Thursday 25 January 2018

ನಟನಾಗಿ ಮಿಂಚಿದ
ರಂಗಕರ್ಮಿ ಹರಿಶರ್ವಾ  

ಇತ್ತೀಚೆಗೆ ಬಿಡುಗಡೆಯದ ಕಹಿ ಕನ್ನಡ ಸಿನಿಮಾವವನ್ನು ನೀವು ನೋಡಿರಬಹುದು. ಅದರಲ್ಲಿ ಕವಿಯಾಗಿ, ಪ್ರೇಮಿಯಾಗಿ, ಮಾದಕವಸ್ತುದಾಸನಾಗಿ ಮನತಟ್ಟುವ ಅಭಿನಯದ ಪಾತ್ರ ಮನಸೆಳೆಯುತ್ತದೆ. ಈ ಪಾತ್ರವನ್ನು ನಿರ್ವಹಿಸಿದವರು ನಗರದ ಯುವಕ ಹರಿಶರ್ವಾ ಶಾಸ್ತ್ರಿ. ಕಹಿ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿರುವ ಇವರು, ಸಿನಿಮಾದ ಪ್ರಧಾನ ಪಾತ್ರಧಾರಿ. ಈ ಮೂಲಕ ಸಾಕಷ್ಟು ಭರವಸೆಯನ್ನು ಚಿತ್ರರಂಗದಲ್ಲಿ ಮೂಡಿಸಿದ್ದಾರೆ.
ಜನರಲ್ಲಿ ವೈಚಾರಿಕ ಪ್ರಜ್ಞೆ ಬಿತ್ತುವಲ್ಲಿ ನಾಟಕಗಳ ಪಾತ್ರ ಪ್ರಮುಖವಾಗಿದೆ. ಜನರ ಮನಸ್ಸುಗಳನ್ನು ಬೆಸೆಯುವುದಕ್ಕೆ ನಾಟಕ ಅತ್ಯುತ್ತಮ ಮಾಧ್ಯಮ. ಅದೇ ರೀತಿ ಸಿನಿಮಾಗಳೂ ಸಹ ಉತ್ತಮ ಸಂದೇಶವನ್ನು ಸಾರುವಂತಿದ್ದರೆ ಅವುಗಳಿಂದಲೂ ಸಮಾಜ ಸುಧಾರಣೆ ಸಾಧ್ಯ. ಆದ್ದರಿಂದಲೇ ಈ ಕ್ಷೇತ್ರ ವ್ಯಕ್ತಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ.   
ನಾವು ಅಂಟಿಸಿಕೊಂಡ ಕಲೆಯ ಗೀಳು ನಮ್ಮನ್ನು ಎಂದಿಗೂ ಬಿಡುವುದಿಲ್ಲ. ಮನದಲ್ಲಿ ಅದು ಹೊಸತನಕ್ಕೆ ಹಾತೊರೆಯುತ್ತಲೇ ಇರುತ್ತದೆ. ನಗರದ ಹರಿಶರ್ವಾ ಶಾಸ್ತ್ರಿ ವಿದ್ಯಾರ್ಥಿ ದೆಸೆಯಲ್ಲೇ ಏಕಪಾತ್ರಾಭಿನಯ, ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು. ಆನಂತರ ಇಂಜಿನಿಯರಿಂಗ್ ಮುಗಿಸಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಸಿಕ್ಕರೂ ಇದರ ಗುಂಗಿನಿಂದ ಅವರಿಗೆ ಹೊರಬರಲಾಗಲೇ ಇಲ್ಲ. ಇದರಿದಂಆಗಿ ಆಕ್ಷೇತ್ರವನ್ನೇ ಬಿಟ್ಟು ಇಂದು ಸಂಪೂರ್ಣವಾಗಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಟನಾಗಿದ್ದಾರೆ.
ನಗರದ ರವೀಂದ್ರನಗರ ವಾಸಿಯಾಗಿರುವ ಹರಿಶರ್ವಾ, ಇತ್ತೀಚೆಗೆ ಬಿಡುಗಡೆಯಾದ ಕಹಿ ಕನ್ನಡ ಚಿತ್ರದಲ್ಲಿ ನಟನಾಗಿ ಅಭಿನಯಿಸಿದ್ದಾರೆ. ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಕೆಲವು ತಿಂಗಳು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಕನಸು ಬೇರೆಯದ್ದೇ ಆಗಿದ್ದರಿಂದ ಬಹುಕಾಲ ಆ ಕೆಲಸದಲ್ಲಿ ಮುಂದುವರೆಯಲು ಅವರಿಗೆ ಸಾದ್ಯವಾಗಲಿಲ್ಲ. ಇದೇ ವೇಳೆ ಕೆಲವು ನಿರ್ದೇಶಕರ ಸಲಹೆಯ ಮೇರೆಗೆ ರಂಗಭೂಮಿಯಲ್ಲಿ ಡಿಪ್ಲೊಮಾ ಪದವಿ ಪಡೆದರು. ಬಳಿಕ ಸುಮಾರು 7 ವರ್ಷದಿಂದ ರಂಗಭೂಮಿ ಜೊತೆ ನಂಟು ಹೊಂದಿದರು. 