ ಈಗ ರಾಜ್ಯಮಟ್ಟದಲ್ಲಿ ಹೆಸರು, ಕೀರ್ತಿ ಸಂಪಾದಿಸಿದ್ದಾಾನೆ. ಸ್ವಂತ ಆಲ್ಬಂ ಹಾಡು ರಚನೆ, ನಿರ್ದೇಶನಕ್ಕೆೆ ಇಳಿದಿದ್ದಾಾನೆ. ಇವೆಲ್ಲವೂ ಈತನ ಹೆಸರನ್ನು ಇನ್ನಷ್ಟು ಮೇಲಕ್ಕೇರಿಸಿವೆ.
 ಪೃಥ್ವಿಿಯ ಸಾಧನೆಯ ಪಟ್ಟಿಿ ದೊಡ್ಡದಿದೆ. 2014ರಿಂದಲೇ ತನ್ನಲ್ಲಿರುವ ವಿವಿಧ ಕಲೆಯನ್ನು ಹೊರಜಗತ್ತಿಿಗೆ ತೋರಿಸಿಕೊಳ್ಳಲಾರಂಭಿಸಿದನು. ಸ್ಪರ್ಧೆಗಳಲ್ಲಿ  ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡನು. 2014ರಲ್ಲಿ ತೀರ್ಥಹಳ್ಳಿಿಯಲ್ಲಿ ಜರುಗಿದ  ಮಲೆನಾಡು ಕೋಗಿಲೆ ಹಾಡು ಸ್ಪರ್ಧೆಯಲ್ಲಿ ಜಯಶೀಲನಾದ ನಂತರ ಹಿಂದಿರುಗಿ ನೋಡಲೇ ಇಲ್ಲ. ಆನಂತರ ಶಿವಮೊಗ್ಗದಲ್ಲಿ ಜರುಗಿದ ವಾಯ್‌ಸ್‌ ಆಫ್ ಕರ್ನಾಟಕ, ಸಿಂಗಿಂಗ್ ಸ್ಟಾಾರ್ ಆಫ್ ಕರ್ನಾಟಕದಲ್ಲಿಯೂ  ಸಮಾಧಾನಕರ ಪ್ರಶಸ್ತಿಿ ಗಳಿಸಿದನು. ಚಂದನದಲ್ಲಿ ಪ್ರಸಾರವಾದ  ಮಧುರಮಧುರವೀ ಮಂಜುಳಗಾನ ಮತ್ತು ಈ ಭೂಮಿ ನಮ್ಮದು ಕಾರ್ಯಕ್ರಮದಲ್ಲಿ ಹಾಡಿರುವ ಕೀರ್ತಿ ಈತನದು. ಕನ್ನಡ ಮಾಸ್ಟರ್‌ಪೀಸ್ ಎಂಬ ಆಲ್ಬಂನಲ್ಲಿ ಪ್ರಥಮ ಬಾರಿಗೆ ಹಾಡುವ ಮೂಲಕ ಆ ಕ್ಷೇತ್ರದಲ್ಲಿಯೂ ತನ್ನ ಹೆಸರನ್ನು ಛಾಪಿಸಿದ್ದಾಾನೆ. ತಥಾಸ್ತು, ಕ್ರಾಾಂತಿ ಕಹಳೆ ಎಂಬ ಸಿನಿಮಾದಲ್ಲಿ ಹಾಡಿದ್ದಾಾನೆ. ಸುಮಾರು 30 ಆಲ್ಬಂನಲ್ಲಿ  ಮುಖ್ಯ ಹಾಡುಗರನಾಗಿ ಕಾಣಿಸಿಕೊಂಡಿದ್ದಾಾನೆ.
