ಉತ್ತಮ ಪಶು ವೈದ್ಯ ಪುರಸ್ಕೃತ
ಡಾ. ಸುನಿಲ್ಕುಮಾರ್
ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶವಿದೆ. ಆದರೆ ಈ ಸಾಧನೆಗೆ ಅಸಾಧಾರಣ ಬುದ್ಧಿಿಮತ್ತೆೆಯ ಜೊತೆಗೆ ಸಮರ್ಪಣಾ ಭಾವ ಮತ್ತು ದೂರದೃಷ್ಟಿಿಯೂ ಅಗತ್ಯ. ಇಂತಹ ಕೌಶಲ್ಯ ಹೊಂದಿದವರು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸುತ್ತಾಾರೆ.
ನಗರದ ಯುವ, ಉತ್ಸಾಾಹಿ ಪಶುವೈದ್ಯ ಡಾ. ಕೆ. ಎಂ. ಸುನಿಲ್ಕುಮಾರ್ ಭಾರತ ಸರ್ಕಾರದ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಪ್ರತಿಬಾನ್ವಿಿತ ಸುನಿಲ್ಕುಮಾರ್ ತನ್ನ ಸೇವೆಯ 10 ವರ್ಷದಲ್ಲಿ ಜನಮಾನಸ ಗೆದ್ದಿದ್ದಾಾರೆ. ಅಷ್ಟೇ ಏಕೆ, ಒಬ್ಬ ಪಶುವೈದ್ಯ ಗ್ರಾಾಮಾಂತರದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವುದಕ್ಕೆೆ ಸಾಕ್ಷಿಯಾಗಿದ್ದಾಾರೆ.
ಸದ್ಯ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಾಮದ ಪಶು ಆಸ್ಪತ್ರೆೆಯಲ್ಲಿ ಹಿರಿಯ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿಿದ್ದು, ಜೂನ್ 1 ರಂದು ನವದೆಹಲಿಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ರೈತರ ಕಲ್ಯಾಾಣ ಸಚಿವ ರಾಧಾ ಮೋಹನ್ ಸಿಂಗ್ ಉಪಸ್ಥಿಿತಿಯಲ್ಲಿ ಈ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಗಾಜನೂರಿನ ನವೋದಯ ವಿದ್ಯಾಾಲಯದಲ್ಲಿ ಪ್ರಾಾಥಮಿಕ ಶಿಕ್ಷಣವನ್ನು ಪೂರೈಸಿದ ಡಾ. ಸುನಿಲ್ಕುಮಾರ್, ಬೀದರ್ ಪಶುವೈದ್ಯ ವಿವಿಯಲ್ಲಿ ವೆಟರ್ನರಿ ಸೈನ್ಸ್ ಬ್ಯಾಾಚುಲರ್ ಪದವಿಯನ್ನು , ಆನಂತರ ಬೆಂಗಳೂರಿನ ಹೆಬ್ಬಾಾಳದ ವೆಟರ್ನರಿ ಕಾಲೇಜಿನಲ್ಲಿ ಪಿಎಚ್ಡಿಯನ್ನು ಪಡೆದಿದ್ದಾಾರೆ. ಮಾಸ್ಟರ್ ಅಫ್ ವೆಟರ್ನರಿ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಿಕೇಶನ್ನಲ್ಲಿ ಡಿಪ್ಲೋಮಾ ಮುಗಿಸಿದ್ದಾಾರೆ. 2007ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸಕ್ಕೆೆ ಸೇರಿದ್ದಾಾರೆ.
ಇವರು ಅನೇಕ ವೃತ್ತಿಿಪರ ಸಂಘ ಸಂಸ್ಥೆೆಗಳಲ್ಲಿ ತೊಡಗಿಕೊಂಡಿದ್ದು, ಹತ್ತಾಾರು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಜ್ಞಾಾನ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿ ಅತಿಥಿ ಉಪನ್ಯಾಾಸ ನೀಡಿದ್ದಾಾರೆ. ಹಲವು ಕಾರ್ಯಾಗಾರಕ್ಕೆೆ ಬೇಕಾದ ವೈಜ್ಞಾಾನಿಕ ಸಲಹಾ ಸಮಿತಿ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾಾರೆ. ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ನ ಸಾಧನೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ 1997ರಲ್ಲಿ ರಾಜ್ಯ ಪುರಸ್ಕಾಾರ, ರಾಷ್ಟ್ರಪತಿ ಕೆ.ಆರ್. ನಾರಾಯಣ್ ಇವರಿಂದ 1998ರಲ್ಲಿ ರಾಷ್ಟ್ರಪತಿ ಪುರಸ್ಕಾಾರ, 2014ರಲ್ಲಿ ಶ್ವಾಾನಗಳ ಗಳಗಂಡ ಕೋರರೋಗದ ಅಧ್ಯಯನಕ್ಕೆೆ’ಯುವ ವಿಜ್ಞಾಾನಿ’ ಪ್ರಶಸ್ತಿಿ ಪಡೆದಿದ್ದಾಾರೆ.
