Monday 16 July 2018

ಮಿಸೆಸ್ ಇಂಡಿಯಾ ಕಿರೀಟದತ್ತ
 ಲಕ್ಷ್ಮೀ ಶ್ರವಣ್


ಸೌಂದರ್ಯ ಎನ್ನುವುದು ಕೇವಲ ಮುಖಕ್ಕಷ್ಟೇ ಸೀಮಿತವಾದುದ್ದಲ್ಲ. ಇದು ಮನಸ್ಸು, ಹೃದಯ ಮತ್ತು ಆತ್ಮಕ್ಕೆೆ ಸಂಬಂಧಿಸಿದ್ದು ಎನ್ನುವ ಮಾತಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಕೇವಲ ದೈಹಿಕ ಸೌಂದರ್ಯವಷ್ಟೇ ಬೆಲೆ ಕೊಡದೆ ಆಂತರಿಕ ವ್ಯಕ್ತಿಿತ್ವವನ್ನು ಗಮನಿಸುತ್ತಾಾರೆ. ಆದ್ದರಿಂದಲೇ ಅತ್ಯಂತ ಚಾಣಾಕ್ಷಮತಿ ಮತ್ತು ಸಮಯಪ್ರಜ್ಞೆ ಉಳ್ಳವರು ಇದರಲ್ಲಿ ಕಿರೀಟ ಧರಿಸುತ್ತಾಾರೆ.
ಶಿವಮೊಗ್ಗದ ಲಕ್ಷ್ಮೀ ಶ್ರವಣ್ ಮಿಸೆಸ್ ಇಂಡಿಯಾ ಸ್ಪರ್ಧೆಯ 6ನೆಯ ಅವತರಣಿಕೆಯ ಅಂತಿಮ ಸುತ್ತಿಿಗೆ ಆಯ್ಕೆೆಯಾಗಿದ್ದಾಾರೆ. ಈ ಮಾಸಾಂತ್ಯದಲ್ಲಿ ಇದರ ಅಂತಿಮ ಸ್ಪರ್ಧೆ ನಡೆಯಲಿದೆ. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಈ ಸ್ಪರ್ಧೆಯ ಕರ್ನಾಟಕ  ರಾಜ್ಯದ ಆಡಿಶನ್‌ನಲ್ಲಿ ಲಕ್ಷ್ಮೀ ಭಾಗವಹಿಸಿದ್ದರು. ಇದನ್ನು ಮಿಸೆಸ್ ಇಂಡಿಯಾದ ನಿರ್ದೇಶಕಿ ಪ್ರತಿಭಾ ಸಂಶಿಮಠ ಸಂಯೋಜಿಸಿದ್ದರು. ಸುಮಾರು 150ರಷ್ಟು ಸ್ಪರ್ಧಿಗಳು ಇದರಲ್ಲಿ ಪಾಲ್ಗೊೊಂಡಿದ್ದರಾದರೂ ಆಯ್ಕೆೆಯಾದವರು ಕೇವಲ 30 ಜನ ಮಾತ್ರ. ಇದರಲ್ಲಿ ಲಕ್ಷ್ಮೀ ಸಹ ಒಬ್ಬರು. ಆನಂತರ ಏಪ್ರಿಿಲ್‌ನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ 40ರ ವಯೋಮಾನದವರ (ಕ್ಲಾಾಸಿಕ್) ವಿಭಾಗದಲ್ಲಿ ಲಕ್ಷ್ಮೀ ಕಿರೀಟ ಧರಿಸಿದ್ದರು. 30, 40 ಮತ್ತು 60ರ ವಯೋಮಾನದವರಿಗೆ 3 ಪ್ರತ್ಯೇಕ ವಿಭಾಗದಲ್ಲಿ ಈ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯ ಟ್ಯಾಾಲೆಂಟ್ ರೌಂಡ್‌ನಲ್ಲಿ ಬೆಸ್‌ಟ್‌ ಟ್ರೆೆಡಿಶನಲ್ ಪರ್ಫಾಮರ್ ಎಂಬ ಪ್ರಶಸ್ತಿಿಗೆ ಅವರು ಪಾತ್ರರಾಗಿದ್ದಾಾರೆ.
ಈಗ ಮಿಸೆಸ್ ಇಂಡಿಯಾದಲ್ಲಿ ಕರ್ನಾಟಕವನ್ನು ಲಕ್ಷ್ಮೀ ಪ್ರತಿನಿಧಿಸುವ ಸ್ಪರ್ಧಿಯಾಗಿದ್ದಾಾರೆ. ಈ ಸ್ಪರ್ಧೆಯ ನಿರ್ದೇಶಕಿ ದೀಪಾಲಿ ಫಡ್ನಿಿಸ್ ಇದನ್ನು ಸಂಯೋಜಿಸಿದ್ದಾಾರೆ. ಈ ಸ್ಪರ್ಧೆ ಕೇವಲ ದೈಹಿಕ ಸೌಂದರ್ಯಕ್ಕೆೆ ಮಾತ್ರ ಸೀಮೀತವಾದುದಲ್ಲ. ಬದಲಾಗಿ ಸಮಾಜಕ್ಕೆೆ ಸೇವೆ ಸಲ್ಲಿಸುವ ವಿಷಯವನ್ನೂ ಒಳಗೊಂಡಿದೆ. ನಾವು ಬರಿಗೈಲಿ ಬಂದಿದ್ದೇವೆ, ಬರಿಗೈಲೇ ಹೋಗಬೇಕೆನ್ನುವುದು ಇದರ ಸಂದೇಶವಾಗಿದೆ. 
