Saturday 28 July 2018

ಪರಿಪಕ್ವ ಮಹಿಳಾ ಸಾಹಿತಿ
  ಸುನೀತಾ ರಾವ್


ಚಿಕ್ಕಂದಿನಲ್ಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಲ್ಲಿ ಅದು ವ್ಯಕ್ತಿಿ ಬೆಳೆದಂತೆ ಆತನನ್ನು ಸಾಹಿತಿಯನ್ನಾಾಗಿ ಮಾಡುತ್ತದೆ. ಬರೆವಣಿಗೆ, ಓದಿನಲ್ಲಿ ಸಕ್ರಿಿಯವಾಗಿರುವಂತೆ ನೋಡಿಕೊಳ್ಳುತ್ತದೆ. ವಯಸ್ಸಾಾದರೂ ಸಾಹಿತ್ಯದಿಂದ ಆ ವ್ಯಕ್ತಿಿ ವಿಮುಖನಾಗದೆ ಇನ್ನಷ್ಟು ಪರಿಪಕ್ವನಾಗುತ್ತಾಾನೆ. ತನ್ನ ಕೃತಿಯ ಮೂಲಕ ಹೆಸರುಗಳಿಸುತ್ತಾಾನೆ.
ಮಹಿಳೆಯ ಸಾಧನೆ ಸಾಹಿತ್ಯದಲ್ಲಿಯೂ ಗಣನೀಯವಾದುದು. ನೂರಾರು ಮಹಿಳಾ ಬರೆಹಗಾರರು ಕನ್ನಡ ಸಾಹಿತ್ಯ ಚರಿತ್ರೆೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೂ ಸಾಕಷ್ಟು ಮಹಿಳಾ ಸಾಹಿತಿಗಳು ಹೆಸರಾಗಿದ್ದಾಾರೆ. ಸುನೀತಾ ರಾವ್ ಅವರದ್ದು ಜಿಲ್ಲೆೆಯ  ಮಹಿಳಾ ಸಾಹಿತಿಗಳಲ್ಲಿ ಅಗ್ರ ಹೆಸರು. ಇವರು ಜಿಲ್ಲಾಾ ಎರಡನೆಯ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಾರೆ.
ಸುನೀತಾ ರಾವ್ ಮೂಲತಃ ಹೊಳೆಹೊನ್ನೂರಿನವರು. ತಂದೆ ಕೃಷ್ಣಾಾಜಿರಾವ್ ಮತ್ತು ತಾಯಿ ಕುಸುಮಾಬಾಯಿ ಮಗಳ ಸಾಹಿತ್ಯದ ಬಗೆಗಿನ ಒಲವನ್ನು ಗುರುತಿಸಿ, ಓದಲು ಪ್ರೋತ್ಸಾಾಹಿಸಿದರು.  ಉತ್ತಮ ಗೃಹಿಣಿಯಾಗಿ ಸಂಸಾರ ತೂಗಿಸಿಕೊಂಡು ಹೋಗುವ ಇವರಿಗೆ ಸಾಹಿತ್ಯದ ಬಗ್ಗೆೆ ಚಿಕ್ಕಂದಿನಿಂದಲೂ ಅತೀವ ಆಸಕ್ತಿಿ. ಓದುವ ಆಸಕ್ತಿಿಯಿದ್ದರೂ ಸಹ ಇವರ ತಂದೆ ತಾಯಿ ವಿವಾಹ ಮಾಡಿದರು. ವಿವಾಹದ ನಂತರ ಶಿವಮೊಗ್ಗದ ವಿನೋಬನಗರ ನಿವಾಸಿಯಾದರು.
 ಉನ್ನತ ವಿದ್ಯಾಾಭ್ಯಾಾಸ ಮಾಡುವ ಹಂಬಲವಿದ್ದರೂ ಅದು ಸಾಧ್ಯವಾಗದೆ ತಮ್ಮ 60ನೆಯ ವಯಸ್ಸಿಿನಲ್ಲಿ ಕನ್ನಡದಲ್ಲಿ ಎಂ.ಎ.ಪರೀಕ್ಷೆ ಕಟ್ಟಿಿ ಉತ್ತೀರ್ಣರಾದರು. ಓದುವ ಛಲ ಅವರನ್ನು ಸತತವಾಗಿ ಕಾಡುತ್ತಿಿದ್ದುದ್ದರಿಂದ ಎಂ. ಎ. ಪದವಿ ಪಡೆಯಬೇಕೆಂಬ ಇಚ್ಛೆೆ ಅವರಲ್ಲಿತ್ತು. ಕೊನೆಗೂ ಅದನ್ನು ಪತಿಯ ಸಹಕಾರದಿಂದ ಈಡೇರಿಸಿಕೊಂಡಿದ್ದಾಾರೆ. ಇಷ್ಟರಲ್ಲೇ ಹಲವು ಕೃತಿಯನ್ನು ಅವರು ರಚಿಸಿದ್ದರಿಂದ ಹೆಚ್ಚಿಿನ ಪಕ್ವತೆ ಅವರಿಗೆ ಸಿಕ್ಕಿಿದಂತಾಗಿತ್ತು. 