14ಕ್ಕೂ ಹೆಚ್ಚು ನಾಟಕದಲ್ಲಿ ನಟಿಸಿದರು. ಈ ನಾಟಕಗಳು ಬೆಂಗಳೂರು, ಕೊಲ್ಕೊತ್ತಾ, ಮೈಸೂರು ಸಹಿತ ರಾಜ್ಯದ ಹಲವೆಡೆ ಪ್ರದರ್ಶನಗೊಂಡಿವೆ.
 ಅವರು ಅಭಿನಯಿಸಿದ ನಾಟಕಗಳೆಂದರೆ, ರಾಜಕೋಟೆ ನಿರ್ದೇಶನದ ಒಂದಾನೊಂದು ಕಾಲದಲ್ಲಿ, ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಸಂಕ್ರಾಂತಿ ಪ್ರಕಾಶ್ ಬೆಳವಾಡಿ ನಿರ್ದೇಶನದ ಗೋರಾ, ನಾಗರಾಜ್ ನಿರ್ದೇಶನದ ಮೌನ, ಮಂಜುನಾಥ್ ಬಡಿಗೇರ್  ನಿರ್ದೇಶನದ ಪಂಚರಾತ್ರ ಮೊದಲಾದವು. ಭೃಂಗದ ಬೆನ್ನೇರಿ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ರಾಜ್ಯ ಮಟ್ಟದ ನಾಟಕ ಪ್ರದರ್ಶನದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದಿದೆ. ನಟನೆಗಾಗಿ ಹರಿಶರ್ವಾ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಲವು ನಿರ್ದೇಶಕರು ನಟನಾ ಕೌಶಲ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಖ್ಯಾತ ಗಾಯಕ ರಘು ದೀಕ್ಷಿತ್ ನಿರ್ಮಾಣದ, ಅರ್ಜುನ್, ಅಣತಿ ರವಿಕುಮಾರ್ ನಿರ್ದೇಶಿಸುತ್ತಿರುವ ಪ್ರದೇಶ ಸಮಾಚಾರ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೆರಡು ಸಿನಿಮಾಗಳಲ್ಲಿ ಅಭಿನಯಿಸಲು ಆಹ್ವಾನ ಬಂದಿದೆ. 2018ರಲ್ಲಿ ಇನ್ನೆರಡು ಸಿಮಿನಾಮಗಳು ಸೆಟ್ಟೇರಲಿವೆ.
ಮಲೆನಾಡಿನ ಕಲೆ, ಕವಿಮನಸುಗಳ ಹಿನ್ನೆಲೆ  ಮೂಲಕ ನಟನಾ ಕ್ಷೆತ್ರಕ್ಕೆ ನೆನೆಪಿನಲ್ಲಿ ಉಳಿಯುವಂತಹ ಕೊಡುಗೆ ನೀಡಲು ಪ್ರೇರೇಪಿಸಿದೆ. ನಟನೆಯನ್ನೇ ಉಸಿರನ್ನಾಗಿ ಮಾಡಿಕೊಂಡು ಬದುಕಬೇಕು. ಕಲಿಕೆಯ ಹಸಿವು ಇನ್ನೂ ಇದೆ. ಆದ್ದರಿಂದ ಹಲವು ಕಾರ್ಯಾಗಾರ, ತರಬೇತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲಿನ ಅನುಭವಗಳ ಮೂಲಕ ಸಶಕ್ತ ನಟ ಮತ್ತು ನಿರ್ದೇಶಕನಾಗಬಲ್ಲೆ ಎನ್ನುವ ವಿಶ್ವಾಸವಿದೆ. ಆದರೆ ಎಂದಿಗೂ ಅಹಂ ಮತ್ತು ತಾರತಮ್ಯ ಭಾವವನ್ನು ಬೆಳೆಸಿಕೊಳ್ಳುವುದಿಲ್ಲ ಎನ್ನುತ್ತಾರೆ ಹರಿಶರ್ವಾ.
16,12,17
...........................

No comments:

Post a Comment