Thursday 25 January 2018

ಯುವ ರಂಗನಿರ್ದೇಶಕ
ಪ್ರಮೋದ್ ಹಂಚಿನಮನಿ



ಶಿವಮೊಗ್ಗದ ರಂಗಭೂಮಿಗೆ ಹೊಸ ನಿರ್ದೇಶಕರು ಬರುತ್ತಲೇ ಇದ್ದಾರೆ. ಇತ್ತೀಚೆಗೆಗೆ ಸಾಕಷ್ಟು ಯುವಕ-ಯುವತಿಯರು ಹೆಸರಾಂತ ರಂಗಕರ್ಮಿಗಳ ಸಂಸ್ಥೆಯಿಂದ ತರಬೇತಿ ಪಡೆದು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೃಜನಾತ್ಮಕ ರಂಗಭೂಮಿಯ ಸೃಷ್ಟಿ ಸಾಧ್ಯವಾಗಿದೆ. ಪ್ರಮೋದ್ ಡಿ. ಹಂಚಿನಮನಿ ಇಂತಹ ಯುವ ನಿರ್ದೇಶಕರಲ್ಲಿ ಒಬ್ಬ. ಇನ್ನೂ ವಿದ್ಯಾರ್ತಿಯಾಗಿದ್ದರೂ ಅಪಾರ ಅನುಭವವನ್ನು ಪಡೆಯುತ್ತ, ರಂಗತಂಡಗಳಿಂದ ತರಬೇತಿ ಪಡೆದು ಇತ್ತೀಚೆಗೆ ತನ್ನ ಮೊದಲನೆಯ ನಾಟಕವನ್ನು ನಿರ್ದೇಶಿಸಿದ್ದಾನೆ. 
ಬೆಂಗಳೂರಿನ ರಂಗಶಂಕರದವರು ಇತ್ತೀಚೆಗೆ ಮೇಕಿಂಗ್ ಥಿಯೇಟರ್ ಎಂಬ ಕಾರ್ಯಕ್ರಮ ನಡೆಸಿದ್ದರು. ಇದರಲ್ಲಿ ಯುವ ನಿರ್ದೇಶಕರಿಗೆ ಒಂದು ತಿಂಗಳ ಕಾರ್ಯಾಗಾರ ನಡೆಸಲಾಗಿತ್ತು. ಅದರಲ್ಲಿ ಸಹ್ಯಾದ್ರಿ ರಂಗತರಂಗದ ಪ್ರಮೋದ್ ಭಾಗಿಯಾಗಿ ರಂಗಭೂಮಿಯ ಕೆಲವು ವಿಷಯಗಳನ್ನು ಮನನ ಮಾಡಿಕೊಂಡಿದ್ದಾನೆ.  ತಾನು ಕಲಿತದ್ದನ್ನು ತನ್ನ ತಂಡದವರಿಗೆ ತಿಳಿಸಲು ಮತ್ತು ಕಲಿಸಲು ಶ್ರಮಿಸಿದ್ದಾನೆ. ಆತನ ಶ್ರಮದ ಫಲವಾಗಿ ಶ್ರೀರಂಗರ ನಾಟಕ ಶೋಕ ಚಕ್ರ ಮೊನ್ನೆಯಷ್ಟೇ ಪ್ರದರ್ಶಿಸಲ್ಪಟ್ಟಿದೆ.
ಪ್ರಮೋದ್ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿದ್ದಾನೆ. ನಗರದ ಜಯದೇವ ಬಡಾವಣೆಯ ವಾಸಿಯಾದ ಈತ, ರಂಗಭೂಮಿಯಲ್ಲಿ ತೊಡಗಿಸಿಕೊಂಡು ಕೆಲವೇ ವರ್ಷಗಳು ಕಳೆದಿವೆ. ಸ್ಟೇಜ್ ವರ್ಕ್, ನಟನೆ, ಸೆಟ್ ವರ್ಕ್ ಮಾಡಿದ್ದಾನೆ, ಜಲಗಾರ, ಸಿಂಗಾರೆವ್ವದಲ್ಲಿ ನಟಿಸಿದ್ದಾನೆ. ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾದ ಯವಕ್ರೀತ ನಾಟಕದಲ್ಲೂ ಪಾತ್ರ ವಹಿಸಿದ್ದನು. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾನೆ, ಇಷ್ಟೆಲ್ಲಾ ಅನುಭವ ಪಡೆದು ನಿರ್ದೇಶಕನಾಗುತ್ತಿದ್ದಾನೆ. ಇದಕ್ಕೆ ಅವಕಾಶ ದೊರೆತಿದ್ದು ರಂಗಶಂಕರದಲ್ಲಿ. ಸಹ್ಯಾದ್ರಿ ರಂಗತರಂಗದ ಕಾಂತೇಶ್ ಕದರಮಂಡಲಗಿ ಪ್ರಮೋದ್‌ನಲ್ಲಿರುವ ಜಾಣ್ಮೆಯನ್ನು ಗಮನಿಸಿ ಆತ ಉತ್ತಮ ನಿರ್ದೇಶಕನಾಗಬಲ್ಲ ಎನ್ನುವುದನ್ನು ಯೋಚಿಸಿ ರಂಗಶಂಕರದ ತರಬೇತಿಗೆ ಕಳುಹಿಸಿಕೊಟ್ಟಿದ್ದರು.
