Monday 9 July 2018

ವನ್ಯಜೀವಿ ಛಾಯಾಗ್ರಾಾಹಕ 
ನಟರಾಜ ಮಂಡಗದ್ದೆೆ

...ಒಂದು ಅತ್ಯುತ್ತಮ ಫೋಟೊ ಎಲ್ಲರನ್ನೂ ಆಕರ್ಷಿಸುವ ಗುಣ ಹೊಂದಿರುತ್ತದೆ. ಛಾಯಾಗ್ರಾಾಹಕ ಆ ಚಿತ್ರವನ್ನು ಕ್ಲಿಿಕ್ಕಿಿಸುವಾಗ ಎಷ್ಟು ಶ್ರಮ ಹಾಕಿರುತ್ತಾಾನೆ ಎನ್ನುವುದು ಆತನಿಗೆ ಮಾತ್ರ ಗೊತ್ತಿಿರುತ್ತದೆ. ಅದಕ್ಕಾಾಗಿ ದಿನವಿಡೀ ಹೊಂಚುಹಾಕುತ್ತಾಾನೆ. ಅದರಲ್ಲೂ ವಿಶೇಷವಾಗಿ ವನ್ಯಜೀವಿ ಛಾಯಾಗ್ರಾಾಹಕರು ಪಡುವ ಶ್ರಮ ಅಪಾರವಾದುದು.
ನಟರಾಜ ಮಂಡಗದ್ದೆೆ ಹೆಸರು ಜಿಲ್ಲೆೆಯಲ್ಲಿ ಪರಿಚಿತ. ವನ್ಯಜೀವಿಗಳ ಚಿತ್ರ ತೆಗೆಯುವುದಕ್ಕಾಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಛಾಯಾಗ್ರಾಾಹಕ. ಕ್ರಿಿಮಿ-ಕೀಟ-ಸರಿಸೃಪ- ಪ್ರಾಾಣಿಗಳನ್ನು ಸೆರೆಹಿಡಿಯಲು ದಿನವಿಡೀ ಕಾಡಿಲ್ಲಿರುತ್ತಾಾರೆ. ಛಾಯಾಗ್ರಹಣವನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಾಗಿ ಮಾಡಿ ಕೊಂಡಿದ್ದಾಾರೆ.
ಮಂಡಗದ್ದೆೆಯವರಾದ ನಟರಾಜ ಅವರಿಗೆ ಛಾಯಾಗ್ರಹಣದ ಹುಚ್ಚು ಹಿಡಿಸಿದವರು ಮೊಯ್ದಿಿನ್ ಕುಟ್ಟಿಿ ಎನ್ನುವ ಹಿರಿಯ ಛಾಯಾಗ್ರಾಾಹಕರು. ಅವರ ಕೈಲಿದ್ದ ಕ್ಯಾಾಮರಾವನ್ನೇ ಪಡೆದು ಈ ಕಲೆಯನ್ನು ಕಲಿತು ಮೊದಲ ಕ್ಯಾಾಮರಾವನ್ನು 1983ರಲ್ಲಿ ಖರೀದಿಸಿ ಈ ಕಲೆಯಲ್ಲಿ ಏನಾದರೊಂದು ಹೊಸತನವನ್ನು ಸಾಧಿಸಲು ನಿರ್ಧರಿಸಿದರು. ಅದೇ ಪ್ರಕಾರ ಸಾಗಿ ಈಗ ಅದರಲ್ಲಿ ಅಪಾರ ಸಾಧನೆ ಮಾಡಿದ್ದಾಾರೆ. 
   ಮಂಡಗದ್ದೆೆ ಮತ್ತು ಮಾಳೂರಿನಲ್ಲಿ ಪ್ರಾಾಥಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದ ಡಿವಿಎಸ್‌ನಲ್ಲಿ ಪದವಿ ಪಡೆದು ಹೆಗಲಿಗೆ ಕ್ಯಾಾಮರಾ ಏರಿಸಿಕೊಂಡು ಕಾಡು ಸುತ್ತಲು ಆರಂಭಿಸಿದರು. ಮಂಡಗದ್ದೆೆ ಪರಿಸರ ವನ್ಯ ಜೀವಿ ಛಾಯಾಗ್ರಾಾಹಕರಿಗೆ ಪ್ರಶಸ್ತ ಸ್ಥಳವಾಗಿರುವುದರಿಂದ ಬೆಳಿಗ್ಗೆೆ ಎದ್ದು ಇದೇ ಕೆಲಸ ಆರಂಭಿಸಿದರು. ಪರಿಣಾಮವಾಗಿ, ಈವರೆಗೆ ಸಾವಿರಾರು ಅಪೂರ್ವ ಚಿತ್ರ ಸಂಗ್ರಹ ಮಾಡಿದ್ದಾಾರೆ. ಕ್ರಿಿಮಿ-ಕೀಟಗಳ ಸಂತಾನೋತ್ಪತ್ತಿಿ, ಕೂಡುಜೀವನ, ಚಲನವಲನ, ಕ್ರಮಿಸುವಿಕೆ ಆಹಾರ ಎಲ್ಲವನ್ನೂ ಅವುಗಳೊಂದಿಗೇ ದಿನವಿಡಿ ಇದ್ದು ಚಿತ್ರ ಸೆರೆಹಿಡಿದಿದ್ದಾಾರೆ.