ಅನೇಕ ಕಾಲೇಜುಗಳ ಎನ್.ಎಸ್.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಪಶುಪಾಲನೆ ಬಗ್ಗೆೆ ಅರಿವು ಮತ್ತು ಸಮಗ್ರ ಮಾಹಿತಿ ನೀಡಿದ್ದಾಾರೆ. ವಿವಿಧ ಸೇವಾ ಸಂಘ ಸಂಸ್ಥೆೆಗಳ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಿಯಾಗಿ ಭಾಗವಹಿಸಿ ಗ್ರಾಾಮೀಣಾಭಿವೃದ್ದಿಯಲ್ಲಿ ಹೈನುಗಾರಿಕೆಯ ಪಾತ್ರವನ್ನು ರೈತರಿಗೆ ವಿವರಿಸಿದ್ದಾಾರೆ. ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರಾಾಣಿಜನ್ಯರೋಗದ ಬಗ್ಗೆೆ ಹಾಗೂ ಶುದ್ದ ಪ್ರಾಾಣಿಜನ್ಯ ಆಹಾರದ ಬಗ್ಗೆೆ, ಅವುಗಳ ಉಪಯೋಗದ ಬಗ್ಗೆೆ ಸೂಕ್ತ ಸಲಹೆ, ಮಾಹಿತಿ ನೀಡಿದ್ದಾಾರೆ.
ಗುಣಮಟ್ಟದ ಹಾಲು ಉತ್ಪಾಾದನೆ ಬಗ್ಗೆೆ ರೈತರಿಗೆ ಮನವರಿಕೆ ಮಾಡಿಕೊಡುತ್ತಾಾ, ಹಾಲು ಉತ್ಪಾಾದನೆಗೆ ಬೇಕಾದ ಪೂರಕ ಪೋಷಕಾಂಶಗಳ ಬಗ್ಗೆೆ ಮಾಹಿತಿ ನೀಡಿದ್ದಾಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾಾನವನ್ನು ಯಶಸ್ವಿಿಯಾಗಿ ಗ್ರಾಾಮಾಂತರದಲ್ಲಿ ನಿರ್ವಹಿಸಿದ್ದಾಾರೆ. ಜಾನುವಾರು ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಿ ಜಾನುವಾರುಗಳಿಗೆ ಚಿಕಿತ್ಸೆೆ ಹಾಗೂ ಆರೋಗ್ಯದ ಬಗ್ಗೆೆ ಸವಿವರ ಮಾಹಿತಿಯನ್ನು ಸದಾ ನೀಡುತ್ತಿಿದ್ದಾಾರೆ. ಪ್ರಕೃತಿ ವಿಕೋಪ, ಸಾಂಕ್ರಾಾಮಿಕರೋಗ, ಮುಂತಾದತುರ್ತು ಸಂದರ್ಭದಲ್ಲಿರೈತರ ಮನೆಬಾಗಿಲಿಗೆ ಭೇಟಿ ನೀಡಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆೆ ನೀಡಿದ್ದಾಾರೆ. ಗ್ರಾಾಮಾಂತರ ರೈತರ ಜೀವನ ಹಸನಾಗಬೇಕು, ಪಶುಸಂಗೋಪನೆ ಇನ್ನಷ್ಟು ಬೆಳೆಯಬೇಕೆಂಬ ದೃಷ್ಟಿಿಯಲ್ಲಿ ಕೆಲಸ ಮಾಡುತ್ತಿಿರುವುದನ್ನು ಗಮನಿಸಿ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಇವರನ್ನು ಆಯ್ಕೆೆ ಮಾಡಲಾಗಿತ್ತು.
published on june30
.........................................
