Monday 5 December 2022

 ರಾಷ್ಟ್ರೀಯ ಕೇರಂ ಪಟು ರವಿ

 


ಕೇರಂ ಎಂದಾಕ್ಷಣ ನೆನೆಪಾಗುವುದು ಬಾಲ್ಯ. ರಜಾದಿನದಲ್ಲಿ  ಮನೆಮಂದಿ,  ನೆಂಟರಿಷ್ಟರು, ಮಿತ್ರರೊಂದಿಗೆ ಸೇರಿ ಆಡಿದ ಆಟ ಕಾಡುತ್ತದೆ. ಹೌದು, ಇಂತಹ ಆಟವನ್ನು ಮನೆಯಿಂದ ಹೊರಗೆ ಅಡಿ ಅದರಲ್ಲಿ ಯಶಸ್ಸು ಸಾಧಿಸುವವರು ಅಥವಾ ಅದೇ ಆಟವನ್ನು ಹವ್ಯಾಸವನ್ನಾಗಿ ಮಾಡಿಕೊಂಡವರು ತೀರಾ ಕಡಿಮೆ. ಏಕೆಂದರೆ ಇದಕ್ಕೆ ವಿಶೇಷ ಟೂರ್ನಿಗಳಾಗಲಿ, ಸಂಘಟನೆಗಳಾಗಲಿ, ಕಲಿಕಾ ಕೇಂದ್ರಗಳಾಗಲಿ, ವಿಶೇಷ ಕೋಚ್‌ಗಳಾಗಲಿ ಇಲ್ಲ. ಜೊತೆಗೆ ಇದನ್ನು ಬೆಳೆಸುವ ಮತ್ತು ಪ್ರೋತ್ಸಾಹಿಸುವ ಕೆಲಸವು ನಡೆಯುತ್ತಿಲ್ಲ. 

ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಇಂತಹ ಸಂದರ್ಭದಲ್ಲೂ ಛಲ ಬಿಡದೆ ಅದನ್ನು ಕಲಿತು, ಸತತ ಮುಂದುವರೆಸಿ ಸಾಧನೆ ಮಾಡಿದವರಲ್ಲಿ ಶಿವಮೊಗ್ಗದ ಸಿ. ರವಿ ಒಬ್ಬರು. ರವಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಆಡಿ ಬಹುಮಾನ ಗಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಎರಡನೆ ದರ್ಜೆ ಸಹಾಯಕರಾಗಿರುವ  ರವಿ, ಬಾಲ್ಯದಿಂದಲೇ ಕೇರಮ್‌ಗೆ ಮನಸೋತವರು. ಅವರ ಮನೆಯ ಹತ್ತಿರ ಅರಸುಕುಮಾರ್ ಎನ್ನುವವರು ನಡೆಸುತ್ತಿದ್ದ ಕೇರಂ ಕೇಂದ್ರದಲ್ಲಿ ಆಡಲು ಹೋಗುತ್ತಿದ್ದರು. ೫ ರೂ. ಕೊಟ್ಟರೆ ಒಂದು ಗಂಟೆ ಆಡಲು ಅವಕಾಶವಿತ್ತು. ಸತತವಾಗಿ ಆಡುತ್ತಾ ಅದನ್ನು ಕರಗತ ಮಾಡಿಕೊಂಡರು. ಸ್ವತಃ ಕೋಚ್ ಆಗಿದ್ದ ಅರಸುಕುಮಾರ್ ತಪ್ಪುಗಳನ್ನು ತಿದ್ದುತ್ತ್ತಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಐದಾರು ವರ್ಷ ಕಲಿತ ಬಳಿಕ  ಕಾಲೇಜು ದಿನಗಳಲ್ಲಿ ಪ್ರಕಾಶ್ ಎನ್ನುವವರು ಇವರಿಗೆ ಇನ್ನಷ್ಟು ಮಾರ್ಗದರ್ಶನ ನೀಡಿದರು. ಇದರಿಂದ ಇನ್ನಷ್ಟು ಆತ್ಮವಿಶ್ವಾಸ ಮೂಡಿತು. ಸರಕಾರಿ ನೌಕರಿ ದೊರೆತಿದ್ದರಿಂದ ನೌಕರರ ಸಂಘ ನಡೆಸುತ್ತಿರುವ ಕ್ರೀಡಾಕೂಟದಲ್ಲಿ ಕೇರಮ್ ಇತ್ತು. ಇದರಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ಪಾಲ್ಗೊಂಡು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿಯೂ ಗೆದ್ದು ರಾಷ್ಟೀಯ ಟೂರ್ನಿಯಲ್ಲಿ ಆಡಿದರು.

