Monday 17 September 2018

ಅಂಧತ್ವ ಮೀರಿದ ರೈತ
  ಗುರುನಾಥ ಗೌಡ


 ಅಂಧತ್ವ ಶಾಪವಲ್ಲ ಎಂಬ ಮಾತಿದೆ. ಏಕೆಂದರೆ ಅಂಧತ್ವವನ್ನು ಮೀರಿ ಸಾಧಿಸಿದವರು ಹಲವರಿದ್ದಾಾರೆ. ನಮ್ಮ ಜಿಲ್ಲೆೆಯವರೇ ಆದ ಶೇಖರ್ ನಾಯ್ಕ ಅಂಧರಾದರೂ ವಿಶ್ವ ಕಪ್ ಅಂಧರ ಕ್ರಿಿಕೆಟ್ ತಂಡದ ನಾಯಕತ್ವ ವಹಿಸಿ ಟ್ರೋೋಫಿ ಗೆದ್ದು ತಂದು ಖ್ಯಾಾತರಾಗಿದ್ದಾಾರೆ. ಇವರಂತೆಯೇ ವಿಶ್ವದಲ್ಲಿ ಹಲವರಿದ್ದಾಾರೆ ಹೆಲೆನ್ ಕೆಲ್ಲರ್, ಲೂಯಿಸ್ ಬ್ರೈಲ್, ಹೋಮರ್, ಕರ್ನಾಟಕದವರೇ ಆದ ಗಾನಗಂಧರ್ವ ಪಂಚಾಕ್ಷರಿ ಗವಾಯಿಗಳು ಮೊದಲಾದವರನ್ನು ಹೆಸರಿಬಹುದು.
ಸಾಧನೆಗೆ ಅಂಧತ್ವದಿಂದ ಯಾವ ತೊಡಕೂ ಇಲ್ಲ. ಸಾಧಿಸುವ ಛಲ ಇದ್ದರೆ ಏನೇ ಸಮಸ್ಯೆೆ ಇದ್ದರೂ ಅದನ್ನು ದಾಟಿ ಹೆಸರನ್ನು ಅಚ್ಚಳಿಯದಂತೆ ಅಚ್ಚೊೊತ್ತಬಹುದು. ಇದಕ್ಕೆೆ ಇನ್ನೊೊಂದು ಉತ್ತಮ ಉದಾಹರಣೆ ಸೊರಬ ತಾಲೂಕು ಬಾಸೂರಿನ ಅಂಧ ಕೃಷಿಕ ಗುರುನಾಥ ಗೌಡ. ದೃಷ್ಟಿಿಹೀನರಾದ 62 ವರ್ಷದ ಇವರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.
ಗುರುನಾಥ ಗೌಡ ಬಾಲ್ಯದಲ್ಲಿಯೇ ದೃಷ್ಟಿಿ ಕಳೆದುಕೊಂಡವರು. ರೈತ ಕುಟುಂಬದಿಂದ ಬಂದವರು. ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿಿ ಹೊಂದಿದ್ದರು. ಇದನ್ನೇ ಇಂದಿಗೂ ಅನುಸರಿಸಿ ಈಗ  ವಾಣಿಜ್ಯ ಬೆಳೆಯಿಂದ ಉತ್ತಮ ಆದಾಯ ಸಂಪಾದಿಸಿ  ತನ್ನ ಸ್ವಂತ ಕಾಲ ಮೇಲೆ ನಿಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಅಡಿಕೆ, ಪೈನಾಪಲ್, ಪಪ್ಪಾಾಯ ಮತ್ತು ಮೆಣಸು ಬೆಳೆದು ಕೈ ತುಂಬಾ ಕಾಂಚಾಣ ಪಡೆಯುತ್ತಿಿದ್ದಾರೆ.
ತಮ್ಮ 10 ಎಕರೆ ಜಮೀನಿನಲ್ಲಿ  ಕುಟುಂಬ ಸದಸ್ಯರು ಹಾಗೂ ಸ್ನೇಹಿತರ  ಬೆಂಬಲ ಪಡೆದು ವಾಣಿಜ್ಯ ಬೆಳೆಯುತ್ತಿಿದ್ದಾಾರೆ. ಪ್ರತಿದಿನ ಅವರು ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ಕೇಳುವ ಪರಿಪಾಠವನ್ನು ತಪ್ಪದೆ ಬಹುವರ್ಷದ ಹಿಂದಿನಿಂದ ಬೆಳೆಸಿಕೊಂಡು ಬಂದಿದ್ದಾಾರೆ. 1981 ರಲ್ಲಿ ತಮ್ಮ ಜಮೀನಿನಲ್ಲಿ ವ್ಯವಸಾಯ ಆರಂಭಿಸಿದ ಗುರುನಾಥ್ ಗೌಡ, 1984ರಲ್ಲಿ ಮೊದಲ ಬೆಳೆಯಾಗಿ ಅಡಿಕೆ ಬೆಳೆದಿದ್ದರು. ಆನಂತರ ವ್ಯಾಾಪಾರ ಮಾಡಲು ಯೋಚಿಸಿ  ರಾಜ್ಯ ಹಣಕಾಸು ನಿಗಮದಿಂದ ಸಾಲ ಪಡೆದು ಹಿಟ್ಟಿಿನ ಗಿರಣಿ ಆರಂಭಿಸಿದ್ದರು. ಆದರೆ, ಗ್ರಾಾಹಕರ ಸಂಖ್ಯೆೆ ಇಳಿಮುಖವಾದ್ದರಿಂದ 2006ರಲ್ಲಿ ಅದನ್ನು ಮುಚ್ಚಿಿದ್ದಾರೆ.