ಗಿಟಾರ್ ವಾದಕನಾಗಿಯತೂ ಹೆಸರುಮಾಡಿರುವ ಪೃಥ್ವಿಿ, ಸುಮಾರು 10 ಪ್ರದರ್ಶನಗಳನ್ನು ರಾಜ್ಯದ ವಿವಿಧೆಡೆ ನೀಡಿದ್ದಾಾನೆ. 9 ಆಲ್ಬಂಗಳಿಗೆ ಹಾಡು ಕಂಪೋಸ್ ಮಾಡಿದ್ದಾಾರೆ. ಕನ್ನಡದಲ್ಲಿ 16  ಆಲ್ಬಂಗಳಿಗೆ ಹಾಡು ಬರೆದಿದ್ದಾಾರೆ. 14 ಕಿರುಚಿತ್ರ, 3 ಜಾಹೀರಾತುಗಳಿಗೆ ಸಂಭಾಷಣೆ ಬರೆದಿದ್ದಾಾರೆ. 10 ಕಿರುಚಿತ್ರಗಳನ್ನು ನಿರ್ದೇಶಿಸಿ, 40 ಕಿರುಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾಾರೆ. ಕೆ.ಕೆ. ಟೀಮ್ ಎಂಬ ಕನ್ನಡ ಸಿನಿಮಾದಲ್ಲಿ ಮತ್ತು ಇ-ಪೀಪಲ್ ಎಂಬ ಜಾಹೀರಾತಿನಲ್ಲೂ  ಅಭಿನಯಿಸಿದ್ದಾಾನೆ.
ಮೈ ಲವ್ ಮೈ ನೇಶನ್ ಎಂಬ ಕಿರುಚಿತ್ರವನ್ನು ಬರೆದು ನಿರ್ದೇಶಿಸಿದ್ದು, ಇದು ಅತ್ಯುತ್ತಮ ದೇಶಭಕ್ತಿಿ ವಿಚಾರ ಹೊಂದಿದ ಕಥೆ ಎಂಬ ಪ್ರಶಸ್ತಿಿಗೆ, ಪರ್ಣ ಎಂಬ ಕಿರುಚಿತ್ರಕ್ಕೆೆ ಈ ವರ್ಷದ ಅಂಬೆಗಾಲು-3 ರ  ಉತ್ತಮ ಕಿರುಚಿತ್ರಪ್ರಶಸ್ತಿಿ, ಇದೇ ಚಿತ್ರಕ್ಕೆೆ  ನಿರ್ಣಾಯಕರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಿ,  ವಂದೇ ಮಾತರಂ ಎಂಬ ಆಲ್ಬಂ ಹಾಡಿಗೆ ಅತ್ಯುತ್ತಮ ಆಲ್ಬಂ ಸಾಂಗ್ ಪ್ರಶಸ್ತಿಿ, ಎಬಿಸಿಡಿ ಆಲ್ಬಂ ಹಾಡಿಗೆ  ಉತ್ತಮ ಆಲ್ಬಂ ಹಾಡು ಪ್ರಶಸ್ತಿಿಯನ್ನು ಪಡೆದಿದ್ದಾಾನೆ.
ಸಮೃದ್ಧಿಿ ಎಂಬ ನಾಟಕ ತಂಡವನ್ನು ಹುಟ್ಟು ಹಾಕಿ ಅದರ ಮೂಲಕ ಸಂರಕ್ಷಕ, ಆಝಾದ್, ಈಸೂರು ದಂಗೆ, ಅಂಗುಲಿಮಾಲಾ, ಜೀವನ ಸಂಜೆ ಮತ್ತು ಜೆಎನ್‌ಯು ಎಂಬ 6 ನಾಟಕಗಳನ್ನು ನಿರ್ದೇಶಿಸಿ, ಸುಮಾರು 25 ಪ್ರದರ್ಶನವನ್ನು ವಿವಿಧೆಡೆ ನೀಡಿದ್ದಾಾನೆ. ಹೀಗೆ ತಾನು ವಿಭಿನ್ನವಾದುದನ್ನು ಸಾಧಿಸುವ ಮನೋಭಾವದ ಯುವಕ  ಎನ್ನುವುದನ್ನು ತೋರಿಸುತ್ತಿಿದಾನೆ.
published on 16-june-18

No comments:

Post a Comment