Saturday 1 September 2018


ಇಂದು ರಂಗಪ್ರವೇಶ
ರಚನಾ


ನಾಟ್ಯವು ದೇಹ ಮತ್ತು ಆತ್ಮದ ನಡುವಿನ ಸಂಭಾಷಣೆ ಎಂಬ ಮಾತಿದೆ. ದೇಹದಷ್ಟೇ ಆತ್ಮವೂ ಇಲ್ಲಿ ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತದೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆೆ ಮೊದಲ ಸ್ಥಾಾನ. 
ಆರ್. ರಚನಾ ಶಿವಮೊಗ್ಗದಲ್ಲಿ ಯುವ ಭರತನಾಟ್ಯ ಕಲಾವಿದೆ. 15 ವರ್ಷದಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಿತು ರಂಗಪ್ರವೇಶಕ್ಕೆೆ ಸನ್ನದ್ಧಳಾಗಿದ್ದಾಾಳೆ. ಸೆ. 1ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಂಗಪ್ರವೇಶ ನಡೆಯಲಿದೆ. 
ಮೂಲತಃ ಸಾಗರ ತಾಲೂಕಿನ ಭೀಮನಕೋಣೆಯವರಾದ ರಚನಾ ಅವರ ತಂದೆ ರವಿ ಮತ್ತು ತಾಯಿ ಶಾಲಿನಿ. ನಗರದಲ್ಲೇ ವಿದ್ಯಾಾಭ್ಯಾಾಸ ಮಾಡುತ್ತ ಭರತನಾಟ್ಯವನ್ನು ವಿನೋಬನಗರದ ಪುಷ್ಪಾಾ ಪರ್ಫಾರ್ಮಿಂಗ್ ಕಲಾ ಕೇಂದ್ರದಲ್ಲಿ ಆರಂಭಿಸಿ ಈಗ ವಿದ್ವತ್ ಮುಗಿಸಿದ್ದಾಾರೆ. ಇನ್ನೊೊಂದೆಡೆ, ಜೆಎನ್‌ಎನ್‌ಸಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಎಂ. ಟೆಕ್ ಮಾಡಲು ಸನ್ನದ್ಧಳಾಗಿದ್ದಾಾರೆ. ಇದರ ಮಧ್ಯೆೆ ರಂಗಪ್ರವೇಶ ಮಾಡುವ ಮೂಲಕ ಈ ರಂಗದಲ್ಲಿ ಇನ್ನಷ್ಟು ಛಾಪು ಮೂಡಿಸಲು ಸಿದ್ಧರಾಗಿದ್ದಾಾರೆ.
 ತನ್ನ 8ನೆಯ ವಯಸ್ಸಿಿನಲ್ಲೇ ಭರತನಾಟ್ಯ ಆರಂಭಿಸಿದ ಇವರು, ಕಲಾಸೂಕ್ಷ್ಮತೆ, ಸಮರ್ಪಣಾ ಭಾವದಿಂದ ಅಭ್ಯಾಾಸ ಮಾಡಿದರು. ಶಾಲಾ ದಿನಗಳಲ್ಲಿಯೇ ಇದರಲ್ಲಿ ಸಾಧನೆ ಮಾಡಿದ ಕೀರ್ತಿ ಇವರದ್ದು. 2006ರಲ್ಲಿ ಕರ್ನಾಟಕ ಪ್ರೌೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದಿದ್ದಾಾರೆ. 2008ರಲ್ಲಿ ಇದೇ ಮಂಡಳಿ ನಡೆಸಿದ ಸಂಗೀತ ಜೂನಿಯರ್ ಗ್ರೇಡ್‌ನಲ್ಲಿಯೂ ಪ್ರಥಮ ಸ್ಥಾಾನ ಇವರಿಗ ದಕ್ಕಿಿದೆ. ಇದರ ಮಧ್ಯೆೆಯೇ ಹಲವೆಡೆ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿರುವುದರ ಜೊತೆಗೆ ಸನ್ಮಾಾನ, ಗೌರವಗಳನ್ನು ಪಡೆದಿದ್ದಾಾರೆ.