ಡಾ. ಸುನಿಲ್ಕುಮಾರ್
ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶವಿದೆ. ಆದರೆ ಈ ಸಾಧನೆಗೆ ಅಸಾಧಾರಣ ಬುದ್ಧಿಿಮತ್ತೆೆಯ ಜೊತೆಗೆ ಸಮರ್ಪಣಾ ಭಾವ ಮತ್ತು ದೂರದೃಷ್ಟಿಿಯೂ ಅಗತ್ಯ. ಇಂತಹ ಕೌಶಲ್ಯ ಹೊಂದಿದವರು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸುತ್ತಾಾರೆ.
ನಗರದ ಯುವ, ಉತ್ಸಾಾಹಿ ಪಶುವೈದ್ಯ ಡಾ. ಕೆ. ಎಂ. ಸುನಿಲ್ಕುಮಾರ್ ಭಾರತ ಸರ್ಕಾರದ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಪ್ರತಿಬಾನ್ವಿಿತ ಸುನಿಲ್ಕುಮಾರ್ ತನ್ನ ಸೇವೆಯ 10 ವರ್ಷದಲ್ಲಿ ಜನಮಾನಸ ಗೆದ್ದಿದ್ದಾಾರೆ. ಅಷ್ಟೇ ಏಕೆ, ಒಬ್ಬ ಪಶುವೈದ್ಯ ಗ್ರಾಾಮಾಂತರದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವುದಕ್ಕೆೆ ಸಾಕ್ಷಿಯಾಗಿದ್ದಾಾರೆ.
ಸದ್ಯ ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಾಮದ ಪಶು ಆಸ್ಪತ್ರೆೆಯಲ್ಲಿ ಹಿರಿಯ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿಿದ್ದು, ಜೂನ್ 1 ರಂದು ನವದೆಹಲಿಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ರೈತರ ಕಲ್ಯಾಾಣ ಸಚಿವ ರಾಧಾ ಮೋಹನ್ ಸಿಂಗ್ ಉಪಸ್ಥಿಿತಿಯಲ್ಲಿ ಈ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಗಾಜನೂರಿನ ನವೋದಯ ವಿದ್ಯಾಾಲಯದಲ್ಲಿ ಪ್ರಾಾಥಮಿಕ ಶಿಕ್ಷಣವನ್ನು ಪೂರೈಸಿದ ಡಾ. ಸುನಿಲ್ಕುಮಾರ್, ಬೀದರ್ ಪಶುವೈದ್ಯ ವಿವಿಯಲ್ಲಿ ವೆಟರ್ನರಿ ಸೈನ್ಸ್ ಬ್ಯಾಾಚುಲರ್ ಪದವಿಯನ್ನು , ಆನಂತರ ಬೆಂಗಳೂರಿನ ಹೆಬ್ಬಾಾಳದ ವೆಟರ್ನರಿ ಕಾಲೇಜಿನಲ್ಲಿ ಪಿಎಚ್ಡಿಯನ್ನು ಪಡೆದಿದ್ದಾಾರೆ. ಮಾಸ್ಟರ್ ಅಫ್ ವೆಟರ್ನರಿ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಿಕೇಶನ್ನಲ್ಲಿ ಡಿಪ್ಲೋಮಾ ಮುಗಿಸಿದ್ದಾಾರೆ. 2007ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸಕ್ಕೆೆ ಸೇರಿದ್ದಾಾರೆ.
ಇವರು ಅನೇಕ ವೃತ್ತಿಿಪರ ಸಂಘ ಸಂಸ್ಥೆೆಗಳಲ್ಲಿ ತೊಡಗಿಕೊಂಡಿದ್ದು, ಹತ್ತಾಾರು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಜ್ಞಾಾನ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿ ಅತಿಥಿ ಉಪನ್ಯಾಾಸ ನೀಡಿದ್ದಾಾರೆ. ಹಲವು ಕಾರ್ಯಾಗಾರಕ್ಕೆೆ ಬೇಕಾದ ವೈಜ್ಞಾಾನಿಕ ಸಲಹಾ ಸಮಿತಿ ಸದಸ್ಯರಾಗಿ ಸಹ ಸೇವೆ ಸಲ್ಲಿಸಿದ್ದಾಾರೆ. ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ನ ಸಾಧನೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ 1997ರಲ್ಲಿ ರಾಜ್ಯ ಪುರಸ್ಕಾಾರ, ರಾಷ್ಟ್ರಪತಿ ಕೆ.ಆರ್. ನಾರಾಯಣ್ ಇವರಿಂದ 1998ರಲ್ಲಿ ರಾಷ್ಟ್ರಪತಿ ಪುರಸ್ಕಾಾರ, 2014ರಲ್ಲಿ ಶ್ವಾಾನಗಳ ಗಳಗಂಡ ಕೋರರೋಗದ ಅಧ್ಯಯನಕ್ಕೆೆ’ಯುವ ವಿಜ್ಞಾಾನಿ’ ಪ್ರಶಸ್ತಿಿ ಪಡೆದಿದ್ದಾಾರೆ.
