Saturday 8 September 2018

 ಬಹುಮುಖ ಪ್ರತಿಭೆಯ 
ಶಿಕ್ಷಕ ರೇವಣಪ್ಪ



ಸಾಮಾನ್ಯ ಶಿಕ್ಷಕ ಬೋಧಿಸುತ್ತಾಾನೆ, ಉತ್ತಮ ಶಿಕ್ಷಕ ಕಲಿಸುತ್ತಾಾನೆ, ಅತುತ್ತಮ ಶಿಕ್ಷಕ ಪ್ರೇರೇಪಿಸುತ್ತಾಾನೆ ಎಂಬ ಮಾತಿದೆ. ಎಲ್ಲಾಾ ಶಿಕ್ಷಕರು ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಯಾರು ವಿದ್ಯಾಾರ್ಥಿಗಳಲ್ಲಿ ಕರ್ತೃತ್ವ ಶಕ್ತಿಿ ಮತ್ತು ಕಲ್ಪನಾಶಕ್ತಿಿಯನ್ನು ಬೆಳೆಸುವುದರ ಜೊತೆಗೆ ತಾನೂ ಸಹ ವಿದ್ಯಾಾರ್ಥಿಯಾಗಿರುತ್ತಾಾನೋ ಅಂತಹವರು ಮಾತ್ರ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ.
ಮಕ್ಕಳಿಗೆ ಪಾಠ ಮಾಡುವುದು, ಆಟ ಆಡಿಸುವುದು ಮಾತ್ರ ಶಿಕ್ಷಕರ ಕೆಲಸವಲ್ಲ. ಅವರಲ್ಲಿರುವ ಪ್ರತಿಭೆಯನ್ನು ಪತ್ತೆೆ ಮಾಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಯ ಆಸಕ್ತಿಿ ಬೆಳೆಸಿ ಅದರಲ್ಲಿ ಅವರು ಮುಂದೆ ಬರುವಂತೆ ಮಾಡುವುದು ಅವಶ್ಯಕ. ವಿವಿಧ ಕಲೆಗಳಲ್ಲಿ, ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಇಂತಹ ಕೆಲಸ ಮಾಡಿದ್ದರಿಂದಲೇ ಈ ಬಾರಿಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿ ಭದ್ರಾಾವತಿ ತಾಲೂಕು ಸುಲ್ತಾಾನಮಟ್ಟಿಿ ಸರ್ಕಾರಿ ಪ್ರಾಾಥಮಿಕ ಶಾಲೆಯ ಶಿಕ್ಷಕ ಎಂ. ಆರ್. ರೇವಣಪ್ಪ ಅವರಿಗೆ ದಕ್ಕಿಿದೆ.   
ರೇವಣಪ್ಪ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲೆಯನ್ನು ಪ್ರದರ್ಶಿಸಿದವರು. ಪಾಠದ ಜೊತೆಗೆ ಮಕ್ಕಳಲ್ಲಿ ಜಾನಪದ ಕಲೆಯನ್ನು ಬೋಧಿಸಿ, ಅದು ಕರಗತವಾಗುವಂತೆ ಮಾಡಿದವರು, ಸ್ವತಃ ಜಾನಪದ ಹಾಡುಗಳನ್ನು ಕಟ್ಟಿಿದವರು, ನಾಲ್ಕು ಬಾರಿ ಗಣರಾಜ್ಯೋೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದವರು, ತಮ್ಮ ವಿದ್ಯಾಾರ್ಥಿಗಳು ರಾಜ್ಯ ಮಟ್ಟದಲ್ಲಿ ಕಲಾಪ್ರತಿಭೆ ಮೆರೆಯುವಂತೆ ಮಾಡಿದವರು, ದಾನಿಗಳಿಂದ ನೆರವಿನಿಂದ ಶಾಲೆಯನ್ನು ಮಾದರಿಯನ್ನಾಾಗಿ ಮಾಡಿದ್ದಲ್ಲದೆ, ಸ್ಮಾಾರ್ಟ್ ಕ್ಲಾಾಸನ್ನು ಆರಂಭಿಸಿದವರು. ರಂಗಕಲಾವಿದರು. ಒಟ್ಟಿಿನಲ್ಲಿ ಉತ್ತಮ ಶಾಲೆ ಎಂಬ ಪ್ರಶಸ್ತಿಿ ಬರಲು ಕಾರಣರಾದವರು.
