Saturday 9 June 2018

ಕೆಲಸದಲ್ಲಿ ಮಾದರಿ
ಪೊಲೀಸ್ ಮಂಜಣ್ಣ

ನಾವು ಮಾಡುವ ಕೆಲಸದಲ್ಲಿ ಅಚಲ ನಂಬಿಕೆ, ದೃಢ ವಿಶ್ವಾಾಸ, ಮುಕ್ತ ಮನಸ್ಸು ಮತ್ತು ಶೃದ್ಧೆೆ ಇದ್ದರೆ ನಾವೇನು ಸಾಧಿಸಬೇಕೆಂದುಕೊಂಡಿರುತ್ತೇವೆಯೋ ಅದು ಈಡೇರುತ್ತದೆ. ಟೀಕೆಗೆ ಹೆದರದೆ ನಾವಾಯಿತು, ನಮ್ಮ ಕೆಲಸವಾಯಿತು ಎಂದುಕೊಡು ಮುಂದೆ ಸಾಗಬೇಕು. ಆಗ ತನ್ನಿಿಂತಾನೇ ಸಾಧನೆ ಸಾಧ್ಯವಾಗುತ್ತದೆ, ಹೆಸರು, ಕೀರ್ತಿ ಬರುತ್ತದೆ. ಇದಕ್ಕೆೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿಿರುವ ಮುಖ್ಯಪೇದೆ ಎಸ್. ಮಂಜುನಾಥ ಸಾಕ್ಷಿ.
ಮಂಜುನಾಥ ಅವರು ಪ್ರಾಾಮಾಣಿಕತೆ, ನಿಸ್ಪಹತೆ, ಪ್ರೀತಿ- ವಿಶ್ವಾಾಸಕ್ಕೆೆ ಹೆಸರು. ತಮ್ಮ 26 ವರ್ಷದ ಸೇವೆಯಲ್ಲಿ ಅವರು ಗಳಿಸಿದ್ದು ಇದನ್ನೇ. ಕೆಲಸ ಎಂದರೆ ದೇವರು. ಅದು ಶುದ್ಧ, ಪ್ರಾಾಮಾಣಿಕ, ಇನ್ನೊೊಬ್ಬರನ್ನು ನೋಯಿಸದಂತಿರಬೇಕು ಎನ್ನುವ ಅವರು, ಇದನ್ನೇ ಸಾಧಿಸಿತೋರಿಸಿದ್ದಾಾರೆ. ಯಾವ ಗತ್ತು-ಗೈರತ್ತು ಇಲ್ಲದೆ, ಯಾರ ಮೇಲೂ ದಬ್ಬಾಾಳಿಕೆ ನಡೆಸದೆ, ಎಲ್ಲೂ ಹಣಕ್ಕಾಾಗಿ ಕೈಚಾಚದೆ, ಯಾರನ್ನೂ ನೋಯಿಸದವರು. ಪೊಲೀಸರೆಂದರೆ ಹೇಗಿರಬೇಕು ಎನ್ನುವುದಕ್ಕೆೆ ಉದಾಹರಣೆ.
ಮೂಲತಃ ಶಿಕಾರಿಪುರದವರಾದ ಮಂಜುನಾಥ, ಎಸ್‌ಎಸ್‌ಎಲ್‌ಸಿ ಓದಿದ ನಂತರ ಪೊಲೀಸ್ ಕೆಲಸಕ್ಕೆೆ ಸೇರಿ, ಭದ್ರಾಾವತಿ ಮತ್ತು ಶಿವಮೊಗ್ಗ ನಗರದಲ್ಲಿ ಕೆಲಸ ಮಾಡಿದ್ದಾಾರೆ. ಇವರ ತಂದೆ ಬಸವರಾಜಪ್ಪ ಸಹ ಪೊಲೀಸ್ ಆಗಿ ಕೆಲಸ ಮಾಡಿದವರು. ತಂದೆ ಗಳಿಸಿದ ಹೆಸರನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಇನ್ನಷ್ಟು ಅದಕ್ಕೆೆ ಸಾಧನೆ ಸೇರಿಸಬೇಕೆನ್ನುವುದು  ಅವರ ಇಚ್ಛೆೆ. ಅದಕ್ಕಾಾಗಿ ಕೆಲಸಕ್ಕೆೆ ಎಲ್ಲೂ ಚ್ಯುತಿ ಬಾರದಂತೆ ಜಾಗೃತೆಯಿಂದ ನಡೆದುಕೊಳ್ಳುತ್ತಾಾರೆ.
  26 ವರ್ಷದ ಹಿಂದಿನ ಸೈಕಲ್ ಅವರ ಸಂಗಾತಿ. ಇಂದಿಗೂ ಸೈಕಲ್‌ನಲ್ಲೇ ಸುತ್ತಾಾಡುತ್ತಾಾರೆ. ನಗರದಲ್ಲಿ ಸೈಕಲ್ ಬಳಸುವ ಏಕೈಕ ಪೊಲೀಸ್ ಇವರು.  ಈ ಸೈಕಲ್ ಮೇಲೆ ಎಲ್ಲಿಲ್ಲದ ಪ್ರೀತಿ. ತಮ್ಮ ಬಳಿ ಮೊಪೆಡ್ ಇದ್ದರೂ ಸೈಕಲನ್ನು ಈ ತಂತ್ರಜ್ಞಾಾನದ ಕಾಲದಲ್ಲಿಯೂ ಮೂಲೆಗೊತ್ತದೆ ಬಳಸುತ್ತಿಿದ್ದಾಾರೆ. ಅವರ ವಿಶೇಷ ಸಾಧನೆ ಎಂದರೆ, ಸುಮಾರು ಐವತ್ತಕ್ಕೂ ಹೆಚ್ಚು ದಂಪತಿಗಳನ್ನು ಒಂದುಗೂಡಿಸಿದ್ದು. ಇದನ್ನು ಎಂದಿಗೂ ಮರೆಯಲಾಗದು.