ಶಿವಮೊಗ್ಗದ ನೃತ್ಯ ಕಲಾವೃಂದ 2007ರಲ್ಲಿ ನಡೆಸಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯದಲ್ಲಿ ಪ್ರಥಮ ಸ್ಥಾಾನ, 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಲಯ ಮಟ್ಟದ ಪ್ರತಿಭೋತ್ಸವದಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ತೃತೀಯ ಸ್ಥಾಾನ, ಮಂಡ್ಯದಲ್ಲಿ 2008ರಲ್ಲಿ ಜರುಗಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ, 2008ರಲ್ಲಿ ಬಾಲಪ್ರತಿಭೆ ವಿಭಾಗದಲ್ಲಿ ಪ್ರಥಮ ಸ್ಥಾಾನವನ್ನು ಪಡೆದಿದ್ದಾಾರೆ. ಜೊತೆಗೆ ಮಂಡ್ಯದಲ್ಲಿ ನಾಟ್ಯವರ್ಷಿಣಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಕಲಾರತ್ನ ಮತ್ತು ವಿಶ್ವಚೇತನ ಪ್ರಶಸ್ತಿಿಯನ್ನು ಮುಡಿಗೇರಿಸಿಕೊಂಡಿದ್ದಾಾರೆ.    
ಇದರ ಜೊತೆಗೆ ಹಲವೆಡೆ ಸನ್ಮಾಾನಗಳು ನೀಡಲ್ಪಟ್ಟಿಿವೆ. ಗಣಪತಿ ಉತ್ಸವ, ದಸರಾ, ಕೃಷ್ಣ ಜನಾಷ್ಟಮಿ, ರಾಮನವಮಿ ಸೇರಿದಂತೆ ವಿವಿಧ ಉತ್ಸವಗಳಲ್ಲಿ, ಬಂಗಾರುಮಕ್ಕಿಿಯ ಮಲೆನಾಡು ಉತ್ಸವ, ಬೀರೂರಿನ ಅರಳು ಮಲ್ಲಿಗೆ ಉತ್ಸವ, ಭದ್ರಾಾವತಿ, ಮೈಸೂರಿನ ಜಗನ್ಮೋೋಹನ ಅರಮನೆ, ಮಂಡ್ಯದಲ್ಲಿ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾಾರೆ. ಶಿವಮೊಗ್ಗದಲ್ಲಿ ಸಂಸ್ಕೃತಿ ಸೊಬಗು ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆ ನೃತ್ಯ ಪ್ರದರ್ಶಿಸಿದ ಹಿರಿಮೆ ಇವರದ್ದು. ಬೆಂಗಳೂರು ದೂರದರ್ಶನದವರು ನಡೆಸಿದ ಹೆಜ್ಜೆೆಗೊಂದು ಗೆಜ್ಜೆೆ ಎಂಬ ಶಾಸ್ತ್ರೀಯ ಭರತನಾಟ್ಯಕ್ಕೂ ಆಯ್ಕೆೆಯಾಗಿ ಪ್ರದರ್ಶನ ನೀಡಿದ್ದಾಾರೆ. ಇದೇ ಚಾನೆಲ್‌ನವರು ನಡೆಸಿದ ಮಧುರಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲೂ  ಭಾಗವಹಸಿದ್ದರು. ಮಲೇಷ್ಯಾಾದಲ್ಲಿ ಜರುಗಿದ 15ನೆಯ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತೀಯ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲೂ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ. ರಾಜ್ಯ ಸರ್ಕಾರದ ಕಲಾಶ್ರೀ ಪ್ರಶಸ್ತಿಿಗೂ ಭಾಜನರಾಗಿದ್ದಾಾರೆ. 
ಇಷ್ಟೆೆಲ್ಲ ಕಾರ್ಯಕ್ರಮ ನೀಡಿ ಅಪಾರ ಜನಮನ್ನಣೆ ಗಳಿಸಿರುವ ರಚನಾ, ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿರ್ಧರಿಸಿದ್ದಾಾರೆ. ಓದಿನ ಜೊತೆ ಕಲೆಯನ್ನೂ ಕೊಂಡೊಯ್ಯುತ್ತೇನೆ. ಇನ್ನೂ ಹೆಚ್ಚಿಿನ ಅಭ್ಯಾಾಸ ಮಾಡುತ್ತಲೇ ಕಾರ್ಯಕ್ರಮವನ್ನೂ ನೀಡುತ್ತೇನೆ ಎನ್ನುತ್ತಾಾರೆ.
1 sept,2018

.....................................
,      

No comments:

Post a Comment