Saturday 21 July 2018

ಪರಿಸರ ಪ್ರೇಮಿ ಅಧಿಕಾರಿ 
ರವೀಂದ್ರ


ಯಾವ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಬಹುದಾದ ಕೆಲಸ ಎಂದರೆ ಗಿಡಗಳನ್ನು ನೆಡುವುದು. ಗಿಡಗಳು ನಮ್ಮ ಆರೋಗ್ಯವನ್ನು ಮತ್ತು ಪರಿಸರವನ್ನು ಕಾಪಾಡುತ್ತವೆ. ಅದಕ್ಕೇ ಹೇಳುವುದು ಹಸಿರೇ ಉಸಿರು ಎಂದು. ಇಂದು ಪರಿಸರ ಸಂರಕ್ಷಕರು ಹೆಚ್ಚುತ್ತಿಿದ್ದಾಾರೆ. ಜೊತೆಗೆ ಅರಿವನ್ನೂ ಸಾಕಷ್ಟು ಮೂಡಿಸುತ್ತಿಿದ್ದಾಾರೆ. ಇಂತಹವರ ಮದ್ಯೆೆ ತಮ್ಮ ದೈನಂದಿನ ಒತ್ತಡದ ಕೆಲಸ ಕಾರ್ಯಗಳ ಮಧ್ಯೆೆಯೂ ಸಮಯ ಸಿಕ್ಕಾಾಗ ಅಂದರೆ ಬೆಳಿಗ್ಗೆೆ ಅಥವಾ ಸಂಜೆ ವೇಳೆ ಪರಿಸರ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾಾರೆ.
ನಗರದ ಬಿ. ಎಚ್. ರಸ್ತೆೆಯ ಕಾರ್ಪೊರೇಶನ್ ಬ್ಯಾಾಂಕ್‌ನ ಮುಖ್ಯ ವ್ಯವಸ್ಥಾಾಪಕ ರವೀಂದ್ರ ಒಬ್ಬ ಪರಿಸರ ಪ್ರೇಮಿ. ಆದರೆ ಯಾವತ್ತೂ ತಾನು ಮಾಡಿದ ಕಾರ್ಯದ ಬಗ್ಗೆೆ ಪ್ರಚಾರ ಪಡೆದವರಲ್ಲ. ಗೋಪಾಳ ಬಡಾವಣೆಯ ವಾಸಿಯಾದ ಇವರು ಸಮೀಪದ ಚಂದನ ಪಾರ್ಕ್‌ನಲ್ಲಿ ಗಿಡಗಳು ಬೇಸಿಗೆಯಲ್ಲಿ  ಒಣಗುತ್ತಿಿರುವುದನ್ನು ಗಮನಿಸಿ, ನೀರೆರೆಯುವ ಕೆಲಸ ಆರಂಭಿಸಿದರು. ಬೆಳ್ಳಂಬೆಳಿಗ್ಗೆೆ ಎದ್ದು ಕೊಡಪಾನದಲ್ಲಿ ನೀರು ಹೊತ್ತು ತಂದು ಗಂಟೆಗಳ ಕಾಲ ಗಿಡಗಳಿಗೆ ಹಾಕಿದರು. ಎರಡು ಬೇಸಿಗೆಯಲ್ಲಿ ಈ ಸ್ಮರಣೀಯ ಕಾರ್ಯ ಮಾಡಿದ್ದಾಾರೆ. ಇದಕ್ಕಾಾಗಿ ಅವರು ಇನ್ನೊೊಬ್ಬರ ಮೊರೆ ಹೋಗಲಿಲ್ಲ. ಬೆಳಿಗ್ಗೆೆ ವಾಕಿಂಗ್ ಮಾಡುವ ಬದಲು ಇಂತಹ ಎಂದೂ ಮರೆಯಲಾಗದ ಸೇವೆಯನ್ನು ಮಾಡಿದ್ದಾಾರೆ.
ಸ್ಥಳೀಯ ಹತ್ತಾಾರು ಮಿತ್ರರನ್ನು (ಸಮಾನಮನಸ್ಕರನ್ನು) ಪರಿಚಯ ಮಾಡಿಕೊಂಡು ಪಾಕ್ ಅಭಿವೃದ್ಧಿಿಗೆ ಮುಂದಾಗಿದ್ದಾಾರೆ. ಈ ಮಿತ್ರರೂ ಸಹ ರವೀಂದ್ರ ಅವರ ಜೊತೆ ಗಿಡಕ್ಕೆೆ ನೀರೆರೆಯುವುದು,  ಸ್ವಚ್ಛತೆ ಕಾಪಾಡುವುದು, ಪ್ಲಾಾಸ್ಟಿಿಕ್ ಮುಕ್ತವಾಗಿಸುವುದು, ಹೂವಿನ ಗಿಡಗಳನ್ನು ಬೆಳೆಸುವುದು, ಖಾಲಿ ಜಾಗದಲ್ಲಿ ಸಸಿಗಳನ್ನು ರಸ್ತೆೆಯಂಚಿನಲ್ಲಿ ನೆಡುವ ಕಾರ್ಯ ಮಾಡುತ್ತಿಿದ್ದಾಾರೆ. ಈ ತಂಡವು ಈಗ ಚಂದನ ಪಾರ್ಕ್‌ನ್ನು ಚೆಂದದ ಪಾರ್ಕ್‌ನ್ನಾಾಗಿ ಮಾಡಿದೆ. ಸ್ವಚ್ಛತೆ ಮತ್ತು ಅಂದ ಹೆಚ್ಚಿಿಸುವುದಕ್ಕೆೆ ಆದ್ಯತೆ ಕೊಟ್ಟಿಿದೆ.       