 ಮೂಲತಃ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮಾದಾಪುರ- ಕೆಂಚನಾಲಾದವರಾದ ರೇವಣಪ್ಪ, 20 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿಿದ್ದಾಾರೆ. ಪ್ರಾಾಥಮಿಕ ಶಿಕ್ಷಣವನ್ನು ತವರಿನಲ್ಲಿ, ಹೈಸ್ಕೂಲು ಮತ್ತು ಪಿಯುವನ್ನು ಆನಂದಪುರದಲ್ಲಿ ಮುಗಿಸಿ ಟಿಸಿಎಚ್ ಓದಿ ಶಿಕ್ಷಕರಾದವರು. ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು  ಮುಂದು. ಕೋಲಾಟ, ಡೊಳ್ಳು,  ಸುಗ್ಗಿಿ ಕುಣಿತದ ಜೊತೆ ಸೋಬಾನೆಪದ ಹೇಳುವುದರಲ್ಲಿ ನಿಸ್ಸೀಮರು. ಸಂಗ್ಯಾಾಬಾಳ್ಯಾಾ ನಾಟಕ ನಿರ್ದೇಶಿಸಿ ನಟಿಸಿದ್ದಾಾರೆ. ಜೊತೆಗೆ ರಾಜಾ ಬ್ರಹ್ಮ, ಶನಿ ಪ್ರಭಾವ ಎಂಬ ನಾಟಕದಲ್ಲಿ ಅಭಿನಯಿಸಿದ್ದಾಾರೆ.
ಜಾನಪದದಲ್ಲಿ ನೂರಾರು ಹಾಡು ಕಟ್ಟಿಿ ಹಾಡಿಸಿದ್ದಾಾರೆ. ಭದ್ರಾಾವತಿಯಲ್ಲಿ ಜನಪದ ಕಲಾ ತಂಡವನ್ನು ರಚಿಸಿದ್ದಾಾರೆ. ಉತ್ತಮ ಕಲಾಕಾರರೂ ಆಗಿರುವ ಇವರು ಗೋಡೆಗಳ ಮೇಲೆ ಮಾಂದವಾಗಿ ಚಿತ್ರಕಲೆ ಬಿಡಿಸಿ ಹೆಸರಾಗಿದ್ದಾಾರೆ. ಸ್ವಚ್ಛ ಭಾರತ್ ಜಾಗೃತಿಗಾಗಿ ಹತ್ತಾಾರು ಹಾಡನ್ನು ರಚಿಸಿದ್ದಾಾರೆ. ರಶ್ಯಾಾ, ಸೌದಿ ಅರೇಬಿಯಾ, ಖಜಕಿಸ್ಥಾಾನದಲ್ಲಿ ಜಾನಪದ ಕಾರ್ಯಕ್ರಮ ನೀಡಿದ್ದಾಾರೆ. ಅಂಡಮಾನ್ ಮತ್ತು ಪೋರ್ಟ್‌ಬ್ಲೇರ್‌ನಲ್ಲಿ ನಡೆದ ಸಾಂಸ್ಕೃತಿಕ ಮೇಳದಲ್ಲೂ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾಾರೆ. ಶಾಲೆಗೆ ಟಿವಿ ಪ್ರೊಜೆಕ್ಟರ್, ಮೈಕ್ ವ್ಯವಸ್ಥೆೆಯನ್ನು ದಾನಿಗಳ ನೆರವಿನಿಂದ ಮಾಡಿಸಿದ್ದಾಾರೆ. ಶಾಲೆಯ ಅಭಿವೃದ್ಧಿಿಯಲ್ಲೂ ಇವರ ಪಾತ್ರ ಹಿರಿದು. 16 ವರ್ಷದಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಿ ತಾಲೂಕು ಅರಳಸುರುಳಿಯಲ್ಲಿ ಕೆಲಸ ಮಾಡಿದ್ದು ಅಲ್ಲಿಯೂ ಶಾಲೆಗೆ ಮಾದರಿ ಶಾಲೆ ಪ್ರಶಸ್ತಿಿ ದಕ್ಕುವಂತೆ ಮಾಡಿದ್ದರು.
ಜಿಲ್ಲಾಾ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ, ಶಿಕ್ಷಕರ ಗೃಹ ನಿರ್ಮಾಣ ಸಂಘದ ಸದಸ್ಯರಾಗಿದ್ದಾಾರೆ. ಶಾಲೆಯ ಫಲಿತಾಂಶ ಉತ್ತಮವಾಗಿ ಬರುವಂತೆ ಮಾಡುವುದರ ಜೊತೆಗೆ ಮಕ್ಕಳು ಪಠ್ಯೇತರ ಆಸಕ್ತಿಿ ಬೆಳೆಸಿಕೊಳ್ಳುವಲ್ಲಿ ಸತತ ಶ್ರಮ ವಹಿಸುತ್ತಿಿದ್ದಾಾರೆ.
ಇವರ ಈ ಎಲ್ಲ ಸಾಧನೆಯನ್ನು ಗಮನಿಸಿ ರಾಜ್ಯ ಸರ್ಕಾರ ಈ ಬಾರಿಯ ಶಿಕ್ಷಕ ದಿನಾಚರಣೆಯಂದು ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿಯನ್ನು ಪ್ರದಾನ ಮಾಡಿದೆ.
published on sept 8
................................................ 

No comments:

Post a Comment