  2001ರಲ್ಲಿ 9 ಎಕರೆ ಜಮೀನಿನಲ್ಲಿ ಪೈನಾಪಲ್  ಬೆಳೆ ಬೆಳೆಯುವ ಮೂಲಕ ಕೃಷಿ ತಜ್ಞರನ್ನೂ ಬೆರಗುಗೊಳಿಸಿದ್ದಾಾರೆ. ಈ ಕೃಷಿಗಾಗಿ ಧಾರವಾಡ ವಿವಿಯ ಪ್ರೋೋಫೆಸರ್ ದೀಕ್ಷಿತ್ ಅವರಿಂದ ಸಲಹೆ ಪಡೆದಿದ್ದಾಗಿ ಹೇಳುತ್ತಾಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡಿದ್ದು, ತಾವು ಬೆಳೆದ ಪೈನಾಪಲ್ ದೆಹಲಿ, ಜಮ್ಮು-ಕಾಶ್ಮೀರ, ರಾಜಸ್ತಾಾನ, ಗುಜರಾತ್, ಮತ್ತು ಪಂಜಾಬ್‌ಗೆ ಹೋಗುತ್ತದೆ. ಇದು ಹೊಸ ಅನುಭವವನ್ನು ತನಗೆ ನೀಡಿದೆ ಎಂದು ಖುಷಿಯಿಂದ ಹೇಳುತ್ತಾಾರೆ. 
16 ವರ್ಷದವರಿದ್ದಾಾಗ, ದೀಪಾವಳಿ ಸಂದರ್ಭದಲ್ಲಿ ಸಿಡಿದ ಪಟಾಕಿ  ಗೌಡರ  ಎರಡು ಕಣ್ಣುಗಳನ್ನು  ಬಲಿತೆಗೆದುಕೊಂಡಿತ್ತು. ಅವರ ತಂದೆ ಪುಟ್ಟಪ್ಪ ಗೌಡ  ಕಣ್ಣಿಿನ ಚಿಕಿತ್ಸೆೆಗಾಗಿ  ಡಾ. ಎಂ. ಸಿ ಮೋದಿ ಬಳಿಗೆ ಕರೆದುಕೊಂಡು ಹೋಗಿದ್ದರೂ ಕಣ್ಣು ಮರಳಲಿಲ್ಲ. ಕೊಲ್ಲಾಪುರಕ್ಕೂ ಹೋಗಿ ಚಿಕಿತ್ಸೆೆ ಪಡೆದು ಬಂದಿದ್ದಾರೆ. ಆದರೆ ಕಣ್ಣು ಮತ್ತೆೆ ಬೆಳಕು ನೀಡಲೇ ಇಲ್ಲ.  ಈ ಘಟನೆಯಿಂದಾಗಿ ಬೇರೆಯವರಾಗಿದ್ದರೆ ಜೀವನದಲ್ಲಿ ಆಸಕ್ತಿಿ ಕಳೆದುಕೊಂಡು ಬಿಡುತ್ತಿಿದ್ದರು. ಆದರೆ. ಗೌಡರು ಹಾಗಾಗಲಿಲ್ಲ. ಬದಲಿಗೆ ಸಾಧಕರಾದರು.
ಇವರು ಬೆಳೆಯುತ್ತಿಿರುವ ಸಸ್ಯಗಳಿಗೆ ವಿಭಿನ್ನ ಬಣ್ಣದ ಬಟ್ಟೆೆಗಳನ್ನು ಜೋಡಿಸುತ್ತಾಾರೆ. ಅವರ ಪತ್ನಿಿ ಸುಜಾತಾ ಈ ಸಸ್ಯಗಳ ದಾಖಲೆ ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿಿದ್ದಾರೆ. ರೋಗ ಬಂದರೆ ಯಾವ ಸಸ್ಯಕ್ಕೆೆ ಯಾವ ಚಿಕಿತ್ಸೆೆಯನ್ನು ನೀಡಬೇಕು ಎಂಬುದು ಅವರಿಗೆ ಗೊತ್ತಿಿದೆ.
ಗೌಡರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರಿಗೆ ಉತ್ತಮ ವಿದ್ಯಾಾಭ್ಯಾಾಸ ಕೊಡಿಸಿದ್ದಾಾರೆ.  ಒಬ್ಬರು ಬೆಂಗಳೂರಿನ ಕಾಂಗ್ನಿಿಝಂಟ್ ಸಂಸ್ಥೆೆಯಲ್ಲಿ ಕೆಲಸ ಮಾಡುತ್ತಿಿದ್ದರೆ, ಇನ್ನೊೊಬ್ಬರು  ಬೆಂಗಳೂರಿನ ನಾಗಾರ್ಜನ ಕಾಲೇಜಿನಲ್ಲಿ ಉಪನ್ಯಾಾಸಕಿಯಾಗಿದ್ದಾರೆ.
...............................................

No comments:

Post a Comment