ಅಲ್ಲಿಂದ ಬಂದ ನಂತರ ನಾಟಕ ನಿದೇಸನ ಅಮಡಿ ಭರವಸೆಯ, ಯಶಸ್ವಿ ನಿರ್ದೇಶಕನಾಗಬಲ್ಲ ಎಂಬ ಆಶಾವಾದ ಮೂಡಿಸಿದ್ದಾನೆ. ಶಿವಮೊಗ್ಗದಿಂದ ತರಬೇತಿಗೆ ಆಯ್ಕೆಯಾದ ಏಕೈಕ ಯುವಕ ಈತ. ಮೊನ್ನೆಯ ಶೋಕ ಚಕ್ರ ನಾಟಕದ ಆನಂತರ ಈತನಿಗೂ ಹುರುಪು ಬಂದಿದೆ. ಈ ನಾಟಕದ ಯಶಸ್ಸು ಇನ್ನಷ್ಟು ಉತ್ತೇಜನ ನೀಡಿದೆ. ನೀನಾಸಂ ಮೂಲಕ ಇನ್ನೂ ಹೆಚ್ಚಿನ ತರಬೆತಿ ಪಡೆಯಲು ನಿರ್ಧರಿಸಿದ್ದಾನೆ.
ನಗರದ ಅದಿಚುಂಚನಗಿರಿ ಹೈಸ್ಕೂಲು ಮತ್ತು ನ್ಯಾಶನಲ್ ಪಿಯು ಕಾಲೇಜಿನಲ್ಲಿ ಓದಿರುವ ಈತ, ಆ ಸಮಯದಲ್ಲ್ಲೇ ಏಕಪಾತ್ರಾಭಿನಯ, ಸಿನಿಮಾಗಳಲ್ಲಿ ಆಸಕ್ತಿಯನ್ನು ಹೊಂದಿದ್ದನು. ಇದು ಆತನಿಗೆ ರಂಗಭೂಮಿಗೆ ಪದಾರ್ಪಣೆ ಮಾಡಲು ಮೆಟ್ಟಿಲಾಯಿತು. ಸಾಕಷ್ಟು ಏಕಪಾತ್ರಾಭಿನಯ ಮಾಡಿ ಬಹುಮಾನ ಗಳಿಸಿರುವ ಪ್ರಮೋದ್, ಡಾನ್ಸ್‌ನಲ್ಲೂ ಪರಿಣಿತ. ಕವಿತೆಯನ್ನು ರಚಿಸುವಲ್ಲಿ ಆಸಕ್ತಿ ಹೊಂದಿದ್ದಾನೆ. ಇನ್ನೂ ವಿಶೇಷವೆಂದರೆ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳಿಗೆ ಏರ್ಪಡಿಸುವ ರಂಗಶಿಬಿರದಲ್ಲಿ ಈತ ಕಾಂತೇಶ್ ಕದರಮಂಡಲಗಿ ಜೊತೆ ಕೆಲಸ ಮಾಡಿ ಸಾಕಷ್ಟು ಅನುಭವ ಹೊಂದಿದ್ದಾನೆ.
ಈ ಕ್ಷೇತ್ರದಲ್ಲಿ ಕಲಿಯುವುದು ಇನ್ನೂ ಸಆಕಷ್ಟಿದೆ. ಕಲಿಯಬೇಕೆಂಬ ಉತ್ಕಟೇಚ್ಛೆ ಇದೆ. ರಂಗನಿರ್ದೇಶಕನಾಗಿ ಸಾಧನೆ ಮಾಡಬಲ್ಲೆ ಎನ್ನುವುದು  ಇತ್ತೀಚೇಗೆ ಪ್ರದರ್ಶನವಾದ ಶೋಕ ಚಕ್ರದಿದಮ ಅರಿವಾಗಿದೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ, ತರಬೇತಿ ಪಡೆಯುತ್ತೇನೆ. ಮುಂದಿನ ದಿನಗಳಲ್ಲಿ ಸಾದ್ಯವಾದಷ್ಟು ಹೆಚ್ಚೆಚ್ಚು ನಟಕಗಳನ್ನು ನೊಡುವ ಮುಲಕ, ನಿದೇಶ್ಕರನ್ನು ಭೇಟಿ ಮಡುವದುರಿದಮ ಸೂಕ್ಷ್ಮ ಅಂಶಗಳನ್ನು ತಿಳಿದುಕೊಳ್ಳುತ್ತೇನೆ. ಆ ಮೂಲಕ ರಂಗಭೂಮಿಯಲ್ಲಿ ಛಾಪನ್ನು ಮೂಡಿಸುತ್ತೇನೆಂಬ ಆಶಾವಾದ ಪ್ರಮೋದ್‌ನದ್ದು.   
 ಈತನಿಂದ ನಾಡಿಗೆ ಇನ್ನಷ್ಟು ರಂಗಸೇವೆ ದೊರಕಬೇಕಿದೆ. ಶಿವಮೊಗ್ಗದ ರಂಗಭೂಮಿ ತನ್ನದೇ ಆದ ಹೆಸರನ್ನು ಹೊಂದಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಇದರ ಹೆಸರನ್ನು ಎತ್ತಿಹಿಡಿದ ನಿರ್ದೇಶಕರು, ಕಲಾವಿದರು ಇಲ್ಲಿದ್ದಾರೆ. ಅವರ ಸಾಲಿನಲ್ಲಿ ಪ್ರಮೋದ್ ನಿಲ್ಲುವಂತಾಗಬೇಕು.
2,12,17
...................................................

No comments:

Post a Comment