  ಲಕ್ಷ್ಮೀ ಎಂಬಿಎ ಪದವೀಧರೆ. ಭರತನಾಟ್ಯದಲ್ಲಿ ಎಂಎ ಮಾಡುತ್ತಿಿದ್ದಾಾರೆ. ನಗರದ ಇಂಜಿನೀಯರ್ ಜೆ. ಶ್ರ್ರವಣ್ ಅವರ ಪತ್ನಿಿಯಾಗಿದ್ದು, ಮೂಲತಃ ಬೆಂಗಳೂರಿನವರಾಗಿದ್ದಾಾರೆ. 19 ವರ್ಷದಿಂದ ಶಿವಮೊಗ್ಗದ ಸೊಸೆಯಾಗಿ ಇಲ್ಲಿದ್ದಾಾರೆ. ಕರ್ನಾಟಕದ ಕರಾಟೆ ಚಾಂಪಿಯನ್ (ಕಂಚಿನ ಪದಕ ಸಹಿತ), ಥಾಯ್, ಛೀ ಪ್ರಾಾಕ್ಟೀಶನರ್,  ರೇಖಿ ಪ್ರಾಾಕ್ಟೀಶನರ್, ಪ್ರಾಾನಿಕ್ ಹೀಲರ್, ಯೋಗ ಶಿಕ್ಷಕಿ, ಭರತನಾಟ್ಯ ಕಲಾವಿದೆ, ರೋಟರಿಯಲ್ಲಿ ಮಹಿಳಾ ಸಬಲೀಕರಣ ವಿಭಾಗದ ಮುಖ್ಯಸ್ಥೆೆಯಾಗಿ, ಶಿವಮೊಗ್ಗ ಉತ್ತರ ಇನ್ನರ್ ವ್ಹೀಲ್‌ನ ಮಾಜಿ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದವರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಿ, ಗ್ರಾಾಮಾಂತರ ಮತ್ತು ನಗರ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು, ಸೆರೆಮನೆಯಲ್ಲಿರುವ ಮಹಿಳೆಯರಿಗೆ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಾಭಿವೃದ್ಧಿಿ ತರಬೇತಿ, ಕಿವುಡ ಮತ್ತು ಮೂಗ ಮಕ್ಕಳಿಗೆ ಹಾಗೂ ರಿಮ್ಯಾಾಂಡ್ ಹೋಮ್‌ನಲ್ಲಿರುವವರಿಗೆ ಕೌನ್ಸಿಿಲಿಂಗ್  ನಡೆಸಿ ಅವರ ಅಭಿವೃದ್ಧಿಿಗೆ ಸಾಕಷ್ಟು ಕ್ರಮ ಕೈಗೊಂಡ ಹಿನ್ನೆೆಲೆಯಲ್ಲಿ ಹಲವು ಪ್ರಶಸ್ತಿಿಗಳಿಗೆ ಭಾಜನರಾಗಿದ್ದಾಾರೆ. ಅಂಗವಿಕಲ ಮಕ್ಕಳನ್ನು ಹೇಗೆ ಪ್ರೋತ್ಸಾಾಹಿಬೇಕೆಂಬ ಬಗ್ಗೆೆ ಅವರ ಪಾಲಕರಿಗೆ ಹಲವು ಮಾರ್ಗದರ್ಶನ ಶಿಬಿರ ನಡೆಸಿದ್ದಾಾರೆ. ಪರಿಸರವಾದಿಯಾಗಿ, ಉದ್ಯಾಾನವನಗಳ ಅಭಿವೃದ್ಧಿಿಗೆ ಕೆಲಸ ಮಾಡಿದ್ದಾಾರೆ. ಶಾಸಕರ ಸುಮಾರು 81 ಲಕ್ಷದಷ್ಟು ಅನುದಾನ ಇದಕ್ಕೆೆ ದಕ್ಕುವಂತೆ ಮಾಡಿದ್ದಾಾರೆ.   
ಈ ಸ್ಪರ್ಧೆ ವಿವಾಹಿತೆಯಾದ ನನಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಿಸಿಕೊಟ್ಟಿಿದೆ. ಇದು ಫ್ಯಾಾಶನ್ ಮತ್ತು ಮನರಂಜನಾ ಕ್ಷೇತ್ರಕ್ಕೆೆ ಕಾಲಿಡಲು ಮೊದಲ ಮೆಟ್ಟಿಿಲಾಗಿದೆ. ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಕರೆಬಂದಿದೆ. ಫ್ಯಾಾಶನ್ ಶೋಗಳಿಗೆ ಅತಿಥಿಯಾಗಿ ಕರೆಯುತ್ತಿಿದ್ದಾಾರೆ. ಆಭರಣೋದ್ಯಮದ ಜಾಹೀರಾತಿಗೆ ಆಹ್ವಾಾನ ನೀಡಿದ್ದಾಾರೆ. ಕುಟುಂಬದವರು ಸಾಕಷ್ಟು ಪ್ರೋತ್ಸಾಾಹ ನೀಡಿದ್ದರಿಂದ ಇಂದು ರಾಷ್ಟ್ರೀಯ ಸ್ಪರ್ಧೆಯ ಅಂತಿಮ ಘಟ್ಟ ತಲುಪಲು ಸಾಧ್ಯವಾಗಿದೆ ಎಂದು ನುಡಿಯುತ್ತಾಾರೆ ಲಕ್ಷ್ಮೀ ಶ್ರವಣ್.

14.7.2018
.............................................  

No comments:

Post a Comment