Monday 24 September 2018

ಅಪೂರ್ವ ಕಲಾಕಾರ  
ರತ್ನಾಾಕರ ಭಂಡಾರಿ


ವಿಶೇಷ ರೀತಿಯ ಸಂತಸದೊಂದಿಗೆ ನಾವು ಉಸಿರಾಡುವಂತೆ ಮಾಡುವುದೇ ಕಲೆ ಎಂಬ ಮಾತಿದೆ. ನಮ್ಮ ಮನಸ್ಸು ಚಿತ್ರಗಳನ್ನು ನೋಡಿ ಆನಂದಿಸುತ್ತದೆ. ಆದರೆ ಎಷ್ಟೋೋ ಬಾರಿ  ಆ ಚಿತ್ರದ ಬಗ್ಗೆೆ ಹಾಗೂ ಅದರ ಕಲಾಕಾರನ ಬಗ್ಗೆೆ ಏನೂ ಗೊತ್ತಿಿರುವುದಿಲ್ಲ. ಆದರೆ ಒಂದು ರೀತಿಯ ವಿಶೇಷ ಸಂತೋಷವನ್ನು ಮಾತ್ರ ಅದು ಕೊಡುತ್ತದೆ. ಅದೇ ಕಲೆ. ಕಲೆಯನ್ನು ಹೊರತುಪಡಿಸಿ ಜಗತ್ತೇ ಇಲ್ಲ ಎಂದೂ ಸಹ ತತ್ವಜ್ಞಾಾನಿಗಳು ಹೇಳುತ್ತಾಾರೆ.
ಇತ್ತೀಚೆಗೆ ಸತತ 6 ಗಂಟೆಯ ಕಾಲ ಒಂದೇ ಸ್ಥಳದಲ್ಲಿಯೇ ವ್ಯಕ್ತಿಿಗಳ ಭಾವಚಿತ್ರ, ರೇಖಾಚಿತ್ರ ಮತ್ತು ವ್ಯಂಗ್ಯಚಿತ್ರಗಳನ್ನು ಬಿಡಿಸುವ ಮೂಲಕ ಕೊಡಗು ಪ್ರಕೃತಿ ವಿಕೋಪದ ಪರಿಹರ ನಿಧಿಗೆ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹಿಸಿ ಜನರ ಗಮನ ಸೆಳೆದವರು ಶಿರಾಳಕೊಪ್ಪದ ಕಲಾವಿದ ರತ್ನಾಾಕರ ಭಂಡಾರಿ.  ಕಲೆಯ ಮೂಲಕ ಸಂತ್ರಸ್ತರಿಗೆ ಹೇಗೆ ನೆರವಾಗಬಹುದು ಎನ್ನುವುದನ್ನು ಈ ಮೂಲಕ ಅವರು ತೋರಿಸಿಕೊಡುವ ಮೂಲಕ ಮಾನವೀಯತೆಯನ್ನೂ ಮೆರೆದಿದ್ದಾಾರೆ. 
ರತ್ನಾಾಕರ ಅವರು ವೈವಿಧ್ಯಮವಾಗಿ ಕಲೆಯನ್ನು ನಿರೂಪಿಸಬಲ್ಲವರು. ಕಲೆಯ ಬಗ್ಗೆೆ ತುಡಿತ ಅವರಲ್ಲಿರುವುದರಿಂದ ನಾವೀನ್ಯತೆಗೆ ಒತ್ತು ಕೊಡುತ್ತಾಾರೆ. ಅವರು ನಿರ್ಮಿಸುವ ಟ್ಯಾಾಬ್ಲೋೋಗಳು, ಬಿಡಿಸುವ ವಾಲ್ ಪೇಂಟಿಂಗ್‌ಗಳು, ಟ್ಯಾಾಟೂಸ್, ಹೂವಿನ ಅಲಂಕಾರ, ಬಲೂನ್ ಅಲಂಕಾರ, ವೇದಿಕೆ ನಿರ್ಮಾಣ ಮೊದಲಾದವು ವಿಶೇಷವಾಗಿರುತ್ತವೆ. ದಸರಾ, ಗಣೇಶ ಚವತಿ ಸಂದರ್ಭದಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ. ಏಕೆಂದರೆ ಟ್ಯಾಾಬ್ಲೋೋ ಮತ್ತು ಮಂಟಪ ರಚನೆಗೆ ಆಹ್ವಾಾನ ಬರುತ್ತದೆ. ಕೆಲವು ವರ್ಷಗಳ ಹಿಂದೆ ಮೈಸೂರು ದಸರಾದಲ್ಲಿ ಮುರುಡೇಶ್ವರದ ಶಿವನ ಟ್ಯಾಾಬ್ಲೋೋ ನಿರ್ಮಿಸಿ ಪ್ರಖ್ಯಾಾತರಾಗಿದ್ದಾಾರೆ. ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲೂ ನೆರವಾಗುತ್ತಾಾರೆ.