ಅನೇಕ ಕಾಲೇಜುಗಳ ಎನ್.ಎಸ್.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಪಶುಪಾಲನೆ ಬಗ್ಗೆೆ ಅರಿವು ಮತ್ತು ಸಮಗ್ರ ಮಾಹಿತಿ ನೀಡಿದ್ದಾಾರೆ. ವಿವಿಧ ಸೇವಾ ಸಂಘ ಸಂಸ್ಥೆೆಗಳ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಿಯಾಗಿ ಭಾಗವಹಿಸಿ ಗ್ರಾಾಮೀಣಾಭಿವೃದ್ದಿಯಲ್ಲಿ ಹೈನುಗಾರಿಕೆಯ ಪಾತ್ರವನ್ನು ರೈತರಿಗೆ ವಿವರಿಸಿದ್ದಾಾರೆ. ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರಾಾಣಿಜನ್ಯರೋಗದ ಬಗ್ಗೆೆ ಹಾಗೂ ಶುದ್ದ ಪ್ರಾಾಣಿಜನ್ಯ ಆಹಾರದ ಬಗ್ಗೆೆ, ಅವುಗಳ ಉಪಯೋಗದ ಬಗ್ಗೆೆ ಸೂಕ್ತ ಸಲಹೆ, ಮಾಹಿತಿ ನೀಡಿದ್ದಾಾರೆ.
ಗುಣಮಟ್ಟದ ಹಾಲು ಉತ್ಪಾಾದನೆ ಬಗ್ಗೆೆ ರೈತರಿಗೆ ಮನವರಿಕೆ ಮಾಡಿಕೊಡುತ್ತಾಾ, ಹಾಲು ಉತ್ಪಾಾದನೆಗೆ ಬೇಕಾದ ಪೂರಕ ಪೋಷಕಾಂಶಗಳ ಬಗ್ಗೆೆ ಮಾಹಿತಿ ನೀಡಿದ್ದಾಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾಾನವನ್ನು ಯಶಸ್ವಿಿಯಾಗಿ ಗ್ರಾಾಮಾಂತರದಲ್ಲಿ ನಿರ್ವಹಿಸಿದ್ದಾಾರೆ. ಜಾನುವಾರು ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಿ ಜಾನುವಾರುಗಳಿಗೆ ಚಿಕಿತ್ಸೆೆ ಹಾಗೂ ಆರೋಗ್ಯದ ಬಗ್ಗೆೆ ಸವಿವರ ಮಾಹಿತಿಯನ್ನು ಸದಾ ನೀಡುತ್ತಿಿದ್ದಾಾರೆ. ಪ್ರಕೃತಿ ವಿಕೋಪ, ಸಾಂಕ್ರಾಾಮಿಕರೋಗ, ಮುಂತಾದತುರ್ತು ಸಂದರ್ಭದಲ್ಲಿರೈತರ ಮನೆಬಾಗಿಲಿಗೆ ಭೇಟಿ ನೀಡಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆೆ ನೀಡಿದ್ದಾಾರೆ. ಗ್ರಾಾಮಾಂತರ ರೈತರ ಜೀವನ ಹಸನಾಗಬೇಕು, ಪಶುಸಂಗೋಪನೆ ಇನ್ನಷ್ಟು ಬೆಳೆಯಬೇಕೆಂಬ ದೃಷ್ಟಿಿಯಲ್ಲಿ ಕೆಲಸ ಮಾಡುತ್ತಿಿರುವುದನ್ನು ಗಮನಿಸಿ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಇವರನ್ನು ಆಯ್ಕೆೆ ಮಾಡಲಾಗಿತ್ತು.
published on june30
.........................................
No comments:
Post a Comment