 ಈಗ ಚಂದನ ಆರೋಗ್ಯ ಉದ್ಯಾಾನವನ ಸದಾ ಹಸಿರಿನಿಂದ ಕೂಡಿದೆ. ನೂರಾರು ಜನರು ಇಲ್ಲಿ ವಾಯುವಿಹಾರಕ್ಕೆೆ ಬರುತ್ತಾಾರೆ. ಚಂದನ ಉದ್ಯಾಾನವನ ಸಮಿತಿಯನ್ನು ರಚಿಸಿ ಇದರ ರಕ್ಷಣೆ ಮತ್ತು ನಿರ್ವಹಣೆಯನ್ನು ಈ ಗೆಳೆಯರೆಲ್ಲ ಸೇರಿಕೊಂಡು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ.
ಒಬ್ಬ ಅಧಿಕಾರಿ ಹೀಗೆ ಸರಳವಾಗಿ ಕೆಲಸ ಮಾಡುತ್ತಿಿರುವುದನ್ನು ಕಂಡು ಗೆಳೆಯರಿಗೆಲ್ಲಾಾ ಸಂತೋಷವಾಯಿತು. ರವೀಂದ್ರ ಅವರು ನಗರದ ಕಾರ್ಪೊರೇಷನ್ ಬ್ಯಾಾಂಕಿನ ಮುಖ್ಯ ಕಚೇರಿಯ ಚೀಫ್ ಮ್ಯಾಾನೇಜರ್ ಆಗಿ ಬಡ್ತಿಿ ಹೊಂದಿದ್ದಾಾರೆ. ಇದನ್ನು ನೆಪವಾಗಿಟ್ಟುಕೊಂಡ ಅವರ ಗೆಳೆಯರು ಚಂದನವನದಲ್ಲಿ ಇತ್ತೀಚೆಗೆ ಸನ್ಮಾಾನಿಸಿದರು.
ಮೂಲತಃ ಹಾಸನದವರಾದ ಇವರು, ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್‌ಸಿ ಕೃಷಿ ಪದವಿ ಪಡೆದಿದ್ದಾಾರೆ. 2008ರಲ್ಲಿ ಕಾರ್ಪೊರೇಶನ್ ಬ್ಯಾಾಂಕ್ ಅಧಿಕಾರಿಯಾಗಿ ಕೆಲಸ್ಕ ಸೇರಿ ಗೋಕಾಕ್ ಮತ್ತು ಭದ್ರಾಾವತಿಯಲ್ಲಿ ಸುಮಾರು ಆರುವರೆ ವರ್ಷ ಸೇವೆ ಸಲ್ಲಿಸಿದ್ದಾಾರೆ. ಶಿವಮೊಗ್ಗದ ಶಂಕರಮಠ ಬ್ರಾಾಂಚ್‌ನಲ್ಲಿ ಮೂರುವರೆ ವರ್ಷದಿಂದ ಸೀನಿಯರ್ ಮ್ಯಾಾನೇಜರ್ ಆಗಿ ಕೆಲಸ ಮಾಡಿ ಸದ್ಯ ಮುಖ್ಯ ಪ್ರಬಂಧಕರಾಗಿ ಬಡ್ತಿಿ ಪಡೆದಿದ್ದಾಾರೆ. ಜೊತೆಗೆ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ತಮ್ಮ ಕೈಲಾದ ಧನ ಸಹಾಯ ಮಾಡಿ ಓದಿಸುತ್ತಿಿದ್ದಾಾರೆ.
 ಉದ್ಯಾಾನವನದಲ್ಲಿ ಕೆಲಸ ಮಾಡುವುದು ಎಂದರೆ ಸಂತಸ. ಆರೋಗ್ಯ, ಸಂತೋಷ, ಒಳ್ಳೆೆಯ ಗೆಳೆಯರು ಸಿಗುತ್ತಾಾರೆ. ಬದುಕು ಲವಲವಿಕೆಯಿಂದ ಕೂಡಿರುತ್ತದೆ. ಯುವಜನತೆ ಉದ್ಯಾಾನವನ ಉಳಿಸುವ ಕೆಲಸ ಮಾಡಬೇಕಾಗಿದೆ. ಮೂರುವರೆ ವರ್ಷದಿಂದ ಶಿವಮೊಗ್ಗದಲ್ಲಿದ್ದು ಅನೇಕ ಮಿತ್ರರು ತನಗೆ ಈ ಕೆಲಸದಲ್ಲಿ ಸಹಕಾರಿಯಾಗಿದ್ದಾಾರೆ. ಅವರ ನೆರವು ಸ್ಮರಣೀಯ ಎನ್ನುತ್ತಾಾರೆ ರವೀಂದ್ರ.
published on July 21
,,,,,,,,,,,,,,,,,,,,,,,,,,,,,,,,,,,,

No comments:

Post a Comment