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್‌ಸ್‌‌ನಲ್ಲಿ ಪದವಿ ಪಡೆದ ನಂತರ ವಿಜ್ಯುವೆಲ್ ಆರ್ಟ್‌ಸ್‌‌ನಲ್ಲಿಯೂ ಅಧ್ಯಯನ ಮಾಡಿ ಪದವಿ ಪಡೆದು, ಕೆಲವು ಕಾಲ ಬೆಂಗಳೂರಿನಲ್ಲಿಯೇ ಚಿತ್ರಕಲೆ ಕಲಿಸುತ್ತ ವಿವಿಧ ಅವಕಾಶಗಳನ್ನು ಪಡೆದು ನೆಲೆಸಿದ್ದರು. ಈ ಸಂದರ್ಭದಲ್ಲಿ ನೂರಾರು ಚಿತ್ರಗಳನ್ನು ಬರೆದಿದ್ದಾಾರೆ. ಅವುಗಳ ಪ್ರದರ್ಶನವನ್ನೂ ಹತ್ತಾಾರು ಬಾರಿ ಮಾಡಿದ್ದಾಾರೆ.
 ಶಿರಾಳಕೊಪ್ಪದಲ್ಲಿಯೇ ಸದ್ಯ ನೆಲೆಸಿರುವ ಭಂಡಾರಿ ಅವರು, ಈಗ ವ್ಯಂಗ್ಯಚಿತ್ರ, ವಾಲ್‌ಪೇಂಟಿಂಗ್‌ಗಳನ್ನು ರಚಿಸುತ್ತಿಿದ್ದಾಾರೆ. ವಿವಿಧೆಡೆಯಿಂದ ಕೆಲಸದ ಅವಕಾಶ ಬಂದಾಗ ಅವುಗಳನ್ನು ಮಾಡಿಕೊಡುತ್ತಾಾರೆ. ಇವರ ಕಲಾಕೌಶಲ್ಯವನ್ನು ಗಮನಿಸಿ ಸ್ಥಳೀಯ ಜೆಸಿಐ ಸೇರಿದಂತೆ ಇನ್ನಿಿತರ ಸಂಘ-ಸಂಸ್ಥೆೆಗಳು ಸನ್ಮಾಾನಿಸಿ ಗೌರವಿಸಿವೆ.
ಇವೆಲ್ಲವುಗಳ ಜೊತೆಗೆ ಫ್ಯಾಾನ್ಸಿಿ ಡ್ರೆೆಸ್, ಮಾಡೆಲ್ ವರ್ಕ್, ಕಟೌಟ್‌ಗಳನ್ನೂ ತಯಾರಿಸುತ್ತಾಾರೆ. ಇವರ ಕೈಚಳಕದಿಂದ ಮೂಡಿಬಂದ ಕಲೆಗಳು ಎಲ್ಲೆೆಡೆ ಪ್ರಸಿದ್ಧವಾಗಿವೆ. ಆದರೆ ಇನ್ನೂ ಹೆಚ್ಚಿಿನ ಅವಕಾಶಕ್ಕಾಾಗಿ ಇವರು ಕಾಯುತ್ತಿಿದ್ದಾಾರೆ. ಜಿಲ್ಲೆೆಯಲ್ಲಿ ಇವರ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಾಹಿಸುವ ಅವಶ್ಯಕತೆ ಇದೆ. ಇಂತಹ ಅಪೂರ್ವ ಕಲಾವಿದರು ಜಿಲ್ಲೆೆಯವರಾಗಿರುವುದೇ ಮಹತ್ವದ್ದು. ಈ ಹಿನ್ನೆೆಲೆಯಲ್ಲಿ ಜಿಲ್ಲೆೆಯ ವಿವಿಧೆಡೆ ಇವರ ಕಲಾಪ್ರತಿಭೆ ಬೆಳಗುವ ಸಂದರ್ಭವನ್ನು ಸಾರ್ವಜನಿಕರು, ಸಂಘಟನೆಗಳು ಕಲ್ಪಿಿಸಬೇಕಿದೆ. 
ಸಾರ್ವಜನಿಕರು ಇಂತಹ ಕಲಾಕಾರರನ್ನು ಗುರುತಿಸುವ ಕೆಲಸವಾಗಬೇಕಿದೆ. ಅಪೂರ್ವ ಕಲೆಗಳನ್ನು ಬಿಡಿಸುವ, ನಿರ್ಮಿಸುವ ಕೌಶಲವನ್ನು ಹೊಂದಿದ್ದರೂ ಸಹ ಎಷ್ಟೋೋ ಬಾರಿ ಅವಕಾಶ ಸಿಗದೆ ಸುಮ್ಮನಿರುವಂತಾಗಿದೆ. ಕಲಾಕಾರರಿಗೆ ಉತ್ತಮ ಅವಕಾಶ ಒದಗಿ ಬಂದಾಗ ತಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಇವರು, ಕೊಡಗು ನೆರೆ ಸಂತ್ರಸ್ತರಿಗೆ ಹೆಚ್ಚೆೆಂದರೆ ಒಂದು ಸಾವಿರ ರೂ. ವನ್ನು ನಾನು ಕೊಡಬಲ್ಲವನಾಗಿದ್ದೆೆ. ಆದರೆ ಚಿತ್ರ ಬಿಡಿಸುವ ಮೂಲಕ ವಿನೂತನ ಮಾದರಿಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಿ ಸುಮಾರು 14 ಸಾವಿರ ರೂ. ವನ್ನು ಸಂಗ್ರಹಿಸಿದೆ ಎನ್ನುತ್ತಾಾರೆ. 
22.9.18
..............................................

   

No comments:

Post a Comment