ಈ ಚಿತ್ರಗಳು ಜಿಲ್ಲೆೆಯಾದ್ಯಂತ ವಿವಿಧ ಸಂದರ್ಭಗಳಲ್ಲಿ ಪ್ರದರ್ಶಿತವಾಗಿವೆ. ನಗರದ ಬಹುತೇಕ ಎಲ್ಲಾಾ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಮಕ್ಕಳಿಗೆ ಪರಿಸರ, ಪ್ರಾಾಣಿಗಳ ಬಗ್ಗೆೆ ಮಾಹಿತಿ ನೀಡಿದ್ದಾಾರೆ.  ಹೊರ ಜಿಲ್ಲೆೆಯಲ್ಲೂ ಅನೇಕ ಚಿತ್ರಪ್ರದರ್ಶನ ಮಾಡಿ ಜನಮನ ಗೆದ್ದಿದ್ದಾಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಇಂದಿಗೂ ಇದೇ ಕೆಲಸ ನಿರ್ವಹಿಸುತ್ತಿಿರುವ ನಟರಾಜ, ಸುಮಾರು 500 ಅತ್ಯಪೂರ್ವ ವರ್ಣಚಿತ್ರಗಳ ಸಂಗ್ರಹದ ಬೃಹತ್ ಸಂಪುಟವನ್ನು ಹೊರತರುವ ಮಹತ್ತರ ಕಾರ್ಯ ಆರಂಭಿಸಿದ್ದಾಾರೆ.
ಇದರೊಟ್ಟಿಿಗೆ ಪೂರ್ಣಚಂದ್ರ ತೇಜಸ್ವಿಿ ವನ್ಯಜೀವಿ ಛಾಯಾಗ್ರಾಾಹಕರ ಬಳಗವನ್ನು ಸಮಾನ ಮನಸ್ಕರೊದಿಗೆ ಸೇರಿ ಹುಟ್ಟುಹಾಕಿದ್ದಾಾರೆ. ಇದರ ಮೂಲಕ ಮಕ್ಕಳಲ್ಲಿ ವನ್ಯಜೀವಿ, ಕಾಡು, ಪರಿಸರಗಳ ಬಗ್ಗೆೆ ಜಾಗೃತಿ ಮೂಡಿಸುತ್ತಿಿದ್ದಾಾರೆ. ಶಾಲಾ-ಕಾಲೇಜುಗಳ ವಿದ್ಯಾಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಮರ-ಗಿಡ, ಜೀವಿಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿಿದ್ದಾಾರೆ. ಪರಿಸರ, ವನ್ಯಜೀವಿಗಳಿಗಾಗಿಯೇ ಕೆಲಸ ಮಾಡುತ್ತಿಿರುವ ಇವರು ಬೆಜ್ಜವಳ್ಳಿಿಯಲ್ಲಿ ಶ್ರೀಮಾತಾ ಎಂಬ ಸ್ಟುಡಿಯೋ ನಡೆಸುತ್ತಿಿದ್ದಾಾರೆ. ಮಂಡಗದ್ದೆೆ, ತೀಥಹಳ್ಳಿಿ ಭಾಗದಲ್ಲಿ ಕಾಡು ಉಳಿಸುವ ಕೆಲಸಕ್ಕೂ ಕೈಹಾಕಿದ್ದಾಾರೆ.
ವೃತ್ತಿಿ-ಪ್ರವೃತಿ ಎರಡನ್ನೂ ಒಂದೇ ಆಗಿ ಮಾಡಿಕೊಂಡು ಅಳಿವಿನಂಚಿನಲ್ಲಿರುವ ಕಾಡುಪ್ರಾಾಣಿಗಳನ್ನು ಉಳಿಸಲು ಹೋರಾಟ ಮಾಡುತ್ತಿಿದ್ದಾಾರೆ. ಜನರಿಗೆ ಈ ಬಗ್ಗೆೆ ಮಾಹಿತಿ ಕೊಟ್ಟು ಜಾಗೃತಿ ಮೂಡಿಸಿ, ಅವರನ್ನೂ ಈ ಹೋರಾಟದಲ್ಲಿ ಬಳಸಿಕೊಳ್ಳುವ ಇರಾದೆ ಅವರದ್ದು. ಗುರುವಿನ ನೆರವಿಲ್ಲದೆ ಛಾಯಾಗ್ರಹಣ ಕಲಿತು, ಮುಂಗಾರು ಪತ್ರಿಿಕೆಯ ಛಾಯಾಗ್ರಾಾಹಕನಾಗಿ ಕೆಲಸ ಮಾಡಿ ಬಳಿಕ ಇದನ್ನೇ ವೃತ್ತಿಿಯಾಗಿ ಮುನ್ನಡೆಸಿಕೊಂಡು ಇಂದು ಜಿಲ್ಲೆೆ- ಹೊರಜಿಲ್ಲೆೆಯಲ್ಲಿ ಪ್ರಖ್ಯಾಾತಿ ಗಳಿಸಿದ್ದಾಾರೆ. ಪ್ರಚಾರದಿಂದ ದೂರವುಳಿದು ಕೆಲಸ ಮಾಡುತ್ತಿಿರುವ ಇವರು ಸನ್ಮಾಾನ- ಗೌರವಗಳನ್ನು ಬೆನ್ನತ್ತಿಿ ಹೋದವರೂ ಅಲ್ಲ ಎನ್ನುವುದು ವಿಶೇಷ.
ಇತ್ತೀಚೆಗೆ ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ವನ್ಯಜೀವಿ ಚಿತ್ರ ಪ್ರದರ್ಶನ ಮಾಡಿದ್ದಾಾರೆ. ಇವರನ್ನು ಕರ್ನಾಟಕ ಸಂಘ ಆಭಿನಂದಿಸಿ ಗೌರವಿಸಿದೆ.
7.7.2018
............................... 

No comments:

Post a Comment