Monday 4 June 2018

ಕಬಡ್ಡಿಿಯ ಸಾಧಕ
ನವೀನ್ ನಾಯ್‌ಕ್‌



ಕಬಡ್ಡಿಿ ಶಕ್ತಿಿ ಮತ್ತು ಯುಕ್ತಿಿಯಿಂದ ಕೂಡಿದ ಆಟ. ಮೂಲತಃ  ಗ್ರಾಾಮೀಣ ಪ್ರದೇಶದ ಕಲೆಯಾದರೂ ಆನಂತರದ ವರ್ಷಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಿ ಟೂರ್ನಿ ನಡೆಯುತ್ತಿಿದೆ. ವಿಶೇಷವೆಂದರೆ, ಗ್ರಾಾಮಾಂತರ ಪ್ರತಿಭೆಗಳೇ ಇದರಲ್ಲಿ ಅತಿ ಹೆಚ್ಚು ಸಂಖ್ಯೆೆಯ ಆಟಗಾರರಾಗಿರುವುದು.
ಈ ಕ್ರೀಡೆ ಶಿವಮೊಗ್ಗ ಜಿಲ್ಲೆೆಯಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಅನೇಕ ಯುವಕರು ಇದರಲ್ಲಿ ಹೆಸರುಗಳಿಸುತ್ತಿಿದ್ದಾಾರೆ. ಇತ್ತೀಚಿನ ದಿನಗಳಲ್ಲಿ ಈ ಕ್ರೀಡೆಗೆ ಸೇರಲ್ಪಟ್ಟ ಹೆಸರು ನವೀನ್ ನಾಯ್‌ಕ್‌. ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿಿತಿಯ ಬಿ.ಎ. ವಿದ್ಯಾಾರ್ಥಿಯಾಗಿರುವ ನವೀನ್, ಗುಜರಾತ್‌ನ ಆನಂದ್‌ನಲ್ಲಿ ಇತ್ತೀಚೆಗೆ ಜರುಗಿದ ಈ ಬಾರಿಯ ವಿದ್ಯಾಾರ್ಥಿ ಒಲಿಂಪಿಕ್‌ಸ್‌‌ನಲ್ಲಿ ರಾಜ್ಯ ತಂಡದಲ್ಲಿ ಆಡಿ ಪ್ರಶಸ್ತಿಿಯೊಂದಿಗೆ ಮರಳಿದ್ದಾಾನೆ.
ನವೀನ್ ಸದ್ಯದಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಬಡ್ಡಿಿ ಟೂರ್ನಿಯಲ್ಲಿ ಪಾಲ್ಗೊೊಳ್ಳಲು ಆಯ್ಕೆೆಯಾಗಿದ್ದಾಾನೆ. ಪ್ರಾಾಥಮಿಕ ಶಾಲೆಯಲ್ಲಿ ಓದುವಾಗಲೇ ಕಬಡ್ಡಿಿ ಮತ್ತು ಕುಸ್ತಿಿ ಬಗ್ಗೆೆ ವಿಶೇಷ ಆಸಕ್ತಿಿ ನವೀನ್‌ನನಲ್ಲಿತ್ತು. ಪ್ರೌೌಢಶಾಲಾ ಮಟ್ಟದಲ್ಲೂ ಇದನ್ನು ಮುಂದುವರೆಸಿ ಇಂದಿನವರೆಗೂ ಯಾರಿಂದಲೂ ತರಬೇತಿ ಪಡೆಯದೆ ಸ್ವಂತವಾಗಿ ಆಡುವ ಮೂಲಕ ಅದರಲ್ಲಿ ಮುಂದೆ ಬಂದಿದ್ದಾಾನೆ. ಇವರ ಮಾವ ಆನಂದ್ ಸಹ ಕಬಡ್ಡಿಿ ಆಟಗಾರರಾಗಿದ್ದು. ಅವರಿಂದ ಹೆಚ್ಚಿಿನ ಸಲಹೆ-ಸೂಚನೆ ಪಡೆದುಕೊಂಡು ಈ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿಿದ್ದಾಾನೆ.
 ನವೀನ್  ಸಹೋದರ  ಅಶೋಕ್ ಸಹ ಕಬಡ್ಡಿಿಯಲ್ಲಿ ಹೆಸರು ಮಾಡುತ್ತಿಿದ್ದಾಾನೆ. ಈತ ವಿದ್ಯಾಾರ್ಥಿ ಒಲಿಂಪಿಕ್‌ಸ್‌‌ಗೆ ಕರ್ನಾಟಕ ತಂಡದ ನಾಯಕನಾಗಿದ್ದನು. ಸದ್ಯ ಆಳ್ವಾಾಸ್‌ನಲ್ಲಿ ಪದವಿಗೆ ಸೇರಿರುವ ಅಶೋಕ್ ಸಹ ಮಲೇಶಿಯಾಕ್ಕೆೆ ಆಯ್ಕೆೆಯಾಗಿದ್ದಾಾನೆ. ಕಬಡ್ಡಿಿ ಸಹೋದರರಾಗಿರುವ ಇವರಿಗೆ ಆನಂದ್ ಎಲ್ಲ ರೀತಿಯ ಪ್ರೋತ್ಸಾಾಹ ನೀಡಿ ಬೆಳೆಸುತ್ತಿಿದ್ದಾಾರೆ.