ನಗರದ ಮಹಿಳಾ ಠಾಣೆಯಲ್ಲಿ ಅವರು ಕೆಲಸ ಮಾಡುವಾಗ ಈ ಸಾಧನೆ ಮಾಡಿದ್ದಾಾರೆ. ಹೊಡೆದಾಡಿಕೊಂಡು, ಕೌಟುಂಬಿಕ ಕಲಹ ಮಾಡಿಕೊಂಡು ಠಾಣೆಗೆ ಬರುವವರೇ ಜಾಸ್ತಿಿ. ಅವರನ್ನೆೆಲ್ಲ ಒಟ್ಟಿಿಗೆ ಕೂಡ್ರಿಿಸಿ, ಸಮಾಧಾನಗೊಳಿಸಿ, ಸಾಂತ್ವನ ಹೇಳಿ ಮತ್ತೆೆ ಒಂದಾಗಿ ಬಾಳುವಂತೆ ಮಾಡುವ ಅವರ ಕಲೆ ಇಂದಿಗೂ ಜನಪ್ರಿಿಯ. ಈಗ ಒಟ್ಟಾಾಗಿ ಬಾಳುವ ಈ ದಂಪತಿಗಳಲ್ಲಿ ಹಲವರು ಮಂಜುನಾಥ ಅವರ ಬಳಿ ಬಂದು ತಮ್ಮನ್ನು ಒಂದುಗೂಡಿಸಿ ಮನಸ್ಸನ್ನು ಪರಿವರ್ತಿಸಿದ್ದಕ್ಕೆೆ ಕೃತಜ್ಞತೆ ಸಲ್ಲಿಸುತ್ತಿಿದ್ದಾಾರೆ.
ಕಳ್ಳರಿಗೂ ಸಹ ಅವರು ಪೊಲೀಸ್ ಭಾಷೆ ಬಳಸಿದವರಲ್ಲ. ಯಾರ ಮೇಲೂ ದಂಡ ಪ್ರಯೋಗಿಸಿದವರಲ್ಲ. ಗಟ್ಟಿಿಯಾಗಿ ಗದರಿಸಿದವರೂ ಅಲ್ಲ, ಮಾಡಿದ ತಪ್ಪು ಅರಿವಾಗಿ ಮರಳಿ ಎಂದಿನಂತೆ ಜೀವನ ರೂಪಿಸಿಕೊಳ್ಳುವಂತೆ ಪರಿವರ್ತಿಸುವ ಕಲೆ ಅವರಲ್ಲಿದೆ. ಇದಕ್ಕಾಾಗಿಯೇ ಮಂಜುನಾಥ್ (ಎಲ್ಲರ ಬಾಯಲ್ಲೂ ಮಂಜಣ್ಣ) ಯಾರಿಗೂ ಕೇಡು ಬಯಸದ ವ್ಯಕ್ತಿಿ ಎಂದೇ ಜನಜನಿತರು. ಬುದ್ಧಿಿಮಾತು ಮೂಲಕವೇ ಟಾನಿಕ್ ನೀಡಿ ಸರಿದಾರಿಗೆ ತರುತ್ತಾಾರೆ.
ಸದ್ಯದಲ್ಲೇ ಎಎಸ್‌ಐ ಆಗಿ ಭಡ್ತಿಿ ಪಡೆಯಲಿರುವ ಮಂಜಣ್ಣ, ಮೇಲಧಿಕಾರಿಗಳ  ಮತ್ತು ಕೆಳ ಹಂತದ ಸಿಬ್ಬಂದಿಗಳ ಸಹಕಾರ, ನೆರವನ್ನು ಮರೆಯದೆ ಸ್ಮರಿಸುತ್ತ, ಇಲಾಖೆಯಲ್ಲಿ ಕೆಲಸ ಮಾಡಿ ಹೆಸರುಗಳಿಸುವುದು ಕಷ್ಟದ ಕೆಲಸ. ಸಾಧನೆಗೆ ಹಿರಿ-ಕಿರಿಯ ಅಧಿಕಾರಿಗಳ, ಸಿಬ್ಬಂದಿಗಳ ಸಹಕಾರವೂ ಮುಖ್ಯ ಎನ್ನುತ್ತಾಾರೆ. ಇವರ ಪ್ರಾಾಮಾಣಿಕ ಕೆಲಸವನ್ನು ಮೆಚ್ಚಿಿ ಗಾಡಿಕೊಪ್ಪ ಲಯನ್‌ಸ್‌ ಕ್ಲಬ್‌ನವರು ಉತ್ತಮ ಸಾಧಕ ಪೊಲೀಸ್ ಎಂಬ ಬಿರುದು ನೀಡಿ ಗೌರವಿಸಿದ್ದಾಾರೆ.
ಇಂದಿಗೂ ಸದಾ ನಗುಮೊಗದ ಪೊಲೀಸ್ ಮಂಜಣ್ಣ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. 
PUBLISHED ON 8TH JUNE 2018
,,,,,,,,,,,,,,,,,,,,,,,,,,,,,,,,,,,

No comments:

Post a Comment