 ಮದುವೆಯಾದರೂ ಸಾಹಿತ್ಯದ ಒಲವು ಇವರನ್ನು ಬಿಡಲಿಲ್ಲ. ಪತಿ ಕಾಲೇಜು ಪ್ರಾಾಧ್ಯಾಾಪಕರಾಗಿದ್ದ ದುರ್ಗೋಜಿರಾವ್ ಎಲ್ಲ ರೀತಿಯ ಪ್ರೋತ್ಸಾಾಹ ನೀಡಿದರು. ಇವರ ಬರವಣಿಗೆಯಲ್ಲಿನ ನೈಜತೆ ಮತ್ತು ಪ್ರೌೌಢತೆ ಎಲ್ಲರ ಗಮನ ಸೆಳೆಯುವಂತಹುದು. ಇವರ ಮೊದಲ ಕಾದಂಬರಿ "ನೀ ಬರುವ ದಾರಿಯಲ್ಲಿ" ಒಂದು ಸಾಮಾಜಿಕ ಕೃತಿಯಾಗಿದ್ದು, ಓದುಗರ ಮನ ಗೆದ್ದಿತು. ನಂತರ ಇವರ ಕೆಲವು ಕವನಗಳಂತೂ ಕೇಳುಗರಿಗೆ ಅಪ್ಯಾಾಯಮಾನವಾಗಿದ್ದವು. ಅವುಗಳಲ್ಲಿ ಕೆಲವನ್ನು ಅನೇಕ ವೇದಿಕೆಗಳಲ್ಲಿ ಅದರಲ್ಲಿಯೂ ಕವಿಗೋಷ್ಠಿಿಗಳಲ್ಲಿ ಪ್ರಸ್ತುತಪಡಿಸಿದಾಗ ಎಲ್ಲರೂ ಚಪ್ಪಾಾಳೆ ತಟ್ಟಿಿ ಸಂತೋಷ ವ್ಯಕ್ತಪಡಿಸಿದರು. ಇದು ಇನ್ನಿಿತರ ಪುಸ್ತಕಗಳನ್ನು ಪ್ರಕಟಿಸಲು ನೆರವಾಯಿತು.
ನೀ ಬರುವ ದಾರಿಯಲಿ, ಸೀತೆಯ ಶಪಥ ಮತ್ತು ದೇವಿಯ ದಾಸಿ ಇವರ ಕಾದಂಬರಿಗಳಾದರೆ, ಹೂಗುಚ್ಛ ಮತ್ತು ಕಾರ್ಮುಗಿಲ ದಾರಿ ಇವರ ಕವನ ಸಂಕಲನಗಳಾಗಿವೆ. ಇವರ ಕಥಾ ಸಂಕಲನ ’ವಾಸ್ತವದ ಪುಟಗಳು’ ಮನೋರಂಜಕವಾದ ಕಥೆಗಳಿಂದ ಕೂಡಿದ್ದು, ಅದರಲ್ಲಿ ಬಹುತೇಕ ಕಥೆಗಳು ನಾಡಿನ ಅನೇಕ ಪತ್ರಿಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಇವರ ಕಾದಂಬರಿಯ ವಿಮರ್ಶೆ ಮಾಡುವ ಕಾರ್ಯಕ್ರಮವನ್ನೇರ್ಪಡಿಸಿದ್ದಾಾಗ ಸಾಹಿತ್ಯಪ್ರಿಿಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಸೇರಿ  ಈ ಕಾದಂಬರಿಯನ್ನು ಪ್ರಶಂಸಿಸಿದ್ದರು.
 ಜಿಲ್ಲಾಾ ಕ.ಸಾ.ಪ.ಅವರನ್ನು ಜಿಲ್ಲಾಾ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆರಿಸಿ ವಿಷಯ ತಿಳಿಸಿದಾಗ ತನಗಿಂತ ಉತ್ತಮವಾದ ಸಾಹಿತಿಗಳನ್ನು ಪರಿಗಣಿಸಬಹುದಿತ್ತು ಎಂದು ಹೇಳಿದರಂತೆ. ಇಂತಹ ದೊಡ್ಡತನದ, ಸರಳ, ಸಜ್ಜನಿಕೆಯ, ಸಹೃದಯದ ಸುನೀತಾ ರಾವ್, ಯಾವುದೇ ಪ್ರಚಾರದತ್ತ ಹೋದವರಲ್ಲ. ಜಿಲ್ಲೆೆಯ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾಾರೆ. ಇಂದಿಗೂ ಸಾಹಿತ್ಯಪರ ಚಟುವಟಿಕೆಯಲ್ಲಿ ಕ್ರಿಿಯಾಶೀಲರಾಗಿರುವುದರಿಂದಲೇ ಸಮ್ಮೇಳನಾಧ್ಯಕ್ಷತೆಗೆ ಅವರ ಹೆಸರು ಮುಂಚೂಣಿಗೆ ಬಂದಿತು. ಕೂಡು ಕುಟುಂಬದಲ್ಲಿದ್ದರೂ, ತಮ್ಮ ಸಾಹಿತ್ಯ ಕೃಷಿಯನ್ನು ಮಾತ್ರ ಬಿಟ್ಟಿಿಲ್ಲ. ದಿನದ ಕೆಲವು ಗಂಟೆಗಳನ್ನಾಾದರೂ ಅಧ್ಯಯನ ಮತ್ತು ಬರವಣಿಗೆಗೆ ಮೀಸಲಿಟ್ಟು ಸಾಹಿತ್ಯ ಕೃಷಿ ಮಾಡುತ್ತಿಿದ್ದಾಾರೆ. 

28-7-2018
................................


  

No comments:

Post a Comment