ಕಳೆದ ಬಾರಿ ಕುವೆಂಪು ವಿಶ್ವವಿದ್ಯಾಾಲಯದ ಕಬಡ್ಡಿಿ ತಂಡದ ಆಯ್ಕಗೆ ನವೀನ್ ಹೋಗಿದ್ದರೂ  ಎತ್ತರ ಕಡಿಮೆ ಎಂಬ ಕಾರಣದಿಂದ ಅವರನ್ನು ಕೈಬಿಡಲಾಗಿತ್ತು. ಆದರೆ ಇದರಿಂದ ಎದೆಗುಂದದೆ ಕಾಲೇಜಿನಲ್ಲಿ ಸಮಾನಮನಸ್ಕರ ತಂಡ ಕಟ್ಟಿಿ ಆಡುತ್ತಿಿದ್ದರು. ಈ ಮೂಲಕ ಸಾಧ್ಯವಾದಾಗಲೆಲ್ಲ ತಾವೇ ತರಬೇತಿ ಪಡೆಯುತ್ತಿಿದ್ದರು. ಜೊತೆಗೆ ಹಲವಾರು ಗ್ರಾಾಮಾಂತರ ಟೂರ್ನಿಗಳಲ್ಲೂ ಈ ತಂಡ ಪಾಲ್ಗೊೊಳ್ಳುತ್ತಿಿತ್ತು. ಸದಾ ಕಬಡ್ಡಿಿಯ ಬಗ್ಗೆೆ ಆಸಕ್ತಿಿ ಹೊಂದಿ, ಅದರಲ್ಲೇ ಏನಾದರೂ ಸಾಧನೆ ಮಾಡಬೇಕೆನ್ನುವ ಕನಸು ಕಾಣುತ್ತಿಿರುವ ನವೀನ್, ಸ್ವಂತ ಪರಿಶ್ರಮದಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಂತಾಗಿದ್ದಾಾನೆ. 
ಮೂಲತಃ ಬಡ ರೈತ ಕುಟುಂಬದವರಾದ ಈ ಸಹೋದರರರು, ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸುವ ಉತ್ಕಟೇಚ್ಛೆೆ ಹೊಂದಿದ್ದಾಾರೆ.  ಕ್ರೀಡಾ ಕೋಟಾದಲ್ಲೇ ನೌಕರಿ ಪಡೆಯುವ ಆಸೆ ನವೀನ್‌ದ್ದು, ಜೊತೆಗೆ ಕಬಡ್ಡಿಿಯಲ್ಲಿ ಜಿಲ್ಲೆೆಯಲ್ಲಿ ಈವರೆಗೆ ಯಾರೂ ಮಾಡದ ವಿಶೇಷವಾದ ಸಾಧನೆ ಮಾಡಬೇಕು. ದೇಶೀಯ ತಂಡಕ್ಕೆೆ ಆಯ್ಕೆೆಯಾಗಬೇಕು. ಪ್ರೊ ಕಬಡ್ಡಿಿಯಲ್ಲೂ ಸ್ಥಾಾನ ಗಿಟ್ಟಿಿಸಬೇಕು ಎನ್ನುವ ಮಹತ್ವಾಾಕಾಂಕ್ಷೆಯಲ್ಲಿದ್ದಾಾನೆ. ಈ ಬಾರಿಯಾದರೂ ಕುವೆಂಪು ವಿವಿ ತಂಡದಲ್ಲಿ ಸ್ಥಾಾನ ಗಿಟ್ಟಿಿಸಲು ಎಲ್ಲ ರೀತಿಯ ತರಬೇತಿಯನ್ನು ನಡೆಸುತ್ತಿಿದ್ದಾಾನೆ.
 ಸದೃಢ ಮೈಕಟ್ಟು ಹೊಂದಿರುವ ನವೀನ್‌ಗೆ ಕಾಲೇಜಿನಲ್ಲಿ ಉತ್ತಮ ಪ್ರೋತ್ಸಾಾಹ ದೊರೆಯುತ್ತಿಿದೆ. ಆದರೆ ಕಬಡ್ಡಿಿ ತಂಡವೇ ಇಲ್ಲದ ಕಾರಣ ಸ್ವಂತವಾಗಿಯೇ ಎಲ್ಲವನ್ನೂ ಖರ್ಚು ಮಾಡಿ ಬೆಳೆಯಬೇಕಾದ ಸನ್ನಿಿವೇಶ ಎದುರಾಗಿದೆ. ಕಾಲೇಜಿನವರು ಇಂತಹ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಎಲ್ಲ ರೀತಿಯ ಅವಕಾಶ ಕಲ್ಪಿಿಸಬೇಕಿದೆ. ವಿಶ್ವವಿದ್ಯಾಾಲಯ ಮಟ್ಟದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರೀಯ ಆಟಗಾರನಾಗಲೂ ಸಹಕರಿಸಬೇಕಿದೆ.
ಜಿಲ್ಲೆೆಯ ಅಪರೂಪದ ಈ ಕಬಡ್ಡಿಿ ಪ್ರತಿಭೆ ದೇಶಮಟ್ಟದಲ್ಲಿ ಮಿಂಚಬೇಕಿದೆ. ಇದಕ್ಕೆೆ ಕುವೆಂಪು ವಿವಿಯ ಕ್ರೀಡಾಧಿಕಾರಿಗಳು ಅವಕಾಶ ಕೊಟ್ಟು ಇನ್ನಷ್ಟು ಪ್ರೋತ್ಸಾಾಹ ನೀಡುವ ಅವಶ್ಯಕತೆ ಇದೆ. ನವೀನ್ ಸಹ ಇದೇ ನಿರೀಕ್ಷೆಯಲ್ಲಿದ್ದಾಾನೆ.
published on 2.6.18   
...............................

No comments:

Post a Comment