 ಸುಮಾರು ಆರೇಳು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ರಾಜ್ಯಮಟ್ಟದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಕ್ರೀಡಾಕೂಟ ನಡೆದಾಗ ಬಹುಮಾನ ಇವರ ಪಾಲಾಗಿದೆ. ಇಲ್ಲಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ದೆಹಲಿಯಲ್ಲಿ ೨೦೧೯ರಲ್ಲಿ, ೨೦೨ರಲ್ಲಿ  ಮತ್ತೆ ದೆಹಲಿಯಲ್ಲಿ, ೨೦೨೧ರಲ್ಲಿ ಚೆನ್ನೈನಲ್ಲಿ, ಕಳೆದ ವಾರ ತ್ರಿಪುರಾದಲ್ಲಿ ಆಡಿ ನಾಲ್ಕನೆಯ ಸ್ಥಾನ ಗಳಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ ಅವರಿಂದ ಸ್ಮನಾನಕ್ಕೊಳಗಾಗಿದ್ದಾರೆ. 

 ಇವರ ಸಾಧನೆಗೆ ಹಲವೆಡೆ ಗೌರವ ದಕ್ಕಿದೆ, ಸನ್ಮಾನ, ಪುರಸ್ಕಾರ ದೊರೆತಿದೆ. ಕೇರಂ ಆಡುವ ಮಿತ್ರರೆಲ್ಲ ಸೇರಿ ಭಾರತ್ ಕೇರಂ ಅಕಾಡೆಮಿಯನ್ನು ನಗರದಲ್ಲಿ ಸ್ಥಾಪಿಸಿ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಹಲವರಿಗೆ ತರಬೇತಿ ಕೊಡುತ್ತಿದ್ದಾರೆ. ಜೊತೆಗೆ ತಾವೂ ಆಡುತ್ತಿದ್ದಾರೆ. ಸುಮಾರು ೩೫ ಸದಸ್ಯರು ಅಕಾಡೆಮಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ನಗರದ ಆಯ್ದ ಭಾಗಗಳ ಶಾಲೆಗಳಲ್ಲಿ ಚಿಕ್ಕಮಕ್ಕಳಿಗೆ ಕೇರಂ ತರಬೇತಿ ನೀಡುವ ಯೋಚನೆಯಲ್ಲಿದ್ದಾರೆ. ಈ ಮೂಲಕ ಕೇರಂನ್ನು ಬಾಲ್ಯದಿಂದಲೇ ಬೆಳೆಸಿ ಮಕ್ಕಳಲ್ಲಿ  ಕ್ಷಿಪ್ರ ಚಿಂತನೆ,  ಚುರುಕುಮತಿ,  ಅತ್ಯುತ್ತಮವಾಗಿ ನಿರ್ಧಾರ ತೆಗೆದುಕೊಳ್ಳುವುದು ಮೊದಲಾದವನ್ನು ಬೆಳೆಸಲು ಸಿದ್ಧರಾಗಿದ್ದಾರೆ.

ಕೇರಂ ಬುದ್ಧಿವಂತರ ಆಟವಾದ್ದರಿಂದ ಇದನ್ನು ಕಲಿತರೆ  ಮಾನಸಿಕ ಸದೃಢತೆ ಉಂಟಾಗುವುದರ ಜೊತೆಗೆ ಚಿಕಿತ್ಸಕ ಬುದ್ಧಿ, ಕೌಶಲ್ಯ ಬೆಳೆಯುತ್ತದೆ. ನೇರ ದೃಷ್ಟಿ, ಗಮನಹರಿಸುವಿಕೆಗೆ ಈ ಕಲೆ ನೆರವಾಗುತ್ತದೆ. ಇಂತಹ ಕಲೆ ಬೆಳೆಸುವತ್ತ ಅಕಾಡೆಮಿ ವತಿಯಿಂದ ಮುಂದಾದಾಗಿದ್ದಾರೆ. ಮಕ್ಕಳು ತಂತ್ರಗಾರಿಕೆಯ ಈ ಆಟ  ಕಲಿಯುವ ಮೂಲಕ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬಹುದು ಎನ್ನುತ್ತಾರೆ ರವಿ. 

published on Dec 5. 2022


.............................. 



No comments:

Post a Comment